K.P. Purnachandra Tejaswi was a prominent Kannada writer, novelist, photographer, ornithologist, publisher, painter and environmentalist. He made a great impression in the "Navya" period of Kannada literature and and inaugurated the bandaya sahitya.
Tejaswi was born on September 8, 1938. His father is the famous poet, Rashtrakavi Kuvempu. He completed his education in Mysore. Tejaswi has written in almost all forms of literature including poems, short stories, novels, travel literature, plays and science fiction. He has translated several English books to Kannada. His famous translations include the series on Kenneth Anderson's hunting expeditions and Henri Charrière's Papillon.
He has won several awards for his contribution to literature such as the Rajyotsava and Kannada Sahitya Academy awards.
Poornachandra Tejaswi died of cardiac arrest at the age of 69
Adventurous. Translated book. Its an autobiography of Henri charrierre who was wrongly convicted for a murder. 13 years of struggle to escape from Guiana Island. This is first part.. Continuation would be in second part I believe.
ಪ್ಯಾಪಿಲಾನ್/ಪ್ಯಾಪಿಯೊನ್ ಕೃತಿಯನ್ನ ಓದುತ್ತಾ ಹೋದಂತೆ ಜೀವನಪ್ರೀತಿಯನ್ನು, ಧನ್ಯತಾಭಾವವನ್ನು ಕೊಡುತ್ತಾ ಸಾಗಿತು. ಒಬ್ಬ ಮನುಷ್ಯ ಹೀಗೆಲ್ಲ ಜೀವಿಸಬಹುದಾ? ಒಬ್ಬನ ಬದುಕಲ್ಲಿ ಹೀಗೆಲ್ಲ ನಡೆಯಬಹುದಾ? ಎಂದು ಅನಿಸಿದ್ದು ಸುಳ್ಳಲ್ಲ.
#ಪ್ಯಾಪಿಲಾನ್_1
ಅವನ ಹೆಸರು ಹೆನ್ರಿ. ಆದರೆ ಅವನನ್ನು "ಪ್ಯಾಪಿ" ಎಂದು ಎಲ್ಲರೂ ಸಂಬೋಧಿಸುತ್ತಾರೆ. ಇನ್ನು ಇಪ್ಪತ್ನಾಲ್ಕು ಇಪ್ಪತ್ತೈದರ ಹರಯದ ಯುವಕ. ಸಂಸಾರಿ ಕೂಡ. ತನದಲ್ಲದ ತಪ್ಪಿಗೆ ತನ್ನದೇ ಫ್ರೆಂಚ್ ಸರ್ಕಾರದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗತ್ತಾನೆ ಮತ್ತು ಅವನನ್ನು ಗಯಾನಾ ದ್ವೀಪದಲ್ಲಿರುವ ಜೈಲಿಗಟ್ಟುತ್ತಾರೆ.
ಇಲ್ಲಿಂದ ಶುರುವಾಗುವ ಪ್ಯಾಪಿಯ ಕತೆ ಎಲ್ಲೂ ನಿಲ್ಲುವುದಿಲ್ಲ. ನಾಗಾಲೋಟದ ಥರಹ ಅವನ ಜೀವನ ಸಾಗುತ್ತಾ ಹೋಗುತ್ತದೆ ಮತ್ತು ಇದನ್ನು ಓದುಗನಿಗೆ ಹೇಳುತ್ತಾ ಸಾಗುತ್ತಾನೆ.
ಅವನದು ಒಂದೇ ಕನಸು ಸ್ವತಂತ್ರ ಬದುಕು. ಸೆರೆಮನೆಯಲ್ಲಿನ ಪ್ರತಿ ಕ್ಷಣದಲ್ಲೂ ಅವನು ಚಡಪಡಿಸುವುದು ಸ್ವಾತಂತ್ರ್ಯಕ್ಕಾಗಿ. ಅದಕ್ಕಾಗಿ ಅವನು ಜೈಲಿನಿಂದ ಪಲಾಯನಗೈಯ್ಯಲೇ ಬೇಕೆಂಬ ಶಪಥ ಹೂಡುತ್ತಾನೆ.
