Dr. K.N. Ganeshaiah is an agricultural scientist and professor at the University of Agricultural Sciences, Bangalore. He is also a novelist specializing in thrillers, and writes in the Kannada language.
Education: Ph. D. University of Agricultural Sciences, Bangalore, India, l983 M.Sc. (Agri.) in Genetics & Plant Breeding, UAS, Bangalore, l979 B.Sc (Agri.), University of Agricultural Sciences, Bangalore, l976.
Prof Ganeshaiah has pioneered a new style of writing novels and short stories in Kannada that seamlessly mixes facts and fiction in the form of thrillers. Through this style, his writings have captured a new generation of readers in Kannada contributing to the growth of story writing in Kannada.
Though an agriculture scientist, his novels and stories bring to the reader, the lesser-known and hidden facts of history along with science. Some of his novels are also aimed at bringing the most complicated elements of science to the general reader.
Recognizing the novelty in the style of writing, he was awarded Kannada Sahitya Academy Datti Award for his novel Kanaka Musuku, which combines both history and science. As some experts have inferred, his thrillers have drawn a large number of new readers to Kannada.
In recognition of his novel contribution to Kannada Literature, Prof Ganeshaiah has also been honored with the Honorary President of Kolar District Sahitya Parishat during 2013
Prof Ganeshaiah has written Nine novels, and 41 short/long stories (in eight collections) and over 63 essays in the areas related Science and Society. His recent book Sasya Sagga on the wonders of plant life as told through his own journey in the field of botany and evolution has attracted your readers. Several of his novels and stories were serialized in Kannada Weekly Magazines
"A beautiful thrilling ride of historical fiction".
I definitely would say Historical fiction is my new favorite genre after reading this book and would read more and more of them in the coming days. That's the hangover ಕನಕ ಮುಸುಕು by K N Ganeshaiah has left on me. The book had various elements in it.
It was thrilling in the first few pages with the incidents involving the underground group tracking a girl's movements, the girl being much involved in unraveling mysteries of the 11th century Jainism lost in history.
The tale of Keshava Bhat will haunt me for days to come. It was very dark and provided a horrifying experience of his greed.
Also, the part where the couple visited Chandragiri mountain in search of riches under the Basadis was adventurous and funny too.
Overall, the book kept me hooked in most of the parts, except at places where the writer goes deep into explaining history involving Numbers and Letters.
It beautifully glorifies Jainism and its architecture, true love for one's religion.
ಇಲ್ಲಿ ಐತಿಹಾಸಿಕ ಪಾತ್ರಗಳು, ಸ್ಥಳಗಳು ಇವೆ.. ಆದರೆ ಇದು ಐತಿಹಾಸಿಕ ಕಾದಂಬರಿಯಲ್ಲ. ಇಲ್ಲಿ ಪತ್ತೇದಾರಿಕೆಯ ಪಾತ್ರಗಳು, ಸನ್ನಿವೇಶಗಳು ಇವೆ.. ಆದರೆ ಇದು ಪತ್ತೆದಾರಿಕೆ ಕಾದಂಬರಿಯಲ್ಲ. ಇಲ್ಲಿ ವಿಜ್ಞಾನಿಗಳ ಪಾತ್ರಗಳು, ಸಂಶೋಧನೆಗಳು ಇವೆ.. ಆದರೆ ಇದು ವೈಜ್ಞಾನಿಕ ಕಾದಂಬರಿಯಲ್ಲ. ಇಲ್ಲಿ ಪ್ರೀತಿ, ದ್ವೇಷ, ಸಂಕಟ, ನೋವಿನ ಪಾತ್ರಗಳು ಸನ್ನಿವೇಶಗಳಿವೆ.. ಆದರೆ ಭಾವುಕತೆಯ ಕಾದಂಬರಿಯಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಇದು ಎಲ್ಲಾ ವಿಷಯಗಳನ್ನ ಒಳಗೊಂಡ ವಿಭಿನ್ನ ಅಭಿರುಚಿಯ ಕಾದಂಬರಿ.
