Jump to ratings and reviews
Rate this book

ಒಂದು ಆನೆಯ ಸುತ್ತ | ondu aaneya sutta

Rate this book

Unknown Binding

Loading...
Loading...

About the author

Girimane Shyamarao

28 books13 followers
ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪತ್ನಿ ಶಶಿಕಲಾ ಹಾಗು ಪುತ್ರ ಚೇತನ್ ಶರ್ಮ. ಕೃಷಿಕನಾಗಿ 35 ವಸಂತಗಳ ಸುದೀರ್ಘ ಅನುಭವವಿದೆ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದಾರೆ. ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ಪ್ರಕಾರಗಳಲ್ಲಿ ಓದುಗರಿಗೆ ಮೆಚ್ಚುವಂತಹ 26ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಗಿರಿಮನೆ ಪ್ರಕಾಶನ ಮೂಲಕ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
6 (31%)
4 stars
11 (57%)
3 stars
1 (5%)
2 stars
1 (5%)
1 star
0 (0%)
Displaying 1 - 5 of 5 reviews
Profile Image for Soumya.
229 reviews52 followers
September 14, 2020
ಮಲೆನಾಡಿನ ರೋಚಕ ಕಥೆಗಳು ಭಾಗ 5 - ಒಂದು ಆನೆಯ ಸುತ್ತ.