ಪಲಾಯನಕ್ಕಾಗಿ ಅವನು ಆರಿಸಿಕೊಳ್ಳುವ ದಾರಿಗಳು, ಆಯಾ ದಾರಿಗಳಲ್ಲಿ ಸವೆಸುವುದಕ್ಕೆ ಸಿಕ್ಕ ಅಪರಿಚಿತರು ನಂತರ ಪ್ರಾಣ ಸ್ನೇಹಿತರಾಗುವುದು, ಆ ಸ್ನೇಹಿತರ ಕಷ್ಟ ಕೋಟಲೆಗಳ ಕಥೆಗಳು, ಜೈಲು ಎನ್ನುವ ನರಕ ಅಥವಾ ಅದಕ್ಕಿಂತ ಹೆಚ್ಚಿನದು, ಅಲ್ಲಿನ ಕೆಲವು ಕ್ರೂರ ಮತ್ತು ವಾತ್ಸಲ್ಯಭರಿತ ಅಧಿಕಾರಿಗಳು ಹಾಗೂ ಖೈದಿಗಳು. ಹೀಗೆ ಎಲ್ಲವನ್ನೊಳಗೊಂಡ ಕಥೆ ಪ್ರತಿ ಪುಟದಲ್ಲೂ ವಿಸ್ಮಯಕಾರಿಯಾದಂತ ಕುತೂಹಲವನ್ನು ಹುಟ್ಟಿಸುತ್ತಾ ಸಾಗುತ್ತಲೇ ಇರುತ್ತದೆ.
ಪಲಾಯನದ ಮೊದಲ ಯತ್ನದಲ್ಲೇ ಯಶಗೊಂಡ ಪ್ಯಾಪಿ ಮತ್ತವನ ಸ್ನೇಹಿತರು, ಸಾಗುವ ಹಾದಿಯಲ್ಲಿ ಅನೇಕ ಸಹೃದಯಿಗಳನ್ನು ಭೇಟಿ ಮಾಡುತ್ತಾರೆ. ಅದು ಕುಷ್ಠ ರೋಗಿಗಳಾದರೂ ಹೃದಯ ಶ್ರೀಮಂತಿಕೆಯಿಂದ ಕೂಡಿರುವ ಫಿಜನ್ ಐಲ್ಯಾಂಡ್ ನ ದ್ವೀಪ ನಿವಾಸಿಗಳು, ಟ್ರಿನಿಡಾಡ್ ನ ಬೊವೆನ್ ಕುಟುಂಬ ಮತ್ತು ಜನರು, ಮತ್ತೊಂದು ದ್ವೀಪದ ಚರ್ಚಿನ ಫಾದರ್, ಎಲ್ಲದಕ್ಕಿಂತ ಹೆಚ್ಚಾಗಿ ಗೋಜಿರಾ ಇಂಡಿಯನ್ಸ್ ಎಂಬ ಜನಾಂಗ ಪ್ಯಾಪಿಯನ್ನು ತನ್ನಲ್ಲೇ ಒಬ್ಬನನ್ನಾಗಿ ಮಾಡಿಕೊಳ್ಳುವುದು.. ಅದರಲ್ಲೂ ಲಾಲಿ ಮತ್ತು ಜೋರೀಮಾ ಎಂಬ ಹೆಂಗಳೆಯರು ಪ್ಯಾಪಿಗೆ ಪ್ರೀತಿಯ ಸುಧೆಯನ್ನೆ ಹರಿಸಿ, ಅವನನ್ನು ಪತಿಯನ್ನಾಗಿ ಮಾಡಿಕೊಂಡು ಸಂತಸದ ಬಾಳನ್ನು ಸಾಗಿಸುವುದು, (ಆದರೆ ಅವನು ಅಲ್ಲಿಂದ ಮುಂದೆ ಹೊರಡುವಾಗ ಇವನ್ನು ಯಾಕಾದರೂ ಇವರನ್ನು ಬಿಟ್ಟು ಹೋಗುತ್ತಿದ್ದಾನೆ ಎಂದು ಓದುಗನ ಮನಸ್ಸು ಕೂಡ ಹೇಳುತ್ತಿರುತ್ತದೆ) ಅಲ್ಲಿಂದ ಮುಂದೆ ಕೊಲಂಬಿಯದಲ್ಲಿ ಸೆರೆಯಾಳಾಗಿ ಸಿಕ್ಕಿ ಮತ್ತೆ ವಾಪಸ್ ಗಯಾನದ ಜೈಲಿನಲ್ಲಿ ಬಂದಿಯಾಗಿ ಅತ್ಯಂತ ಕಠಿಣ ಶಿಕ್ಷೆಯಾದ ಏಕಾಂತವಾಸಕ್ಕೆ ಒಳಪಡುತ್ತಾನೆ.
ಅವನನ್ನು ಏಕಾಂತ ವಾಸಕ್ಕೆ ಕಳುಹಿಸಿದಾಗಲೂ ಸ್ವಾತಂತ್ರ್ಯದ ಕನಸಿಗಾಗಿ ಮತ್ತೆ ಪಲಾಯನಗೈಯಲು ಯೋಚನೆ ಮಾಡುತ್ತಾನೆ ಮತ್ತು ಅದರ ಸಹಾಯಕ್ಕಾಗಿ ಜೈಲಿನ ಕೆಲವು ಅಧಿಕಾರಿಗಳು ಮತ್ತು ಗೆಳೆಯರೆಲ್ಲಾ ಸಹಕರಿಸುತ್ತಾರೆ.
ಇಷ್ಟು ಭಾಗ ಒಂದರಲ್ಲಿಯದು. ಭಾಗ ಒಂದು ಮುಗಿಸಿದ ಕೂಡಲೇ ಭಾಗ ಎರಡಕ್ಕೆ ಕಾಲಿಟ್ಟಿದ್ದೇನೆ ಮತ್ತೊಮ್ಮೆ ಪ್ಯಾಪಿಯ ಸಾಹಸಮಯ ಜೀವನ ನೋಡಲು.
This entire review has been hidden because of spoilers.
ಜೀವನದಲ್ಲಿ ಮನುಷ್ಯನಿಗೆ ಭರವಸೆ ತುಂಬಾ ಮುಖ್ಯ, ಮನುಷ್ಯನ ಜೀವನದಲ್ಲಿ ಏಳು ಬೀಳು ಸಹಜ. ಅದನ್ನು ಎದುರಿಸಲು ಚೈತನ್ಯ ಬೇಕಾಗುತ್ತದೆ. ಇಂತಹ ಪುಸ್ತಕ ಅದನ್ನು ಒದಗಿಸುತ್ತದೆ ಎಂಬುದು ನನ್ನ ಅಭಿಪ್ರಾಯ.
ಪ್ಯಾಪಿಲಾನ್ – ಭಾಗ ೧, ಮಾಡದ ಅಪರಾಧಕ್ಕಾಗಿ ಫ್ರಾನ್ಸ್ನಿಂದ ಗಯಾನಾದ ಭೀಕರ ಕಾರಾಗೃಹಕ್ಕೆ ಜೀವಾವಧಿ ಶಿಕ್ಷೆಗೆ ಗುರಿಯಾದ ಹೆನ್ರಿ ಚರಾರೆ ಅವರ ನೈಜ ಅನುಭವಗಳೇ ಈ ಕೃತಿಯ ವಸ್ತು.
ಮೊದಲ ಐವತ್ತು ಪುಟಗಳು ಓದಿದಾಗ ಇದು ನಿಜಕ್ಕೂ ನೈಜವ ಅನ್ನಿಸಿತು, ಆಮೇಲೆ ಗೂಗಲ್ ಮಾಡಿ ನೋಡಿ ಮತ್ತೆ ಓದೋಕೆ ಆರಂಭಿಸಿದೆ. ಯಾಕಂದ್ರೆ ಒಬ್ಬ ಮನುಷ್ಯ ನಿಜಕ್ಕೂ ಇಷ್ಟು ಸಲ ಸರಾಗವಾಗಿ ಜೈಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವ ಅನ್ನುವಷ್ಟು ಅನುಮಾನ ಬರತೊಡಗಿತ್ತು. ದಣಿವಿಲ್ಲದ ಹಸಿವಿನ ಓಟ ಬದುಕುವ ಛಲಕ್ಕೆ ಜೊತೆಯಾದರೆ ಮನುಷ್ಯ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಈ ಕೃತಿ ಉದಾಹರಣೆ. ಇಲ್ಲಿರುವ ಮನುಷ್ಯ ಇಷ್ಟು ಕಷ್ಟ ಪಡುವುದು ಬದುಕಲಿಕ್ಕಷ್ಟೇ ಹೊರತು ಏನೋ ಸಾಧಿಸಿ ಪ್ರಪಂಚ ಉದ್ಧಾರ ಮಾಡುತ್ತೇನೆಂಬ ಬ್ರಹ್ಮೆಯಿಂದಲ್ಲ.
ಕಾರಾಗೃಹದ ಅಮಾನುಷತೆ, ಕೈದಿಗಳ ಮೇಲಿನ ಕ್ರೂರತೆ, ಹಸಿವು, ಒಂಟಿತನ, ನಂಬಿಕೆಯ ದ್ರೋಹ—ಇವೆಲ್ಲವನ್ನು ಅತ್ಯಂತ ನೇರವಾಗಿ ಚಿತ್ರಿಸಿದ್ದಾರೆ. ಆದರೂ ಈ ಕೃತಿಯ ಹೃದಯದಲ್ಲಿ ಇರುವುದೇ ಸ್ವಾತಂತ್ರ್ಯದ ಹಂಬಲ. “ಪ್ಯಾಪಿಲಾನ್-ಹಾರುವ ಪತಂಗ”ಎಂಬ ಹೆಸರಿನಂತೆ, ಬಂಧನದ ನಡುವೆ ಹಾರಾಡಲು ಯತ್ನಿಸುವ ಚಿಟ್ಟೆಯಂತೆ, ವ್ಯಕ್ತಿಯು ಮರುಮರು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ.
ಕಾರಾಗೃಹ ಜೀವನದ ಪ್ರಾರಂಭಿಕ ಅನುಭವಗಳು, ಸ್ನೇಹಗಳು, ದ್ರೋಹಗಳು ಮತ್ತು ಮೊದಲ ತಪ್ಪಿಸಿಕೊಳ್ಳುವ ಸಾಹಸಗಳು ಓದುಗರನ್ನು ಹಿಡಿದುಕೊಳ್ಳುತ್ತವೆ. ಪಾಪಿಲಾನ್ ಅವರ ಬರವಣಿಗೆಯಲ್ಲಿ ಇರುವ ಸರಳತೆ ಮತ್ತು ತೀವ್ರತೆ ಕಥೆಯನ್ನು ಜೀವಂತವಾಗಿಸುತ್ತವೆ. ಕೆಲವು ಸಂದರ್ಭಗಳಲ್ಲಿ ಕ್ರೂರತೆ ಓದುಗರನ್ನು ಅಲುಗಾಡಿಸುತ್ತದೆ ಅದೇ ಈ ಕೃತಿಯ ಸತ್ಯಶಕ್ತಿ.