Jump to ratings and reviews
Rate this book

ತೇರು

Rate this book
The story that Raghavendra Patil tells in The Chariot covers a period of more the a hundred and fifty years, beginning from the years when the Peshwa extended his rule to North Karnataka to the years after the Emergency and relates to the Belagavi region with its epicenter in an imagined but fully realised village named Dharamanatti.

The novel offers two images of Teru which in Kannada means both the chariot and the festival associated with it. The first is centered round an atrocious human sacrifice made in the name of religion by an autocratic ruler and the second, distanced in time by a century and a half mirrors, reflects the change from the feudal order to a democratic one where religious superstition and feudal practices have been replaced by scepticism and the politics of power.

The novel is remarkable for its innovative technique which handles myth and reality with equal success.

Unknown Binding

First published January 1, 2003

4 people are currently reading
36 people want to read

About the author

Raghavendra Patil

7 books1 follower

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
11 (45%)
4 stars
12 (50%)
3 stars
1 (4%)
2 stars
0 (0%)
1 star
0 (0%)
Displaying 1 - 9 of 9 reviews
Profile Image for Nayaz Riyazulla.
424 reviews94 followers
November 11, 2022
ಭಾಷೆಯ ಮೂಲಕವೇ ಒಂದು ಕೃತಿ ಗೆಲ್ಲುವುದು ಅಪರೂಪ, ಇದು ಭಾಷೆಯಿಂದಲೇ ಗೆದ್ದ ಕೃತಿ. ಪಾಟೀಲರು ಕಥೆಗಳ ಮೂಲಕ ನನಗೆ ಪರಿಚಯ. ಅವರು ಬರೆಯುವ ಒಂದೊಂದು ಪುಟಕ್ಕೂ ಅದರದ್ದೇ ಆದ ಒಂದು ತೂಕವಿದೆ, ಅಲ್ಲಿ ಬೇಡದ್ದು ತುರುಕುವ ಅವಸರವಿರುವುದೇ ಇಲ್ಲ. ಈ ಕಾದಂಬರಿಯೇ ಅದಕ್ಕೆ ಉದಾಹರಣೆ. ಒಂದು ಸಣ್ಣ ಎಳೆಯನ್ನು ಸಂತತಿಗಳ ಕಥೆಯಾಗಿ, ಊರಿನ ಕಥೆಯಾಗಿ, ಮನುಜರ ವ್ಯಕ್ತಿತ್ವದ ಕಥೆಯಾಗಿ ಹೇಳುವುದು ಸಾಮಾನ್ಯದ ವಿಷಯವಲ್ಲ.

ಕಥೆಯ ಎಳೆ ಒಂದು ತೇರಿನ ಉತ್ಸವ. ಅಲ್ಲಿ ಒಂದು ಸಂಪ್ರದಾಯಕ್ಕೆ ನಾಂದಿ ಹಾಡುವ ಒಂದು ಸಂದರ್ಭದಿಂದ ಶುರುವಾಗುವ ಈ ಕಥೆ, ಆ ಪರಂಪರೆಯನ್ನು ನೂರಾರು ವರ್ಷಗಳ ಪರ್ಯಂತ ಸಾಗಿಸುತ್ತ ಬರುವ ಒಂದು ಪಂಗಡದ ಕಥೆಯಾಗಿ ಸಾಗುತ್ತದೆ. ಸುಲಲಿತವಾಗೇ ಶುರುವಾಗುವ ಕಥೆ ಕೊನೆ ಕೊನೆಗೆ ಸಂಕೀರ್ಣವಾಗುತ್ತ ಹೋಗುತ್ತದೆ. ಇಲ್ಲಿ ಮೇಲು ಕೀಳಿನ ವ್ಯವಸ್ಥೆಯನ್ನು ಸಿಟ್ಟಿನ ಭಾವದಲ್ಲಿ ಹೇಳದೇ, ವ್ಯವಸ್ಥೆಯಲ್ಲೇ ಉತ್ತರ ಹುಡುಕುವ ಪ್ರಯತ್ನದಲ್ಲಿ ಕಥೆ ಅಂತ್ಯಗೊಳ್ಳುತ್ತದೆ. ಈ ಪ್ರಯತ್ನ ನಿಜಕ್ಕೂ ಪ್ರಶಂಸನೀಯ....

Highly Recommended....
Profile Image for Dr. Arjun M.
17 reviews8 followers
April 23, 2021
Cart festival! I guess there aren't many who may have witnessed it, been a part of it and even organised it. Born in a village, I had an opportunity to be a part of many such cart festivals! I was always proud of it too!

However, Raghavendra Patil, has bought in screen behind view of a cart festival. The story weaves itself for almost 5 generations showcasing how society has influenced today's celebrations and how they change with time. It delicately gives the reader a picture of how people may become victim of such societal changes.

You finally awe thinking, how can so much happen behind screen of simple celebrations such as cart festivals?

Read to know more!
Profile Image for Prashanth Bhat.
2,160 reviews139 followers
July 29, 2017
ನಿಜವೊಂದು ಕತೆಯಾಗಿ ಪುರಾಣವಾಗುವ ಬಗೆ.
ಕತೆ ಕತೆ ಕಾರಣ!
Profile Image for Vignesh Asokan.
22 reviews5 followers
February 13, 2021
தரமனட்டி விட்டல சாமித் தேர், திருவிழாவன்று ஒரு அடி கூட நகராமல் நிற்கிறது. ஊர் பெரியவர்கள் ஒன்றுக் கூட ஒரு முடிவை எடுக்கிறார்கள். அவர்கள் எடுத்த முடிவும் அதைத் தொடர்ந்து நடக்கும் சம்பவங்களும் தான் இந்த நாவல்.

