ಯಾವತ್ತಾದರು ರಪ ರಪ ಅಂತ ಬೀಳೋ ಮಳೆಗೆ ಮುಖ ಒಡ್ಡಿದ್ದೀರಾ? ಮುಖ ಕುಯ್ದಂಗಾಗಿ ಆಮೇಲೆ ಒಂದು ಭಾವ ಬರುತ್ತಲ್ಲ ಅದೇ ತರಹ. ಸೇತುರಾಮ್ ಗೊತ್ತಲ್ಲ. 'ಮಂಥನ' ಧಾರವಾಹಿ ನೆನಪಿದ್ಯ? ಅವರೇ! ಎಂತಹ ಕಥಾಸಂಕಲನ ಅಂತೀರಿ. ಹರಿತ ಕತ್ತಿಯಂತಹ ಭಾಷೆ. ನಿಮಗೆ ಯೋಚಿಸಲೂ ಪುರುಸೊತ್ತು ಕೊಡದಂತೆ ಚುಟುಕು ವಾಕ್ಯಗಳಲ್ಲೇ ಕತೆಗಳು ಓಡುತ್ತವೆ.ಮುಗಿಸಿದ ಮೇಲೆ ಖಾಲಿ ಖಾಲಿ.ಬಹುಶಃ ಇತ್ತೀಚಿನ ವರ್ಷಗಳಲ್ಲಿ ಓದಿದ ಅತ್ಯುತ್ತಮ ಕಥಾಸಂಕಲನಗಳಲ್ಲೊಂದು. ಜಾಸ್ತಿ ಇಲ್ಲ ಆರೇ ಕತೆಗಳು .ನೂರು ಚಿಲ್ಲರೆ ಪುಟಗಳು.ಒಳಗೆ ಕೊರೆಯುವುದು ಮಾತ್ರ ತುಂಬ ಆಳವಾಗೇ! ಇಲ್ಲೆಲ್ಲೋ ನಾವೂ ಹೀಗೇ ಅಲ್ವಾ ಅನಿಸಿಬಿಡುತ್ತದಲ್ಲ.ಅಲ್ಲೇ ಸೇತುರಾಮರ ಹೆಚ್ಚುಗಾರಿಕೆ ಇರುವುದು.
ಸೇತುರಾಂ ಅವರನ್ನ ನಾವೆಲ್ಲಾ ಧಾರಾವಾಹಿಯಲ್ಲಿ ನೋಡಿ ಮೆಚ್ಚಿ ಕೊಂಡಿರುತ್ತೇವೆ. ಮಾಯಾಮೃಗದ ಅವರ mannerism ಹಾಗೆ ಕಣ್ಣಿಗೆ ಕಟ್ಟಿದ ಹಾಗಿದೆ. ಇವರು ಕಥೆಗಾರರಾಗಿ ನಮಗೆ ಇನ್ನು ಹೆಚ್ಚು ಪ್ರಿಯವಾಗುತ್ತಾರೆ. ಕಥೆಗಳನ್ನು ವಿಮರ್ಶೆ ಮಾಡುವಷ್ಟು ಪರಿಣಿತಿ ನನಗಿಲ್ಲ. ಇವರು ಇಷ್ಟು ತಡವಾಗಿ ಯಾಕೆ writer ಆದರು ಅನ್ನೋದೇ ನನ್ನ ಪ್ರಶ್ನೆ . ದೇವಿ ಸರಸ್ವತಿಗೆ ಮಕ್ಕಳಿಲ್ಲ, ಲಕ್ಷ್ಮಿಗೆ ಮಕ್ಕಳಿಲ್ಲ, ದುರ್ಗೆಗೂ ಮಕ್ಕಳಿಲ್ಲ, ಅನ್ನ ನೀಡೋ ಅನ್ನಪೂರ್ಣೇಶ್ವರಿಗೂ ಮಕ್ಕಳಿಲ್ಲ. ಮಕ್ಕಳು ಹೆತ್ತು ಹೆಣ್ಣು ತಾಯಿ ಆಗ್ತಾಳೆ..ಹೆರದೆ ಹೆಣ್ಣು ದೇವತೆ ಆಗ್ತಾಳೆ...ಎಂತಹ ಕಲ್ಪನೆ... ೫ ವರ್ಷಗಳಲ್ಲಿ ೧೦ ಮುದ್ರಣಗಳನ್ನು ಕಂಡಿದೆ ಅಂದ್ರೆ ಕಥೆಗಳ ಬಗ್ಗೆ ಎಷ್ಟು ಹೇಳಿದ್ರು ಕಡಿಮೇನೆ ಅದು ಓದಿಯೇ ಅನುಭವಿಸ ಬೇಕು. ಅತ್ಯಂತ ಇಷ್ಟ ಆದ ಕಥೆ ಕಾತ್ಯಾಯಿನಿ ಯಾಕಂದ್ರೆ ೪೦ ಪುಟಗಳಲ್ಲಿ ಹೆಣ್ಣಿನ ವೇದನೆಯನ್ನ ಎಷ್ಟು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ . ಹೆಣ್ಣಿಗೆ ಈ ಕಥೆಗಳ ಮೂಲಕ ಕೊಟ್ಟಿರುವ ಗೌರವಕ್ಕೆ ಒಂದು ಸಲಾಂ ಸರ್.
