ಕಾದಂಬರಿ ಶ್ರೋತೃವಿನ ಮನ ಮುಟ್ಟಲು ಈ ಕೆಳಗಿನ ಮೂರು ಬಹು ಮುಖ್ಯ ಅಂಶಗಳಿರಬೇಕೆಂದು ಬುಧರು ಒಪ್ಪುತ್ತಾರೆ.
೧.ವಿಷಯ
೨.ವಿಚಾರ
೩.ವರ್ಣನೆ
ಈ ಮೂರರಲ್ಲಿ ಯಾವುದಕ್ಕೆ ಚ್ಯುತಿಯಾದರು ಅದು ಸಾರಹೀನವಾಗುತ್ತದೆ ಎಂದು ವಿಮಾಂಸಕರು , ವಿರ್ಮಶಕರು ಬಹಳೆಡೆ ಪ್ರಸ್ತಾಪಿಸಿದ್ದಾರೆ.
ಕಾದಂಬರಿಯ ವಿಷಯ ಲೇಖಕನ ಸ್ವಾತಂತ್ರ್ಯ.ಅಯಾ ವಿಷಯಕ್ಕೆ ತಕ್ಕಂತೆ ಪಾತ್ರ ಸೃಷ್ಟಿ ಹಾಗು ಬೆಳವಣಿಗೆ ಆಗಬೇಕು.ಮತ್ತು ಪಾತ್ರಗಳು ಲೇಖಕನ ಅಧೀನವೆ ವಿನಾ ಪಾತ್ರಗಳ ಅಧೀನ ಲೇಖಕನಲ್ಲ.
- ಅಯ್ಯರ್ ಅವರು ಬಹು ಸೊಗಸಾದ ವಿಷಯವನ್ನೆ ಆಯ್ದುಕೊಂಡಿದ್ದಾರೆ.ಪಾತ್ರಗಳು ಸಹಾ ಚನ್ನಾಗಿ ಮೂಡಿಬಂದಿವೆ.
ಹ್ಯೊಸಳರ ರಾಷ್ಟ್ರಭಕ್ತಿ ,ಕಲಾ ಪ್ರಾಮುಖ್ಯತೆ, ತ್ಯಾಗ,ಶೌರ್ಯ, ಹೃದಯವೈಶಾಲ್ಯಗಳು ವಿಷಯಕ್ಕೆ ಪುಷ್ಟಿಕರಿಸಿದೆ.
ಬಹುಮಟ್ಟಿಗೆ ಕನ್ನಡಿಗರಿಗೆ ಶಾಂತಳ ನಾಟ್ಯರಾಣಿಯಂದೆ ಪರಿಚಯ.
ಹೀಗಿದ್ದಲ್ಲಿ ವಿಷಯ ಪ್ರಸ್ತಾವನೆಯಲ್ಲಿ ನಾಟ್ಯದ ಬಗೆಗಳ ಬಗ್ಗೆ, ಸಂಗತಿಗಳ ಬಗ್ಗೆ ತಿಳಯಹೇಳಬೇಕ್ಕಾದ್ದು ಮೂಲ ಅಗತ್ಯ.
ಕೆಲವೆಡೆ ಮಾತ್ರ ಶಾಂತಲೆಯ ಗಾನದ ಬಗ್ಗೆ ಪ್ರಸ್ತಾಪವಿದೆ ಆದರೆ ಈದಾವುದರ ಸೂಕ್ಷ್ಮ ಮತ್ತು ಕೂಲಂಕಷ ವಿಷಯ ವ್ಯಕ್ತವಾಗಿಲ್ಲ.
ಶಿಲ್ಪಕಲೆಗೆ ತಾಯಿಯ ಬಸಿರು ಹ್ಯೊಸಳರ ರಾಜ್ಯ. ಅಯ್ಯರ್ ರವರು ಇತಿಹಾಸಕಾರಾದ್ದರಿಂದ , ಶಿಲ್ಪಕಲೆ ಮತ್ತು ಇತಿಹಾಸ ಇವರ ಅನುಯಾಯಿಗಳು. ಹೀಗಿದ್ದರೂ ಬೇಲೂರು (ವೇಲಾಪುರಿ) ಮತ್ತ ಹಳೆಬೀಡು (ದ್ವಾರವತಿ) ದೇವಾಲಯಗಳ ಬಗ್ಗೆ ಧೀರ್ಘ ಪ್ರಸ್ತಾಪವೂ ಇಲ್ಲ.
ಒಟ್ಟಿನಲ್ಲಿ ವಿಷಯ ಸಾದಾರಣವಾಗಿದೆ.
ಇನ್ನೂ ವಿಚಾರದತ್ತ ಗಮನಿಸುವ.l
ವಿಷಯಗಳಿನ್ನು ಗುರಿಯೆಡೆಗೆ ಕರೆದೊಯ್ಯುವ ಹಾದಿಯೆ ವಿಚಾರ.ಇದು ಹಾದಿ ಯಾವುದು ಎಂಬುದನ್ನು ಮಾತ್ರ ಸಾರುವುದು.ಹಾದಿಯ ರೂಪು ರೇಖೆಗಳನ್ನು ವರ್ಣನೆ ಸೂಚಿಸುತ್ತದೆ.
ಲೇಖಕನು ಯಾವ ಹಾದಿಯನ್ನು ಬೇಕಾದರೂ ಆಯ್ಕೆ ಮಾಡಬಹುದು.
ಉದಾಹರಣೆಗೆ : ತರ್ಕ, ಅನುಕಂಪ, ಸ್ತುತಿ ,ಪಕ್ಷಪಾತ,ಹಿಂಸೆ, ಅಹಿಂಸೆ,ಪ್ರೇಮ,ಅಸಂಬದ್ಧ ಇತ್ಯಾದಿ..
