BeeChi (1913–1980) was a well-known humorist in the Kannada language. His real name was Rayasam Bheemasena Rao. He preferred to write his pen name bilingually as ಬೀchi. He was also known as Karnataka's George Bernard Shaw.
Such great writing! Even after over 7 decades he is as fresh as ever, and his observations stand the test of time.
Few of my favorite lines below.
On how every occupation today is reduced to the sole aim of generating money: "ವೃತ್ತಿಗಳೆಲ್ಲವೂ ಒಂದೇ ಮಟ್ಟಕ್ಕೆ ಇಳಿದಿವೆ. ಎಲ್ಲವೂ ಹಣದ ಸಲುವಾಗಿ ಹೂಡಿದ ಹೂಟಗಳು, ಕೈ ಕೆಲಸದ ಮೇಲೆ, ಕಣ್ಣು ಹಣದ ಮೇಲೆ.
ಪ್ರಾಣಿಯನ್ನೂ ಕೊಂದು ಮಾಂಸವನ್ನು ಮಾರುವ ಕಟುಕನಿಗೂ, ಸಾಯುವ ಪ್ರಾಣಿಯನ್ನು ಬದುಕಿಸಲು ಇಟ್ಟ ಔಷಧಿಯನ್ನು ಮಾರುವ ಡಾಕ್ಟರನಿಗೂ ಒಂದೇ ಗುರಿ."
On war: "ಯುದ್ಧ ಕಾಲದಲ್ಲಿ ಯಾವುದಕ್ಕೆ ಬೆಲೆ ಹೆಚ್ಚಲಿಲ್ಲ? ... ಕಸಕ್ಕೂ ಕಳೆ ಬಂದಿದ್ದಿತು. ಬೆಳ್ಳುಳ್ಳಿಯ ಸಿಪ್ಪೆಗೂ ಬೆಲೆ ಏರಿದ್ದಿತು. ಬೆಲೆ ಕಳೆದುಕೊಂಡಿದ್ದು ಮನುಷ್ಯತ್ವ ಮಾತ್ರ !"
This clever interplay of English and kannada: "ಊರ ಬದಿ ದೊಡ್ಡದೊಂದು ಬಂಗಲೆಯನ್ನು ಕಟ್ಟಿಸಿ, ಆಧುನಿಕ ಪದ್ಧತಿಯಂತೆ ಅದಕ್ಕೆ 'ಆನಂದವಿಲ್ಲ' ಎಂದು ಹೆಸರು ಕೆತ್ತಿಸಿದರು."
ಹಾಸ್ಯ ಬ್ರಹ್ಮ -ಬೀಚೀಯವರ ಮೊದಲ ಕಾದಂಬರಿ .ಇಲ್ಲಿ ನಾಯಕನಾಗಿ-ಕಾಣಿಸಿಕೊಳ್ಳುವ ಉಮೇಶ ಚಿಂತಕನಾಗಿ;ಸಕಾ೯ರಿ ಕಛೇರಿಯಲ್ಲಿನ ಲ೦ಚಕೋರರ ನಡುವೆಯೂ ತನ್ನ ನೈತಿಕತೆ ತೊರೆಯದೇ,ಪ್ರಾಮಾಣಿಕನಾಗಿ ಕಾಣಿಸಿಕೊಳ್ಳುತ್ತಾನೆ.ತನ್ನ ತಂದೆ- ಇವನಿಗಿ೦ತ(ಉಮೇಶನಗಿ೦ತ) ಕಮ್ಮಿ ವಯಸ್ಸಿನ ಕಾವೇರಿಯನ್ನು ಮದ್ವೆಯಾದಾಗ,ನಿರಾಕರಿಸಲಾಗದೇ ಒಪ್ಪಿಕೊ೦ಡು ಹೊಗುವ ಅನಿವಾಯ೯ತೆಗೆ ಸಿಕ್ಕಿಕೊಂಡದಲ್ಲದೇ,ತನಗಿಷ್ಟವಿಲ್ಲದ-ನಾಗಮ್ಮಳನ್ನು ಪತ್ನಿಯಾಗಿ ಸ್ವೀಕರಿಸುವ ಮೂಲಕ ಪಿತೃ ಪ್ರೇಮಕ್ಕಾಗಿ ವಿರೋಧವನ್ನು ವ್ಯಕ್ತಪಡಿಸಲಾರದ ಮನಸ್ಥಿತಿಯವನಾಗಿ,ಕಾದಂಬರಿಯಿಡಿ ಕಂಡು ಬಂದರೂ,ಕೊನೆ-ಕೊನೆಗೆ ವೈಚಾರಿಕತೆಯ ಕಡೆಗೂ ಹೆಜ್ಜೆಯಿಡುವ ದೃಢ ನಿಧಾ೯ರ ಮಾಡುವನು.ಒಟ್ಟಾರೆ ಇಲ್ಲಿ ಸ್ವಾತಂತ್ರ್ಯಪೂವ೯ ಭಾರತದ ಸ್ಥಿತಿ,ಇ೦ಗ್ಲೇಂಡ್-ತನ್ನ ಸ್ವಹಿತಾಸಕ್ತಿಗಾಗಿ ಭಾರತಿಯರನ್ನು ತನ್ನ ಪರವಾಗಿ ಯುದ್ದದಲ್ಲಿ ಭಾಗಿಯಾಗಿಸುವಿಕೆಯ ಪ್ರಯತ್ನದ ಎಳೆ -ಇಲ್ಲಿ ಕಾಣಬಹುದು. ಸಾಮಾಜಿಕ ಜನ-ಜೀವನದ ಶಬ್ಧದೃಶ್ಯಾವಳಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ.ಹಾಗೂ ನಿತ್ಯದ ಹಾಸ್ಯ ಶೈಲಿಯ ಮೂಲಕ ಸಮಾಜದ ಲೋಪ-ದೋಷಗಳನ್ನು ತಿವಿಯುದನ್ನು ಈ ಕಾದಂಬರಿಯಲ್ಲಿಯೂ ಮರೆತಿಲ್ಲ.