ಕೆಲವು ಪುಸ್ತಕಗಳೆ ಹಾಗೆ ಪುಟ ತಿರುಗಿಸುತ್ತಾ ತಿರುಗಿಸುತ್ತಾ ಕೊನೆಯ ಪುಟಕ್ಕೆ ಬಂದಿದ್ದೆ ತಿಳಿಯುವುದಿಲ್ಲ. ಆರು ಕಥೆಗಳನ್ನು ಒಳಗೊಂಡ ಸುಂದರ ಕಥಾಸಂಕಲನ. ಓದುಗರಿಗೆ ಒಂದು ರಸದೌತಣ. ಲೇಖಕರ ನಿರೂಪಣಾ ಶೈಲಿ ಹಾಗೆ ಹರಿತವಾದ ಕತ್ತಿಯಂತೆ ಮನಸ್ಸಿನೊಳಕ್ಕೆ ನುಗ್ಗುತ್ತದೆ. ಎಲ್ಲೋ ಒಂದು ಕಡೆ ಹೌದು ಇದು ನಿಜ ಅಲ್ವಾ ಹೀಗೆ ಅಲ್ವಾ ನಡೆಯುವುದು ಎಷ್ಟು ಸತ್ಯ ಅಂತ ಅನಿಸುತ್ತೆ. ಒಂದಕ್ಕಿಂತ ಒಂದು ಕಥೆ ಮನಸ್ಸಿಗೆ ತುಂಬಾ ಹತ್ತಿರವಾಗುತ್ತದೆ. ಮೋಕ್ಷ ,ಮೌನಿ ,ಕತ್ಯಾಯಿನಿ ,ಸಂಭವಾಮಿ, ಸ್ಮಾರಕ ಹಾಗೂ ನಾವಲ್ಲ ಇದೆ ಆ 6 ಕಥಾಸಂಕಲನಗಳು.
ಕೆಲವು ಪ್ಯಾರಾಗಳು ಪುಸ್ತಕ ಓದಿ ಮುಗಿಸಿದ್ದರು ಮನಸ್ಸಿನೊಳಗೆ ಹಾಗೆ ಉಳಿದುಬಿಡುತ್ತವೆ. ಅದರಲ್ಲಿ ಕೆಲವೊಂದು ನನಗೆ ತುಂಬಾ ಇಷ್ಟ ಆದ ಮಾತು.
ಪ್ರಪಂಚ ಅದಕ್ಕೆ ಅರ್ಥವಾದ ಕಂಡ ಸತ್ಯದ ಮೇಲೆ ಪ್ರತಿಕ್ರಿಯಿಸುತ್ತದೆ ನಮ್ಮ ಸತ್ಯದ ಮೇಲೆ ನಾವು ಅನುಭವಿಸುತ್ತೇವೆ.
ವಿದ್ಯೆಯ ಸರಸ್ವತಿಗೆ ಮಕ್ಕಳಿಲ್ಲ ಸುಖದ ಲಕ್ಷ್ಮಿಗೆ ಮಕ್ಕಳೆಲ್ಲ, ಹಸಿವು ನೀಗುವ ಅನ್ನಪೂರ್ಣೇಶ್ವರಿ ಗೂ ಮಕ್ಕಳೆಲ್ಲ, ಕಾಯೋ ದೇವಿ ದುರ್ಗೆನೂ ಬಂಜೆನೆ ಹೇರೂರು ತಾಯಿಯಾದ್ರು ಹೇರದೊರು ದೇವರಾದರು.
ಅಪ್ಪ-ಅಮ್ಮ ದಿನ ಊಟ ಹಾಕ್ತಾರೆ ಅವಶ್ಯಕತೆಗಳನ್ನು ಪೂರೈಸುತ್ತಾರೆ ಆದರೂ ಅವರನ್ನು ದ್ವೇಷಿಸುತ್ತೇವೆ ಅದೇ ಪಕ್ಕದ ಮನೆಯ ಅಂಕಲ್ ಒಂದು ಸಣ್ಣ ಚಾಕ್ಲೇಟ್ ಹಿಡ್ಕೊಂಡು ಬಂದು ಕೊಡುತ್ತಾನೆ ಅವನ ಮಾತು ಇವರಿಗೆ ಪಥ್ಯ.
ಎಷ್ಟೇ ಪುಸ್ತಕ ಓದಿದರು ಇದನ್ನೊಮ್ಮೆ ಓದಲೇಬೇಕು. ಇದನ್ನ ಓದದಿದ್ದರೆ ಕಳಕೊಂಡಿದ್ದು ಅವರು ನಾವಲ್ಲ.
Sethuram is one of my favourite director and this is his first book I am reading. It is a collection of 6 short stories. I liked it all and I especially liked Mouni and Katyayini the most. Being a long time follower of the work of Sethuram, it did not surprise me that the stories were so good and how he captures all the nuances of society and family. It is more like a peep into inner workings of people's mind as threads and weave these threads into a beautiful art.
