Jump to ratings and reviews
Rate this book

ಕಥೆಗೆ ಸಾವಿಲ್ಲ [Kathege Saavilla]

Rate this book
ಕಾನ್ಕೇವ್ ಮಾಧ್ಯಮ ಮತ್ತು ಪ್ರಕಾಶನ ಸಂಸ್ಥೆಯು ಅತ್ಯಂತ ಜವಾಬ್ದಾರಿಯುತವಾಗಿ ತನ್ನ ಪ್ರಕಟಣೆಗಳನ್ನು ಓದುಗರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಕಟಿಸುತ್ತಾ ಬಂದಿದ್ದು. ಯುವ ಲೇಖಕರಿಗೆ ಹೆಚ್ಚು ಪ್ರಾಮುಖ್ಯತೆ ನೀಡುವ ದೃಷ್ಟಿಯಿಂದ ಯುವ ಬರಹಗಾರರ ಕೃತಿಗಳನ್ನು ಪ್ರಕಟಿಸುತ್ತ ಬಂದಿದೆ.

ಈ ಹಾದಿಯಲ್ಲಿ ಸಾಗುವಾಗ ಎದುರಾದವರೇ ನನ್ನ ನೆಚ್ಚಿನ ನಿರ್ದೇಶಕರಲ್ಲಿ ಒಬ್ಬರಾದ ಬಿ.ಎಂ ಗಿರಿರಾಜ್ ರವರು. ಅವರ ಬಳಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುವಾಗ ಅವರು ಸಣ್ಣ ಕಥೆಗಳನ್ನು ಬರೆದಿದ್ದರು. ಒಂದಕ್ಕಿಂತ ಒಂದು ಉತ್ತಮ ಕಥೆಗಳಾಗಿದ್ದವು. ಅದನ್ನು ಪುಸ್ತಕವಾಗಿಸಲು ಹೊರಟಾಗ, ನನ್ನದು ಇನ್ನೊಂದು ಕಾದಂಬರಿ ಇದೆ ಓದಿ ಅಂತ ಅಂದಾಗ ನಾನು ಪ್ರತಿಗಳನ್ನು ಕೊಡಿ ಅಂದೆ. ಆದರೆ ಅವರ ಬಳಿ ಇರಲಿಲ್ಲ. ಕಲಾಮಾಧ್ಯಮದ ಪರಮೇಶ್ವರ್ ಅವರ ಬಳಿ ಒಂದು ಪ್ರತಿ ಇರುವುದನ್ನು ಗಮನಿಸಿ, ಪಡೆದು, ಓದಿ ಕಾದಂಬರಿಯನ್ನೇ ಮೊದಲು ಮಾಡುವ ಎಂದು ಹೇಳಿ ಪ್ರಕಟಿಸಲು ಮುಂದಾದೆ. ಇದು ಗಿರಿರಾಜ್ ಅವರ ಪ್ರಾರಂಭಿಕ ಬರೆಹ ಎಂದು ಅನ್ನಿಸುವುದೇ ಇಲ್ಲ ಅಷ್ಟು ಲೀಲಾಜಾಲವಾಗಿ ಓದಿಸಿಕೊಂದು ಹೋಗುತ್ತದೆ. ಕಥೆಗೆ ಸಾವಿಲ್ಲ ಕಾದಂಬರಿ ನಿಜಕ್ಕೂ ಸಮಾಜದ ಕಳೆ ತೆಗೆದು ಸ್ವಾಸ್ಥ್ಯ ಉಂಟು ಮಾಡುವಲ್ಲಿನ ಪ್ರಯತ್ನ ಎಂದು ಮೇಲ್ನೋಟಕ್ಕೆ ಅರಿವಾಗುತ್ತಿದ್ದಂತೆ ಅದರ ತಿರುಳು ಭೌಗೋಳಿಕ ನೆಲೆಗಳಲ್ಲಿ ಉಂಟಾಗುವ ಸಂಸ್ಕೃತಿಗಳ ಪಲ್ಲಟ ಹಾಗೂ ತಲೆಮಾರುಗಳ ತಲ್ಲಣಗಳಿಗೆ ಸಾಕ್ಷಿಯಾಗಿರುವುದು ಗೊತ್ತಾಗುತ್ತದೆ.

ಗಿರಿರಾಜ್ ಅವರು ಸಿನೆಮಾ, ನಾಟಕ, ಸಮಾಜದ ಜೊತೆಗೆ ತಮ್ಮ ವಿಚಾರಗಳನ್ನು ಬರವಣಿಗೆಯಲ್ಲಿ ಕಸಿ ಮಾಡುತ್ತಾ ಹೆಚ್ಚು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ವಿನಂತಿಸುತ್ತೇನೆ.