ಪುಸ್ತಕದ ಕೊನೆಯಲ್ಲಿ ನಂಗೆ ಗೊತ್ತಿಲ್ಲದ ಹಾಗೆ 4 ಹನಿ ಕಣ್ಣೀರು ಬಂತು.
ಮನುಷ್ಯ ಸ್ವಾರ್ಥ ಜೀವಿ. ಜಗತ್ತಿನ ಎಲ್ಲ ಸೃಷ್ಟಿನೂ ತನ್ನದು ಅನ್ನೋ ಅಹಂ ಅವ್ನಿಗೆ . ಉಳಿದ ಪ್ರಾಣಿ ಪಕ್ಷಿಗಳು ಕೂಡ ತನ್ನ ಹಾಂಗೆ ಅನ್ನೋ ಪರಿಕಲ್ಪನೆ ದಿನೇ ದಿನೇ ಕಮ್ಮಿ ಆಗ್ತಾ ಇದೆ.
ಪಶ್ಚಿಮ ಘಟ್ಟ ಈಗ ಬೋಳಮ್ಮಜ್ಜಿ ತಲೆ ತರ ಆಗ್ತಾ ಇದೆ. ಇದರ ಪರಿಣಾಮವಾಗಿ ಅಲ್ಲಿರೋ ಎಷ್ಟೋ ಪ್ರಾಣಿ ಪಕ್ಷಿಗಳು ತಮ್ಮ ನೆಲೆ ಕಳ್ಕೊಂಡ್ ನಾಡಿನತ್ತ ಬರ್ತಾ ಇವೆ.
ಈ ಒಂದು ಅಂಶ ಇಟ್ಕೊಂಡ್ ಬರ್ದಿರೋ ಕಾಲ್ಪನಿಕ ಕಥೆಯೇ ಒಂದು ಆನೆಯ ಸುತ್ತ.
ಚೆನ್ನಾಗಿದೆ.
Profile Image for Adarsh ಆದರ್ಶ.
117 reviews26 followers
May 3, 2022
ಗಿರಿಮನೆ ಶ್ಯಾಮರಾವ್ ಅವರ ಪುಸ್ತಕಗಳು ಓದೋದು ಅಂದ್ರೇನೆ ದಟ್ಟ ಪಶ್ಚಿಮಘಟ್ಟದ ಕಾನನದ ಮಧ್ಯೆ ಸಾಗುವ ಅನುಭವ. ಆನೆಗಳನ್ನ ನೋಡದೆ ಅತವಾ ಕೇಳದೇ ಇರುವವರು ತುಂಬಾ ಕಡಿಮೆ ಇರ್ತಾರೆ.. ಅವುಗಳ ಬಗ್ಗೆ ಆಸಕ್ತಿ ಇರುವವರು ಇನ್ನೂ ಕಡಿಮೆ. ನನ್ನ ಮಟ್ಟಿಗೆ ಆನೆಗಳು ಎಂದರೆ ಕೇವಲ ಒಂದು ದೈತ್ಯ ಪ್ರಾಣಿ ಅಷ್ಟೇ ಆಗಿರದೆ ಪರಿಸರ ವ್ಯಸ್ಥೆಯ (Ecosystem) ಒಂದು ಅವಿಭಾಜ್ಯ ಅಂಗ. ಆನೆಗಳು ಒಂದು ರೀತಿಯ ಪರಾಗಸ್ಪರ್ಶ ಕ್ರಿಯೇ Elephophily(Pollination) ಮಾಡುವ ಮೂಲಕ ಕಾಡಿನ ಅಭಿವೃದ್ದಿಗೆ ಕಾರಣವಾಗುತ್ತವೆ. ಅಂತ ಆನೆಗಳ ಸಂತತಿ ಇಂದು ಹೇಳಹೆಸರಿಲ್ಲದಂತೆ ಆಗುತ್ತಿವೆ.
ಒಂದು ಆನೆಯ ಸುತ್ತ ಪುಸ್ತಕ ಮಾನವ ಆನೆಯ ಸಂಘರ್ಷದ ಒಂದು ಸಣ್ಣ ಇಣುಕು ನೋಟ ಅಷ್ಟೇ. ಹೇಗೆ ಒಂದು ಆನೆಯ ದಾಳಿ ಆ ಊರಿನ ಜನರ ಮತ್ತು ಆನೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದರ ಸುತ್ತ ಸುತ್ತುತ್ತದೆ. ಅಂತ್ಯ ಸ್ವಲ್ಪ ಬೇಸರ ತರಿಸುತ್ತದೆ
ಬಿಡದೆ ಓದಿಸಿಕೊಂಡು ಹೋಯಿತು..
A Goodread..
Profile Image for Prabhosha Acharya.
23 reviews5 followers
February 28, 2021
ಪುಸ್ತಕದ ಹೆಸರೇ ಹೇಳುವಂತೆ ಇದು ಒಂದು ಆನೆಯ ಸುತ್ತ ಬರೆದಿರುವ ಕಥೆ. ತನ್ನ ಮನೆ, ಜಾಗ ಎಲ್ಲವೂ ಮನುಷ್ಯನ ಸ್ವಾರ್ಥಕ್ಕೆ ಬಲಿಯಾಗುತ್ತಿರುವಾಗ ಆ ಕಾಡು ಪ್ರಾಣಿ ತಾನೇ ಎಲ್ಲಿಗೆ ಹೋಗ್ಬೇಕು. ತಿಳಿದೋ ತಿಳಿಯದೆಯೋ ಊರಿಗೆ ಬರುವ ಆನೆ. ಅದ್ರಿಂದ ಕಷ್ಟ ಅನುಭವಿಸುವ ಜನರು ಎಲ್ಲವನ್ನೂ ಲೇಖಕರು ತುಂಬಾ ಚೆನ್ನಾಗಿ ವಿವರಿಸಿದ್ದಾರೆ. ಕೊನೆಕೊನೆಗೆ ಮನುಷ್ಯ ತಾನು ಮಾಡುವ ಹಾಗೂ ಮಾಡಿದ ಎಲ್ಲ ಕಾರ್ಯಕ್ಕೂ ಆ ಮೂಕ ಪ್ರಾಣಿಯನ್ನೆ ಕಾರಣ ಮಾಡೋದು ಏಷ್ಟು ವಿಚಿತ್ರ ಅನ್ಸತ್ತೆ. ಬಿಂದು ಮತ್ತು ಜಗದಲೆ ಪಾತ್ರ ಇಷ್ಟ ಆಗತ್ತೆ. ಮಲೆನಾಡಿನ ಕಾಡು ಅದರ ಸೊಬಗು ಚೆನ್ನಾಗಿ ಮೂಡಿ ಬಂದಿದೆ. ಆದ್ರೆ ಕೊನೆಯಲ್ಲಿ ಓದುಗನ ಕಣ್ಣಿಂದ ಒಂದು ಹನಿ ನೀರು ಜಾರುವುದಂತು ಖಂಡಿತ. ಮನಸು ಭಾರ ಅನ್ನಿಸದೇ ಇರಲಾರದು. ಆನೆಗೆ ಇರುವಷ್ಟು ಮನುಷ್ಯತ್ವ ಮನುಷ್ಯನಿಗೆ ಇಲ್ಲ.
25 reviews
April 28, 2026
ಪುಸ್ತಕದ ಹೆಸರೇ ಹೇಳುವಂತೆ, ಇದು ನಮ್ಮ ಪಶ್ಚಿಮ ಘಟ್ಟದ ಒಂದು ಪುಟ್ಟ ಗ್ರಾಮದಲ್ಲಿ ಒಂದು ಒಂಟಿ ಸಲಗದ ಸುತ್ತ ನಡೆಯುವ ಕಥಾಸರಣಿ. ಕಾಲ್ಪನಿಕ ಕಥೆ ಆದರೂ, ನಿಜ ಘಟನೆಗಳಿಂದ ಪ್ರೇರಿತ — ನಮ್ಮ ಮಲೆನಾಡಿನ ನಿತ್ಯ ಜೀವನದ ಪ್ರತಿಬಿಂಬ.