ಸೇತುರಾಂ ಅವರ ೬ ಕಥೆಗಳ ಕಥಾ ಸಂಕಲನ "ನಾವಲ್ಲ" ಈ ಪುಸ್ತಕದಲ್ಲಿ ಬರುವ ಒಂದೊಂದು ಕಥೆಯು ತನ್ನದೇ ಅದ ವೈಶಿಷ್ಟ್ಯವನ್ನು ಹೊಂದಿದೆ , ಪ್ರತಿ ಕಥೆಯಲ್ಲೂ ಹೆಣ್ಣೇ ಮುಖ್ಯ ಪಾತ್ರದಾರಿ (ಮೋಕ್ಷ ಮತ್ತು ನಾವಲ್ಲ ಕಥೆಯನ್ನು ಹೊರತುಪಡಿಸಿ) , ತಮ್ಮ ಮೊನಚಾದ ಮಾತುಗಳಿಂದ ನಾಟಕ ಮತ್ತು ಧಾರಾವಾಹಿಗಳಲ್ಲಿ ಖ್ಯಾತಿ ಹೊಂದಿದ ಸೇತುರಾಂ ರವರು , ಅದೇ ಪ್ರಯೋಗವನು ಕಥೆಗಳಲ್ಲೂ ಮುಂದುವರಿಸಿದರೆ . ಒಂದೇ ಓದಿಗೆ ಮುಗಿಯಬಹುದಾದ ಈ ಕಥಾ ಸಂಕಲನವು , ಪ್ರತಿ ಕಥೆಯಲ್ಲೂ ಒಂದು ಪಾತ್ರ ನಿಮ್ಮನು ಕಾಡುತ್ತದೆ , ಅದು ಮೌನಿಯಾ ಮಂದಾಕಿನಿ ಇರಬಹುದು , ಕಾತ್ಯಾಯಿನಿ ಕಥೆಯಾ ಕಾತ್ಯಾಯಿನಿ ಇರಬಹುದು , ಸ್ಮಾರಕದ ತಾಯಿ ಮತ್ತು ಮಗಳ ಪಾತ್ರ ಇರಬಹುದು . ಕಥೆಗಳು ವ್ಯವಹಾರಿಕೆ ನೆಲೆಗಟ್ಟಿನಲ್ಲಿ , ವಾಸ್ತವಕೆ ಹತ್ತಿರವಾಗಿ ನಮ್ಮನು ಕಾಡುತ್ತವೆ , ಸಾಮಾನ್ಯ ರೀತಿಯ ಕಥೆಗಳನ್ನು ಓದಿ , ವಿಭಿನ್ನತೆ ಹುಡುಕುವ ಓದುಗರಿಗೆ ಒಂದು ಒಳ್ಳೆಯ ಪುಸ್ತಕ ಎಂದು ಹೇಳಬಲ್ಲೆ . ಹೊಸ ಓದುಗರಿಗೆ ಈ ಪುಸ್ತಕ ಮತ್ತು ಅದರ ಲೇಖಕ ಭಿನ್ನವಾಗಿ ಕಂಡರೂ , ಮಂಥನ , ದಿಬ್ಬಣ , ಅನಾವರಣ ಧಾರಾವಾಹಿಗಳನ್ನು ಮತ್ತು ಅತೀತ , ಗತಿ , ನಿಮಿತ್ತ ನಾಟಕಗಳನ್ನು ನೋಡಿದ ಮಂದಿಗೆ ಈ ಪುಸ್ತಕದ ಬರವಣಿಗೆ ಹೊಸದಲ್ಲ. ಸೇತುರಾಂರವರು ಇನ್ನು ಹೆಚ್ಚು ನಾಟಕ , ಕಥೆ ಬರೆಯಲಿ ಮತ್ತು ನಿರ್ದೇಶಿಸಲಿ ಎಂದು ಹಾರೈಸುವ ಅವರ ಅಭಿಮಾನಿ
ಸೇತುರಾಮ್ ಅವರ "ಅತೀತ" "ಗತಿ" ಮತ್ತು "ಉಚ್ಚಿಷ್ಠ" ನಾಟಕಗಳನ್ನು ನೋಡಿದ್ದೆ. ಅವರ ಸಂಭಾಷಣೆಯ ಶೈಲಿಗೆ ಮಾರುಹೋಗಿ ಬಹಳ ಮೆಚ್ಚಿಕೊಂಡಿದ್ದೆ. ಅವರ "ನಾವಲ್ಲ" ಪುಸ್ತಕ ಸಹ ಹಾಗೇಯೇ ಇರಬಹುದು ಎಂದು ಖರೀದಿಸಿದೆ. ನನ್ನ ಊಹೆ ತಪ್ಪಾಗಲಿಲ್ಲ.
ಚಾಟಿ ಏಟಿನಂತಹ ಮಾತುಗಳು. ಚುಟುಕು ವಾಕ್ಯಗಳು, ಓದುಗರಿಗೆ ರಸದೌತಣ. ಮನಃಸಾಕ್ಷಿಯನ್ನು ಚುಚ್ಚಿ ಚುಚ್ಚಿ ಹೊಡೆದೆಬ್ಬಿಸುತ್ತವೆ. ಆರಕ್ಕೆ ಆರು ಕಥೆಗಳೂ ಒಂದಕ್ಕಿಂತ ಒಂದು ಭಿನ್ನವಾಗಿವೆ ಹಾಗೂ ಮನಸ್ಸುಗಳನ್ನು ಚಿಂತನೆಗೆ ಪ್ರಚೋದಿಸುತ್ತವೆ. ಕಥೆಗಳು ಮನಸ್ಸಿನೊಳಗೆ ಇಳಿದು ಯಾವುದೋ ಒಂದು ಮೂಲೆಯಲ್ಲಿ ನಾವು ಸಹ ಹೀಗೆಯೇ ಯೋಚಿಸಿದ್ದೆವಲ್ಲ, ನಮ್ಮ ಮನಸ್ಥಿತಿ ಸಹ ಹೀಗೆ ಇದ್ದಿತಲ್ಲ ಎಂದು ಅನಿಸುತ್ತದೆ. ಹೆಣ್ಣು ಮಕ್ಕಳ ಬಗ್ಗೆ ಅವರಲ್ಲಿರುವ ಸಂವೇದನಾಶೀಲತೆ ಬೇರೆ ಯಾರಲ್ಲೂ ಇರುವುದು ಸಾಧ್ಯವೇ ಇಲ್ಲವೇನೋ.
