Jump to ratings and reviews
Rate this book

ಚಂದ್ರಗಿರಿಯ ತೀರದಲ್ಲಿ | Chandragiriya Teeradalli

Rate this book
ಲೇಖಕಿ ಸಾರಾ ಅಬೂಬಕ್ಕರ್ ಅವರ ಮೊದಲ ಕಾದಂಬರಿ- ಚಂದ್ರಗಿರಿಯ ತೀರದಲ್ಲಿ. ಈ ಕಾದಂಬರಿ ಪ್ರಕಟವಾಗಿ ಈಗ 25 ವರ್ಷಗಳು.
ಚಂದ್ರಗಿರಿ ಮತ್ತು ನೇತ್ರಾವತಿ ನದಿಗಳ ಚಿತ್ರಣ, ಅದರೊಂದಿಗೆ ಮುಸ್ಲಿಂ ಮಹಿಳೆಯರು ಸಾಗಿಸಿದ ಬದುಕು. ಅನೇಕ ದಮನಿತ ಮಹಿಳೆಯರ ಧ್ವನಿಗಳಿಗೆ ಇಲ್ಲಿ ಅರ್ಥ ನೀಡಿದ್ದಾರೆ.

200 pages, Unknown Binding

First published January 1, 1981

21 people are currently reading
162 people want to read

About the author

Sara Aboobacker

5 books5 followers
Sara Aboobacker (30 June 1936 – 10 January 2023) was an Indian Kannada writer of novels and short stories, and a translator.

Sara was born in Kasaragod, Kerala on 30 June 1936, to Pudiyapuri Ahmad and Zainabi Ahmad. She had four brothers. She was one of the first girls in her community of Muslim families in Kasaragod to be educated, graduating from a local Kannada school. She was married after school, and went on to have four sons. Aboobacker once stated that her desire to further her education was constrained by community norms that restricted female access to higher education, and that she was only able to obtain a library membership in 1963.

Sara's books largely focus on the lives of Muslim women living in the Kasaragod region, bordering the Indian states of Kerala and Karnataka. She focuses on issues of equality and injustice within her community, critiquing patriarchal systems within religious and familial groups. Her writing style is direct and simple, and she has stated that she prefers a realist approach to literature, prioritizing the expression of social concerns over stylistic embellishments. Her books have dealt with complex subjects such as marital rape, communal and religious violence, and individual autonomy.

In 1981, Aboobacker published her first article, an editorial on communal harmony, in a local monthly Kannada-language magazine, Lankesh Patrike. Following this she began writing stories and novels, focusing on her own community, the Beary people, a Muslim community living across parts of the Indian states of Karnataka and Kerala.

Aboobacker is most well-known for her first novel, Chandragiriya Theeradalli (1981), which was later translated into English by Vanamala Vishwanatha as Breaking Ties and into Marathi by Shivarama Padikkal in 1991. The novel was initially published in serialised form in a local monthly magazine, Lankesh Patrike, and later republished as a novel. It focuses on the life of Nadira, a young Muslim woman attempting to assert independence first from her father, and later, from her husband. Chandragiriya Theeradalli and Vrajagalu (1988) have been adapted for the theatre.

From 1994, Aboobacker has been publishing her works under her own publication company, Chandragiri Prakashan.

Aboobaker has translated into Kannada books by T. V. Eachara Warrier, Kamala Das and B. M. Suhara.[3]

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
24 (29%)
4 stars
39 (48%)
3 stars
12 (14%)
2 stars
2 (2%)
1 star
4 (4%)
Displaying 1 - 14 of 14 reviews
Profile Image for ವಿಧಿ.
20 reviews11 followers
January 18, 2023
ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದ ಲೇಖಕಿ, ತಮ್ಮದೇ ಸಮುದಾಯದಲ್ಲಿ ಇದ್ದಂತಹ ಒಂದು ವಿಚಿತ್ರ ಪದ್ಧತಿ ತಲಾಕ್ ಕುರಿತು ಬರೆದಿರುವ ಕಥೆಯೇ ಚಂದ್ರಗಿರಿಯ ತೀರದಲ್ಲಿ. ಕಥೆ ಒಮ್ಮೆ ನಮ್ಮನ್ನು ನೈಜತೆ ಗೆ ಕರೆದುಕೊಂಡು ಹೋಗಿ ಮುಟ್ಟುವಲ್ಲಿ ಯಶಸ್ವಿಯಾಗಿದೆ. ಆದರೆ ಅಂತ್ಯ ಓದುವಾಗ ನಾವೇನಾದರೂ ಅಂತಹ ಸ್ಥಿತಿಯಲ್ಲಿ ಇದ್ದರೆ ಹೇಗಿರುತ್ತದೆ ಎಂದು ಯೋಚಿಸುವುದು ಸಹ ಕಷ್ಟವಾಗಿ ಹೋಗುತ್ತದೆ.
ಇನ್ನೊಂದು ಕಥೆ ತಾವೇ ಶಾಲೆ ಕಲಿತ ಕಥೆಯನ್ನು ಬರೆದಿದ್ದಾರೆ. ಅನೇಕ ವಿಶ್ವ ವಿದ್ಯಾಲಯದ ಪದವಿ ಶಿಕ್ಷಣದ ಕನ್ನಡ ಪಠ್ಯ ಪುಸ್ತಕದಲ್ಲಿ ಈ ಕಥೆ ಇದೆ. ಒಟ್ಟಾರೆ ಒಮ್ಮೆ ಓದಲೇ ಬೇಕಾದಂತಹ ಪುಸ್ತಕ.
ಧನ್ಯವಾದಗಳು.
Profile Image for Gowthami.
31 reviews7 followers
February 16, 2025
ಪುರುಷ ಪ್ರಧಾನ ಸಮಾಜ ನಮ್ಮದು . ನಮ್ಮದು ಎಂದರೆ ? ಒಂದೇ ದೇಶಕ್ಕೆ ಸೀಮಿತವ ? ಒಂದೇ ಧರ್ಮಕ್ಕೆ ಸೀಮಿತವ? ಅಲ್ಲವೇ ಅಲ್ಲ . ಇಡೀ ಲೋಕ ಬಹುಪಾಲು ಪುರುಷ ಪ್ರಧಾನದ್ದೇ ಆಗಿದೆ .ಎಷ್ಟೋ ವಿಷಯಗಳಲ್ಲಿ, ಧರ್ಮಗಳಲ್ಲಿ , ಆಚರಣೆಗಳಲ್ಲಿ ಹೆಣ್ಣು ಮಕ್ಕಳಿಗೆ ಸಮನಾದ ಅವಕಾಶಕೊಡದೇ, ಅವಳ ಆಸೆ ಆಕಾಂಕ್ಷೆಗಳನ್ನು ಅದುಮಿಸಿಟ್ಟು, ಅವಳ ಭಾವನೆಗಳನ್ನೂ ಸಹ ವ್ಯಕ್ತಪಡಿಸಲು ಆಗದ ಸ್ಥಿತಿಗೆ ತಲುಪಿಸಿ,  ಮೌನದಿಂದಲೆ ಎಲ್ಲವನ್ನೂ ಸಹಿಸಲು ಕಲಿಸಿ " ಗಟ್ಟಿಗಿತ್ತಿ " , " ದಯಾಮಯಿ" , "ಕ್ಷಮಯಾ ಧರಿತ್ರಿ" , " ತ್ಯಾಗಮಯಿ " , " ಸಹನಾಮೂರ್ತಿ " ಎಂಬೆಲ್ಲಾ ಹಣೆ ಪಟ್ಟಿ ಕೊಟ್ಟು ಅವಳ ಬಾಯಿ, ಕೈ - ಕಾಲು ಕಟ್ಟಿದ್ದು ಇದೆ ಪು(ಪೌ)ರುಷ ಸಮಾಜವೇ ಅಲ್ಲವೇ ?

