K.P. Purnachandra Tejaswi was a prominent Kannada writer, novelist, photographer, ornithologist, publisher, painter and environmentalist. He made a great impression in the "Navya" period of Kannada literature and and inaugurated the bandaya sahitya.
Tejaswi was born on September 8, 1938. His father is the famous poet, Rashtrakavi Kuvempu. He completed his education in Mysore. Tejaswi has written in almost all forms of literature including poems, short stories, novels, travel literature, plays and science fiction. He has translated several English books to Kannada. His famous translations include the series on Kenneth Anderson's hunting expeditions and Henri Charrière's Papillon.
He has won several awards for his contribution to literature such as the Rajyotsava and Kannada Sahitya Academy awards.
Poornachandra Tejaswi died of cardiac arrest at the age of 69
ಮಿಲನಿಯಮ್ - ೩ ಪೆಸಿಫಿಕ್ ದ್ವೀಪಗಳು ಕೆ.ಪಿ. ಪೂರ್ಣಚಂದ್ರ ತೇಜಸ್ವಿ
1 ಅಟಾಲ್. 2 ಚಿನ್ನದ ವರಗಳು 3 ನರಭಕ್ಷಕರ ದ್ವೀಪ ಫಿಜಿ 4 ಅಟಾಲಿನ ಮುತ್ತುಗಳು 5 ಪಫರ್ ಮೀನು 6 ಧೀರ ನಾವಿಕರು 7 ರೈಟೇಯಾ
ಪೆಸಿಫಿಕ್ ದ್ವೀಪಗಳು ರೋಮಾಂಚನ ಕಥೆಗಳು ತೇಜಸ್ವಿ ಅವರ ಬರಹ ಓದಲು ಇನ್ನಷ್ಟು ಖುಷಿಕೊಡುತ್ತೆ. ಕತೆಯ ಕಾಲಘಟ್ಟ ಸಂದರ್ಭ ಆಗಿನ ವರ್ತಮಾನ ಪರಿಸ್ಥಿತಿ ಅದನ್ನು ಹೇಳುವ ರೀತಿ ಅದ್ಭುತ. ಪಫರ್ ಮೀನು, ವಿಷಕಾರಿ ಮೀನಾದರೂ ಕೂಡ ಅದನ್ನು ತಿನ್ನುವ ಜನ! ನರಭಕ್ಷಕರ ದ್ವೀಪ ನರ ಮನುಷ್ಯರನ್ನು ತಮ್ಮ ಹಸಿವಿಗಾಗಿ ಮನುಷ್ಯನನ್ನು ಕೊಂದು ತಿನ್ನುವ ಜನಾಂಗ! ಕಥೆಗಳು ಸರಳವಾಗಿ ಹೊದಸ್ಕೊಂಡ್ ಹೋಗುತ್ತೆ.
