'ವಲಯ ಕಲಹ' ಎರಡು ನೀಕೃತೆಗಳನ್ನು ಹೊಂದಿರುವ ಸಂಕಲನ, ಧರ್ಮ, ವಿಜ್ಞಾನ, ಸಾಹಿತ್ಯ, ಕಲೆ ಎಲ್ಲವೂ ಭಾರತೀಯ ಜ್ಞಾನ ಪ್ರಕಾರದ ಅವಿಭಾಜ್ಯ ಅಂಶಗಳಾಗಿ ಹರಿದು ಬಂದಿರುವುದನ್ನು ಹಿನ್ನೆಲೆಯಾಗುಳ್ಳ ಕಥೆ ಒಂದಾದರೆ ಮತ್ತೊಂದು ರಾಷ್ಟ್ರಕೂಟರ ಚರಿತ್ರೆಯ ಸುತ್ತ ಬೆಳೆಸಿದ ನೀಳತೆ ಮಾನವ ಸಮಾಜಜೀವಿ ಆಗಿರದಿದ್ದರೆ ಅವನ ಜೀವನ ಹೇಗಿದ್ದಿರಬಹುದು ಎಂಬ ಜಿಜ್ಞಾಸೆಯನ್ನು ಕುತೂಹಲಕಾರಿಯಾಗಿ ಹೇಳುವಂತ ಕಥನವಿದು. ಎಂದಿನಂತೆ ಗಣೇಶಯ್ಯನವರ ರೋಚಕ ಕಥಾಶೈಲಿ ಇಲ್ಲಿದೆ.
Dr. K.N. Ganeshaiah is an agricultural scientist and professor at the University of Agricultural Sciences, Bangalore. He is also a novelist specializing in thrillers, and writes in the Kannada language.
Education: Ph. D. University of Agricultural Sciences, Bangalore, India, l983 M.Sc. (Agri.) in Genetics & Plant Breeding, UAS, Bangalore, l979 B.Sc (Agri.), University of Agricultural Sciences, Bangalore, l976.
Prof Ganeshaiah has pioneered a new style of writing novels and short stories in Kannada that seamlessly mixes facts and fiction in the form of thrillers. Through this style, his writings have captured a new generation of readers in Kannada contributing to the growth of story writing in Kannada.
Though an agriculture scientist, his novels and stories bring to the reader, the lesser-known and hidden facts of history along with science. Some of his novels are also aimed at bringing the most complicated elements of science to the general reader.
Recognizing the novelty in the style of writing, he was awarded Kannada Sahitya Academy Datti Award for his novel Kanaka Musuku, which combines both history and science. As some experts have inferred, his thrillers have drawn a large number of new readers to Kannada.
In recognition of his novel contribution to Kannada Literature, Prof Ganeshaiah has also been honored with the Honorary President of Kolar District Sahitya Parishat during 2013
Prof Ganeshaiah has written Nine novels, and 41 short/long stories (in eight collections) and over 63 essays in the areas related Science and Society. His recent book Sasya Sagga on the wonders of plant life as told through his own journey in the field of botany and evolution has attracted your readers. Several of his novels and stories were serialized in Kannada Weekly Magazines
ಕೆ ಎನ್ ಗಣೇಶಯ್ಯ ಅವರ ಈ ಹೊಸ ಪುಸ್ತಕ 'ವಲಯ ಕಲಹ' ಹಾಗೂ 'ಪರಾಂಗನಾ ಪುತ್ರ' ಎಂಬ ಎರಡು ಉದ್ದ ಕತೆಗಳ ಸಂಕಲನ. ಪುಸ್ತಕದ ಶೀರ್ಷಿಕೆ ಸೂಚಿಸಿದಂತೆ ಎರಡೂ ಕಥೆಗಳಲ್ಲಿ ವಿವಿಧ ವಲಯಗಳ ಅಥವಾ ಅದನ್ನು ಪ್ರತಿಪಾದಿಸುವ ಪಾತ್ರಗಳ ಕಲಹಗಳನ್ನು ತೋರಿಸಿದೆ.
೧. ವಲಯ ಕಲಹ (3.5⭐) ಕತೆಯು ಧರ್ಮ ಹಾಗೂ ವಿಜ್ಞಾನ ಎಂಬ ಎರಡು ವಲಯಗಳ ಕುರಿತು. ಚಂದ್ರಯಾನ-3 ರ ಉಡಾವಣೆಯ ಸಂದರ್ಭದಲ್ಲಿ ವಿಜ್ಞಾನಿಗಳು ಅದರ ಚಿಕ್ಕ ಮಾದರಿಯನ್ನು(Miniature Model) ತೆಗೆದುಕೊಂಡು ಆಶೀರ್ವಾದ ಪಡೆಯಲೆಂದು ತಿರುಪತಿ ದೇವಸ್ಥಾನಕ್ಕೆ ಹೋದಾಗ ಹಲವು ಗುಂಪುಗಳು ಇದನ್ನು ಪ್ರಶ್ನಿಸಿತು. ವಿಜ್ಞಾನ ಹಾಗೂ ಅದಕ್ಕೆ ಸಂಬಂದಿಸಿದ ಜ್ಞಾನವನ್ನು ಹೊಂದಿರುವ ಸೈಂಟಿಸ್ಟ್ಗಳು ದೇವರ ಮೊರೆ ಹೋಗಿದನ್ನು ಪ್ರಶ್ನಿಸಲಾಯಿತು. ಲೇಖಕರ ಮೊದಲನೇ ಕತೆಗೆ ಈ ಅಂಶವೇ ಅಡಿಪಾಯ.
