ಇಂತಹದ್ದೊಂದು ಪುಸ್ತಕವನ್ನು ಓದಿ ಮುಗಿಸಿಬಿಡಬಾರದು, ಓದುತ್ತಾ ಇರಬೇಕು. ಪುಸ್ತಕದಲ್ಲಿರುವ ಅನೇಕ ವಿವರಣೆಗಳು, ವಾಕ್ಯಗಳು, ಪದಗಳು, ನಾಣ್ಣುಡಿಗಳನ್ನು ಈಗಾಗಲೇ ನಾವು ಕೇಳಿರುತ್ತೇವೆ, ಬಹುಷಃ ಅವುಗಳ ಪ್ರಯೋಗದಲ್ಲಿ, ಬಳಸುವುದರಲ್ಲಿ ಅಥವಾ ಬರೆಯುವಾಗ, ಅಪಭ್ರಂಶ ವಾಗಿರಬಹುದು.
"ತಪ್ಪಾಗೋದು ದೊಡ್ಡ ವಿಷಯ ಅಲ್ಲ. ತಿದ್ದಿಕೊಳ್ಳೋದೂ ಸಣ್ಣ ವಿಷಯನೂ ಅಲ್ಲ." ಹಾಗಾಗಿ ಸಮಯ ಸಿಕ್ಕಾಗ ಈ ಪುಸ್ತಕ ನಿಮ್ಮ ಕೈಗೆಟುಕುವಂತಿರಲಿ.
ಯಾರಿಗಾದರೂ ಉಡುಗೊರೆ ಕೊಡಬೇಕು ಅನ್ನಿಸಿದಾಗ, ರವಿ ಬೆಳೆಗೆರೆಯರ "ಉಡುಗೊರೆ" ಜೊತೆಗೆ ಇದನ್ನೂ ಸೇರಿಸಿಕೊಳ್ಳಬಹುದು.
ಸಾಮಾನ್ಯ ಪ್ರಕಾರಗಳನ್ನು ಹೊರತು ಪಡಿಸಿ, ಭಾಷೆಗೆ ಇಂತಹ ಪುಸ್ತಕಗಳ ಅವಶ್ಯಕತೆ ಇದೆ. ಇಂತಹದ್ದೊಂದು ಯೋಚನೆಯಿಂದ ಈ ಪುಸ್ತಕವನ್ನು ಬರೆದಿರುವ ಅಪಾರ ರವರಿಗೆ ಅಪಾರವಾದ ಅಭಿನಂದನೆಗಳು ಮತ್ತು ವಸುದೇಂಧ್ರ ರವರ ಛಂದ ಪುಸ್ತಕ ಇಂತಹ ಅನೇಕ ಪುಸ್ತಕಗಳನ್ನು ಹೊರತರಲಿ ಎಂದು ಹಾರೈಸುವೆ.