177 பக்கங்கள் கொண்ட இந்த கன்னட நாவல் ஆறு பாகங்களாக நகர்கிறது. ஒவ்வொரு பாகமும் ஒரு தளத்தில் இயங்குகிறது. அந்தந்த பாகங்களின் நோக்கமும் அழகாக பூர்த்தி அடைகிறது.

தமிழ் மொழிப்பெயர்ப்பும் நடையும் வாசிக்க எளிமையாக இருக்கிறது.

தேர் - கட்டமைப்பும் கட்டுக்கு கதைகளும்.
173 reviews22 followers
January 14, 2020
"ತೇರು" ಸುಮಾರು ನಾಲ್ಕಾರು ತಲೆಮಾರುಗಳ ನಡುವಿನ ಧಾರ್ಮಿಕ ನಂಬಿಕೆಗಳು ಹಾಗೂ ಸಾಮಾಜಿಕ ಜೀವನದ ಸ್ಥಿತ್ಯಂತರಗಳ ಕುರಿತಾದ ಕಾದಂಬರಿ. ಇಲ್ಲಿ ಲೇಖಕರ ಭಾಷಾ ಪ್ರಯೋಗ ಅತ್ಯಂತ ಪ್ರಭಾವಶಾಲಿಯಾಗಿ ಮೂಡಿದೆ.

ಕಥೆಯ ಮೊದಲಾರ್ಧದಲ್ಲಿ ದ್ಯಾವಪ್ಪ ತೇರು ಮುಂದೆ ಚಲಿಸದಾದಾಗ ತನ್ನ ಮಗನನ್ನು ನರಬಲಿ ಕೊಟ್ಟು ರಥ ಮುಂದೆ ಚಲಿಸುವಂತೆ ಮಾಡುತ್ತಾನೆ. ನರಬಲಿಯ ವಿಚಾರ ಬಂದಾಗ ಊರಿನ ದೇಸಾಯಿ,ಕಾರಭಾರಿ ಮತ್ತು ಇತರರು ಜಾಣ್ಮೆಯಿಂದ ನುಣುಚಿಕೊಳ್ಳುತ್ತಾರೆ. ಕಡೆಗೆ ತನ್ನ ದೈನೇಸಿ ಸ್ಥಿತಿಯ ಕಾರಣದಿಂದಾಗಿ ದ್ಯಾವಪ್ಪ ತನ್ನ ಮಗನನ್ನು ನರಬಲಿ ಕೊಡಲು ಒಪ್ಪುತ್ತಾನೆ. ತದನಂತರ ಸಿಗುವ ಸಾಮಾಜಿಕ ಈ ಗೌದವಾದರಗಳಿಂದ ದ್ಯಾವಪ್ಪ ಬದುಕಿರುವವರೆಗೂ ಅತ್ಯಂತ ನಿಷ್ಠೆಯಿಂದ ದೇವರ‌ಸೇವೆಯನ್ನು ಮುಂದುವರೆಸುತ್ತಾನೆ.

ಆದರೆ ಅವನ ಮುಂದಿನ ಪೀಳಿಗೆಯು ಈ ಕಾಯಕದಲ್ಲಿ ಆಸಕ್ತಿ ಹಾಗೂ ಶೃಧ್ಧೆಯನ್ನು ಕಳೆದುಕೊಂಡು ನೂರೈವತ್ತನೆಯ ತೇರಿನ ಜಾತ್ರೆಯ ಸಮಯದಲ್ಲಿ ನಂಬಿಕೆಗಳು ಪೂರ್ತಿ ಕುಸಿದಿರುತ್ತವೆ. ಮೂಲ ದ್ಯಾವಪ್ಪನ ಮರಿಮೊಮ್ಮಗ ರಾಜಕೀಯ ಚಳುವಳಿಯಲ್ಲಿ ತೊಡಗಿಕೊಂಡಿರುತ್ತಾನೆ. ಊರಿನಲ್ಲಿ ಅವರ ಬಗ್ಗೆ ಇಲ್ಲಸಲ್ಲದ ಮಾತುಗಳು ಕೇಳಿ ಬರುತ್ತಿರುತ್ತದೆ. ತೇರಿನ ದಿನ ಅವನು ಬರದೆ ಹೋದಾಗ
ಅವನನ್ನು ಹುಡುಕಿಕೊಂಡು ಹೊರಟ ಅವನ ಗೆಳೆಯರಿಗೆ ಅವನ ಒಳ್ಳೆಯತನದ ಪರಿಚಯ ಆಗುತ್ತದೆ.

