ಸಾಹಿತಿಗಳ ಬಗ್ಗೆ ಚೆನ್ನಾಗಿ ಬರೆದ ಇಬ್ಬರಲ್ಲಿ ಇವರೂ ಒಬ್ಬರು. ಇನ್ನೊಬ್ಬರು ಸುಮತೀಂದ್ರ ನಾಡಿಗ. ಅವರ ಗುಣಗಷ್ಟೇ ಅಲ್ಲದೆ ದೌರ್ಬಲ್ಯಗಳನ್ನೂ ಬರೆದವರು. ಶೂದ್ರ ಶ್ರೀನಿವಾಸರ 'ಕನಸಿಗೊಂದು ಕಣ್ಣು' ಇಷ್ಟವಾಗಿತ್ತು. ಇದು ಅದೇ ತೆರನಾದ ಇನ್ನೊಂದು ಪುಸ್ತಕ. ಸಾಹಿತಿಗಳ,ರಾಜಕಾರಣಿಗಳ ಕುರಿತಾದ ಬರಹಗಳು,ಅವರು ತನ್ನ ಕಾಡಿದ ಬಗೆ ಮತ್ತು ಖಾಸಗಿ ವಿವರಗಳು ಇವುಗಳಿಂದ ತುಂಬಿದ ಪುಟ್ಟ ಪುಸ್ತಕ. ಶೂದ್ರ ಶ್ರೀನಿವಾಸ ,ಲಂಕೇಶ್ ಶಿಷ್ಯ. ಸಹಜವಾಗೇ ಲಂಕೇಶ್ ಪ್ರಭಾವ ಎದ್ದು ಕಾಣುತ್ತದೆ. ಲಂಕೇಶ್ ಹೋದ ಬಳಿಕ ಅವರ ಶಿಷ್ಯಂದಿರೆಲ್ಲ ತಾವೇ ಸಾಂಸ್ಕೃತಿಕ ಜಗತ್ತಿನ ದೊಡ್ಡವರೆಂಬ ಭ್ರಮೆಯಲ್ಲಿ ಆಡುತ್ತಿರುವುದು ನಾವೆಲ್ಲ ನೋಡುತ್ತಾ ಇದ್ದೇವೆ. ಇಲ್ಲಿಯ ಲೇಖನಗಳು ಅದರಿಂದ ಮುಕ್ತವಾಗಿವೆ ಎಂಬುದು ಸಮಾಧಾನ.