Kota Shivaram Karanth was a Kannada writer, social activist, environmentalist, Yakshagana artist, film maker and thinker. He was described as the "Rabindranath Tagore of Modern India who has been one of the finest novelists-activists since independence"by Ramachandra Guha. He was the third person among eight recipients of Jnanpith Award for Kannada the highest literary honour conferred by the Govt. of India.
Shivaram Karanth was born on 10 October 1902, in Kota near Udupi in the Udupi district of Karnataka to a Kannada family.He was influenced by Gandhi's principles and took part in Indian Independence movement while he was in college. He did not complete his education and went to participate in the Non-cooperation movement and canvassed for khadi and swadeshi for five years up to 1927. By that time Karanth had already started writing fiction-detective novels, to begin with as well as plays.
Karanth was an intellectual and environmentalist who tremendously contributed to art and culture of Karnataka. He is considered one of the greatest novelist in Kannada. Apart from his 47 novels, he also wrote 31 plays, four short stories, six books of essays and sketches, thirteen books on art, 2 volumes of poems, 9 encyclopedias, and 100+ of articles on various issues and subjects, including a history of world art in Kannada and a work on Chalukyan sculpture and architecture, a standard treatise on the Yakshagana (with which dramatic form, his name is identified), a three volume book of knowledge for children, a four volume encyclopedia on science for grown ups, 240 children's books, six books on travel, two books on birds, three Travelogues, an autobiography.
He has received several literary awards,.Namely, Jnanpith Award, Padma Bhushan, Sahitya Academy award and Pampa Award.
He passed away on 9th December 1997 in Manipal, Karnataka.
ಕಾರಂತರ ಎಂದಿನ ಶೈಲಿಯ ಬರವಣಿಗೆಗಿಂತ ವಿಭಿನ್ನವಾಗಿ ಈ ಪುಸ್ತಕ ಮೂಡಿಬಂದಿದೆ. ಇಲ್ಲಿನ ನಿರೂಪಣೆ ಒಂದು comical ಶೈಲಿಯಲ್ಲಿದ್ದು ನನಗಂತೂ ನಮ್ಮದೇ ಗ್ರಾಮ ಅಥವಾ ಪೇಟೆಗಳಲ್ಲಿ ಸರ್ವೇ ಸಾಮಾನ್ಯವಾಗಿ ಕಾಣುವ ವಿಭಿನ್ನ ವ್ಯಕ್ತಿತ್ವದ ವ್ಯಕ್ತಿಗಳ ಪರಿಚಯ ಇನ್ನೊಮ್ಮೆ ಆಯ್ತು ಅಂತ ಎನ್ನಿಸಿತು. ನವಿರಾದ ನಿರೂಪಣೆಯ ಜೊತೆಗೆ ಕೆಲವೆಡೆ ಹಾಸ್ಯದ ಜೊತೆಗೆ ವ್ಯಂಗ್ಯವೂ ಸೇರಿದ್ದು ನನಗೆ ಯಾವುದೊ ರಂಗಮಂದಿರದಲ್ಲಿ ಕುಳಿತು ಒಂದು ಸೊಗಸಾದ ನಾಟಕವನ್ನು ನೋಡಿ ಅನುಭವಿಸಿದ ಅದ್ಭುತ ಅನುಭವ ನೀಡಿತು.
ಇಲ್ಲಿ ಕೆಲವ ವ್ಯಕ್ತಿ ಪರಿಚಯವಲ್ಲದೆ ಆಗಿನ ಕಾಲದ ಜನರ ದ್ವೇಷಾಸುಯೆ, ಆದರೌದಾರ್ಯಗಳ ಪರಿಚಯವೂ ಸೇರಿದೆ. ಅದರ ಜೊತೆಗೇ ಆಗಿನ ಕಾಲದಲ್ಲಿ ಇದ್ದಂತಹ ಸಾಮಾಜಿಕ ಸ್ಥಿತಿಗಳ ಕುರಿತು ಸೂಕ್ಷ್ಮವಾಗಿ ವಿವರಿಸಿದ್ದಾರೆ. ಹಾಗೆಯೇ ಆಗಿನ ಕಾಲಕ್ಕೆ ಹೋಲಿಸಿದರೆ ಈಗಿನ ಕಾಲಘಟ್ಟದಲ್ಲಿ ನಮ್ಮ ವ್ಯಕ್ತಿತ್ವ, ಮನಸ್ಥಿತಿ ಅಥವಾ ಸಾಮಾಜಿಕ ಸ್ಥಿತಿಗಳಲ್ಲಿ ಅಷ್ಟಾಗಿಯೇನು ಬದಲಾವಣೆಗೊಂಡಿಲ್ಲ! ಅದೇ ದ್ವೇಷ, ಅದೇ ಸಣ್ಣತನ, ಅದೇ ಒಣ ಪ್ರತಿಷ್ಠೆ, ಅದೇ ಸ್ವಾರ್ಥ, ಅದೇ ದಳ್ಳುರಿಗಳು ಎಂದಿಗೂ ಮಾನವನ ಅವಿಭಾಜ್ಯ ಅಂಗಗಳಾಗಿರುತ್ವೆ ಅಷ್ಟೇ!