ರಸ್ತೆಯ ಮಧ್ಯೆ ದ್ವಿಚಕ್ರ ವಾಹನದಿಂದ ಜಾರಿ ಬಿದ್ದು ತರಚಿದ ಗಾಯಗಳಾಗಿ ಚರ್ಮ ಕಿತ್ತು ಬಂದಾಗ ಆಗುವ ಉರಿ, ನೋವು ಹೇಗೆ ಕಾಡಿಸುತ್ತದೆಯೋ, ಈ ಕಥೆಗಳು ಬಹಳ ಕಾಲ ನೆನಪಿನಲ್ಲಿ ಉಳಿಯುವುದು ಖಂಡಿತ
"ಕಾತ್ಯಾಯಿನಿ", "ಮೌನಿ" ಹಾಗೂ "ನಾವಲ್ಲ" ನನಗೆ ತುಂಬಾ ಹಿಡಿಸಿದವು.
ಈ ಸಂಕಲನದ ೬ ಕಥೆಗಳು ಒಂದಕ್ಕಿಂತ ಒಂದು ಚೆನ್ನಗಿವೆ. ಪ್ರತಿಯೊಂದು ಕಥೆಯಲ್ಲಿನ ಪಾತ್ರಗಳೂ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳೋ ಹಾಗೆ ಮಾಡುತ್ತವೆ. ನಮ್ಮ ಅಂತರಂಗಕ್ಕೆ ಕನ್ನಡಿ ಹಿಡಿದು ನೋಡಿಕೊಂಡ ಹಾಗೆ ಭಾಸವಾಗುತ್ತೆ. ಆದರೆ, ಸೇತುರಾಮ್ ರವರ ಎಲ್ಲ ಕಥೆಗಳಲ್ಲೂ, ಪಾತ್ರಗಳಲ್ಲೂ ಒಂದು ರೀತಿಯ ಖೇದ ಹಾಗು ಆರ್ದ್ರತೆಯ ಭಾವ ಇದ್ದೇ ಇರುತ್ತೆ ಅಂದರೆ ತಪ್ಪಾಗಲಾರದು.
ಸೇತುರಾಮ್ ಅವರ "ನಾವಲ್ಲ" ಆರು ಕಥೆಗಳ ಸಂಕಲನ. ಅದ್ಭುತವಾದ, ಮನಸ್ಸಿಗೆ ಬಹಳ ಹತ್ತಿರವಾಗುವ, ಮತ್ತು ಯಾವಾಗಲೂ ನಮ್ಮನ್ನು ಕಾಡುವ ಒಂದು ಪುಸ್ತಕ. ಕತ್ತಿಯ ತುದಿಯಂತಿರುವ ಅವರ ಬರವಣಿಗೆ ಶೈಲಿಯಿಂದಲೇ ಸೆಳೆಯುವ ಪುಸ್ತಕ... ಒಂದು ಒಳ್ಳೆಯ ಓದಿಗೆ ಹೇಳಿ ಮಾಡಿಸಿದ್ದು..
All the stories reflect the sensitive mind of the author. All the stories have something to tell. The characterization is wonderful. We can relate to them.
*ನಾವಲ್ಲ* : ಆರು ಕಥಾಸಂಕಲನಗಳನ್ನು ( *ಮೋಕ್ಷ, ಮೌನಿ, ಕಾತ್ಯಾಯಿನಿ, ಸಂಭವಾನಿ, ಸ್ಮಾರಕ ಹಾಗು ನಾವಲ್ಲ*) ಒಳಗೊಂಡ ಸೇತುರಾಮರವರ ಕಾದಂಬರಿ *ನಾವಲ್ಲ*. ಸ್ತ್ರೀಪರ ಕಾಳಜಿ ಹಾಗೂ ಸ್ತ್ರೀಯರನ್ನು ಕೆಲ ಪುರುಷರು ಎಷ್ಟು ಕ್ರೂರವಾಗಿ ಶೋಷಿಸುತ್ತಾರೆಂಬುದು ಎಲ್ಲಾ ಕಥಾಸಂಕಲನಗಳಲ್ಲಿ ಬೇರೆ ಬೇರೆ ಪಾತ್ರ ಸೃಷ್ಟಿಸಿ ವಿವರಿಸಿದ್ದಾರೆ.