ಕೆ ಎನ್ ಗಣೇಶಯ್ಯನವರು ನನ್ನ ಮೆಚ್ಚಿನ ಬರಹಗಾರಲ್ಲಿ ಒಬ್ಬರು. ನಾನು ಓದಿರೋ ಅವರ ಎಲ್ಲಾ ಕಾದಂಬರಿಗಳಲ್ಲೂ ಮೇಲಿನ ವಿಷಯಗಳು ಇದ್ದಾವೆ. ಇತಿಹಾಸ, ವರ್ತಮಾನ, ವಿಜ್ಞಾನ, ಮಾನವನ ನಡವಳಿಕೆಗಳು ಎಲ್ಲವನ್ನೂ ಒಂದರೊಳಗೊಂದು ಬೆಸೆಯುತ್ತಾ, ಓದುಗನಲ್ಲಿ ಕುತೂಹಲ ಬೆಳಸುತ್ತಾ, ಕೊನೆಯಲ್ಲಿ connect the dots ಅಂತಾರಲ್ಲ, ಹಾಗೆ ಎಲ್ಲವನ್ನು ಒಟ್ಟಿಗೆ ತಂದು ನಿಲ್ಲಿಸಿ ಅಚ್ಚರಿ, ಅವ್ಯಕ್ತ ಭಾವನೆಗೆ ಒಳಪಡಿಸಿ ಮುಗಿಸುತ್ತಾರೆ.
ಕನಕ ಮುಸುಕು ಕಾದಂಬರಿಯಲ್ಲೂ ಕೂಡ ಮೇಲಿನ ಎಲ್ಲಾ ವಿಷಯಗಳು ಇವೆ. ಹಾಂಕಾಂಗ್ ನಲ್ಲಿ ಯಾವುದೇ ಕಾರಣವಿಲ್ಲದೆ ದಂಪತಿಯ ಕೊಲೆಯ ಚಿತ್ರಣದೊಂದಿಗೆ ಶುರುವಾಗುತ್ತದೆ ಕಾದಂಬರಿ. ಆ ಕೊಲೆಗೆ ಕಾರಣವೇನು ಎಂಬುದು ತಿಳಿಯುವುದು ಕಾದಂಬರಿ ಅಂತ್ಯಭಾಗದಲ್ಲಿ. ಆದರೆ
ಕಾದಂಬರಿಯ ಹರವು ಇರುವುದು ಬೇರೆ. ಜೈನ ಧರ್ಮಕ್ಕೆ ಸಂಬಂಧಪಟ್ಟ ನಿಧಿಯ ಬಗ್ಗೆ. ಅದನ್ನು ಹುಡುಕುತ್ತಿರುವ ಕಳ್ಳರ ಗುಂಪು ಒಂದು ಕಡೆ, ಆದರ ರಕ್ಷಣೆಯ ಭಾರ ಹೊತ್ತಿರುವ ಗುಂಪು ಒಂದು ಕಡೆ, ಅದರ ಬಗ್ಗೆ ಸಂಶೋಧನೆ ಮಾಡುತ್ತಿರುವ ಪಾತ್ರ ಒಂದು ಕಡೆ , ಹೀಗೆ ಮೂರು ಪ್ರಕಾರಗಳು ಒಂದರೊಳಗೊಂದು ಬೆಸುದುಗೊಂಡು ನಿಧಿಯನ್ನೇ ಸುತ್ತುತ್ತಿರುತ್ತವೆ.
ಸಂಶೋಧನ ವಿದ್ಯಾರ್ಥಿ ಡಾ|| ಪೂಜಾ, ಅವಳ ಪತಿ ವಿನೋದ್ ಮತ್ತು ಸಂಸಾರ, ಅವಳ ಪ್ರೊಫೆಸರ್ ಡಾ|| ರಾವ್, ಅವಳು ನಿಧಿಯ ಬಗ್ಗೆ.. ಜೈನಧರ್ಮದ ಬಗ್ಗೆ.. ಮಾಡುವ ಸಂಶೋಧನ ವಿವರಗಳು, ಪತಿಯ ಜತೆಯಲ್ಲಿ ಶ್ರವಣಬೆಳಗೊಳದಲ್ಲಿ ಮಾಡುವ ಸಾಹಸ, ಶಾಂತಲಾ ವಿಷ್ಣುವರ್ಧನ ಸಂಬಂಧದ ಬೇರೆ ರೀತಿ ವ್ಯಾಖ್ಯಾನ (ಇದಂತೂ ಅಚ್ಚರಿಪಡಿಸುತ್ತದೆ), ಸೋಮನಾಥಪುರ, ಹಳೇಬೀಡಿನಲ್ಲಿರುವ ಶಿಲ್ಪ ಕೆತ್ತನೆಯ ವಿವರಗಳು, ಅಂತಾರಾಷ್ಟ್ರೀಯ ಕಳ್ಳರ ಗುಂಪು ಮತ್ತು ಕೋಡ್ ವರ್ಡ್ಗಳಲ್ಲಿ ಚಿತ್ರಿತವಾಗಿರುವ ಅವರ ಗುಂಪಿನ ಪಾತ್ರಗಳು ಮತ್ತು ತಂತ್ರಗಳು, ಜೈನ ಕಲಾ ರಕ್ಷಣಾ ವೇದಿಕೆ.. ಅದರ ಅಧ್ಯಕ್ಷ ಬಿ.ಪಿ. ಮತ್ತು ಆ ವೇದಿಕೆಯ ನಿಗೂಢ ನಡವಳಿಕೆಗಳು, ಜೈನಧರ್ಮದ ನಿಗೂಢ ಸ್ಥಳ, ಕೇಶವಭಟ್ಟನ ಪುಟ್ಟ ಕಥೆ, ಕಂಬಳ್ಳಿಯ ಬಸದಿ ಚಿತ್ರಣ, ಹೀಗೆ ಮುಂತಾದವು ಒಂದರೊಳಗೊಂದು ಮಿಳಿತವಾಗಿವೆ.
ಮೊದಲಿನಿಂದ ಕೊನೆಯವರೆಗೂ ಕುತೂಹಲ ಕಾಯ್ದುಕೊಂಡಿರುವ, ಕಥೆಯ ನಡುವೆ ಬರುವ ವಿವರಗಳನ್ನು ಸಾಮಾನ್ಯ ಓದುಗನಿಗೂ ಅರ್ಥವಾಗುವಂತೆ ಕಟ್ಟಿಕೊಟ್ಟಿರುವ, ಮುಗಿದ ಮೇಲೂ ಕಥೆಯನ್ನೇ ಧ್ಯಾನಿಸಿ.. ಅದರಲ್ಲಿ ಬರುವ ಸ್ಥಳಗಳನ್ನು ನೋಡಲು ಪ್ರೇರೇಪಿಸುವ, ಒಂದೇ ಬಾರಿಗೆ ಓದಿ ಮುಗಿಸಬೇಕು ಎಂಬ ಆಸೆ ಹುಟ್ಟಿಸುವ, ಒಟ್ಟಿನಲ್ಲಿ ಓದುಗನಿಗೆ ಇಷ್ಟವಾಗುವ ವಿಶಿಷ್ಟ ಕಾದಂಬರಿ ಇದು.
ಡಾ. ಕೆ.ಎನ್. ಗಣೇಶಯ್ಯ ಅವರ "ಕನಕ ಮುಸುಕು" ಕಾದಂಬರಿಯು ಪ್ರಾಚೀನ ಜೈನ ಇತಿಹಾಸ, ಆಧುನಿಕ ವಿಜ್ಞಾನ ಮತ್ತು ವೇಗದ ನಿಧಿ ಬೇಟೆಯನ್ನು ಮನಮೋಹಕವಾಗಿ ಹೆಣೆದ ಒಂದು ಅದ್ಭುತ ಕೃತಿ. ಇದು ಕನ್ನಡದಲ್ಲಿ 'ಹಿಸ್ಟಾರಿಕಲ್ ಥ್ರಿಲ್ಲರ್' ಪ್ರಕಾರಕ್ಕೆ ಹೊಸ ಆಯಾಮ ನೀಡಿದ ಕಾದಂಬರಿ ಎಂದರೆ ತಪ್ಪಾಗಲಾರದು.