ಇಂತಹ ಪುರುಷಪ್ರಧಾನದ ಬೆನ್ನೆಲುಬಾವುದು? 
ಹೆಣ್ಣನ್ನು ಗಂಡಸಿನ ಮುಷ್ಟಿಯಲ್ಲಿಡುವ ಸಲುವಾಗಿ ಹೊಸದಾಗಿ ಸೃಷ್ಟಿಸಿ ತಂದ, ಯಾವುದೇ ಹುರುಳಿಲ್ಲದ ನಿಯಮಗಳಿಗೆ " ಧರ್ಮ ಪಾಲನೆ" ಎಂದು ನಾಮಕರಣ ಮಾಡಿ ಅದರ ಛಾಟಿ ಗಂಡಸಿನ ಕೈಗೆ ಕೊಟ್ಟಿದ್ದು.
ಧರ್ಮದಲ್ಲಿರುವ ಎಲ್ಲಾ ಆಚರಣೆ, ನಿಯಮಗಳನ್ನು ನಾನು ಹೀಗಳೆಯುತ್ತಲಿಲ್ಲ, ಆದರೆ ಹೆಣ್ಣನ್ನು ಜೀವವಿರುವ ಬೊಂಬೆಯಂತೆ " ಹೀಗೆ ಇರಬೇಕು ಹಾಗೆ ಇರಕೂಡದು , ಇದನ್ನ ಒಪ್ಪಲೇಬೇಕು ಪ್ರಶ್ನಿಸುವ ಹಕ್ಕಿಲ್ಲ" ಎಂದು ಒಂದು ಸಾವಿರ ಗಟ್ಟಲೆ ಷರತ್ತು ವಿಧಿಸಿ, ಗಂಡು ಏನು ಮಾಡಿದರೂ ನಡೆಯುತ್ತದೆ ಎಂಬ ತಾರತಮ್ಯಕ್ಕೆ ಮಾತ್ರ ನನ್ನ ಅಸಹನೆ, ಈ ತ್ರಿವಳಿ ತಲಾಖ್ ಎಂಬುದೂ ಸಹ ಆ ಪಟ್ಟಿಗೆ ಸೇರಿದ್ದು .

ಈಗಿನ ಕಾಲಕ್ಕೆ ಸಮವಾದ ಶಿಕ್ಷಣ , ಕೆಲಸ ಇತ್ಯಾದಿ ದೊರೆತಿರುವುದರಿಂದ ಸ್ವಲ್ಪ ಹೆಣ್ಣಿಗೂ ಮನ್ನಣೆ ದೊರೆತಿದೆ ಮತ್ತು ಹಲವು ಗಂಡಸರ ಆಲೋಚನೆಗಳೂ ಸಹ ಬದಲಾಗುತ್ತಿರುವ ಕಾಲಮಾನದಲ್ಲಿ ಹೆಣ್ಣು ಅಲ್ಪ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವ ಹಾಗಾಗಿದೆ.  ಆದರೆ ಹೆಣ್ಣಿನ ಕಲಿಕೆ, ಜ್ಞಾನ ಸಂಪಾದನೆಯ ಹಕ್ಕನ್ನು ಕಸಿದು ಅವಳನ್ನು "ಅನಕ್ಷರಸ್ಥಳಾಗಿ" ಮಾಡಿದ ಕಾಲದಲ್ಲಿ ಅವಳ ಗತಿ?