ಮಠದ ಸ್ವಾಮಿಗಳನ್ನು ಉಪಯೋಗಿಸಿಕೊಂಡು ಟ್ರಸ್ಟಿಗಳು ಮಠವನ್ನು ತಮ್ಮ ಸ್ವಂತ ಕೆಲಸಗಳಿಗೆ ಹೇಗೆ ದುರೂಪಯೋಗ ಪಡಿಸಿಕೊಳ್ಳುತ್ತಾರೆಂಬುದು *ಮೋಕ್ಷ* ಕಥಾಸಂಕಲನದಲ್ಲಿ ವಿವರಿಸಿದ್ದಾರೆ. ದುಡ್ಡಿಗೆ ಬೆಲೆ ಕೊಟ್ಟು ಹೆತ್ತ ತಂದೆ ತಾಯಿಯರನ್ನೇ ತಮ್ಮ ಸ್ವಂತ ಕಾರ್ಯಕ್ಕಾಗಿ ದುರೂಪಯೋಗ ಪಡಿಸಿಕೂಳ್ಳುವ ಆತರಹದ ಹೆಂಗಸರೂ ನಮ್ಮ ಸಮಾಜದಲ್ಲಿ ಇದ್ದಾರೆ ಅಂತಹವರ ಬಗ್ಗೆ *ಸ್ಮಾರಕ*ದಲ್ಲಿ ವಿವರಿಸಿದ್ದಾರೆ.
*ಮೌನಿ* ಕಥಾಸಂಕಲನ ಅರ್ಥಪೂರ್ಣವಾಗಿದೆ, ಮಂದಾಕಿನಿಗೆ ಮದುವೆಯಾಗಿ ಎಷ್ಟೋ ವರ್ಷಗಳಾದರೂ ಮಕ್ಕಳಾಗದಿದ್ದಾಗ ತನ್ನವರು ಹಾಗೂ ಸಮಾಜವು ಯಾವ ದೃಷ್ಟಿಕೋನದಿಂದ ನೋಡುತ್ತದೆಂದು ಕಾಣಬಹುದು. ಸಮಾಜವು ಹೆಣ್ಣನ್ನೇ ಏಕೆ ದೂಷಿಸುತ್ತದೆ?ಹೆಣ್ಣಲ್ಲೆ ಲೋಪವಿದೆಯಂದು ತೀರ್ಮಾನಿಸಿ ಬಿಡುತ್ತದೆ?ಗಂಡನಲ್ಲೂ ಲೋಪವಿರ ಬಹುದಲ್ಲವೆ? ಈ ಎಲ್ಲಾ ಪ್ರಶ್ನೆಗಳಿಗೆ ಮಂದಾಕಿನಿಯ ಪಾತ್ರದ ಮೂಲಕ ವಿವರಿಸಿದ್ದಾರೆ. ಮಂದಕಿನಿಯು ಮೌನಿಯಾಗುತ್ತಾಳೊ ಅಥವಾ ಸಮಾಜವನ್ನು ಎದುರಿಸಿ ಬದುಕುತ್ತಾಳೊ?ಓದಿದರೆ ಉತ್ತಮ.
*ಕಾತ್ಯಾಯಿನಿ*: ಗಂಡು ಹೆಣ್ಣು ಒಬ್ಬರಿಗೊಬ್ಬರು ಇಷ್ಟಪಟ್ಟು ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸದಿದ್ದರೆ ವ್ಯರ್ಥ, ಈ ಕಥಾಸಂಕಲನದಲ್ಲಿ ಬರುವ ಪ್ರತಿಯೊಂದು ವಾಕ್ಯವನ್ನು ಅಂಡರ್ಲೈನ್ ಮಾಡಬೇಕು ಅಷ್ಟು ಅರ್ಥಪೂರ್ಣವಾಗಿದೆ. ಕಾತ್ಯಾಯಿನಿ ಮತ್ತು ಸೀತರಾಮ್, ಈ ಇಬ್ಬರೂ ಬಾಲ್ಯದಿಂದಲೇ ಒಳ್ಳೆಯ ಸ್ನೇಹಿತರು. ಬೆಳೆಯುತ್ತಾ ಒಬ್ಬರಿಗೂಬ್ಬರು ಇಷ್ಟವಿದ್ದರೂ ತಮ್ಮ ಭಾವನೆಗಳನ್ನು ವ್ಯಕ್ತಪಡಿಸದೇ ಬೇರೆ ಬೇರೆ ಮದುವೆಯಾಗುತ್ತಾರೆ. ಮದುವೆಯಾಗಿ ಸೀತಾರಾಂ ಸಂತೋಷವಾಗಿರುತ್ತಾನೆ, ಆದರೆ ಕಾತ್ಯಾಯಿನಿಯ ಜೀವನ ಕ್ರೂರ, ಒಂದು ಕಡೆ ಸೇತುರಾಮರವರು ಹೀಗೆ ಹೇಳಿದ್ದಾರೆ. *ಅದ್ಯಾಕೋ ಗೊತ್ತಿಲ್ಲ, ಒಳ್ಳೆ ಹೆಂಗಸರೆಲ್ಲರೂ ಕೆಟ್ಟ ಗಂಡಸರನ್ನೇ ಮದುವೆಯಾಗುತ್ತಾರೆ ಹಾಗು ಸುಖ ಸವಿವರವಾಗಿ ಬಿಚ್ಚಿಟ್ಟು ಹಂಚಿದಷ್ಟೂ ಶಕ್ತಿ, ದುಃಖ ಹಾಗಲ್ಲ,ಮುಚ್ಚಿಟ್ಟುಕೊಂಡರೇನೆ ಶಕ್ತಿ ಹಾಗು ಈ ಗಂಡಸ್ರೇ ಹೀಗೆ ಶಕ್ತಿ ಇದ್ದಾಗ ಉಪಯೋಗಕ್ಕೆ ಬರೋಲ್ಲ ಎಲ್ರನ್ನು ಉಪಯೋಗಿಸಿಕೋತಾರೆ,ಅವರು ಉಪಯೋಗ ಆಗೋದು ಶಕ್ತಿ ಹೋದ ಮೇಲೇನೆ.*. ಮತ್ತೆ ಭೇಟಿಯಾದಾಗ ಕಾತ್ಯಾಯಿನಿಯ ಸ್ಥಿತಿಯನ್ನು ಕಂಡು ವ್ಯಥೆ ಪಡುತ್ತಾನೆ, ತಾನಾದರೂ ಕಾತ್ಯಾಯಿನಿಯನ್ನು ಮದುವೆಯಾಗಬೇಕಿತ್ತೆಂದು, ಆದರೇ ಅವರಿಬ್ಬರು ಒಳ್ಳೆಯ ಸ್ನೇಹಿತರಾಗಿ ಉಳಿಯುತ್ತಾರೆ. *ನಮ್ಮ ಮನೋಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ ತಂದೆ ತಾಯಿ,ಹಂಡತಿ,ತಮ್ಮ,ತಂಗಿ,ಸ್ನೇಹಿತ ಯಾರಾದರೇನು ನಮ್ಮ ಮನೋಭಾವನೆಗಳಿಗೆ ಸ್ಪಂದಿಸುವ ವ್ಯಕ್ತಿ ದೊರಕಿದರೆ ಅದೃಷ್ಟ* ------ *ಕಾರ್ತಿಕ್*