ಕಥಾವಸ್ತುವು ಮುಖ್ಯವಾಗಿ ಚಂದ್ರಗುಪ್ತ ಮೌರ್ಯನು ಜೈನ ಧರ್ಮ ಪ್ರಚಾರಕ್ಕಾಗಿ ಶ್ರವಣಬೆಳಗೊಳಕ್ಕೆ ಬಂದಾಗ ತಂದಿದ್ದ ಅಪಾರ ಬಂಗಾರದ ನಿಧಿಯ ಹುಡುಕಾಟದ ಸುತ್ತ ಸುತ್ತುತ್ತದೆ. ಈ ನಿಧಿಯನ್ನು ಆ ಕಾಲದಲ್ಲಿ ಚಾಣಾಕ್ಷವಾಗಿ ಮುಸುಕಿನ ಜೋಳದ (Sweet Corn) ಬೀಜಗಳ ರೂಪದಲ್ಲಿ ಮರೆಮಾಚಲಾಗಿತ್ತು. ಈ ನಿಧಿ, ಅಥವಾ 'ಭೂಸಿರಿವಲಯ'ವು ಕರ್ನಾಟಕದ ಜೈನ ದೇವಾಲಯಗಳ ರಹಸ್ಯಗಳೊಂದಿಗೆ ಬೆಸೆದುಕೊಂಡಿದೆ. ಲೇಖಕರು ಸ್ವತಃ ಕೃಷಿ ವಿಜ್ಞಾನಿಯಾಗಿರುವುದರಿಂದ, ಅವರು ಪ್ರತಿ ಐತಿಹಾಸಿಕ ಮತ್ತು ವೈಜ್ಞಾನಿಕ ವಿವರವನ್ನು ಅತ್ಯಂತ ನಿಖರವಾದ ಸಂಶೋಧನೆಯೊಂದಿಗೆ ಮಂಡಿಸುತ್ತಾರೆ. ಇದರಿಂದ ಓದುಗರಿಗೆ ಕಾದಂಬರಿಯಲ್ಲಿ ವಾಸ್ತವ (Fact) ಯಾವುದು ಮತ್ತು ಕಲ್ಪನೆ (Fiction) ಯಾವುದು? ಎಂಬ ಕುತೂಹಲ ಕೊನೆಯವರೆಗೂ ಉಳಿಯುತ್ತದೆ. ಕಥೆಯ ಪಾತ್ರಗಳು ಶ್ರವಣಬೆಳಗೊಳ, ಸೋಮನಾಥಪುರದಂತಹ ಸ್ಥಳಗಳನ್ನು ಆಧುನಿಕ ತಂತ್ರಜ್ಞಾನ ಬಳಸಿ ಹೇಗೆ ಸಂಪರ್ಕಿಸುತ್ತಾರೆ ಮತ್ತು ಒಗಟುಗಳನ್ನು ಬಿಡಿಸುತ್ತಾರೆ ಎಂಬುದು ರೋಚಕವಾಗಿದೆ.
ಕಥೆಯ ನಿರೂಪಣೆಯು ಸರಳವಾಗಿದೆ, ಆದರೆ ಬಿಗಿಯಾದ ವೇಗವನ್ನು ಕಾಯ್ದುಕೊಳ್ಳುತ್ತದೆ. ಅನಗತ್ಯ ತಿರುವುಗಳಿಗೆ ಜಾಗವಿಲ್ಲ. ಕಾದಂಬರಿಯ ಅಂತ್ಯವು ಕೂಡ ವಿಶಿಷ್ಟವಾಗಿದ್ದು, ನಿಧಿಯ ಅಂತಿಮ ಸತ್ಯವನ್ನು ಓದುಗರ ಊಹೆಗೆ ಬಿಡಲಾಗಿದೆ. ನೀವು ಐತಿಹಾಸಿಕ ನಿಗೂಢ ಕಥೆಗಳು, ವೈಜ್ಞಾನಿಕ ಒಗಟುಗಳು ಮತ್ತು ವೇಗದ ಥ್ರಿಲ್ಲರ್ಗಳನ್ನು ಇಷ್ಟಪಡುವವರಾದರೆ, "ಕನಕ ಮುಸುಕು" ಓದಲೇಬೇಕಾದ ಕಾದಂಬರಿ.