ಈ ಭೂಮಿಯಲ್ಲಿ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ಹಾಳು ಮಾಡ್ತಾ ಬದುಕ್ತಾ ಇರೋದು ಮನುಷ್ಯ ಮಾತ್ರ. ತನ್ನ ಮನೆಯಷ್ಟೇ ಅಲ್ಲ, ಈ ಭೂಮಿಯಲ್ಲಿ ಇರುವ ಬೇರೆ ಪ್ರಾಣಿ-ಪಕ್ಷಿಗಳ ಬದುಕನ್ನೂ ದುಸ್ತರ ಮಾಡ್ತಾ ಇರೋದು ಸತ್ಯ.
ದಿನದಿಂದ ದಿನಕ್ಕೆ ಜಾಸ್ತಿ ಆಗ್ತಾ ಇರೋ ಜನಸಂಖ್ಯೆನ ನಿಯಂತ್ರಣ ಮಾಡದೆ, ಈ ಭೂಮಿಲಿ ನಮಗಿಂತಲೂ ಮುಂಚೆನೇ ಇದ್ದಿರೋ ಸಂಪನ್ಮೂಲನೆಲ್ಲಾ ದೋಚಿ, ಬೇರೆ ಜೀವಿಗಳಿಗೂ ಬದುಕೋಕೆ ಆಗದೆ ಇರೋ ವಾತಾವರಣ ಸೃಷ್ಟಿಸಿ ಬಿಟ್ಟಿದಾನೆ. ಅದರಲ್ಲಿ ಮೊದಲ ಪ್ರಾಣಿ ಬಹುಶಃ ಆನೆ ಮತ್ತೆ ಈಗ ಚಿರತೆ ಕೂಡ ಅದೇ ಸಾಲಿಗೆ ಸೇರಿದೆ.