ಕಾರಂತರು ತಮ್ಮ ಹಳ್ಳಿಯ ಕೆಲವು ವಿಶಿಷ್ಟ ವ್ಯಕ್ತಿಗಳು ಅವರ ಜೀವನ, ದಿನಚರಿಗಳು ಉಳಿದವರಿಗಿಂತ ಹೇಗೆ ಭಿನ್ನ ಎಂಬುದನ್ನು ತಿಳಿಸಿದ್ದಾರೆ. ಗೋರೂರರ "ನಮ್ಮ ಊರಿನ ರಸಿಕರು" ಪುಸ್ತಕ ಒಮ್ಮೆಲೆ ನೆನಪಾಗುವಂತೆ ತಮ್ಮ ನೂರು ವರ್ಷದ ಹಿಂದಿನ ಹಳ್ಳಿ ಜನರು, ಜೀವನ, ಪರಿಸ್ಥಿತಿ ಎಲ್ಲವು ಕಾರಂತರ ಬರವಣಿಗೆಯಲ್ಲಿ ಓದುದೆ ಚಂದ..
ಕಥೆ-ಕಾದಂಬರಿ ಜಾಸ್ತಿ ಇಷ್ಟವಾಗುವ ನನಗೆ ಈ ತರ ಲಲಿತ ಪ್ರಬಂಧಗಳು ನನ್ನ ಅಭಿರುಚಿಗೆ ಕೊಂಚ ವಿರುದ್ಧವಾದುದೆನ್ನುವುದು ನನ್ನ ಮಿತಿ ಅಷ್ಟೇ..
ನಾವೆಲ್ಲರೂ ಭಾರತದ ಗ್ರಾಮಗಳಲ್ಲಿರುವ ಮನುಷ್ಯ ವರ್ಗಕ್ಕೆ ಸೇರಿದವರು. ಎಲ್ಲ ಜಾತಿಯವರಲ್ಲೂ ಕಾಣಿಸ ಬಹುದಾದ ಒಳಿತು, ಕೆಡಕುಗಳು ಇಲ್ಲಿವೆ ಎಂಬುದು ಅವರ ಮಾತು. ಒಳಿತು, ಸರಳತೆ, ಪ್ರಾಮಾಣಿಕತೆ - ಯಾರಲ್ಲಿದ್ದರೂ ಮಾನ್ಯ. ಕುಟೀಲತೆ, ಕಪಟ, ವಂಚನೆ ಯಾರಲ್ಲಿದ್ದರೂ ಅಮಾನ್ಯವೇ ಎನ್ನುತ್ತಾ, ತಾವು ಬದುಕಿದ ಕಾಲಘಟ್ಟದ ಗ್ರಾಮೀಣ ಬದುಕುಗಳನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಸೀತೈತಾಳರು, ನಾಗಯ್ಯ ಶೆಟ್ಟರು, ಜನ್ನ ಪೈಗಳು, ಮೀಸೆ ಸುಬ್ಬ, ಮೊಗೇರ ಅಣ್ಣ, ಅಕ್ಕಸಾಲಿ ತಿಮ್ಮಪ್ಪ, ಪಾಟಾಳಿ ಪರಮಯ್ಯ, ಅಕ್ಕಣಿ ಹೆಂಗಸು, ಚನ್ನ ಮಯ್ಯರು, ಗಾಣದ ಸಂಕಪ್ಪ, ಶ್ಯಾನುಭಾಗ ಭವಾನಿರಾಯರು, ಕೂಸ ಮಡೂರ, ಜುವಾಂ ಸೋಜರು, ಮೂಸೆ ಬ್ಯಾರಿ, ರೂರಲ್ ಆಸ್ಪತ್ರೆ ರಾಮರಾಯರು, ಪ್ರಸ್ತಾವನೆ ಅಥವಾ ಚುನಾವಣೆ ಹೀಗೆ 16 ಹರಟೆಗಳಿವೆ.