ಒಂದಕ್ಕಿಂತ ಇನ್ನೊಂದು ಚೆನ್ನಾಗಿದೆ ಅನಿಸುವ ೬ ಕಥೆಗಳ ಈ ಸಂಕಲನ ನಿಜಕೂ ಅದ್ಭುತ ಓದು. ಕಥೆಗಳಲ್ಲಿ ಮೂಡಿ ಬರುವ ಪಾತ್ರಗಳು ನಮ್ಮವೋ ಅಥವಾ ನಮ್ಮ ಸುತ್ತಲಿನವೇ ಇರಬಹುದೆನಿಸುವ, ಭಾವನಾತ್ಮಕವಾಗಿ ನಿಜ ಜೀವನದ ಬಡಿದಾಟದಲ್ಲಿ ಎದುರಾಗುವ ನ್ಯೂನ್ಯತೆಗಳ ಸರಮಾಲೆ ಎಳೆ ಎಳೆಯಾಗಿ ಬಿಡಿಸಿಡುವ ಸೇತುರಾಂ ಅವರ ನಿರೂಪಣೆ ಮನ ಮುಟ್ಟುವಂತಿದೆ. ಬರವಣಿಗೆಯಲ್ಲಿ ಅಸಾಂಪ್ರದಾಯಿಕ ಶೈಲಿಯಲ್ಲಿನ ಪದ ಪ್ರಯೋಗ, ಓದಿನ ವೇಗಕ್ಕೆ ಅಲ್ಲಲ್ಲಿ ತಡೆಯೊಡ್ಡಿ ಸ್ವಲ್ಪ ಪ್ರಮಾಣದ ಕಿರಿಕಿರಿ ಮಾಡುತ್ತೆ ಎಂಬುದು ನನ್ನ ವೈಯಕ್ತಿಕ ಅನಿಸಿಕೆ.
It is a collection of 6 stories. Of them, 'Mouni' and 'Katyayini' are very good. They are about how a women faces soceity. 'Moksha' is also a good story. Totally all of them have a beautiful message.
ಈ ಪುಸ್ತಕ ಮೋಕ್ಷ, ಮೌನಿ, ಸ್ಮಾರಕ, ಸಂಭವಾಮಿ, ನಾವಲ್ಲ ಎಂಬ ಐದು ಕಥೆಗಳ ಸಂಕಲನ. ಸೇತುರಾಮ್ ಅವರ ಬರವಣಿಗೆ ಶೈಲಿಯೇ ವಿಭಿನ್ನ. ನೇರ, ನಿಷ್ಟುರವಾದ ಸಂಭಾಷಣೆಯಿಂದ ಪಾತ್ರಗಳ ಕಥೆ ಹೇಳುವ ಶೈಲಿ ಅವರ ಅನೇಕ ನಾಟಕದಿಂದ ತಿಳಿದಿದ್ದೆ. ಅದೇ ಶೈಲಿಯಲ್ಲಿ ಈ ಐದೂ ಕಥೆಗಳು ಸಾಗುತ್ತವೆ. ನಾವಲ್ಲ ಎಂಬ ಕೊನೆ ಕಥೆ ಬಿಟ್ಟು ಮತ್ತೆಲ್ಲವೂ ಅತ್ಯುತ್ತಮವಾಗಿತ್ತು. ಅನೇಕ one liner ಗಳಲ್ಲಿ ಓದುಗರಿಗೆ ಸನ್ನಿವೇಶಗಳನ್ನು ಪರಿಚಯಿಸುತ್ತಾ ಹೋಗುತ್ತಾರೆ. ಇದೇ ರೀತಿ ಅನೇಕ ಸಾಲುಗಳು ಪಾತ್ರಗಳಿಂದ ಹೇಳಿಸಿ ಓದುಗರನ್ನು ಹಿಡಿದಿಡುತ್ತಾರೆ. ಸಣ್ಣ ಕಥೆಗಳಾದರೂ ಬಹಳ ಮೊನಚಾದ ಮಾತಿದಿಂದ ಬವಣೆ ಕಷ್ಟಗಳನ್ನು ಒಂದು ಸಾಲಲ್ಲಿ ಹೇಳಿ ಅರ್ಥೈಸುವುದು ಸೇತುರಾಮ್ ಅವರ ಶಕ್ತಿ. ಅವರು ಹೆಣ್ಣು ಪ್ರಧಾನ ಪಾತ್ರಗಳ ಬವಣೆಗಳು, ಅದರಿಂದ ಆಕೆ ಹೊರಬರುವ ಸನ್ನಿವೇಶಗಳನ್ನು ಕಥೆ/ ನಾಟಕ ಬರೆಯುವಲ್ಲಿ ನಿಸ್ಸೀಮರು. ಅವರ ಶೈಲಿಯನ್ನು ಇಷ್ಟ ಪಡುವವರು ಓದಲೇ ಬೇಕಾದ ಪುಸ್ತಕ. ಮುಂದೊಂದು ದಿನ ಕಾದಂಬರಿಯನ್ನು ಬರೆದು ಅವರ ಶೈಲಿ ಜನಮಾನಸಕ್ಕೆ ಮತ್ತಷ್ಟು ಪರಿಚಯವಾಗಲಿ ಎಂದು ಆಶಿಸುತ್ತೇನೆ.