2030 ನೇ ವರ್ಷ, ಭಾರತದ ಅಂತರಿಕ್ಷ ನಿಲ್ದಾಣದ (BAS) ಯೋಜನೆಯ ಅಂಗವಾಗಿ ನೆಲೆಗೊಂಡಿದ್ದ ಗುಪ್ತ ಕಟ್ಟಡದಲ್ಲಿ ಡಾ ಚಂದನಾ ಟ್ರೈನೀ ಆಗಿ ಕೆಲಸ ವಹಿಸುತ್ತಿದ್ದಾರೆ. ಸದಾ ಹುಮ್ಮಸ್ಸಿನಲ್ಲಿ, ಇತರ ಟ್ರೈನೀಗಳಿಗೆ ಹೋಲಿಸಿದರೆ ಮುಂಚೂಣಿಯಲ್ಲಿರುವ ಚಂದನಾದ ಮುಖದಲ್ಲಿ ಇಂದು ಆ ಹುಮ್ಮಸ್ಸು ಇಲ್ಲದಿರೋದು ಟ್ರೈನಿಂಗ್ನ ಮುಖ್ಯಸ್ಥರಾದ ಡಾ ಝಾ ಅವರಿಗೆ ಆತಂಕದ ವಿಷಯ. ಕಾರಣ ಅಲ್ಲಿ ನಡೆಯುವಂತಹ ಪ್ರಯೋಗಗಳಿಗೆ ಸಂಪೂರ್ಣ ಗಮನವಿಲ್ಲದಿದ್ದಲ್ಲಿ ಪ್ರಾಣಕ್ಕೆ ಹಾನಿ ಆಗುವ ಸಾಧ್ಯತೆಗಳು. ಇದನ್ನು ಅರಿತ ಡಾ ಝಾ ಅವರ ಮುಂದಿನ ಹೆಜ್ಜೆಗಳೇನು? ಚಂದನಾಳ ಲೈಫ್ ಪಾರ್ಟ್ನರ್ ಹರೀಶನ ಜೊತೆ ವೈಮನಸ್ಸಿಗೆ ಈ ವಲಯಗಳೇ ಕಾರಣವೇ? ಧರ್ಮ-ವಿಜ್ಞಾನ ಎಂಬ ವಿವಿಧ ವಲಯಗಳು ಸ್ವತಂತ್ರವೇ ಅಥವಾ ಒಂದರ ಮೇಲೊಂದು ವ್ಯಾಪಿಸಿಕೊಂಡಿವೆಯೋ?
ಕತೆ ತುಂಬಾ ಸಿಂಪಲ್ ಸ್ಟ್ರೈಟ್ ಫಾರ್ವರ್ಡ್ ಆಗಿದ್ದು ಮೇಲ್ಕಂಡ ವಲಯಗಳ ಆಳವಾದ ಚರ್ಚೆಯನ್ನು ನೋಡಬಹುದು. ಕೊನೆಯ ಭಾಗದಲ್ಲಿ ಒಂದು ಟ್ವಿಸ್ಟ್ ನಿರೀಕ್ಷಿಸಿರಲಿಲ್ಲ (ಟ್ವಿಸ್ಟ್ ಇರಬಹುದು ಅನ್ನೋದಕ್ಕೆ ಒಂದು ಚಿಕ್ಕ ಸುಳುಹು ಕತೆಯ ಮದ್ಯದಲ್ಲಿ ಇರೋದನ್ನ ಮರೆತಿದ್ದೆ), ಆದರೆ ಕತೆಗೆ ಒಂದು ಸೂಕ್ತ ಮುಕ್ತಾಯ ಕೊಡುವಲ್ಲಿ ಸಹಕರಿಸಿತು.