ಸ್ವಾತಂತ್ರ್ಯ ಪೂರ್ವದಲ್ಲೇ ಪ್ರಕಟವಾದ (1944) ಈ ಕೃತಿಯಲ್ಲಿ, ಮತ ಚಲಾವಣೆ, ಅಧಿಕಾರ , ರಾಜಕೀಯ ಹೇಗೆ ಜನಗಳ ಮನಸ್ಥಿತಿ ಯನ್ನು ಹಾಳುಮಾಡಿ ಐಕ್ಯತೆ ಯನ್ನು ಛಿದ್ರಗೊಳಿಸುತ್ತದೆ ಎಂದು ಸೂಕ್ಷ್ಮವಾಗಿ ಹೇಳಿದ್ದಾರೆ. ಕಥೆ ಓದಿ ಮುಗಿಸಿದ ನಂತರ ಒಂದು ಒಳ್ಳೆಯ ಅನುಭವ. ನಮ್ಮ ಸ್ನೇಹಿತರಲ್ಲೂ ಇಲ್ಲಿರುವ ಪಾತ್ರಗಳನ್ನು ನಮಗೇ ಗೊತ್ತಿಲ್ಲದಂತೆ ಕಾಣಬಹುದು.
ಈ ಕೃತಿಯು 1940ರ ದಶಕದ ಹಳ್ಳಿಯ ಜೀವನವನ್ನು ಚಿತ್ರಿಸುವ ಪ್ರಯತ್ನ ಮಾಡಿದೆ. ಸುಮಾರು ಹದಿನೈದು ವಿಭಿನ್ನ ವ್ಯಕ್ತಿಗಳ ಬದುಕಿನ ಕಥೆಗಳನ್ನು ಹೇಳುವ ಪುಸ್ತಕವಾಗಿದೆ. ಪಾತ್ರಗಳ ವ್ಯಕ್ತಿತ್ವ, ಅವರ ನಡವಳಿಕೆ, ಮಾನಸಿಕ ಸ್ಥಿತಿ, ಸಮಾಜದ ಮೇಲಿನ ಪ್ರಭಾವ ಮತ್ತು ಇತರರೊಂದಿಗಿನ ಸಂಬಂಧಗಳನ್ನು ವಿವರಿಸಲಾಗಿದೆ. ಆದರೆ ನನಗೆ ಈ ಕೃತಿಯ ಭಾಷೆ ತುಂಬಾ ಕಷ್ಟಕರವಾಗಿತ್ತು - ಹಳೆಯ ಕಾಲದ ಅನೇಕ ಪದಗಳು ಮತ್ತು ಅಭಿವ್ಯಕ್ತಿಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಯ್ತು.
ಕೆಲವು ಪಾತ್ರಗಳು ಮಾತ್ರ ನನಗೆ ಆಸಕ್ತಿದಾಯಕವಾಗಿ ಕಂಡವು. ಬಹುಪಾಲು ಹಳ್ಳಿಯ ಸಾಮಾಜಿಕ ಚಿತ್ರಣ ಮತ್ತು ಪಾತ್ರಗಳ ವಿಶ್ಲೇಷಣೆಯನ್ನು ಒಳಗೊಂಡಿದ್ದರೂ, ಕಥೆಯಲ್ಲಿ ವಿಶೇಷವಾಗಿ ಉಲ್ಲೇಖಿಸಬಹುದಾದ ಘಟನೆಗಳಿಲ್ಲ. ನನಗೆ ಅರ್ಥವಾಗದ ಪದಗಳಿದ್ದುದರಿಂದ ಹಲವು ಭಾಗಗಳನ್ನು ಓದದೆ ಬಿಡಬೇಕಾಯಿತು. ಆಧುನಿಕ ಓದುಗನಾಗಿ, ಆ ಕಾಲದ ಹಳ್ಳಿ ಜೀವನದ ಚಿತ್ರಣ ಕುತೂಹಲಕಾರಿಯಾದರೂ, ಭಾಷೆಯ ಅಡೆತಡೆಯು ಕೃತಿಯ ಸಂಪೂರ್ಣ ಅನುಭವಕ್ಕೆ ತೊಡಕಾಗಿ ನಿಂತಿತು.