ಈ ಕೃತಿಯು ಕನ್ನಡ ಸಾಹಿತ್ಯ ಅಕಾಡೆಮಿ ದತ್ತಿ ಪ್ರಶಸ್ತಿಯನ್ನು ಸಹ ಪಡೆದಿದೆ.
ಕನ್ನಡದಲ್ಲೂ ಕೂಡ Dan Brown ರವರ ಹಾಗೆ, ವೈಜ್ಞಾನಿಕ, Historical fiction, ಸಂಶೋಧನೀಯ ಮಾಹಿತಿಗಳನ್ನು ಇಟ್ಟುಕೊಂಡು ಇಂಥಹ ರೋಚಕ ಕಾದಂಬರಿಯನ್ನು ಬರೆಯಬಹುದು ಎಂದು ಗಣೇಶಯ್ಯ ಅವರು ಇಲ್ಲಿ ತೋರಿಸಿದ್ದಾರೆ.. ಕನ್ನಡ ಓದುಗರಿಗೆ ಇದೊಂದು ಹೊಸ ಪರಿಚಯವೆಂದೇ ಹೇಳಬಹುದು..
ಜೈನ ಪರಂಪರೆ ಶ್ರವಣಬೆಳಗೊಳಕ್ಕೆ ಲಗ್ಗೆ ಇಟ್ಟ ಪರಿ. ಚಂದ್ರಗುಪ್ತ ಮೌರ್ಯನ ಧರ್ಮ ಪ್ರಚಾರಣೆ. ಭೂಸಿರಿವಲಯದ ಹುಡುಕಾಟ. ಪ್ರತಿಯೊಂದನ್ನು ದಾಖಲೆ ಸಮೇತ ವಿವರಿಸುವುದು ನಿಜಕ್ಕೂ ಅದ್ಭುತ ಎನಿಸುತ್ತದೆ..
ಕನಕ ಮುಸುಕು: *ಕೆ.ಎನ್.ಗಣೇಶಯ್ಯನವರ* ಅದ್ಭುತವಾದ ಥ್ರಿಲ್ಲರ್ ಮತ್ತು ಐತಿಹಾಸಿಕ ಕಾದಂಬರಿ ಕನಕ ಮುಸುಕು.ಇದು ಜೈನಸಿರಿಯ ಆಧಾರಿತ ಕಾದಂಬರಿ. ಹೊಯ್ಸಳದ ವಿಷ್ಣುವರ್ಧನ,ಶಾಂತಲ, ಅಮೋಘವರ್ಷ ನೃಪತುಂಗ, ಚಾವುಂಡರಾಯ, ಚಂದ್ರಗುಪ್ತಮೌರ್ಯರ ಆಳ್ವಿಕೆಯಲ್ಲಿ ಜೈನಧರ್ಮಕ್ಕೆ ಸಂಬಂಧಪಟ್ಟ ಕಥೆಗಳನ್ನು ಹಾಗೂ ದಕ್ಷಿಣ ಭಾರತದಲ್ಲಿ ಜೈನಧರ್ಮದ ಪ್ರಚಾರದ ಬಗ್ಗೆ ಇಲ್ಲಿ ಕಾಣಬಹುದು. ಕಥೆಗೆ ಪೂರಕವಾಗಿ ರೇಖಾಚಿತ್ರಗಳು,ಛಾಯಚಿತ್ರಗಳು,ಅಡಿಟಿಪ್ಪಣಿಗಳು ಓದುಗರಿಗೆ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ.