' ಪೆಸಿಫಿಕ್ ದ್ವೀಪಗಳು ' ಸಹಸ್ರಾರು ಮೈಲುಗಳ ಮಹಾಸಾಗರದಿಂದ ಸುತ್ತುವರಿದಿರುವ ಪೆಸಿಫಿಕ್ ದ್ವೀಪಗಳ ಪಾಲಿನೇಷ್ಯನ್ನರು ಜಗತ್ತಿನ ಮೊಟ್ಟಮೊದಲ ಮಹಾ ನಾವಿಕರೂ ಅನ್ವೇಷಕರೂ ಆದವರು. ಅಂಥ ಒಂದು ಶೂರ ಮತ್ತು ಸಾಹಸಪ್ರಿಯ ಜನಾಂಗ ಆಧುನಿಕ ನಾಗರಿಕತೆಯ ಸಂಪರ್ಕ ಬರುತ್ತಲೇ ಕುಸಿಯುತ್ತಾ ಹೋದುದು ಬೆಚ್ಚಿಬೀಳಿಸುವ ವಿಚಾರ. ಹಡಗುಗಳ್ಳರು, ದುರಾತ್ಮರು, ಗುಲಾಮ ವ್ಯಾಪಾರಿಗಳು, ಎಲ್ಲರೂ ಇವರನ್ನು ಶೋಷಿಸಿ ಘಾಸಿಗೊಳಿಸಿದ್ದಲ್ಲದೆ, ಜಪಾನಿಗೂ ಅಮೆರಿಕನ್ನರಿಗೂ ನಡುವೆ ನಡೆದ ಮಹಾಯುದ್ಧದ ಮಧ್ಯೆ ಈ ಸುಂದರ ದೀಪಗಳು ಸಿಕ್ಕಿ ನುಗ್ಗುನುರಿಯಾದುವು, ಭೂಮಿಯ ಸ್ವರ್ಗವೆನ್ನಿಸಿದ ಈ ಸುಂದರ ದ್ವೀಪಗಳು ಅನಂತರ ಶಕ್ತ ರಾಷ್ಟ್ರಗಳ ಅಣುಸ್ಫೋಟಗಳಿಗೆ ಪ್ರಯೋಗಪಶುವಾಯ್ತು. ಈ ಪುಸ್ತಕವು 108 ಪುಟಗಳನ್ನು ಒಳಗೊಂಡಿದ್ದು ಆರು ಸಣ್ಣಕತೆ ಮತ್ತು ಕೊನೆಯಲ್ಲಿ ಒಂದು 'ರೈಟೇಯಾ ' ಎಂಬ ಕಾದಂಬರಿಯನ್ನು ಒಳಗೊಂಡಿದೆ. 1) ಅಟಾಲ್, ಮೊದಲ ಕತೆಯಾಗಿದ್ದು, ಪೆಸಿಫಿಕ್ ದ್ವೀಪದ ರಚನೆ ಹಾಗೂ ಅಲ್ಲಿಯ ಪಾಲಿನೇಷ್ಯನ್ನರ ಜೀವನಶೈಲಿಯ ಬಗ್ಗೆ ವಿವರಿಸಲಾಗಿದೆ. 2)ಚಿನ್ನದ ವರಹಗಳು ಕತೆಯಲ್ಲಿ ಆ ದ್ವೀಪದಲ್ಲಿ ಮರೆಯಾಗಿದ್ದ ಅಪಾರ ಚಿನ್ನದ ಸಂಪತ್ತಿನ ಖೋಜನೆಯಲ್ಲಿ ಎಷ್ಟೆಲ್ಲಾ ಯುರೋಪಿಯನ್ನರು ಶ್ರಮಿಸಿದರು ಎಂಬ ವಿವರಣೆಯಿದೆ. ಅವರಲ್ಲಿ ಸುಮಾರು ಸಂಪತ್ತನ್ನು ವ್ಯಾಗ್ನರ್ ಕಂಪನಿ ಇಪ್ಪತ್ತು ವರ್ಷಗಳ ಕಾಲ ಸಂಶೋಧನೆ ನಡೆಸಿ ಯಶಸ್ವಿಯಾಯಿತು. 3)ನರಭಕ್ಷಕ ಫಿಜಿ ದ್ವೀಪ, ಈ ಕತೆಯಲ್ಲಿ ಫಿಜಿಯನ್ನರ ಅನಾಗರಿಕ ನಡವಳಿಕೆ ಹಾಗೂ ಅವರು ಹೇಗೆ ನರಭಕ್ಷಕರಾಗಿದ್ದರು ಎಂಬುದನ್ನು ತೇಜಸ್ವಿಯವರು ತುಂಬಾ ಚೆನ್ನಾಗಿ ವರ್ಣಿಸಿದ್ದಾರೆ. 4)ಅಟಾಲಿನ ಮುತ್ತುಗಳು ಈ ಕತೆಯಲ್ಲಿ ಮುತ್ತುಗಳು ಹೇಗೆ ಕಪ್ಪೆಚಿಪ್ಪಿನಲ್ಲಿ ತಯಾರಾಗುತ್ತವೆ ಎಂಬುದರ ಸಂಪೂರ್ಣ ವಿವರವಿದೆ. 5) ಪಫರ್ ಮೀನು ಎಂಬ ವಿಷಕಾರಿ ಮೀನಿನ ಕೇವಲ ಅರ್ಧ ಮಿಲಿಗ್ರಾಮ್ ವಿಷವು ಮಾನವನನ್ನು ಕೊಲ್ಲಬಹುದು ಹಾಗೂ ಜಪಾನಿನ ಜನರು ತಮ್ಮ ಜೀವವನ್ನೂ ಲೆಕ್ಕಿಸದೆ ಈ ಮೀನಿನ ಖಾದ್ಯ ತಿನ್ನುತ್ತಾರೆ ಎಂಬುದನ್ನು ತಿಳಿದು ನನಗೆ ಅಚ್ಚಾರಿಯ ಜೊತೆ ಭಯವೂ ಆದದ್ದು ಸುಳ್ಳಲ್ಲ. 6) ಧೀರ ನಾವಿಕರು ಕತೆಯು ಪೆಸಿಫಿಕ್ ದ್ವೀಪದ ಜನರ ಧೈರ್ಯ ಹಾಗೂ ಸಾಹಸವನ್ನು ವಿವರಿಸುತ್ತದೆ. 7) ರೈಟೇಯಾ ಎಂಬ ಕಾದಂಬರಿ ಪಾಲಿನೇಷ್ಯನ್ನರು ಅಮೇರಿಕದ ಬಿಳಿಯರ ಸಂಪತ್ತಿನ ಆಸೆಗೆ ತಮ್ಮ ಪರಂಪರೆ, ಮರ್ಯಾದೆ ಹಾಗೂ ಸಂಸ್ಕೃತಿಯನ್ನು ಮಾರಾಟ ಮಾಡಿದರು ಎಂಬುದನ್ನು ಒಳಗೊಂಡಿದ್ದು ಅಲ್ಲಿಯ ಜನರ ಅನಾಗರಿಕ ನಡವಳಿಕೆಯನ್ನು ಎತ್ತಿ ತೋರಿಸುತ್ತದೆ.