ಹೊಸ ತಲೆಮಾರಿನ ದ್ಯಾವಪ್ಪನ ವಿಚಾರಗಳು, ಹಳ್ಳಿಗರ ಜೀವನ, ನಿರುದ್ಯೋಗ ಸಮಸ್ಯೆ ಮುಂತಾದವುಗಳ ಕುರಿತು ಹೆಚ್ಚು ಆಸಕ್ತಿ ತೋರುತ್ತವೆ. ಕಾಲಾನುಕ್ರಮೇಣ ಅವನ ಸುತ್ತಮುತ್ತ ಆದ ಬದಲಾವಣೆಗಳಿಂದ ಅವನಿಗೆ ದೇವರ ಕುರಿತು ಭ್ರಮನಿರಸನವಾಗುತ್ತದೆ. ಕೊನೆಗೆ ವಿಧವೆ ಒಬ್ಬಳಿಗೆ ಬಾಳು ಕಲ್ಪಿಸುವ ಅವಕಾಶ ಸಿಗದೆ ಹೋದಾಗ ಅವರ ಜೀವನದ ಜವಾಬ್ದಾರಿಯನ್ನು ತನ್ನ ಹೆಗಲಿಗೆ ವಹಿಸಿಕೊಂಡು ಬಾಬಾ ಅಮ್ಟೆ ಅವರ ಆಶ್ರಮವನ್ನು ಸೇರಿಕೊಳ್ಳುತ್ತಾನೆ.

ಕುಸಿಯುತ್ತಿರುವ ಧಾರ್ಮಿಕ ನಂಬಿಕೆಗಳು, ಅದಕ್ಕೆ ಕಾರಣವಾಗುವ ಸಾಮಾಜಿಕ ಬದಲಾವಣೆಗಳು, ನಮ್ಮ ಸಮಾಜವು ಆಧುನಿಕತೆಗೆ ತೆರೆದುಕೊಳ್ಳುವುದನನ್ನು ಲೇಖಕರು ಚೆನ್ನಾಗಿ ವಿವರಿಸಿದ್ದಾರೆ.

ಸ್ವಾಂವಜ್ಜ, ಮೂಲ ಹಾಗೂ ಆಧುನಿಕ ದ್ಯಾವಪ್ಪ ತಮ್ಮ ವಿಚಾರಗಳು ಮತ್ತು ವ್ಯಕ್ತಿತ್ವಗಳಿಂದಾಗಿ ಹೆಚ್ಚು ಆಪ್ತರಾಗುತ್ತಾರೆ.

ವಿಭಿನ್ನ ಕಥಾವಸ್ತುವಿನ ಹಾಗೂ ವಿಚಾರ ಪ್ರಚೋದಕ ಕಾದಂಬರಿಯ ಓದು ಅತ್ಯಂತ ಖುಷಿ ಕೊಟ್ಟಿದೆ.

ನಮಸ್ಕಾರ
ಅಮಿತ್ ಕಾಮತ್
Profile Image for Sanjay Manjunath.
201 reviews10 followers
September 14, 2024
✍️ 12/8/19

ಕೆಲವೊಂದು ಕೃತಿಗಳನ್ನು ಓದಿದ ಮೇಲೆ.. ಇಷ್ಟು ದಿನ ಈ ಕೃತಿಯನ್ನು ಯಾಕೆ ಓದಲಿಲ್ಲ, ಮುಂಚೇನೇ ಓದಬೇಕಿತ್ತು ಅಂತ ಅನಿಸುತ್ತೆ. ಅಂತಹ ಒಂದು ಅಭಿಜಾತ ಕೃತಿ 'ತೇರು'.

ಧರಮನಟ್ಟಿ ವಿಟ್ಠಲ ದೇವರ ಗುಡಿಯ ತೇರು ಈ ಕೃತಿಯ ಪ್ರಧಾನ ಬಿಂದು. ಆಜು-ಬಾಜು 60-70ರ ದಶಕದ ಪರಿಸರದಲ್ಲಿ ಆರಂಭವಾಗುತ್ತದೆ ಕಾದಂಬರಿ.

ಪತ್ರಕರ್ತ ಬೆಟಗೇರಿಯವರು ಯಾವುದೊ ಕೆಲಸದ ವಿಚಾರವಾಗಿ ಬೆಳಗಾವಿಗೆ ಬಂದಾಗ ಸ್ವಾಂವಪ್ಪ ಎಂಬ ವ್ಯಕ್ತಿಯು ಹಿಂದಿನ ಬಾರಿ ಭೇಟಿಯಾದ ನೆನಪಿನಿಂದ ಇವರನ್ನು ಗುರುತಿಸಿ, ಮಾತನಾಡಿಸುತ್ತಾ ತನ್ನೂರಾದ ಧರಮನಟ್ಟಿಯ ತೇರಿನ ಕಥೆಯನ್ನು ಅವರಿಗೆ ತಿಳಿಸಲು ಊರಿಗೆ ಕರೆದೊಯ್ಯುತ್ತಾನೆ.