ಜೈನಸಿರಿಯನ್ನು ಹುಡುಕಲು *ರಾವ್* ರವರು ಒಂದು ಕಡೆ ಸಂಶೋಧನೆ ನಡೆಸುತ್ತಿದ್ದರೆ,ಮತ್ತೊಂದು ಕಡೆ *ಪೂಜ* ಸಂಶೋಧನೆಯನ್ನು ನಡೆಸುತ್ತಿರುತ್ತಾರೆ. ಇದನ್ನರಿತ ಸಿ.ಬಿ.ಐ ಅಧಿಕಾರಿ ಬ್ರಹ್ಮಪ್ರಕಾಶ್ ರವರು ಪೂಜ ಮತ್ತು ರಾವ್ ರವರನ್ನು ಒಟ್ಟುಗೂಡಿಸಿ ಅವರ ಸಂಶೋಧನೆಯಿಂದ ಹಲವಾರು ಮಾಹಿತಿಗಳನ್ನು ಸಂಗ್ರಹಿಸುತ್ತಾರೆ. ಸೋಮನಾಥಪುರ, ಶ್ರವಣಬೆಳಗೊಳ ಮತ್ತು ಕಂಬದಹಳ್ಳಿಯಲ್ಲಿ ಕಂಡುಬರುವ ಪ್ರತಿಯೊಂದು ಶಿಲ್ಪಗಳ ಮಾಹಿತಿಯನ್ನು ಹುಡುಕುತ್ತಾರೆ. ಕೆಲವು ಶಿಲ್ಪಗಳಲ್ಲಿ ಮುಸುಕಿನ ಚಿಹ್ನೆಗಳನ್ನು ಗುರುತಿಸುತ್ತಾರೆ,ಇದರಿಂದ ಅವರ ಸಂಶೋಧನೆಗೆ ಒಂದು ಸುಳಿವು ಸಿಗುತ್ತದೆ. *ಚಂದ್ರಗುಪ್ತನು ಸನ್ಯಾಸತ್ವವನ್ನು ಸ್ವೀಕರಿಸಿ ಸುಮಾರು ಇನ್ನೂರೈವತ್ತು ಸಾವಿರ ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು, ಮುಸುಕಿನ ಜೋಳದ ರೂಪದಲ್ಲಿ ಜೈನ ಧರ್ಮದ ಪ್ರಚಾರಕ್ಕೆಂದು ತಂದಿದ್ದರೆಂಬ ಮಾಹಿತಿಯನ್ನು ಪತ್ತೆ ಹಚ್ಚಿ, ಸಿರಿಭೂವಲಯ ಸೂತ್ರದ ಆಧಾರದ ಪ್ರಕಾರ ಆ ಚಿನ್ನವು ಸೋಮನಾಥಪುರದ ಸುತ್ತಮುತ್ತಲಿನ ಜೈನ ಬಸದಿಗಳಲ್ಲಿ ಇರಬಹುದೆಂದು ಸಂಶೋಧನೆ ನಡೆಸುತ್ತಾರೆ*, ಆದರೆ ಅವರ ಸಂಶೋಧನೆಯು ಫಲಿಸಿತೋ ಅಥವಾ ಮುಸುಕಿನಲ್ಲಿ ಮುಳುಗಿತೋ? ಬಸದಿಗಳಲ್ಲಿ ನಿಧಿ ದೊರಕಿತೊ ಇಲ್ಲವೋ? ಎಂಬುದನ್ನು ಕಾದಂಬರಿ ಓದಿದರೆ ಉತ್ತಮ. ಕಾದಂಬರಿ ಶುರುವಿನಿಂದ ಕೊನೆಯವರೆಗೂ ಕುತೂಹಲ ಮೂಡಿಸುತ್ತದೆ. ---------------- *ಕಾರ್ತಿಕ್*
ನಿಗೂಢತೆ, ರೋಚಕತೆ, ನಿಧಿಯ ಹುಡುಕಾಟ, ಪ್ರತಿ ಕ್ಷಣದಲ್ಲಿ ಮುಂದೇನು ಸಂಭವಿಸುತ್ತದೆ ಎಂಬ ಕೌತುಕತೆ!
ಅಬ್ಬಾ!! ಓದುಗನಿಗೆ ರಸದೌತಣವೇ ಸರಿ!
ಈಗಿನ ತಂತ್ರಜ್ಞಾನದ ಬಳಸಿಕೊಂಡು ಹಲವಾರು ಐತಿಹಾಸಿಕ ಗೌಪ್ಯತೆಯನ್ನು Decode ಮಾಡುವ ವಿಧಾನ ಅದ್ಭುತ...
ಕಥೆಯನ್ನು ಹೇಳುವ ಜೊತೆಗೆ ಜೈನ ಧರ್ಮದ ಕುರಿತ ಇತಿಹಾಸ ವಿಚಾರಗಳನ್ನು ತಿಳಿಸುವ ಪರಿ ಬಹುಶಃ ಕನ್ನಡದ ಬರಹಗಾರರಲ್ಲಿ ಯಾರು ಇಲ್ಲ!