ಹೆಣ್ಣಿನ ಅಸಹಾಯಕತೆ , ನೋವು , ತನ್ನವರ ಮೇಲಿನ ಒಲವು , ಸಂಕಟ , ಜ್ಞಾನದ ಕೊರತೆ, ಅಧೈರ್ಯ, ಪರವಾಲಂಬನೆ ಹಾಗೂ ಗಂಡಸರ ದ್ವೇಷ , ರೋಷ , ದುಡುಕುತನ, ಹೇಡಿತನ , ತಿಳಿ(ಯ)ದವರು ತಪ್ಪಾಗಿ ಗ್ರಹಿಸಿ,  ರೂಪಿಸಿದ ಧರ್ಮ ವ್ಯವಸ್ಥೆ ಹೇಗೆ ಹೆಣ್ಣನ್ನು ಹಿಂಸಿಸುತ್ತದೆ ಎಂಬುದನ್ನು ಫಾತಿಮಾ , ನಾದಿರ, ಮುಹಮ್ಮದ್, ರಶೀದ್ ಪಾತ್ರಗಳ ಮುಖಾಂತರ ಕಟ್ಟಿಕೊಟ್ಟಿದ್ದಾರೆ ಲೇಖಕಿ .

ಒಮ್ಮೆ ಓದಲೇ ಬೇಕಾದ ಕೃತಿಯಿದು ಈಗ ತಲಾಖ್ ಪದ್ಧತಿ ಇಲ್ಲದೆ ಇದ್ದರೂ ಸಹ ಅದರಿಂದ ನೊಂದ ಮನಸ್ಸುಗಳ ಸ್ಮರಣೆ ಒಮ್ಮೆ ಆಗಲಿ .

- ಪುಸ್ತಕ_ಭೃತ
Profile Image for Vasanth.
104 reviews21 followers
July 28, 2024
ಈ ಜಾತಿ, ಜನಾಂಗ ಅಥವಾ ಧರ್ಮದ ಕುರಿತಾದ ವಿಷಯಗಳು ಬಹಳ ಸೂಕ್ಷ್ಮ. ಎಂತಹವರಲ್ಲೂ ಬಹು ಬೇಗ ಒಡಕು ಮೂಡಿಸುವ ಚರ್ಚೆಗೀಡು ಮಾಡುವ ಶಕ್ತಿಯುಳ್ಳವು ಆ ಸೂಕ್ಷ್ಮ ವಿಷಯಗಳು, ಎಷ್ಟೋ ಬಾರಿ ಪ್ರಜ್ಞಾಪೂರ್ವಕವಾಗಿ ನಾನು ಪುಸ್ತಕ ಪರಿಚಯಿಸುವಾಗ ಅಂತಹ ವಿಷಯಗಳನ್ನು ಕಡೆಗಣಿಸಿದ್ದೇನೆ. ಇಂದು ಅದು ಸಾಧ್ಯವಿಲ್ಲ, ಕಾರಣ ನಾನು ಇಂದು ಪರಿಚಯಿಸಲಿರುವ ಪುಸ್ತಕ ಮತ್ತು ಅದರಲ್ಲಿನ ವಿಷಯ. ಈ ಜಾತಿ ಅಥವಾ ಧರ್ಮಗಳು ವಿಧಿಸಿರುವ ನಿಯಮಗಳು ಒಮ್ಮೊಮ್ಮೆ ವಿಪರೀತವೆನಿಸುತ್ತದೆ, ಕೆಲವು ನಿಯಮಗಳನ್ನು ಅನುಸರಿಸಿಕೊಂಡು ಹೋಗಬೇಕೆ ಹೊರತು ಪ್ರಶ್ನಿಸಲಾಗದು. ಇಸ್ಲಾಂ ಧರ್ಮದ ಆ ರೀತಿಯ ಒಂದು ನ್ಯಾಯಯುತವಲ್ಲದ ನಿಯಮವಾದ “ತಲಾಖ್” ಕುರಿತಾದ ಕೃತಿ ಡಾ। ಸಾರಾ ಅಬೂಬಕ್ಕರ್ ಅವರ “ಚಂದ್ರಗಿರಿ ತೀರದಲ್ಲಿ”.