#ಭಾಗ1
ತೇರನ್ನು ಎಳೆಯುವ ಹಿಂದಿನ ದಿನ, ಗೊಂದಲಿಗ ಎಂಬ ಜಾತಿಯವರು ತೇರಿನ ಕತೆಯನ್ನು ಜಾನಪದ ಗೀತೆಯ ಮುಖಾಂತರ ಸವಿಸ್ತಾರವಾಗಿ ಹೇಳುತ್ತಾರೆ. ಆ ಜಾನಪದವನ್ನು ಓದುವುದೇ ಒಂದು ಖುಷಿ.
ನೂರೈವತ್ತು ವರ್ಷಗಳ ಹಿಂದೆ ದೇಸಗತಿಯ ಸೀಮೆಯನ್ನು ಸ್ಥಾಪಿಸಿದ ದೇಸಾಯಿಯವರು, ಧರಮನಟ್ಟಿಯ ಗ್ರಾಮದಲ್ಲಿ ವಿಠ್ಠಲ ದೇವರಿಗೆಂದು ಈ ತೇರನ್ನು ಕಟ್ಟಿಸುತ್ತಾರೆ. ತೇರನ್ನು ಕಟ್ಟಿದ ಮೇಲೆ, ಒಂದು ಮಹೂರ್ತದಲ್ಲಿ ಅದನ್ನು ಎಳೆಯಲು ಹೊರಟಾಗ ಅದು ಒಂದಿಂಚು ಅಲುಗಾಡುವುದಿಲ್ಲ. ಶಾಸ್ತ್ರವನ್ನು ಕೇಳಿದಾಗ ಒಂದು ನರಬಲಿ ಕೊಟ್ಟರೆ ಅದು ಚಲಿಸುತ್ತದೆ ಎಂದು ತಿಳಿಯುತ್ತದೆ. ನರಬಲಿಯನ್ನು ಹುಡುಕೋದಕ್ಕೆ ಹೊರಟ ಡಣ್ಣಾನಾಯಕನಿಗೆ ಬಲಿ ಎಲ್ಲೂ ಸಿಗುವುದಿಲ್ಲ. ಅವನ ಸಂಕಟ ಕಂಡು ಅವನ ಮಡದಿ ತಾನು ಹುಡುಕಿ ತರುತ್ತೇನೆ ಎಂದು ಹೊರಡುತ್ತಾಳೆ. ಗೊಂಬೆರಾಮ ಜಾತಿಯ ದ್ಯಾವಯ್ಯನನ್ನು ಒಪ್ಪಿಸಿ, ಅವನ ಮಗನನ್ನು ಬಲಿಕೊಡುವುದೆಂದು ನಿರ್ಧಾರವಾಗುತ್ತದೆ. ಆ ಬಲಿಗಾಗಿ ದ್ಯಾವಯ್ಯ ಮತ್ತು ಅವನ ಮುಂದಿನ ತಲೆಮಾರಿಗಾಗಿ ಕಳ್ಳಿಗುದ್ದಿ ಎಂಬ ಗ್ರಾಮದಲ್ಲಿ ಜಮೀನು ನೀಡುವುದೆಂದು ದೇಸಾಯರು ಅಪ್ಪಣೆ ನೀಡುತ್ತಾರೆ. ನವಮಿಯಂದು ದ್ಯಾವಯ್ಯನ ಮಗ ತೇರಿನ ಚಕ್ರಕ್ಕೆ ಬಲಿಯಾಗುವುದರೊಂದಿಗೆ ತೇರು ಚಲಿಸುತ್ತದೆ. ಇನ್ನು ಪ್ರತಿ ರಾಮನವಮಿಯಂದು ತೇರಿನ ಉತ್ಸವ ನಡೆಯುವುದೆಂದು.. ದ್ಯಾವಯ್ಯ ನ ವಂಶಸ್ಥರು ಬಂದು ರಕ್ತ ತಿಲಕವನ್ನು ತೇರಿಗೆ ಹಚ್ಚುವುದೆಂದು ನಿರ್ಧರಿತವಾಗುತ್ತದೆ. ಇದು ಜಾನಪದ ಗೀತೆಯ ಸಾರಾಂಶ.
ಅಲ್ಲಿಂದ ದ್ಯಾವಯ್ಯ, ತೇರಿನ ಉತ್ಸವ ಇನ್ನೂ ಹದಿನೈದು ದಿನ ಮುಂಚೆಯೇ ಇರುವಂತೆಯೇ, ಒಂದು ವಿಶಿಷ್ಟ ಕಟ್ಟುನಿಟ್ಟಿನ ವ್ರತವನ್ನು ಆಚರಿಸುತ್ತಾ ನವಮಿಗಿಂತ ಎರಡು ದಿನದ ಮುಂಚೆ ಧರಮನಟ್ಟಿಗೆ ಬಂದು, ನವಮಿಯಂದು ರಕ್ತದ ತಿಲಕವನ್ನು ಹಚ್ಚುವುದನ್ನು ರೂಢಿಸಿಕೊಳ್ಳುತ್ತಾನೆ. ಅವನ ಈ ವಿಶಿಷ್ಟ ಆಚರಣೆಯನ್ನು ಆತನ ಮುಂದಿನ ತಲೆಮಾರು ಮಾಡುವುದು ಕರ್ತವ್ಯವೆಂದು ಅವನ ಮಡದಿಗೆ ಮನನ ಮಾಡಿಸಿ ಆಚರಣೆ ಮುಂದುವರಿಸುತ್ತಾನೆ.
ಇಷ್ಟು ಕಥೆ ಕೇಳಿದ ಬೆಟಗೇರಿಯವರು ದ್ಯಾವಯ್ಯನ ವಂಶಸ್ಥರನ್ನು ಕಳ್ಳಿಗುದ್ಧಿಗೆ ಹೋಗಿ ನೋಡಿಕೊಂಡು ಬೆಂಗಳೂರಿಗೆ ಹಿಂತಿರುಗುತ್ತಾರೆ.