ಇದು ಒಂದು ಕಥೆಯ ಆಗಿದ್ದರು. ಓದುಗನಿಗೆ ನೈಜ ಘಟನೆಯಂತೆ ಅನಿಸುವಂತೆ ಬರೆದಿದ್ದಾರೆ. ಇದು ಇತಿಹಾಸದ ಆಯಾಮದ ಮತ್ತು ವಸ್ತುಗಳ ಸಾಕ್ಷ್ಯ ಗಳನ್ನು ಆಧರಿಸಿ ಬರೆದಿರುವ ಅಧ್ಬತವಾದ ಕಾದಂಬರಿ..
ಮತ್ತೊಂದು ಕುತೂಹಲ ಭರಿತ ಕಾದಂಬರಿ ಓದಿದ ಸಂತಸ. ಕಾದಬರಿಕಾರರ ಕಥೆಯ ವಸ್ತುವೇ ಮುಸುಕು. ಈವರೆಗೂ ನಾನು ಓದಿದ ಇವರ ಕಾದಂಬರಿಗಳಲ್ಲಿ ಜೈನ ಧರ್ಮದ ಬಗ್ಗೆ ತುಂಬಾನೇ ಬರೆದಿದ್ದಾರೆ, ಆದರೆ ಈ ಕಾದಂಬರಿಯಲ್ಲಿ ಸಂಪೂರ್ಣ ಜೈನ ಧರ್ಮದ ಉನ್ನತಿ , ಅವನತಿ, ಮತ್ತು ಜೈನ ಧರ್ಮದ ಪ್ರಚಾರಕ್ಕಾಗಿ ಬಳಸಿದ ನಿಧಿ. ಆ ನಿಧಿಯ ಹುಡುಕಾಟ. ಇದೇ ಕಥಾ ವಸ್ತು. ಕಥೆ ಅಂತ ಓದಿದ್ರೆ ಅಷ್ಟೇ ಇದು ರೋಮಾಂಚಕ.
ಮೊದಲನೆಯದಾಗಿ ಈ ಪುಸ್ತಕ ಹಲವಾರು ಅಂಶಗಳನ್ನು ಕೂಡಿದೆ. ಕಥೆ ಅಂತಿಮ ಹಂತಕ್ಕೆ ಬರುವಾಗ, ರೋಚಕ ಅನುಭವ ನಿಮ್ಮದಾಗಲಿವೆ. ಪ್ರತಿ ಇತಿಹಾಸ ಘಟನೆಗಳು ನಿಮಗೆ ಅಪಾರ ಜ್ಞಾನವನ್ನು ಕೊಡುತ್ತದೆ. ಹೊಯ್ಸಳ ಮತ್ತು ಚೋಳರ ನಡುವಿನ ಸಂಬಂಧ ಹಾಗೂ ಉತ್ತರದಿಂದ ದಕ್ಷಿಣಕ್ಕೆ ಚಂದ್ರಗುಪ್ತ ಮೌರ್ಯ ಏಕೆ ಮತ್ತು ಹೇಗೆ ಬಂದ. ಕರ್ನಾಟಕದ ಈಗಿನ ಜೈನ ಬಸದಿಯ ಇತಿಹಾಸವನ್ನು ನೀವು ಓದುತ್ತಿರಿ. ರೋಚಕತೆ ಮತ್ತು ಇತಿಹಾಸ ಘಟನೆಗಳನ್ನು ತಿಳಿಯಲು ಎಲ್ಲರೂ ಈ ಪುಸ್ತಕವನ್ನು ಓದಲು ಮನವಿ ಮಾಡುತ್ತೇನೆ.
Very well narrated historical novel. How Jainism has come from North to South during Chandragupta Maurya and rise and fall of Jainism during Hoysala etc etc are well explained along the story line. Good explanation on siribhuvalaya sutra and navakumudendu's navasutra.
Finished the book in one go. I always assumed all hoysala kingdom rulers were followers of lord shiva, but there were few kings who followed jainism during hoysala rule. This book made me search and read about Jainism in karnataka region.