ಕೋಲಾರ ವೆಂಕಟೇಶ್ ಅಯ್ಯರ್ ಇವರು ೧೮೯೮ರಲ್ಲಿ ಕೋಲಾರ ಜಿಲ್ಲೆಯ ದೇವರಾಯಸಮುದ್ರದಲ್ಲಿ ಜನಿಸಿದರು. ಇವರ ಕಾವ್ಯ ನಾಮ, 'ಕೆ.ವಿ. ಅಯ್ಯರ್' ಎಂದು. ಇವರ ಓದು ಕೇವಲ ಎಸ್.ಎಸ್.ಎಲ್.ಸಿ ವರೆಗೆ ಮಾತ್ರ. ಕೆ.ವಿ.ಅಯ್ಯರರವರು ನವೋದಯದ ಮಹತ್ವದ ಸಾಹಿತಿಗಳು.ನಾಟಕದಲ್ಲಿ ಆಸಕ್ತಿ ಹೊಂದಿದ ಇವರು "ರವಿ ಕಲಾವಿದರು" ಎನ್ನುವ ಒಂದು ನಾಟಕ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಅಲ್ಲದೆ ಅಂಗಸಾಧನೆಯಲ್ಲಿ ಸಹ ಇವರು ಆಸಕ್ತರು. ತಾವೇ ಒಂದು ವ್ಯಾಯಾಮ ಶಾಲೆಯನ್ನು ಸಹ ನಡೆಯಿಸುತ್ತಿದ್ದರು ಟಿ.ಪಿ.ಕೈಲಾಸಂಈವ್ಯಾಯಾಮಶಾಲೆಗೆ ಬಂದು ಮಾರ್ಗದರ್ಶನ ನೀಡಿದ್ದಿದೆ. ಅನುವಾದ ನಾಟಕಗಳು ಪ್ರಜಾಪ್ರಗತಿ.(ಇಬ್ಸೆನ್ ನಾಟಕ) ಪತಿಯ ಕೈಗೊಂಬೆ.(ಇಬ್ಸೆನ್ ನಾಟಕ) ಮಹಾಶಿಲ್ಪಿ.(ಇಬ್ಸೆನ್ ನಾಟಕ) ವರಪರೀಕ್ಷೆ.(ಆಲಿವರ್ ಗೋಲ್ಡ್ ಸ್ಮಿತ್ ನಾಟಕ) ಕಾದಂಬರಿಗಳು ಶಾಂತಲಾ, ರೂಪದರ್ಶಿ, ಲೀನಾ, ಕಥಾ ಸಂಕಲನ ಸಮುದ್ಯತಾ (ಕಥೆಗಳು), ಮಹಾಶಿಲ್ಪ. ವರಪರೀಕ್ಷೆ. ಇತರೆ:-ಕೈಲಾಸಂ ಅವರ ಸ್ಮರಣಿ. ಪ್ರಶಸ್ತಿ, ಪುರಸ್ಕಾರಗಳು ೧೯೭೯ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಯ ಗರಿ. ೧೯೯೪ರಲ್ಲಿ ‘ಪ್ರೊ. ಕೆ.ವಿ. ಅಯ್ಯರ್’ ಸಂಸ್ಮರಣ ಗ್ರಂಥ ಪ್ರಕಟಣೆ. ನಿಧನ ಶ್ರೀ. ಕೆ.ವಿ.ಅಯ್ಯರ್, ನಮ್ಮನ್ನಗಲಿದ್ದು ೩.೧.೧೯೮೦ರಲ್ಲಿ.
ಕೈಲಾಸಂ ಎಂದರೆ ಅವರ ನಾಟಕಗಳ ಆಡುಮಾತಿನಂತಹ ಸಂಭಾಷಣೆ, ಅವರ ಬಗೆಗಿನ ಕಥೆಗಳು ನೆನಪಿಗೆ ಬರುತ್ತವೆ. ಈ ಪುಟ್ಟ ಪುಸ್ತಕ ಅವರನ್ನು ಹತ್ತಿರದಿಂದ ಕಂಡ ಕೆ.ವಿ.ಅಯ್ಯರ್ ಅವರು ಬರೆದದ್ದು. ತಾವು ಮೊದಲು ಅವರ ಕಂಡ ಘಟನೆ ಸಹಿತವಾಗಿ ಅವರ ದಿನಚರಿಯನ್ನು ,ಒಡನಾಟವನ್ನೂ ಕಣ್ಣಿಗೆ ಕಟ್ಟುವಂತೆ ವರ್ಣಿಸಿ ಬರೆದ ರೀತಿ ಚಂದ. ಓದುವಾಗ ನಮಗೆ " ಛೇ " ಎಂಬಷ್ಟು ವಿಷಾದವಾಗುತ್ತದೆ.
'ಕೈಲಾಸಂ ಜೋಕ್ಸೂ ಸಾಂಗ್ಸೂ ' ಪುಸ್ತಕ ಓದಿದವರಿಗೆ ಅವರ ಬಗ್ಗೆ ತಿಳಿದೇ ಇರುತ್ತದೆ. ಆ ಅಪಾರ ಹಾಸ್ಯಪ್ರಜ್ಞೆಯ ಹಿಂದಿನ ನೋವು ಕಾಡುತ್ತದೆ.
ಈ ಪುಸ್ತಕಕ್ಕೆ ಡಿ.ವಿ.ಜಿ. ಅವರು ಬರೆದ ಉತ್ಕೃಷ್ಟ ಮುನ್ನುಡಿಯಿದೆ. ಒಳ್ಳೆಯ ಬದುಕಿಗೆ ಸಹೃದಯ ವ್ಯಕ್ತಿಯೊಬ್ಬ ಬರೆದ ಭಾಷ್ಯದಂತಿದೆ ಅದು.
ವಿಷಾದದ ಸಂಗತಿ ಎಂದರೆ ರವಿ ಬೆಳಗೆರೆ ತನ್ನ ಖಾಸ್ಬಾತ್ ಒಂದರಲ್ಲಿ ಕೈಲಾಸಂ ಬಗ್ಗೆ ತೀರಾ ಕೆಟ್ಟದಾಗಿ ಬರೆದದ್ದು. ಕಂಡದ್ದೆಲ್ಲ ಅನೈತಿಕವೆಂಬಂತೆ ಚಿತ್ರಿಸುವ ಆ ಬರಹ ಕೀಳು ಅಭಿರುಚಿಯದಾಗಿ ನನ್ನ ಘಾಸಿಗೊಳಿಸಿತ್ತು.
ನವಕರ್ನಾಟಕ ಮಂಗಳೂರಲ್ಲಿ ಕೇವಲ ನಲವತ್ತೈದು ರೂಪಾಯಿಗೆ ಇದರ ಪ್ರತಿಗಳ ಲಭ್ಯತೆ ಇದೆ. ಓದಿ ನೋಡಿ.