ಕಾದಂಬರಿ ಪ್ರಕಾರ ನನ್ನ ಮೆಚ್ಚಿನದು, ಒಂದಷ್ಟು ಕತೆಗಳನ್ನು ಓದಿದ್ದೇನೆ, ಇಷ್ಟ ಪಟ್ಟಿದ್ದೇನೆ ಆದರೆ ಕತೆಗಳು ನನ್ನನು ಈ ಮಟ್ಟಿಗೆ ಕಾಡಿದ್ದು ಇದೇ ಮೊದಲು. ಕಾದಂಬರಿಗಳು ನನ್ನನ್ನು ಅಳಿಸಿವೆ ನಗಿಸಿವೆ ಮುದನೀಡಿವೆ ಅಲ್ಲಿನ ಪಾತ್ರಗಳೊಂದಿಗೆ ಜೀವಿಸಿದಂತ ಅನುಭವ ನೀಡಿವೆ ಜೀವನಪಾಠ ಕಲಿಸಿವೆ. ಸೇತುರಾಮ್ ಅವರ “ನಾವಲ್ಲ” ಕಥಾಸಂಕಲನದ ಆರು ಕತೆಗಳು ಅದರಲ್ಲೂ “ಮೌನಿ” ಮತ್ತು “ಕಾತ್ಯಾಯಿನಿ” ಎನ್ನುವ ಎರಡು ಕತೆಗಳಲ್ಲಿ ಕಾದಂಬರಿಗಾಗುವಷ್ಟು ವಸ್ತುವಿದೆ. ಮೇಲಿನ ಮಾತುಗಳು ಕಾದಂಬರಿಗಳಿಗೂ ಕತೆಗಳಿಗೂ ಹೋಲಿಕೆ ಮಾಡುವ ನಿ��್ಟಿನಲ್ಲಲ್ಲದೇ ನನ್ನ ಸ್ವಂತ ಅಭಿಪ್ರಾಯವನ್ನು ವ್ಯಕ್ತಪಡಿಸಲಷ್ಟೇ ಆಗಿವೆ.
ಸ್ತ್ರೀಪರಕಾಳಜಿ ಈ ಕಥಾಸಂಕಲನದ ಒಳಹರಿವು, ಪುರುಷಪ್ರಧಾನ ಸಮಾಜಕ್ಕೆ ಸಿಕ್ಕು ನಲುಗುವ ತೊಳಲಾಟಕ್ಕೀಡಾಗುವ ಮೂರು ಕತೆಗಳಿವೆ, ಧಾರ್ಮಿಕ ರಾಜಕೀಯ ವ್ಯವಸ್ಥೆಯನ್ನು ವಾಸ್ತವಿಕ ನೆಲೆಯಲ್ಲಿ ಅನ್ವೇಷಿಸುವ ಕತೆಗಳೂ ಇವೆ. ಈ ಕಥಾಸಂಕಲನದ ಬೆನ್ನೆಲುಬು ಮೊನಚಾದ ಸಂಭಾಷಣೆ ಮತ್ತು ಪಾತ್ರಗಳ ಗಟ್ಟಿತನ. ಇಂತಹ ಕತೆಗಳನ್ನು ಓದುವುದೇ ಒಂದು ಸಂಭ್ರಮ, ಒಂದೊಳ್ಳೆ ಓದಿನ ತೃಪ್ತಿ ನನಗೆ ದಕ್ಕಿದೆ, ನಿಮಗೂ ದಕ್ಕಲಿ.
my first of Sethuram and regretting for the late read... This is a collection of 6 beautiful stories... Moksha, Mauni, Khatyayini, Samadhi, Smaraka and Navalla.. I loved the story of khtyayini and Smaraka... Sethuram writing is very much influenced by Byrappa and Karanth... he has so beautifully expressed the women's helplessness and their bravery too... Definitely a good and must read for kannada lovers.
This entire review has been hidden because of spoilers.