#ಭಾಗ2
ಧರಮನಟ್ಟಿಗೆ ಹೋಗಿ ಏಳೆಂಟು ವರ್ಷಗಳೇ ಕಳೆದು ಹೋಗಿರುತ್ತದೆ. ಒಂದು ದಿನ ಇದ್ದಕ್ಕಿದ್ದಂತೆ ಒಬ್ಬ ಯುವಕನು ಬೆಟಗೇರಿಯವರ ಮನೆಗೆ ಬರುತ್ತಾನೆ. ತಕ್ಷಣ ಅವನ ಗುರುತು ಹತ್ತುವುದಿಲ್ಲ. ಅವನೆ ತನ್ನ ಪರಿಚಯ ಹೇಳಿಕೊಳ್ಳುತ್ತಾ, ತಾನು ಕಳ್ಳಿಗುದ್ದಿಯ ದ್ಯಾವಯ್ಯ ವಂಶಸ್ಥರಾದ ಹುಡುಗ ದ್ಯಾಮಪ್ಪನೆಂದು, ಜೆಪಿ ಚಳುವಳಿಯ ಭಾಗವಾಗಿ ಬಂದು ಪೊಲೀಸರ ಅತಿಥಿಯಾಗಿ ಫಜೀತಿ ಪಟ್ಟು, ತಮ್ಮ ಪರಿಚಯವಿದೆ ಎಂದೊಡನೆ ಬಿಟ್ಟುಬಿಟ್ಟಾಗಿಯೂ, ಅಲ್ಲಿಂದ ತಮ್ಮ ವಿಳಾಸವನ್ನು ಹೇಗೋ ಪತ್ತೆ ಮಾಡಿ ಬಂದೆನೆಂದು ಹೇಳುತ್ತಾನೆ.
ಅವನನ್ನು ಉಪಚರಿಸಿ, ಹೊರಗಡೆ ಸುತ್ತಾಡಲು ಕರೆದೊಯ್ಯುತ್ತಾರೆ. ತೇರಿನ ವಿಷಯ, ಅವನ ವಂಶದ ರಕ್ತ ತಿಲಕದ ವಿಷಯ ಎತ್ತಿದಾಗ.. ತನ್ನ ತಂದೆಯವರೇ ಅದನ್ನು ಸರಿಯಾಗಿ ಮಾಡುತ್ತಿಲ್ಲ, ಆ ಕಟ್ಟುನಿಟ್ಟಿನ ವೃತದಿಂದ ಪ್ರಯೋಜನವೇನು? ಎಂದು ಸ್ವಲ್ಪ ಖಾರವಾಗಿ, ಉದಾಸೀನವಾಗಿಯೂ ಮಾತನಾಡುತ್ತಾನೆ. ಯಾಕೋ ಅವನ ಮನೆ ಸ್ಥಿತಿ ಮತ್ತು ಮನಸ್ಥಿತಿ ಸರಿಯಿಲ್ಲವೆಂದು ಬೆಟಗೇರಿಯವರು ಭಾವಿಸುತ್ತಾರೆ. ಬೇಡವೆಂದರೂ ಅಂದು ರಾತ್ರಿಯೇ ದ್ಯಾವಪ್ಪ ಊರಿಗೆ ಹೋಗುತ್ತಾನೆ.