ಎಂಭತ್ತನೇ ದಶಕದಲ್ಲಿ ಹೊರಬಂದಿರುವ ಕೃತಿಯಿದು, ಆ ಸಮಯದಲ್ಲಿನ ತನ್ನದೇ ಧರ್ಮದ ನಿಯಮಗಳ ಉಕ್ಕಿನ ಕೋಟೆಯಲ್ಲಿ ಬಂಧಿತಳಾಗಿ, ಅವುಗಳ ಕೋಟಲೆಯಿಂದ ತನ್ನ ಜೀವನ ಮತ್ತು ಜೀವವನ್ನೇ ಅರ್ಪಿಸಿಕೊಂಡ ಒಬ್ಬ ಮುಸಲ್ಮಾನ್ ಮಹಿಳೆಯ ಹೃದಯ ಹಿಂಡುವಂತಹ ವೇದನೆಯ ಕತೆ ಇಲ್ಲಿದೆ. ಭಾರತದಲ್ಲಿ ತ್ರಿವಳಿ ತಲಾಖ್ ನಿಷೇಧ ಕಾಯ್ದೆ ಜಾರಿಗೊಂಡಿರುವುದು ಎಲ್ಲರಿಗೂ ತಿಳಿದಿರುವಂತಹ ವಿಷಯವೇ. ಈ ಕುರಿತಾದ ಪ್ರಕರಣಗಳು ಇಳಿಕೆಯಾಗಿರುವುದನ್ನೂ ಕೇಳಿದ್ದೇವೆ ಆದರೆ ಪೂರ್ಣಪ್ರಮಾಣದಲ್ಲಿ ನಿಷೇಧವಾದಂತಿಲ್ಲ. “ವಾಟ್ಸಾಪ್ ವಾಯ್ಸ್ ನೋಟ್ ಮೂಲಕ ಪತ್ನಿಗೆ ತ್ರಿವಳಿ ತಲಾಖ್, ವರದಕ್ಷಿಣೆಯಾಗಿ ಕಾರು ಕೊಡದಿದ್ದಕ್ಕೆ ಮದುವೆಯಾದ ಎರಡೇ ಗಂಟೆಯೊಳಗೆ ಹೆಂಡತಿಗೆ ತಲಾಖ್” ಎನ್ನುವ ಅತಿರೇಕದ ಸುದ್ದಿಗಳನ್ನು ಆಗೊಮ್ಮೆ ಈಗೊಮ್ಮೆ ಕೇಳಿಬರುತ್ತಿರುತ್ತವೆ. ಇದಕ್ಕೆಲ್ಲ ಕೊನೆಯೆಂದೋ ತಿಳಿಯದು. ಮುಸ್ಲಿಂ ಸಮಾಜ ಇಂತಹ ವಿಷಯಗಳಲ್ಲಿ ಎಚ್ಚರಗೊಂಡು ಪ್ರಗತಿಹೊಂದಿರುವುದನ್ನೂ ಕಡೆಗಣಿಸುವಂತಿಲ್ಲ, ನಾಲ್ಕು ಜನರ ತಪ್ಪಿಗೆ ಇಡೀ ಧರ್ಮವನ್ನೇ ದೂರುವುದು ತರವಲ್ಲ ಎನಿಸುತ್ತದೆ.

ಓದುಗನಾಗಿ ನಾನು ಕೇವಲ ತಲಾಖ್ ಎನ್ನುವ ಈ ಅಮಾನುಷ ನಿಯಮದ ನಿಲುವಿನಲ್ಲಷ್ಟೇ ಕಾದಂಬರಿಯನ್ನು ಓದಲಿಲ್ಲ, ಕಾರಣ ಈ ಪುಸ್ತಕ ಕೇವಲ ಧರ್ಮ ವಿಧಿಸಿರುವ ನಿಯಮದ ಕೋಟಲೆಗಳ ಕುರಿತಾದದಲ್ಲ. ಬದಲಾಗಿ ನ್ಯಾಯಯುತವಲ್ಲದ ನಿಯಮಗಳಿಂದ ಶೋಷಣೆಗೊಳಗಾದ ಅಸಂಖ್ಯ ಮಹಿಳೆಯರ ಅಂತರಂಗದ ಆರ್ತನಾದವನ್ನು ತಿಳಿಸುವಂತದ್ದು. ನಿಯಮಗಳನ್ನು ಪ್ರಶ್ನಿಸಲಾಗದೆ ಅವುಗಳಿಗೆ ತಲೆಯೂ ಬಾಗದೆ ತನ್ನನ್ನು ತಾನು “ಅರ್ಪಿಸಿಕೊಂಡ” ನಾದಿರಾ ಅದೆಷ್ಟೋ ಹೆಣ್ಣುಗಳ ಪ್ರತೀಕವಾಗಿ ಉಳಿಯುತ್ತಾಳೆ.
Profile Image for Skanda Prasad.
69 reviews2 followers
July 6, 2023
"ಅರಳಿ ನಳನಳಿಸಬೇಕಾಗಿದ್ದ ಹೂವೊಂದು ಧರ್ಮದ ಉರಿ ತಾಕಿ, ಬಾಡಿ ಬಸವಳಿದು ಸುಟ್ಟು ಕರಕಲಾಯಿತು" ಇದು ಕಾದಂಬರಿಯ ಸಾರಾಂಶ. ಮುಸ್ಲಿಂ ಸಮಾಜ ಹೆಣ್ಣು ಮಕ್ಕಳನ್ನು ಧರ್ಮವೆಂಬ ಪರದೆಯೊಳಗೆ ಪರಿಧಿ ಹಾಕಿ ಎಷ್ಟು ಕತ್ತಲಲ್ಲಿ ಕೂಡಿಸಿಟ್ಟಿದ್ದಾರೆ ಎಂಬುದನ್ನು ಸ್ವತಃ ಬವಣೆ ಪಟ್ಟ ಸಾರಾ ಅಬೂಬಕ್ಕರ್ ಅವರು ನೈಜವಾಗಿ ಮನಸ್ಸಿಗೆ ನಾಟುವಂತೆ ಬರೆದಿದ್ದಾರೆ. ಮುಸ್ಲಿಂ ಸಮಾಜದ ಹೆಣ್ಣು ಮಕ್ಕಳು, ಗಂಡು ಮಕ್ಕಳೆಲ್ಲಾ ಓದಲೇ ಬೇಕಾದ ಕಥನವಿದು.

