ಅಲೆಮಾರಿಯ ಒಂದಷ್ಟು ದಿನಚರಿಯ ಟಿಪ್ಪಣಿ - ಶೂದ್ರ ಶ್ರೀನಿವಾಸ್
ಲಂಕೇಶರ ನೆರಳಿಂದ ಹೊರಬಂದು ಅಸ್ತಿತ್ವ ರೂಪಿಸಿಕೊಂಡ ಇಬ್ಬರಲ್ಲಿ ನಟರಾಜ್ ಹುಳಿಯಾರ್ ಮತ್ತು ಶೂದ್ರ ಶ್ರೀನಿವಾಸ್ ಪ್ರಮುಖರು. ಆದರೂ ಕೆಲವೊಂದು ಸಲ ಇವರ ಬರಹಗಳಲ್ಲಿ ಮತ್ತೆ ಮತ್ತೆ ಬರುವ ಲಂಕೇಶ್ ಪ್ರಸ್ತಾಪ ರೇಜಿಗೆ ಹುಟ್ಟಿಸುತ್ತದೆ. ತಮಾಷೆ ಎಂದರೆ ಇದೇ ಪುಸ್ತಕದ ಒಂದು ಕಡೆ ಶೂದ್ರ ಶ್ರೀನಿವಾಸ್ ಬರೆಯುವ ಭಟ್ಟಂಗಿತನ ಮನುಷ್ಯನನ್ನು ಹಾಳು ಮಾಡುತ್ತದೆ ಎಂಬ ಸಾಲುಗಳು.
ಈ ಪುಸ್ತಕ ಲಹರಿಯೋ,ವ್ಯಕ್ತಿ ಚಿತ್ರಗಳೋ, ಬಡಬಡಿಕೆಗಳೋ ಅನಿಸುವಷ್ಟು ವೈವಿಧ್ಯಮಯವಾಗಿದೆ.ಅಷ್ಟೇ ಪುಟ್ಟ ಪುಟ್ಟ ಒಂದು ಪುಟ ಮೀರದ ಹಲವಾರು ಬರಹಗಳು. ಶೂದ್ರರ ಕನಸಿಗೊಂದು ಕಣ್ಣು ಬಹಳ ಚೆನ್ನಾಗಿತ್ತು.ಇದು ಅತೃಪ್ತಿ ಹುಟ್ಟಿಸುತ್ತದೆ.ಯಾಕೆಂದರೆ ವ್ಯಕ್ತಿ ಚಿತ್ರಣ ಕೊಡಲು ಶುರು ಮಾಡಿದ್ದಾರೆ ಅನ್ನುವಾಗ ಬರಹವೇ ಮುಗಿದುಹೋಗುತ್ತದೆ.