#ಭಾಗ3
ಮತ್ತೆ ಏಳೆಂಟು ವರ್ಷಗಳು ಕಳೆದ ಮೇಲೆ ಬೆಟಗೇರಿಯವರಿಗೆ
ಸ್ವಾಂವಜ್ಜನಿಂದ ಪತ್ರ ಬರುತ್ತದೆ. ಈ ವರ್ಷಕ್ಕೆ, ನೂರೈವತ್ತನೇ ವರ್ಷದ ತೇರಿನ ಉತ್ಸವ ನಡೆಯುತ್ತದೆ, ತಾವು ಕುಟುಂಬ ಸಮೇತರಾಗಿ ಬರಬೇಕೆಂದು ವಿನಂತಿಸಿರುತ್ತಾರೆ.
ಹೆಂಡತಿಯ ಒತ್ತಾಯದ ಮೇರೆಗೆ, ತನ್ನೂರು ಬೆಟಗೇರಿಯನ್ನು ನೋಡುವ ಸಲುವಾಗಿ ಕುಟುಂಬ ಸಮೇತ ಧರಮನಟ್ಟಿಗೆ ಆಗಮಿಸುತ್ತಾರೆ.
ಧರಮನಟ್ಟಿಯ ಆಚಾರ ವಿಚಾರಗಳು, ಜನರ ಮನಸ್ಥಿತಿ ಎಲ್ಲವೂ ಬದಲಾಗಿರುತ್ತದೆ. ದ್ಯಾವಪ್ಪನ ಬಗ್ಗೆ ವಿಚಾರಿಸಿದಾಗ.. ಅವನು ಈಗ ಉಡಾಳನಾಗಿದ್ದಾನೆ. ಒಂದೆರಡು ವರ್ಷ ಕಟ್ಟುನಿಟ್ಟಿನ ವೃತ ಮಾಡಿ ತೇರಿನ ಉತ್ಸವದಲ್ಲಿ ಭಾಗಿಯಾಗಿದ್ದ, ಈಗಲೂ ಹದಿನೈದು ದಿನ ತನ್ನ ಮನೆಯಿಂದ ದೂರವಿದ್ದರೂ, ಎಲ್ಲಾ ಕಟ್ಟುಪಾಡುಗಳನ್ನು ಬಿಟ್ಟು, ಉದಗಟ್ಟಿ ಎಂಬ ಊರಲ್ಲಿ ಯಾವುದೋ ಹೆಂಗಸಿನ ಸಹವಾಸಕ್ಕೆ ಬಿದ್ದು ಹಾಳಾಗಿದ್ದಾನೆ. ಎಂದು ಸ್ವಾಂವಜ್ಜ ಹೇಳುತ್ತಾರೆ. ಅದನ್ನು ಬೆಟಗೇರಿಯವರಿಗೆ ನಂಬಲಾಗಲಿಲ್ಲ. ದ್ಯಾವಪ್ಪನನ್ನು ಮಾತನಾಡಿಸಬೇಕೆಂದುಕೊಳ್ಳುತ್ತಾರೆ.
ಆ ವರ್ಷದ ತೇರಿನ ಉತ್ಸವದ ಮುಂಚಿನ ಆಚರಣೆಗಳು ನಡೆಯುತ್ತಿರುತ್ತವೆ. ನವಮಿಗಿಂತ ಎರಡು ದಿನದ ಮುಂಚೆ ಊರವರೆಲ್ಲ ದ್ಯಾವಪ್ಪನನ್ನು ಕಾಯುತ್ತಿರುತ್ತಾರೆ. ಆದರೆ ಅಂದು ಅವನು ಬರುವುದಿಲ್ಲ. ಊರಿನ ಮಂದಿಯೆಲ್ಲ ತಲೆಗೊಂದರಂತೆ ಕೆಟ್ಟದಾಗಿ ಅವನ ಬಗ್ಗೆ ಮಾತಾಡುತ್ತಾರೆ.
ಮಾರನೇ ದಿನ ಅವನನ್ನು ಹುಡುಕಿಕೊಂಡು ಬರಲು ಯುವಕರಿಬ್ಬರನ್ನು ಊರವರು ಕಳುಹಿಸುತ್ತಾರೆ. ಯುವಕರು ಅವನನ್ನು ಅರಸುತ್ತಾ ಉದಗಟ್ಟಿಗೆ ಬಂದು ವಿಚಾರಿಸಿ, ಕೊನೆಗೆ ಆ ಹೆಂಗಸಿನ ಮನೆಗೆ ಬಂದಾಗ.. ಆ ಹೆಂಗಸಿನ ಅತ್ತೆಯು ದ್ಯಾವಪ್ಪನ ಒಳ್ಳೆಯತನ, ಗುಣ, ಉಪಕಾರ ಮನೋಭಾವ, ಅವಳ ವಿಧವೆ ಸೊಸೆಯನ್ನು ಮದುವೆಯಾಗುತ್ತೇನೆ ಎಂಬ ಉದಾರ ಮನಸ್ಸನ್ನು, ಊರವರು.. ಬೇರೆಯವರು ಅವನ ಬಗ್ಗೆ ತಿಳಿದುಕೊಂಡಿರುವ ತಪ್ಪು ಕಲ್ಪನೆಗಳನ್ನು ತಿಳಿಸುತ್ತಾಳೆ.
ಅವಳ ಮಾತನ್ನೇ ಆ ಯುವಕರು ಬಂದು ಊರಿಗೆ ಹೇಳಿದಾಗ, ಎಲ್ಲರೂ ಸೋಜಿಗ ಪಡುತ್ತಾರೆ. ಆ ದಿನವೂ ಅವನು ಸಿಗೋದಿಲ್ಲ.
ಮರುದಿನ ವಿಟ್ಠಲ ದೇವರ ಗುಡಿಯ ಕಳ್ಳತನವಾಗುತ್ತದೆ. ಊರವರಿಗೆ, ಹಿರಿಯ ಸ್ವಾಂವಜ್ಜನಿಗೆ ಬರಸಿಡಿಲು ಬಡಿದಂತಾಗುತ್ತದೆ. ಎಲ್ಲರೂ ದ್ಯಾವಪ್ಪನ ಮೇಲೆ ಅನುಮಾನ ಪಡುತ್ತಾರೆ. ಪೊಲೀಸ್ ಕಂಪ್ಲೇಂಟ್ ಕೂಡ ಕೊಡುತ್ತಾರೆ. ತಮ್ಮ ರಾಜಕೀಯ ಬೇಳೆ ಬೇಯಿಸಲು ಕೆಲವರೂ ಹೊರಡುತ್ತಾರೆ. ಸ್ವಾಂವಜ್ಜನನ್ನು ನಿಂದಿಸುತ್ತಾರೆ. ಆ ಅವಮಾನದಿಂದ ಸ್ವಾಂವಜ್ಜ ಜರ್ಜರಿತ ರಾಗುತ್ತಾರೆ. ಅದೇ ಸಮಯಕ್ಕೆ ಬೆಟಗೇರಿಯವರು ಬೆಂಗಳೂರಿಗೆ ಹಿಂತಿರುಗುತ್ತಾರೆ.