ಶಾಂತಲೆಯ ಸಹಜ ವ್ಯಕ್ತಿತ್ವಕ್ಕೆ ಮನಸೋತು ,ಶಾಂತಲೆಯ ಜೀವನ, ಹವ್ಯಾಸ ಎಲ್ಲವನ್ನೂ ಸ್ತುತಿ,ಪ್ರೇಮ ಹಾಗು ಪಕ್ಷಪಾತಗಳಲ್ಲಿ ವಿಚಾರ ಮಾಡಿದ್ದಾರೆ.
ಕೆಲವೆಡೆ ಶಾಂತಲೆಯ ನಡೆ,ನುಡಿ,ಆಲೋಚನೆ, ನಿರ್ಣಯ ಅನುಚಿತವೆಂದು ತೋರಿದರೂ ವಾಸ್ತವವಾಗಿ, ಅಯ್ಯರ್ ಅವರು ಶಾಂತಲೆಯ ಪಕ್ಷಪಾತದಿಂದ ಅದು ಉಚಿತವೆಂದೇ ಸಾರಿದ್ದಾರೆ.
ವಿಷ್ಣುವರ್ಧನ, ಅತ್ತಿಮಬ್ಬೆ, ಕುಮಾರ ವಿಷ್ಣು, ಲಕ್ಷ್ಮಿ, ಮಾರಸಿಂಗರಾಯ,ಪೆರುಮಲೆ,ಅಮಾತ್ಯರ ಪಾತ್ರಗಳಲ್ಲಿ ತರ್ಕಬದ್ದ ವಿಚಾರಗಳನ್ನು ಕಾಣಬಹುದು.
ಅನುಭಂದ ಪಾತ್ರಗಳು ಅಹಿತಕರ ಘಟನೆಗಳನ್ನು ರಾಜರಿಗೆ,ಆಡಳಿತದವರಿಗೆ ಅರುಹುವ ಕೂಡಲೆ ಆತ್ಮಹತ್ಯೆ ಮಾಡಿಕೊಂಡಿವೆ. ಇಂತಹ ಮೂರು ನಾಲ್ಕು ಪ್ರಸಂಗಗಳನ್ನು ಕಾಣಬಹುದು. ಇದು ಙಗೆ ಅಸಂಬದ್ಧವೆಂದು ತೋರುತ್ತದೆ.
ವರ್ಣನೆ:
ಕಾದಂಬರಿಯ ವಿಷಯ ಮತ್ತು ವಿಚಾರಗಳಲ್ಲಿ ಶ್ರೋತೃವಿನ ಮನಕೆ ಆಹ್ಲಾದವನ್ನುಂಟುಮಾಡುವುದು ಲೇಖಕನ ವರ್ಣನೆ.
ಸನ್ನಿವೇಶಗಳು ರಸವತ್ತಾಗಿ ಮೂಡಿಬಂದಲ್ಲಿ ಶ್ರೋತೃವನ್ನು ಭಾವನಾತ್ಮಕ ಪ್ರಪಂಚದಲ್ಲಿ ತೇಲಾಡಿಸುತ್ತದೆ. ಇಲ್ಲವೇ ಅದು ನೀರಸವಾಗುತ್ತದೆ.
ಇಲ್ಲಿ ನನ್ನ ಗಮನಕ್ಕೆ ಬಂದತೆ ,ಕುಮಾರ ವಿಷ್ಣುವಿನ ಕನಸಿನ ವಿವರಣೆಯಲ್ಲಿ ದೈವಲೊಕ ದ್ವಾರವತಿಯ ದೇವಾಲಯದ ಉದ್ಘಾಟನೆಯ ಸಮಯದಲ್ಲಿ ಅಲ್ಲಿ ನೆರೆದುದು,ಬಾಹುಬಲಿ ಕಲ್ಲಿನ ನಂದಿಗಳನ್ನು ನಡೆಸಿತಂದ ದೃಶ್ಯದಲ್ಲಿ ಅದ್ಬುತ ರಸ ,ಶಾಂತಲೆಯ ಸಾವಿನಂದ ವಿಷ್ಣುವರ್ಧನನ ಶೋಕದ ಸಮಯದಲ್ಲಿ ಕರುಣಾ ರಸ ಬಿಟ್ಟರೆ ನೀರಸ ಎಲ್ಲೆಡೆ ಕಂಡುಬಂದಿದೆ.
ಯುದ್ದದ ವೀರೊಚಿತ ಸನ್ನಿವೇಶಗಳು ಅಯ್ಯರ್ ಅವರ ಕಲ್ಪನೆಇಂದ ದೂರವೆ ಉಳಿದಿವೆ.
ನಾನು ಒದಿದ ಮುದ್ರಣದಲ್ಲಿ ಕೆಲವೆಡೆ ಕಾಗುಣಿತ ಲೋಪದೋಷಗಳು ಕಂಡುಬಂದಿವೆ.ಮುದ್ರಣದ ಮುನ್ನ ಪರಿಶೀಲನೆಯ ಕಡಿಮೆ ಕಾರ್ಯ ಯಶಸ್ವಿಯಾಗಿಲ್ಲ.ಪ್ರಾಯಶಃ ಇನ್ನೂ ಹೆಚ್ಚು ಹ್ಯೊಸಳರ ಕಾಲದ ವಿಷಯ ಸಂಗ್ರಹ ಮಾಡಿದ ನಂತರ ಮುದ್ರಿಸಿದ್ದರೆ ಒಳಿತಿತ್ತೇನೋ ಎಂಬುದು ನನ್ನ ಅಭಿಪ್ರಾಯ.