ಕಾದಂಬರಿಯ ಶುರುವಲ್ಲಿ ಆಭಾಸವಾದಂತೆ ಅನಿಸಿದ್ದು ಶುದ್ಧ ಕನ್ನಡ ಭಾಷಾ ಬಳಕೆ. ಏಕೆಂದರೆ ಇಷ್ಟೊಂದು ಸುಲಲಿತವಾಗಿ ಕನ್ನಡ ಮಾತಾಡುವ ಮುಸ್ಲಿಮರು ನಮ್ಮ ಸುತ್ತಮುತ್ತ ಇರುವುದು ಸುಳ್ಳು?. ಏಕೆಂದರೆ ವಿದ್ಯಾಭ್ಯಾಸಕ್ಕೆ ಧರ್ಮವನ್ನು ತಂದು ಸರಿಯಾದ ಶಿಕ್ಷಣವಿಲ್ಲದೆ ಭಾಷೆಯ ಹಿಡಿತವಿಲ್ಲದೆ ಹಿಂದಿ, ಉರ್ದು, ಮಲಯಾಳ, ಬ್ಯಾರಿ ಮುಂತಾದ ಅವರವರ ಸುತ್ತಮುತ್ತಲಿನ ಪರಿಸರಕ್ಕನುಗುಣವಾಗಿ ಕನ್ನಡವನ್ನು ಕಲಸು ಮೇಲೋಗರವಾಗಿ ಮಾಡಿ ಮಾತನಾಡುವುದನ್ನು ನಮ್ಮ ಸುತ್ತ ಮುತ್ತಲಿನ ಮುಸ್ಲಿಮರಲ್ಲಿ ಕಾಣಬಹುದು. ಆದರೆ ಕಾದಂಬರಿಯ ಲೋಕದೊಳಗೆ ಒಮ್ಮೆ ನಮ್ಮನ್ನು ಮುಳುಗಿ ತೆಗೆದ ಮೇಲೆ ಲೇಖಕರು ಕಾದಂಬರಿಯ ಪಾತ್ರಗಳ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯವನ್ನು ಅವಡುಗಚ್ಚಿ ನಿಸ್ಸಾಹಯಕರಾಗಿ ಓದುವಂತೆ ಮಾಡುತ್ತಾರೆ. ಮುಸ್ಲಿಂ ಹೆಣ್ಷು ಮಕ್ಕಳಲ್ಲಿ ಇನ್ನಷ್ಟು ಧೈರ್ಯ, ದಿಟ್ಟತನವನ್ನು ನೀಡುವಂತೆ ದೇವರಲ್ಲಿ ಪ್ರಾರ್ಥಿಸಲಷ್ಟೇ ನಾವು ಶಕ್ತರು.
Profile Image for ಸುಶಾಂತ ಕುರಂದವಾಡ.
420 reviews24 followers
June 27, 2023
ಪುಸ್ತಕ: ಚಂದ್ರಗಿರಿಯ ತೀರದಲ್ಲಿ
ಲೇಖಕರು: ಸಾರಾ ಅಬೂಬಕ್ಕರ್