#ಭಾಗ4
ಮತ್ತೆ ನಾಲ್ಕೈದು ವರ್ಷಗಳು ಕಳೆದ ನಂತರ ಬೆಟಗೇರಿಯವರು ರಿಟೈರ್ಡ್ ಆಗುತ್ತಾರೆ. ತಮ್ಮ ಉಳಿದ ಜೀವನವನ್ನು ಊರಲ್ಲಿ ಕಳೆಯಲು ನಿರ್ಧರಿಸಿ ಊರಿಗೆ ಬಂದು ನೆಲೆಸುತ್ತಾರೆ.
ಆ ಸಮಯದಲ್ಲಿ ಧರಮನಟ್ಟಿಯ ತೇರು, ಸ್ವಾಂವಜ್ಜ, ದ್ಯಾವಪ್ಪರ ನೆನಪಾಗಿ ಅವರನ್ನು ಕಾಣಲು ಹೊರಡುತ್ತಾರೆ.
ಹೊರಟಾಗ, ಸ್ವಾಂವಜ್ಜನ.. ಆ ಆಘಾತದ ನಂತರದ ಬದುಕು, ದ್ಯಾವಪ್ಪನ ಹುಡುಕಾಟ.. ಆ ಹುಡುಕಾಟದಲ್ಲಿ ಕಾಣಿಸಿಕೊಳ್ಳುವ ಅಗೋಚರ ಸತ್ಯಗಳು, ಆ ಹೆಂಗಸಿನಿಂದ ತಿಳಿಯುವ ದ್ಯಾವಪ್ಪನ ಶ್ರೇಷ್ಠತೆ. ಹೀಗೆ ಎಷ್ಟೋ ವಿಷಯಗಳು ಸ್ಪಷ್ಟವಾಗುತ್ತಾ ಹೋಗುವುದರೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ.

ಬೆಟಗೇರಿ, ಸ್ವಾಂವಜ್ಜ, ದ್ಯಾವಪ್ಪ, ಧರಮನಟ್ಟಿ ಗ್ರಾಮ, ವಿಠಲದೇವರ ಗುಡಿ, ತೇರಿನ ಹಿಂದಿನ ಕಥೆ ಹೇಳುವ ಜಾನಪದ ಗೀತೆ, ಪದ್ದತಿಗಳು ಕಾಲಕಾಲಕ್ಕೆ ಬದಲಾಗುವ ಪರಿ, ಪುಸ್ತಕದಲ್ಲಿ ಬಳಸಿರುವ ರೇಖಾಚಿತ್ರಗಳು, ಎಚ್ ಎಸ್ ವೆಂಕಟೇಶಮೂರ್ತಿಯವರು ರಚಿಸಿರುವ ತೇರಿನ ಕವನ, ತೇರು ಮತ್ತು ಉತ್ತರ ಕರ್ನಾಟಕದ ಭಾಷೆ.. ಎಲ್ಲವೂ ಓದುಗನ ಮನದಲ್ಲಿ ಉಳಿಯುತ್ತವೆ.

ಇವೆಲ್ಲವನ್ನು ಸೇರಿಸಿ ತೇರನ್ನು ಕಟ್ಟಿಕೊಟ್ಟಿರುವ ರಾಘವೇಂದ್ರ ಪಾಟೀಲರಿಗೆ ದೊಡ್ಡ ನಮನ.
This entire review has been hidden because of spoilers.
Profile Image for Bharath Manchashetty.
131 reviews3 followers
October 10, 2025
“ತೇರು-ಶೀರ್ಷಿಕೆಯನ್ನು ನೋಡಿ ಕೈಗೆತ್ತುಕೊಂಡಾಗ ಇದಕ್ಕಾಗಲೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ ಎಂದು ನೋಡಿ ಸಂತಸದ ಜೊತೆ ಆಕರ್ಷಣೆಯೂ ಹೆಚ್ಚಾಗತೊಡಗಿತು. ಓದಿದ ನಂತರ ಲೇಖಕರ ಮೇಲೆ ನಿಜಕ್ಕೂ ಗೌರವ ಹೆಚ್ಚಾಯ್ತು ಎಂದರೆ ಅತಿಶಯೋಕ್ತಿಯಲ್ಲ.

“ ದೇಸಾಯಿಯವರು ದೇವರ ಸೇವೆಯ ಉತ್ಸವಕ್ಕೆ ತೇರನ್ನು ಕಟ್ಟಿಸಿ ಧರಮನಟ್ಟಿ ಊರಿನ ಏಳಿಗೆಗಾಗಿ ಅದನ್ನು ವಿಜೃಂಭಣೆಯಿಂದ ಉರುಳಿಸಲು ಹೊರಟಾಗ ಅದು ಒಂದಿಂಚೂ ಮುಂದೆ ಅಲುಗಾಡುವುದಿಲ್ಲ, ಮುಖ್ಯ ತೊಂದರೆಗೆ ಪುರೋಹಿತರನ್ನು ಕೇಳಿದಾಗ ಕೆಳವರ್ಗದ ನರಬಲಿಯನ್ನು ಬೇಡುತ್ತಿದೆ ಎಂದು ಹೇಳಿದಾಗ ಬಲಿಯಾಗುವುದು ದ್ಯಾವಪ್ಪನ ಮಗ ಚಂದ್ರಾಮ.
ಸೂರ್ಯ-ಚಂದ್ರರಿರುವ ತನಕ ದ್ಯಾವಪ್ಪ ಕುಟುಂಬದವರ ರಕ್ತ ತೇರನ್ನು ಸೋಕಿದಮೇಲೆಯೇ ಮುಂದೆ ಹೋಗಬೇಕು ಎನ್ನುವದನ್ನು ದೇಸಾಯಿಯವರು ಆಜ್ಞಾಪಿಸುತ್ತಾರೆ. ಮುಂದೆ ದ್ಯಾವಪ್ಪ ತನ್ಮ ಪ್ರಾಯಶ್ಚಿತ್ತಕ್ಕೆ ಗಂಟಾಳ ಸ್ವಾಮಿಗಳನ್ನು ಕೇಳಿದಾಗ ರಕ್ತ ಶುದ್ಧಿಯನ್ನು ಸೂಚಿಸುತ್ತಾರೆ. ಮುಂದೆ ತಲೆಮಾರು ಕಳೆದಂತೆ ಇದರಬಗ್ಗೆಯೇ ವಿಚಾರವಂತಿಕೆಯಲ್ಲಿ ಮುಳುಗಿದಾಗ ಎಲ್ಲವೂ ನಶ್ವರವೆನುಸುತ್ತದೆ. ದ್ಯಾವಪ್ಪ ಹಾಗೂ ಸ್ವಾಯಜ್ಜನ ಪಾತ್ರ ಬಿಡದಂತೆ ಕಾಡುತ್ತದೆ.”