ಕಣ್ಣು ಹಾಯಸಿದಷ್ಟೂ ಕಾಣುವ - ಸಹಸ್ರಾರು ಮೈಲಿಗಳ ಪೆಸಿಫಿಕ್ ಮಹಸಾಗರದಿಂದ ಸುತ್ತುವರಿಯಲ್ಪಟ್ಟಿರುವ, ಸುಂದರ ಪೆಸಿಫಿಕ್ ದ್ವೀಪಗಳ ಬಗ್ಗೆ ಮಾಹಿತಿ ಈ ಪುಸ್ತಕದಲ್ಲಿ ಲಭ್ಯವಿದೆ.
ಈ ದ್ವೀಪಗಳು ರೂಪುಗೊಂಡು, ಬೆಳೆದು, ನಶಿಸಿದ ಬಗ್ಗೆ, ಅಲ್ಲಿನ ಮೂಲವಾಸಿಗಳು, ಅವರ ಆಚಾರ ವಿಚಾರಗಳ ಬಗ್ಗೆ, ಅಲ್ಲಿನ ಜೀವ ಸಂಕುಲದ ಬಗ್ಗೆ ತೇಜಸ್ವಿಯವರು, ತಮ್ಮ ನೆನಪಿನ ಲಹರಿಯ ಅನುಸಾರವಾಗಿ ಈ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ..
Tejaswi is my Favorite author, here he does not disappoint at all. This small book presents curious and interesting pieces of information about Pacific island. This, when published must have been such treasure house of knowledge for Kannada readers, now, in the times where info is available at a press of a button, this books marks as a great introduction to Pacific islands and leaves the user to go find out more.
It would be great if whoever owns the Rights of this book to update those not so clear pictures( I understand, technically it was not possible then)to latest colorful and beautiful pictures, i am sure a current colored and clear looking Coral reef of Australia would amuse and rake reader’s imagination even better then ever
ಸಾವಿರಾರು ಪೆಸಿಫಿಕ್ ದ್ವೀಪಗಳು ಮತ್ತು ಶತ-ಶತಮಾನಗಳಿಂದ ಅವುಗಳು ರೂಪುಗೊಂಡ ಬಗೆ, ಅಲ್ಲಿನ ಜನವಸತಿ, ಅವರ ಜೀವನಕ್ರಮ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ಬಂದಿಳಿದ ವಸಾಹತುದಾರು ಮಾಡಿದ ಮೂಲ ನಾಗರೀಕತೆಯ ಕಗ್ಗೊಲೆ; ಹೀಗೆ ಎಲ್ಲವನ್ನೂ ಸವಿಸ್ತಾರವಾಗಿ ವರ್ಣಿಸಿದ್ದಾರೆ ಲೇಖಕರು. ಇನ್ನು ಕೊನೆಯಲ್ಲಿ ಬರುವ ರೈಟೆಯಾ ಕಥೆಯಂತೂ ಫೆಸಿಯನ್ನರ ಮುಗ್ದತೆಗೆ ಸಾಕ್ಷಿಯಾಗಿದೆ.