ಇದೊಂದು ಹವನ ಎಂಬ ತಾಂಡಾದ ಕಥೆ... ಇಲ್ಲಿ ಒಂದು ಸಮುದಾಯದ ಹುಟ್ಟು, ಅದರ ಇತಿಹಾಸ, ಅದರ ಪಾಡು, ಅದರ ಆಚಾರ ವಿಚಾರಗಳನ್ನು ವಿಶ್ಲೇಷಿಸಿ, ಆಧುನಿಕತೆಯ ಕರಾಳ ಛಾಯೆಗೆ ಬಿದ್ದು ಅವನತಿಯ ಕಡೆಗೆ ಹೊರಳುವ ಮನ ಮುಟ್ಟುವ ವಸ್ತುವನ್ನು ಕಟ್ಟಿ ಕೊಟ್ಟಿದ್ದಾರೆ ಲೇಖಕರು... ಬೇವಿನ ಮರದ ಜಾಗದಲ್ಲಿ ಆಡಿ ಬೆಳೆದ ಎಷ್ಟೋ ಹಿರಿ ಜೀವಗಳು ಅಲ್ಲಿ ಒಂದು ಕರೆಂಟ್ ಕಂಬ ಬಂದದ್ದು ನೋಡಿ ದುಃಖಿಸುವ, ಅದೇ ವಿಚಾರಕ್ಕೆ ತಮ್ಮ ಸಾಧನೆ ಎಂದು ಸಂಭ್ರಮಿಸುವ ಇನ್ನೊಂದು ಪೀಳಿಗೆಯ ಮನಸ್ಥಿತಿಯನ್ನು ರೂಪಕವಾಗಿ ಕಟ್ಟಿಕೊಟ್ಟಿದ್ದಾರೆ...