ಕಾದಂಬರಿಯನ್ನು ಟೈಪ್ ಮಾಡಿಕೊಟ್ಟ ಶ್ರೀ ಚಂದ್ರಶೇಖರ್‌, ಅಕ್ಷರ ಜೋಡಣೆ ಮಾಡಿಕೊಟ್ಟ ಶ್ರೀಮತಿ ಮಾಲಾ, ಮುಖಪುಟ ರಚಿಸಿದ ಕಲಾವಿದರಾದ ಶ್ರೀ ಚನ್ನಕೇಶವ.ಜಿ ಮತ್ತು ನನಗೆ ಸಲಹೆ ಸೂಚನೆಗಳನ್ನು ನೀಡುತ್ತಾ ಬಂದಿರುವ ಹಲವಾರು ಹಿರಿಯರಿಗೆ ನನ್ನ ಅನಂತಾನಂತ ಧನ್ಯವಾದಗಳು.

ಪುಸ್ತಕವನ್ನು ಅಂದವಾಗಿ ಮುದ್ರಿಸುವ ಎಂದಿನ ನಮ್ಮ ಲಕ್ಷ್ಮೀ ಮುದ್ರಣಾಲಯದ ಶ್ರೀ ಕೆ.ಎಸ್. ಮಂಜು ಅವರಿಗೂ ಕೃತಜ್ಞತೆಗಳು.

-ನಂದೀಶ್ ದೇವ್

172 pages, Paperback

Published January 1, 2021

Loading...
Loading...

About the author

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
3 (60%)
4 stars
1 (20%)
3 stars
1 (20%)
2 stars
0 (0%)
1 star
0 (0%)
Displaying 1 - 2 of 2 reviews
Profile Image for Vasanth.
122 reviews26 followers
December 20, 2025
ವಿದೇಶದಿಂದ ತಾಯ್ನಾಡಿಗೆ ಬರುವ ಮುಖ್ಯಪಾತ್ರದ ಮೂಲಕ ಶುರುವಾಗುವ ಈ ಕಾದಂಬರಿ ನನ್ನನ್ನ ಕೊನೆ ಪುಟದವರೆಗೂ ಹಿಡಿದಿಟ್ಟು ಓದಿಸಿಕೊಳ್ತು.

“ಕಥೆಗೆ ಸಾವಿಲ್ಲ”, ಒಂದು ಸಸ್ಪೆನ್ಸ್ ಥ್ರಿಲ್ಲರ್ ಕಾದಂಬರಿಯೂ ಹೌದು, ಎರಡು ತಲೆಮಾರುಗಳನ್ನ ಮತ್ತು ಸಂಸ್ಕೃತಿಗಳನ್ನ ಅನ್ವೇಷಿಸುವ ಕಾದಂಬರಿಯೂ ಹೌದು. ಪಾತ್ರಗಳ ಮೂಲಕ ಲೇಖಕರು ಇತಿಹಾಸ ಹೇಗೆ ತಿರುಚಲ್ಪಟ್ಟಿದೆ ಅನ್ನೋದನ್ನ ಬಹಳ ಚೆನ್ನಾಗಿ ಮಂಡಿಸಿದ್ದಾರೆ. ಒಮ್ಮೆ ಓದಬಹುದು.
Profile Image for Soumya.
229 reviews52 followers
March 9, 2026
ಚೆನ್ನಾಗಿದೆ.

ಕೆನಡಾದ ಕೌಸ್ತುಭನಿಂದ ಶುರುವಾಗಿ ಮಲೆನಾಡ ಹಳ್ಳಿ ಒಂದರಲ್ಲಿ ಮುಗಿಯುವ ಕಥೆ.
Starting ಅಲ್ಲಿ ಸಾಧಾರಣ family story ಅನ್ನೋ ತರ ಶುರುವಾಗಿ, ನಂತರ ಸ್ವಾತಂತ್ರ್ಯ ಪೂರ್ವ ಕಥೆ ತಳುಕು ಹಾಕಿ, history ಹೇಗೆ ತಿರುಚಲ್ಪಡುತ್ತದೆ ಅನ್ನೋದನ್ನ ಚೆನ್ನಾಗಿ ಹೇಳಿದ್ದಾರೆ.
ಮಧ್ಯೆ ಸ್ವಲ್ಪ bundle ಕಥೆ ತರ ಅನ್ನಿಸಿದರೂ, ಓದಲು ಚೆನ್ನಾಗಿ ಅನ್ನಿಸಿತು.
Displaying 1 - 2 of 2 reviews