ಸಾರಾ ಅಬೂಬಕ್ಕರ್ ಅವರ ಪುಸ್ತಕ ಇದೇ ಮೊದಲ ಬಾರಿಗೆ ಓದುತ್ತಿರುವುದು. ಇತ್ತೀಚಿಗೆ ಅವರು ನಿಧಾನವಾದ ತರುವಾಯ ಅವರ ಪುಸ್ತಕಗಳನ್ನು ಓದಬೇಕೆಂಬ ತವಕ ಇನ್ನೂ ಹೆಚ್ಚಾಗಲು ಅವರ ಮೊದಲ ಕಾದಂಬರಿಯನ್ನು ಓದಲು ಮುಂದಾದೆ. ಮುಸ್ಲಿಂ ಮಹಿಳೆಯರ ಜೀವನದ ಬಗ್ಗೆ ಧ್ವನಿ ಎತ್ತಿ, ಅವರಿಗೆ ನ್ಯಾಯ ಒದಗಿಸಲು ಮುಂದಾದ ಧೀರರು ಸ��ರಾ ಅಬೂಬಕ್ಕರ್. ತಮ್ಮ ಕುಟುಂಬದಲ್ಲಿ ಮತ್ತು ತಾವು ಬೆಳೆದ ಪರಿಸರದಲ್ಲಿಯ ಅರ್ಥರಹಿತ ಪದ್ಧತಿಗಳ ವಿರುದ್ಧ ನಿರಂತರವಾಗಿ ಹೋರಾಡಿದವರು.
ಪ್ರಸ್ತುತ ಕಾದಂಬರಿಯಲ್ಲಿ ಮುಸ್ಲಿಂ ಕುಟುಂಬದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ಬರೆಯಲಾಗಿದೆ. ಚಂದ್ರಗಿರಿ ನದಿಯ ದಡದ ಸಮೀಪದಲ್ಲಿ ಮೊಹಮ್ಮದ್ ಖಾನರ ಕುಟುಂಬ ನೆಲೆಸಿತ್ತು. ತೀರಾ ಬಡತನವೂ ಅಲ್ಲದೆ, ಸಿರಿವಂತರೂ ಅಲ್ಲದೆ ಮೂರು ಹೊತ್ತಿಗೆ ಊಟ ಮಾಡುವಂತಹ ಕುಟುಂಬದ ಅವರದು. ಮೂಲ ಕಸುಬು ಬೀಡಿ ಕಟ್ಟುವುದಾಗಿದ್ದರಿಂದ ದಿನವೂ ಕೆಲಸ ಮಾಡಲೇಬೇಕು, ವಾರಕ್ಕೊಮ್ಮೆ ಕೊಟ್ಟು ಬರಬೇಕು ಅಂತಹ ಕೆಲಸ. ಮೊದಲಿನಿಂದಲೂ ಅವರದು ಮುಂಗೋಪದ ಸ್ವಭಾವ ಮತ್ತು ತನ್ನದೇ ನಡೆಯಬೇಕೆಂಬ ಸ್ವಾರ್ಥ ಬದುಕು. ಇಂತಹವರಿಗೆ ಸರಳ ಮತ್ತು ಕೋಮಲಸ್ವಭಾವದ ಫಾತಿಮಾ ಮಡದಿಯಾಗುತ್ತಾಳೆ. ಮದುವೆಯ ಮೊದಲದಿನವೇ ಖಾನರ ಕರಾಳ ರೂಪದ ಅನುಭವವಾಗುತ್ತದೆ. ಅಂದಿನಿಂದ ಫಾತಿಮಾ ತನ್ನ ಗಂಡನೆದುರು ವಾದಿಸದೆ ಎಲ್ಲದಕ್ಕೂ ತಲೆ ಕೆಳಗೆ ಹಾಕಿಕೊಂಡು ಜೀವನ ನಡೆಸಲು ಪ್ರಾರಂಭಿಸುತ್ತಾಳೆ. ಪುಣ್ಯಕ್ಕೆ ಖಾನರು ತನ್ನ ಪತ್ನಿಯ ವಿನಃ ಅನ್ಯ ಹೆಣ್ಣುಮಕ್ಕಳ ಮೇಲೆ ಕಣ್ಣು ಹಾಕುತ್ತಿರಲಿಲ್ಲ. ಅದೊಂದೇ ಫಾತಿಮಾಳ ಅದೃಷ್ಟ
ದಂಪತಿಗಳಿಗೆ ನಾದಿರಾ ಮತ್ತು ಜಮೀಲಾ ಎಂಬ ಎರಡು ಹೆಣ್ಣು ಮಕ್ಕಳಾಗುತ್ತವೆ. ಅವು ತಾಯಿಯಂತೆಯೇ ಅಷ್ಟೇನೂ ವಿದ್ಯಾಭ್ಯಾಸ ಮಾಡದೆ, ಬೀಡಿ ಕಟ್ಟುವ ಕೆಲಸಕ್ಕೆ ತಾಯಿಯ ಸಂಗಡ ಸೇರಿಕೊಳ್ಳುತ್ತಾರೆ. ಚಂದ್ರಗಿರಿಯ ಈ ಊರಿನಲ್ಲಿ ಹೆಚ್ಚು ಕಡಿಮೆ ಎಲ್ಲ ಮನೆಯಲ್ಲಿ ಇದೇ ಕಥೆಯಾಗಿರುತ್ತದೆ. ನಾದಿರಾಳ ಮದುವೆ ಚಂದ್ರಗಿರಿ ನದಿಯ ಇನ್ನೊಂದು ತೀರದ ಊರಿನಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದ ರಶೀದನೊಂದಿಗೆ ಮಾಡಿಕೊಡುತ್ತಾರೆ. ರಶೀದ್ ಆ ಊರಿನಲ್ಲಿ ತನ್ನ ತಾಯಿಯೊಂದಿಗೆ ಸುಖದಿಂದಿದ್ದವ. ನಾದಿರಾಳ ಆಗಮನದ ತರುವಾಯ ಆ ಸುಖ ಇಮ್ಮಡಿಯಾಯಿತು. ನಾದಿರಾ ತನ್ನ ತಂದೆಯಿಂದ ಪಂಜರದಲ್ಲಿರಿಸಿದ ಪಕ್ಷಿಯಾಗಿದ್ದವಳು ರಶೀದ್ ಜೊತೆಹೊಂದಿ ಸ್ವತಂತ್ರ ಪಕ್ಷಿಯಾಗಿದ್ದಳು. ಅತ್ತೆ ಮತ್ತು ಗಂಡನ ಕುಶಲೋಪರಿ ನೋಡಿಕೊಳ್ಳುತ್ತ ಹಾಯಾಗಿ ಸಮಯ ಕಳೆಯುತ್ತಿರುವಾಗ ಅವಳು ಗರ್ಭವತಿಯಾಗುತ್ತಾಳೆ. ತವರುಮನೆಯಲ್ಲಿದ್ದು ಬಾಣಂತನ ಮುಗಿಸಿ, ತಾಯಿ ಎಷ್ಟು ಕೇಳಿಕೊಂಡರೂ ಅವಳಿಗೆ ತನ್ನ ಗಂಡನನ್ನು ಬಿಡಲಾಗದೆ ಮೂರನೆಯ ತಿಂಗಳಿಗೆ ಅತ್ತೆಮನೆ ಸೇರುತ್ತಾಳೆ. ರಶೀದನ ಪ್ರೀತಿ ಅವಳನ್ನು ಮೋಡಿ ಮಾಡಿರುತ್ತದೆ. ಅಪ್ಪನ ಮನೆಯಲ್ಲಿ ಉಸಿರು ಬಿಗಿಹಿಡಿದು ಇರುವು, ಗಂಡನ ಮನೆಯಲ್ಲಿ ಯಥೇಚ್ಛವಾಗಿ ಇರುವುದರ ನಡುವೆ ಅಜಗಜಾಂತರ ವ್ಯತ್ಯಾಸ.
ಖಾನರ ಎರಡನೆಯ ಮಗಳು ಜಮೀಲಾ ಮದುವೆಯ ವಯಸ್ಸಿಗೆ ಬರುತ್ತಾಳೆ. ಗಂಡಿನ ಕಡೆಯವರು ಬಯಕೆಯ ಮುಂದೆ ಖಾನರು ಸಣ್ಣವರಾಗಿ ಹೋಗುತ್ತಾರೆ. ಅಲ್ಲೊಇಲ್ಲೊ ಹುಡುಕಿ ಕೊನೆಗೆ ಸ್ವಲ್ಪ ಹಣ ಸಂಪಾದಿಸುತ್ತಾರೆ ಆದರೆ ಅದು ಕಮ್ಮಿಯೇ. ಅದಕ್ಕಾಗಿ ತಮ್ಮ ಅಳಿಯ ರಶೀದನನ್ನು ಕೇಳಲು ಹೊರಡುತ್ತಾರೆ. ಆದರೆ ಅಲ್ಲಿ ಅವರ ನಡುವೆ ವೈಮನಸ್ಯ ಉಂಟಾಗಿ ಖಾನರು ರಶೀದ್ ತನ್ನ ಅಳಿಯನೇ ಅಲ್ಲ ಎಂಬಂತೆ ಅವನನ್ನು ತರಾಟೆಗೆ ತೆಗೆದುಕೊಂಡು ಜನರ ಮುಂದೆ ಅವನಿಗೆ ಅವಮಾನ ಮಾಡುತ್ತಾರೆ. ಅಷ್ಟಕ್ಕೇ ಮುಗಿಸದೆ ಅವನ ಮನೆಗೆ ಹೋಗಿ ನಾದಿರಾಳನ್ನು ಕೂಸಿನ ಸಮೇತ ತಮ್ಮ ಮನೆ ಸೇರುತ್ತಾರೆ. ಮಾವನ ಸ್ವಭಾವವನ್ನು ಅರಿತ ರಶೀದ್ ಮಾವನ ಜೊತೆ ರಾಜಿ ಮಾಡಿಕೊಳ್ಳಲು ಮನಸ್ಸು ಮಾಡುವುದಿಲ್ಲ. ಇನ್ನು ಈ ಕಡೆ ನಾದಿರಾ ಅಲ್ಲಿದ್ದಾಗ ಕಣ್ಣೇರು ಸುರಿಸದ ದಿನವೇ ಇಲ್ಲವಾಯಿತು. ಜಮೀಲಾಳ ಮದುವೆ ಸಮೀಪಿಸಿದಾಗ ತನ್ನ ತಂದೆ ಗಂಡನನ್ನು ಮದುವೆಗೆ ಆಹ್ವಾನಿಸುತ್ತಾರೆ ಅಂತ ನಾದಿರಾ ತಿಳಿಯುತ್ತಾಳೆ ಆದರೆ ಖಾನರಿಗೆ ಆ ಸಮಯದಲ್ಲಿ ರಶೀದನ ಮೇಲಿನ ಕೋಪ ಬೆಟ್ಟದಷ್ಟಾಗಿರುತ್ತದೆ. ತಂಗಿಯ ಮದುವೆಯಲ್ಲಿ ಚುರುಕಾಗಿ ಅಡ್ಡಾಡಬೇಕಾದ ನಾದಿರಾ ಒಂದು ಮೂಲೆಯಲ್ಲಿ ಕೂಸಿನ ಸಮೇತ ಕುಳಿತಿರುತ್ತಾಳೆ. ಇದಾದಮೇಲೆ ರಶೀದ್ ನಾದಿರಾಳನ್ನು ಅಲ್ಲಿಂದ ಓಡಿ ಬಾ ಎಂದು ಎಷ್ಟು ಕೇಳಿದರೂ ನಾದಿರಾ ಧರ್ಮದ ಕಾರಣಕ್ಕೆ ಮನೆಯಲ್ಲೇ ಉಳಿಯುತ್ತಾಳೆ.
ಜಮೀಲಾ ಗಂಡನ ಮನೆ ಸೇರಿದಮೇಲೆ ಮನೆಯಲ್ಲಿ ನಾದಿರಾ ಬೀದಿ ಕೆಲಸದಲ್ಲಿರುವಾಗ ಒಂದು ದಿನ ಅವಳ ಅತ್ತೆ ಅಮೀರಮ್ಮ ಬರುತ್ತಾರೆ, ಬಂದು ಹೇಳದೆ ಕೇಳದೆ ಮೊಮ್ಮಗನನ್ನು ತಗೊಂಡು ಹೋಗಿ ಬಿಡುತ್ತಾರೆ. ಮೊಮ್ಮಗ ಹೋದಮೇಲೆ ಖಾನರ ಮನಸ್ಸು ತಿರುಗಿ ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಡಬಹುದೆಂದು ರಶೀದ್ ಲೆಕ್ಕ ಹಾಕಿರುತ್ತಾನೆ ಆದರೆ ಅದು ತಲೆ ಬುಡವಾಗುತ್ತದೆ. ಹೆಂಡತಿ ಮತ್ತು ಮಗನ ವಿಚಾರದಲ್ಲಿ ದಿನ ಕಳೆದಂತೆ ಕೃಶವಾಗುತ್ತಾ ಹೋಗುತ್ತಾನೆ.
ಮನೆಯಲ್ಲಿ ನಾದಿರಾ ಇರುವುದನ್ನು ಕಂಡು ಖಾನರಿಗೆ ಅವಳಿಗೊಂದು ನೆಲೆ ದೊರಕಿಸಿಕೊಡಬೇಕೆಂದು ನಿರ್ಧರಿಸಿ ಅಲ್ಲೇ ಸಮೀಪದ ಗೃಹಸ್ಥರಿಗೆ ಇನ್ನೊಂದು ಮದುವೆ ಮಾಡಲು ನಿರ್ಧರಿಸುತ್ತಾರೆ ಆದರೆ ಅದಕ್ಕೆ ಮೊದಲು ರಶೀದನಿಂದ ತಲಾಕ್ ಬೇಕು. ಅದಕ್ಕೆಂದು ಅವನಿಗೆ ಏನೋ ಸುಳ್ಳು ಹೇಳಿ ತಲಾಕ್ ತೆಗೊಂಡು ನಾದಿರಾಳ ಇನ್ನೊಂದು ಮದುವೆಗೆ ಪ್ರಯತ್ನ ಪಡುತ್ತಾರೆ. ಆದರೆ ಎಷ್ಟು ಪ್ರಯತ್ನ ಪಟ್ಟರೂ ನಾದಿರಾ ಮದುವೆಗೆ ಒಪ್ಪಿಕೊಳ್ಳುವುದಿಲ್ಲ. ಕೊನೆಗೆ ತಾವೇ ಸೋತು ರಶೀದನ ಜೊತೆಗೆ ಮರುವಿವಾಹ ಮಾಡಲು ನಿಶ್ಚಯಿಸಿ ಇಬ್ಬರನ್ನೂ ಒಪ್ಪ್ಪಿಸುತ್ತಾರೆ ಆದರೆ ಈ ಸಲ ಅವರಿಗೆ ಮುಳುವಾಗಿದ್ದು ಧರ್ಮವೆಂಬ ಕೋಟೆ. ಮರುವಿವಾಹವಾಗಲು ಕನ್ಯೆಯು ಬೇರೆಯವರೊಂದಿಗೆ ಮದುವೆಯಾಗಿ ಒಂದು ರಾತ್ರಿ ಅವರೊಂದಿಗೆ ಕಳೆದು ಮತ್ತೆ ಮದುವೆ ಆಗಬಹುದೆಂದು. ಇದು ನಾದಿರಾಳಿಗೆ ಅಸಾಧ್ಯವೆನಿಸುತ್ತದೆ. ಹೇಗೋ ಅವಳನ್ನು ಅವಳತ್ತೆ ತಾಯಿ ತಂದೆ ಒಪ್ಪಿಸಿ ದೂರದ ಊರಿನ ಒಬ್ಬ ಕುರೂಪ ವರವನ್ನು ತರುತ್ತಾರೆ. ಇವನೊಂದಿಗೆ ತಾನು ರಾತ್ರಿ ಕಳೆಯಬೇಕೆ ಅಂತ ಮನಸ್ಸಿನಲ್ಲಿ ಯೋಚಿಸಿ ನಾದಿರಾ ಚಂದ್ರಗಿರಿ ನದಿವಶವಾಗುತ್ತಾಳೆ.
ಕಾಸರಗೋಡು ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುವ ಈ ಕಥಾವಳಿ ಮುಸ್ಲಿಂ ಹೆಣ್ಣುಮಕ್ಕಳ ಪರಿಸ್ಥಿತಿ ಹೇಗೆ ಚಿಂತಾಜನಕವಾಗಿರುತ್ತದೆ ಎಂದು ತಿಳಿಸಿಕೊಡುತ್ತದೆ. ಈ ಕಾದಂಬರಿಯನ್ನು ಓದಿದಾಗ ಆ ಹೆಣ್ಣು ಮಕ್ಕಳ ಕಣ್ಣಲ್ಲಿಯ ದುಃಖದ ಛಾಯೆ, ಏನೂ ಮಾಡಲಾಗದ ಅಸಹಾಯಕತೆ ಎತ್ತಿ ತೋರಿಸುತ್ತವೆ. ಕಾದಂಬರಿಯ ಮುಖಾಂತರ ಲೇಖಕರು ಆ ಶೋಷಿತ ಹೆಣ್ಣುಮಕ್ಕಳ ಧ್ವನಿಯಾಗಿದ್ದಾರೆ. ಹಾಗೆಯೇ ಒಬ್ಬ ಸ್ವಾರ್ಥಿಯ ಬದುಕು ತನ್ನದಷ್ಟಲ್ಲದೆ ತನ್ನ ಸುತ್ತಲಿನ ಜನರನ್ನು ಹೇಗೆ ಘಾಸಿಗೊಳಿಸಬಲ್ಲದು ಎಂದು ಕಂಡುಬರುತ್ತದೆ.
114 reviews
December 29, 2023
Breaking ties shows us the reality of this community. Its a sad read though but we cant just move our face away from this. Nothing has been changed so far. Hope better sense prevail. Go for it.