ಈ ಕಥೆ ಆನೆಗಳ ಜೀವನಶೈಲಿ, ಅವು ಎದುರಿಸುವ ಸಮಸ್ಯೆಗಳು, ಮತ್ತು ಮನುಷ್ಯರಿಂದ ಅದಿಕ್ಕೆ ಆಗುವ ಹಾನಿಯನ್ನು ವಿವರವಾಗಿ ಹೇಳಿದೆ. ಜೊತೆಗೆ, ಪಶ್ಚಿಮ ಘಟ್ಟದಲ್ಲಿ ನಡೆಯುತ್ತಿರುವ ಪ್ರಕೃತಿ ನಾಶ, ಅಪರೂಪದ ಪ್ರಾಣಿಗಳ ಹತ್ಯೆ, ಮತ್ತು ಅರಣ್ಯದಲ್ಲಿ ನಡೆಯುತ್ತಿರುವ ಕಾಳದಂಧೆಗಳ ಬಗ್ಗೆ ಲೇಖಕರು ಬೆಳಕು ಚೆಲ್ಲುತ್ತಾರೆ.

"ಮಲೆನಾಡಿನ ಕಥೆಗಳು" ಈ series ಕನ್ನಡ ಓದುಗರಿಗೆ, ನಮ್ಮದೇ ಆದ ಪಶ್ಚಿಮ ಘಟ್ಟದಲ್ಲಿ ನಡೆಯುವ ಆಘಾತಕಾರಿ ಪ್ರಕೃತಿ ನಾಶವನ್ನು ಓದೋರಿಗೆ ಮನಸ್ಸಿಗೆ ಮುಟ್ಟಿ ತರ ಬರೆದು ಜಾಗೃತಿ ಮೂಡಿಸುವ ಕೆಲಸ ಮಾಡ್ತಾ ಇದಾರೆ.

ಎಲ್ಲರೂ ಒಮ್ಮೆ ಓದಲೇ ಬೇಕಾದ ಪುಸ್ತಕ!
Profile Image for Nishchita.
15 reviews4 followers
January 21, 2023
ಪುಸ್ತಕದ ಶಿರ್ಷಿಕೆಯೇ ಹೇಳುವಂತೆ ಒಂದು ಆನೆಯ ಸುತ್ತ ನಡೆಯುವಂತಹ ಕಥೆ. ವನ್ಯಜೀವಿ ಮತ್ತು ಮಾನವ ಸಂಘರ್ಷದ ವಿಷಯವೇ ಈ ಕಾದಂಬರಿಯ ಕಥಾವಸ್ತು. ಇತ್ತಿಚಿನ ವರ್ಷಗಳಲ್ಲಿ ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಅನುಭವಿಸುತ್ತಿರುವ ಸಮಸ್ಯೆ ಇದು. ಆನೆಗಳು ಬಂದು ತೋಟಗಳನ್ನು ಹಾಳು ಮಾಡುವುದು ಹಾಗೆ ಮನುಷ್ಯರ ಸಾವು ಆನೆಗಳಿಂದ ಸಂಭವಿಸುತ್ತಿರುವುದು ಇಂದಿನ ಸಮಸ್ಯೆ. ಇದಕ್ಕೆ ಕಾರಣ ಮನುಷ್ಯನೇ. ಮನುಷ್ಯನಿಂದನೇ ಉದ್ಭವಿಸಿದ ಸಮಸ್ಯೆ ಇದು. ಲೇಖಕರು ತುಂಬಾ ಚೆನ್ನಾಗಿ ಆನೆಗಳ ಬಗೆಗೆ ತಿಳಿಸಿಕೊಡುತ್ತಾ ಆನೆ ಯಾಕೆ ಹೀಗೆಲ್ಲಾ ಮಾಡುತ್ತದೆ ಎನ್ನುವುದನ್ನು ಹೇಳಿದ್ದಾರೆ. ಪಶ್ಚಿಮ ಘಟ್ಟಗಳನ್ನು ಉಳಿಸಲು ,ಎಲ್ಲರಿಗೂ ತಿಳಿಸಲು ಈ ರೀತಿಯ ಕಾದಂಬರಿಗಳನ್ನು ಬರೆದು ಜನಕ್ಕೆ ಅರ್ಥೈಸುತ್ತಿರುವುದು ನಿಜಕ್ಕೂ ಶ್ಲಾಘನೀಯ.
Displaying 1 - 5 of 5 reviews