“ದಲಿತವರ್ಗದ ಮೇಲೆ ಹಿಂದೆ ನಡೆದ ದಬ್ಬಾಳಿಕೆಯ ಪರಮಾವಧಿ, ಧಾರ್ಮಿಕ ಭಕ್ತಿಯಲ್ಲಿನ ಪೊಳ್ಳುತನ, ಜನಗಳ ಅಂಧಕಾರತೆ, ಮುಗ್ಧತೆ ಎಲ್ಲವೂ ತೆರೆದುಕೊಳ್ಳುತ್ತದೆ.”
“ಶಾರೀರಿಕ ಕಾಮದ ಬಗ್ಗೆ ಒಂದು ಸಾಲು ಇಲ್ಲದ ಕೃತಿ.
ಇಂಥ ಕೃತಿ ರಚಿಸಿದ “ರಾಘವೇಂದ್ರ ಪಾಟೀಲ”ರಿಗೆ ಧನ್ಯೋಸ್ಮಿ.!🙏”

“ನಾ ಓದಿದ ಅತ್ಯುತ್ತಮ ಕೃತಿಯ ಸಾಲಿಗೆ ಹೊಸ ಸೇರ್ಪಡೆ“

-ಭರತ್ ಎಂ.
ಓದಿದ್ದು ೨೫.೦೩.೨೦೨೫
Profile Image for Anil Bedge.
5 reviews4 followers
June 27, 2023
ಸಮಸ್ಯೆ, ಸಮಾಧಾನ, ಪರಿಹಾರ, ಬಲಿ. ತ್ಯಾಗ.

ಭಕ್ತಿ, ನಂಬಿಕೆ, ಶ್ರದ್ಧೆ, ದೇವರು.
ಹಬ್ಬ, ತೇರು, ಸಂಸ್ಕೃತಿ.

ದೀಡ್ ನೂರ್ ವರ್ಷ. ಜನರೇಶನ್ ಗ್ಯಾಪ್ !

ನನ್ನ ಅಭಿಪ್ರಾಯ, ನಿನ್ನ ಅಭಿಪ್ರಾಯ. ಡಿಫರೆನ್ಸ್ ಆಫ್ ಒಪಿನಿಯನ್.

ಕಲ್ಚರಲ್ ಶಾಕ್ !

ರಾಜಕೀಯ, ಚೋರ್ - ಪೊಲೀಸ್.

ಆ ಕಥೆ, ಈ ಕಥೆ, ಹಂಗಂತ - ಹೀಂಗಂತ... ಮಾತು, ಗಾಳಿ ಮಾತು!

ಹಳ್ಳಿಯ ದುಃಖ, ಸಿಟಿಯ ಸುಖ. ಕಲ್ಪನೆ. ತಪ್ಪು ಕಲ್ಪನೆ!

ಪ್ರೀತಿಯ ಹಂದರ, ಸುಳ್ಳಿನ ಹಾದರ.

ಸತ್ಯದ ದಾರಿ ಕಷ್ಟಕರ. ಅಮರ, ಅದು ಅಮರ...

***

ತೇರು ಅಂದ್ರೆ ನಮಗೆ, ಕಲಬುರಗಿಯ ಶರಣಬಸವನ ತೇರು.
ಹೋಳಿ ಹುಣ್ಣಿಮೆಯ ಐದನೆ ದಿನಕ್ಕೆ, ಎಳೆಯುವ ತೇರು.

ಇದು ಎಲ್ಲ ಊರಿನ ಬಗ್ಗೆ, ಭಾಷೆ, ಸಂಸ್ಕೃತಿಯ ಬಗ್ಗೆ , ಜನಗಳ-ಜನರ ಮನಸಿನ ಬಗ್ಗೆ. ತಲೆಮಾರುಗಳ ಬಗ್ಗೆ

ಊಫ್... ಇದೊಂದು ಅದ್ಭುತ ಪುಸ್ತಕ.

ಲೇಖಕ ರಾಘವೇಂದ್ರ ಪಾಟೀಲರಿಗೆ ಶರಣು.

***

ಶಿಶುನಾಳ ಶರೀಫರ, "ತೇರನೆಳೆಯುತಾರ ತಂಗಿ" ಹಾಡನ್ನು ಪಂಡಿತ್ ಮಲ್ಲಿಕಾರ್ಜುನ್ ಮನ್ಸೂರ್ ಹಾಡಿರುವುದು ಯೂಟ್ಯೂಬ್ ನಲ್ಲಿ ಇದೆ.

ಹಾಡು ಕೇಳ್ರಿ. ಪುಸ್ತಕ ಓದ್ರಿ.
Displaying 1 - 9 of 9 reviews

Can't find what you're looking for?

Get help and learn more about the design.