ಗಟ್ಟಿ ಪಾತ್ರಗಳು, ಮೊನಚು ಸಂಭಾಷಣೆ, ದಿಟ್ಟ ನಿಲುವುಗಳು ಎದ್ದು ಕಾಣುತ್ತವೆ. ಸಂಭಾಷಣೆ ಸ್ವಲ್ಪ monotonous ಅನ್ಸಿದ್ರೂ ಕೆಲವೊಂದು ದೃಶ್ಯಗಳು ಸಂಭಾಷಣೆಗಳು ಕಾಡುತ್ತವೆ. ಬಹಳವಾಗಿ ಮಹಿಳೆಯರ ಪರ ವಾದ ಇದ್ರೂ ಪುರುಷರನ್ನು ತೆಗಳೋದೆ ಉದ್ದೇಶ ಅನ್ಸೋದಿಲ್ಲ.
ಇದ್ಯಾವುದಕ್ಕೂ ಅಲ್ದೇ ಇದ್ರೂ ಭಾಷೆಯ ಸಿರಿವಂತಿಕೆ ತಿಳಿಯೋಕೆ ಓದಲೇಬೇಕು.
Quote: "ಪ್ರಪಂಚ ಅದಕ್ಕೆ ಅರ್ಥವಾದ ಕಂಡ ಸತ್ಯದ ಮೇಲೆ ಪ್ರತಿಕ್ರಯಿಸುತ್ತೆ. ನಮ್ಮ ಸತ್ಯದ ಮೇಲೆ ನಾವು ಅನುಭವಿಸುತ್ತೀವಿ"
One of those books which keep you captured and mesmerized through the end of the read.... And at times provokes the emotions in the reader... the laugh the pain the disgust for those who corelate to the characters in the stories.... A must read book....I would give one more extra star for thr wittyness added in the writing....👏👏👍👌👌
ನಾವಲ್ಲ... ಅವರು! ನಮ್ಮ ದೇಶದವರಲ್ಲ... ಅವರು! ನಮ್ಮ ಧರ್ಮ ಅಲ್ಲ... ಅವರು! ಕಳಕೊಂಡಿದ್ದು ಅವನು... ನಾವಲ್ಲ!
ನಾವಲ್ಲ ಕಥಾಸಂಕಲದ ಆರು ಕಥೆಗಳು ಒಂದೊಂದು ವಿಭಿನ್ನ ಮಜಲುಗಳನ್ನು ಹೊಂದಿದೆ. ಸಂಬಂಧಗಳು, ಸಮಾಜದ ಪಿಡುಗುಗಳು, ಬದುಕು, ಜೀವನ ಒಡ್ಡುವ ಸವಾಲುಗಳುಗೆ ಎದೆಯೊಡ್ಡಿ ನಿಲ್ಲುವ ಜೀವಗಳು, ತಮ್ಮವರಿಗೆ ಪ್ರತಿಫಲ ಅಪೇಕ್ಷೆ ಇಲ್ಲದೆ ಮಾಡುವ ತ್ಯಾಗಗಳು ಎಲ್ಲವು ಹೃದಯಕ್ಕೆ ನಾಟುವಂತಿದ್ದವು.
ಸುಲಭವಾಗಿ ಓದಿಸಿಕೊಂಡು ಹೋಗುವಂತ ಪುಸ್ತಕ. ಸರಳವಾದ ಬರವಣಿಗೆ, ಉಳಿದವುಗಿಂತ ಸಂಭಾಷಣೆಗಳೆ ಹೆಚ್ಚಾದ್ದರಿಂದ ಒದಲು ಇಷ್ಟವಾಗುವುದು..
ಆರು ಕಥೆಗಳಿರುವ ಪುಟ್ಟ ಕಥಾ ಸಂಕಲನ. ಎಲ್ಲ ಕಥೆಗಳು ವಿಭಿನ್ನ. ಸೇತುರಾಮ್ ಅವರ ಭಾಷೆ ಎಲ್ಲದಕ್ಕಿಂತ ಗಮನ ಸೆಳೆಯುತ್ತದೆ. ಎಲ್ಲಾ ಕಥೆಗಳೂ ಓದಿದ ನಂತರ ಬಹಳ ಕಾಲದವರೆಗೂ ಕಾಡುತ್ತವೆ. ಮೋಕ್ಷ ಕಥೆಯ "ಮಠ ಇದೆ ಅದು ಸತ್ಯ : ಆದರೆ ಧರ್ಮ ಎಲ್ಲಿದೆ?" ಎನ್ನುವ ಪ್ರಶ್ನೆ, ಮಠಾಧಿಪತಿಯ ತೊಳಲಾಟ ಮನಸಿನಲ್ಲಿ ಉಳಿಯುತ್ತದೆ. ಎಲ್ಲಕಿಂತ ಹೆಚ್ಚು ಮನಸ್ಸಿನಲ್ಲಿ ಉಳಿಯುವ ಕಥೆ "ಮೌನಿ". ಮುಖ್ಯ ಪಾತ್ರ ಮಂದಾಕಿನಿ ಮನಸಿನಲ್ಲಿ ನಾಟಿ ಉಳಿಯುತ್ತಾಳೆ. ಅವಳನ್ನು ಜನ ಮೂದಲಿಸುವಾಗ ಅವಳೂ ಸಹ ಎಲ್ಲರ ಇತಿಹಾಸವನ್ನು ತೆಗೆದು ಹಿಡಿದು ಎತ್ತಿ ತೋರಿಸುವಾಗ ಮನಸ್ಸಿಗಾಗುವ ಸಂತೋಷವೇ ಬೇರೇ. ಈ ವರ್ಷ ಓದಿದ ಪುಸ್ತಕಗಲ್ಲಿ ನಾವಲ್ಲ ಅತ್ಯಂತ ಪ್ರಭಾವಿ ಪುಸ್ತಕ.