೨. ಪರಾಂಗನ ಪುತ್ರ (4.5⭐) ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕಿ ಡಾ ಇಂದ್ರಾಣಿ ರಾಷ್ಟ್ರಕೂಟರ ಮುಮ್ಮಡಿ ಕ್ರಷ್ಣನ ಕಾಲಕ್ಕೆ ಸಂಬಂಧಿಸಿದಂತೆ ಮಧ್ಯ ಪ್ರದೇಶದಲ್ಲಿ ದೊರಕಿರುವ ಜೂರಾ ಶಾಸನದ ಕುರಿತು ಹೇಳುವಾಗ ಶಾಸನದಲ್ಲಿ ಪದೇ ಪದೇ ಆ ರಾಜನನ್ನು'ಪರಾಂಗನ ಪುತ್ರ' (ಇತರ ಸ್ತ್ರೀಯರನ್ನು ತಾಯಿಯಂತೆ ಕಾಣುವ) ಎಂದು ಉಲ್ಲೇಖಿಸುವ ವಿಷಯ ಸಂಜನಾ ಅನ್ನೋ ವಿದ್ಯಾರ್ಥಿಗೆ ಅಚ್ಚರಿ ಮೂಡಿಸುತ್ತದೆ. ಹಲವು ಬಿರುದುಗಳನ್ನು ಹೊತ್ತ ರಾಜನ ಈ ಒಂದು ಶಾಸನದಲ್ಲಿ ಮಾತ್ರ ದೊರಕಿರುವ ಬಿರುದು ಅವಳಲ್ಲಿ ಏನೋ ಸಂಶಯ ಹುಟ್ಟುತ್ತದೆ. ಈ ವಿಷಯಕ್ಕೆ ಕುರಿತಂತೆ ಸಂಶೋಧಿಸಿ ಒಂದು ಲೇಖನ ತಯಾರಿಸುತ್ತಾಳೆ.
ರಾಜ ಧ್ರುವ ಧಾರಾವರ್ಶನ ಕಾಲದಲ್ಲಿ ನಡೆದಂತಹ ಹಲವಾರು ಘಟನೆಗಳು ಇನ್ನೂರು ವರ್ಷ ಕಳೆದಮೇಲೂ ಮುಮ್ಮಡಿ ಕೃಷ್ಣನ ಕಾಲಕ್ಕೆ ತಲೆಬೇನೆ ಯಾಕಾದವು? ಕಾಡಿನಲ್ಲಿ ಓಡಾಡುತ್ತಿರುವ ಹುಡುಗನ ಎಡಗೈ ತೋಳಿನ ಮೇಲೆ ಮಾವಿನಕಾಯಿಯ ಗುರುತು ನೋಡಿ ಬೌದ್ಧ ಭಿಕ್ಕುವಿಗೆ ಅಚ್ಚರಿ ಯಾಕಾಯಿತು?
ಕಾಡು ಎಂಬ ವಲಯ ಹಾಗೂ ಜನಸಾಮಾನ್ಯರ ಸಾಮಾಜಿಕ ವಲಯಗಳಲ್ಲಿ ಇರುವ ವ್ಯತ್ಯಾಸಗಳೇನು. ಕಾಡಿನ ವಾತಾವರಣದಲ್ಲಿ ವರ್ಷಾನುಗಟ್ಟಲೆ ಇದ್ದಾಗ ಅದರ ಪ್ರಭಾವ ನರ ಮನುಷ್ಯನ ಮೇಲೆ ಹೇಗೆ? ಸಾಮಾಜಿಕ ವಾತಾವರಣದಲ್ಲಿ ಹೊಂದುಕೊಳ್ಳುವಾಗ ಹುಟ್ಟುಕೊಳ್ಳುವಂತಹ ಕಲಹಗಳು ಎಂಥವು?
ಇದೊಂದು ಅದ್ಭುತ ಕತೆ, ತುಂಬಾ ಇಷ್ಟ ಪಟ್ಟೆ. ಮೊದಲನೆಯ ಕಥೆಯಂತೆ 40 ಪುಟಗಳಲ್ಲೇ ಮುಗಿಯುತ್ತಾದರೂ, ಇಲ್ಲಿ ಅನೇಕ ಸನ್ನಿವೇಶಗಳಿವೆ, ತಿರುವುಗಳಿವೆ. 100-120 ಪುಟದ ಕಿರು ಕಾದಂಬರಿಯ ಕತೆಯನ್ನು ಚಿಕ್ಕದಾಗಿ ಚೊಕ್ಕದಾಗಿ ಲೇಖಕರು ಬರೆದಿರೋದು ಮೆಚ್ಚುಗೆಯ ವಿಷಯ. ಅನೇಕ ಪಾತ್ರಗಳೂ ಇವೆ. ಅರಮನೆಯ ಹಿರಿಯ ಅಧಿಕಾರಿ ಸಾಂಬೋಜಿಯ ಪಾತ್ರ ಇಷ್ಟವಾಯಿತು, ರಾಜನ ಪರವಾಗಿ ಅವರ ನಿಯತ್ತು, ಕಾಳಜಿ, ಸ್ವತಃ ಯೋಚಿಸಿ ತೆಗೆದುಕೊಳ್ಳುವಂತಹ ನಿರ್ಧಾರಗಳು ಎಲ್ಲವೂ. ಅರಮನೆ, ಕಾಡು, ಹಲವು ವಾತಾವರಣಗಳು ಓದುಗರನ್ನು ಹಿಡಿದು ಕೂರಿಸುವಲ್ಲಿ ಗೆಲ್ಲುತ್ತವೆ. ಮತ್ತೊಮ್ಮೆ ಓದುವ ಆಸೆ ಹುಟ್ಟಿಸುವಂತಹ ಕತೆ.