Profile Image for Bhavani.
14 reviews39 followers
February 2, 2025
Read the Tamil translation, published by Her stories, சந்திரகிரி ஆற்றங்கரையில், translated by தி.சு. சதாசிவம்.
9 reviews2 followers
June 22, 2025
A very good book to understand the impact of Talaq and other religious practices on women
9 reviews
December 13, 2022
I actually read this book because it was one of my course books but i decided to do a review on this one because this is how much it impacted me and how much it furiated me. I can't stress enough the fact that I was literally enraged throughout the whole read time.

The book was originally penned down in Kannada as Chandragiri Teeradalli and I read the translated version of it.

It is an extremely short novel and can be read at once. The novel blankets relatively sensitive topics like teen talak, miserable condition of women, unbearable inequality that exists in the society, doing injustice in the name of holy book, objectifying women, male dominance,marital rape, child marriage and domestic violence.


The protagonist of the book is Nadira, just another suppressed women in Muslim majority who had to suffer at the hands of her own father.

FATIMA, the mother of Nadira and excessively submissive woman who went through domestic violence, never spoke up for herself or her children who even witnessed her daughter getting devastated at the suffering caused by her own father and did absolutely nothing except consoling her.

What annoys me the most is that how helpless and dependent the women are shown in the book where women were let down by the male majority but were also equally suppressed by the females who opted not to do anything against that inhumane treatment, who forced their own daughter to follow the same path as they were once forced on.


One line that really pierced right through my heart was set on the first night of the marriage where the man forced himself onto a child who didn't know even the M of marriage let alone sex and her condition was highlighted by enunciating:

"By the time he was finished she had died a thousand deaths."

I really urge you all to read this novella atleast once to look deeper into these aspects.
Displaying 1 - 14 of 14 reviews

Can't find what you're looking for?

Get help and learn more about the design.