Jump to ratings and reviews
Rate this book

Ondu kaadina Pushpaka Vimana

Rate this book
"ಮೌನವೊಂದು ಜಗತ್ತಿನ ಅತ್ಯಂತ ದೊಡ್ಡ ಮಾತು ಅನ್ನಿಸೋದು, ಈ ಕಾಡಿನ ತಪ್ಪಲಲ್ಲಿ ನಿಂತಾಗ"

172 pages, Unknown Binding

First published January 1, 2020

Loading...
Loading...

About the author

Prasad Shenoy R K

1 book1 follower

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
5 (55%)
4 stars
4 (44%)
3 stars
0 (0%)
2 stars
0 (0%)
1 star
0 (0%)
Displaying 1 - 6 of 6 reviews
Profile Image for Akhila Ashru.
196 reviews21 followers
February 20, 2021
ಈ ಪುಸ್ತಕ ಓದುಗರನ್ನು ಪಶ್ಚಿಮ ಘಟ್ಟಗಳ ಸುಂದರ ಬೆಟ್ಟಗಳ ನಡುವೆ ಒಮ್ಮೆ ಪದಗಳ ಪುಷ್ಪಕವಿಮಾನದಲ್ಲಿ ಕುಳ್ಳಿರಿಸಿ ಗಸ್ತು ಹೊಡೆಸುತ್ತದೆ. ಇದರಲ್ಲಿ ಮಳೆಯಲ್ಲಿ ಮೈತೊಳೆದು ನಿಂತ ಬೆಟ್ಟಗಳ ಹಸಿರಿನ ಆರ್ದತೆ ಇದೆ. ಚಳಿಗಾಲದಲ್ಲಿ ಬರಿಗಾಲಲ್ಲಿ ತರಗೆಲೆಗಳ ಮೇಲೆ
ನಡೆದಾಡಿದ ಬೆಚ್ಚನೆಯ ಅನುಭವವಿದೆ.ಬೇಸಿಗೆಯ ಬೇಗೆಯಲ್ಲಿ ಕಾಡಿನ ಅನಾಮಧೇಯ ಜಲಪಾತಗಳಲ್ಲಿ ಮಿಂದು ಮೈಮರೆತ ಆಹ್ಲಾದಕತೆ ಇದೆ. ಈ ಎಲ್ಲ ಕಾಲಗಳಲ್ಲಿ ಹಸಿರ ಮೈಸಿರಿ ಹೇಗೆಲ್ಲ ಚೆಂದ ಕಾಣುತ್ತದೆ ಎಂಬ ಕಣ್ಣಿಗೆ ಕಟ್ಟುವ ವರ್ಣನೆ ಇದರಲ್ಲಿದೆ.ಇದಿಷ್ಟೇ ಅಲ್ಲದೆ ಕಾಡಿನ ಸೆರಗಿನ ನಡುವೆ ಬೆಚ್ಚಗೆ ಅಡಗಿ ಕುಳಿತ
ಮನೆಗಳು,ಅದರಲ್ಲಿ ವಾಸವಾಗಿರುವವರು ಬಾಳ ಬವಣೆಗಳು, ಮಲೆನಾಡಿಗರ ಅತಿಥಿಸತ್ಕಾರ, ಹಿರಿಯ ಜೀವಗಳ ಕಾಡಿನ ಕಥೆಗಳು, ಕಿರಿಯ ಕಂದಮ್ಮಗಳ ಅಚ್ಚರಿಯ ನೋಟಗಳು ಇದರಲ್ಲಿದೆ. ಕಾಲ ಬದಲಾದಂತೆ ಮಲೆನಾಡು ಹೇಗೆ ಬದಲಾಗುತ್ತಿದೆ,
ಕಾಡಿಗೆ ಹಾಸು ಹೊಕ್ಕಾಗಿ ಬದುಕಿರುವ ಬೆಟ್ಟದ ಜೀವಗಳು ಹೇಗೆ ಈ ಬದಲಾವಣೆಗೆ ಒಗ್ಗಿಕೊಂಡಿದ್ದಾರೆ ಎನ್ನುವ ನೈಜ ವಿವರಗಳಿವೆ. ಕೆಲವರು ಕಾಲದ ಹರಿವಿಗೆ ಸೇರಿ ಇನ್ನೆಲ್ಲೋ ಪಯಣವನ್ನು ಬದಲಿಸಿದರೆ, ಇನ್ನು ಕೆಲವರು ಕಾಲದ ಹೊಡೆತಕ್ಕೆ ಸೆಡ್ಡುಹೊಡೆದು ನಿಲ್ಲುವ ಗಟ್ಟಿ ಮರಗಳಂತೆ ಬೇರೂರಿರುವ ಚಿತ್ರಣ ಇದರಲ್ಲಿ ವ್ಯಕ್ತವಾಗಿದೆ.

ಚಾರಣ ಕೇವಲ ಮೋಜಿಗಾಗಿ, ಸೆಲ್ಫಿಗಾಗಿ ಫೋಟೋಗಳಿಗಾಗಿ, ಹೋಗುವ ಕ್ರೀಡೆಯಲ್ಲ ಅದೊಂದು ತಪಸ್ಸು. ಚಾರಣದಲ್ಲಿ ಏನೆಲ್ಲ ಅನುಭವಿಸಬೇಕು, ಅನುಭವಕ್ಕೆ ಮೀರಿದ್ದನ್ನು , ಕಾಡಿನ ಮೌನವನ್ನು ಅರ್ಥೈಸಿಕೊಂಡು ಅದಕ್ಕೆ ಅಕ್ಷರರೂಪ ನೀಡುವಲ್ಲಿ ಲೇಖಕರ ಯಶಸ್ವಿಯಾಗಿದ್ದಾರೆ, ‘ಮಲೆನಾಡಿನ ಚಳಿಯು ಐಸ್ಕ್ಯಾಂಡಿಯೇ ಬಂದು ನಮ್ಮನ್ನು ಚೀಪಿದ ಹಾಗೆ’, ‘ಕಾಡಿನಲ್ಲಿ ನಡೆದಾಗ ನಾಡಿನಿಂದ ಹೊತ್ತುಕೊಂಡು ಬಂದ ಬೆವರ ಹನಿಗಳು ಸತ್ತೇಹೋಗಿತ್ತು’ ಹೀಗೆ ಅನೇಕ ಉಪಮೆಯಗಳು ಲೇಖಕರ ಬರವಣಿಗೆಯ ಪ್ರಬುದ್ಧತೆಯನ್ನು ಹೊರ ಚೆಲ್ಲುತ್ತದೆ. ಪರಿಸರ ನಾಶ, ಹೆಚ್ಚುತ್ತಿರುವ ಅಕ್ರಮ ಕಾರ್ಯಗಾರಗಳು, ರಾಜಕೀಯ ಹೀಗೆ ಇವೆಲ್ಲದರ ನಡುವೆ ಕಾಡನ್ನು ಕಾಪಿಟ್ಟುಕೊಳ್ಳುವ ಯುವಜನತೆಯ ಜವಾಬ್ದಾರಿಯನ್ನು ಓದುಗರಿಗೆ ನೀಡುವುದರಲ್ಲಿ ಕೃತಿ ಯಶಸ್ವಿಯಾಗಿದ್ದಾರೆ. ಮಲೆನಾಡಿಗರು ಅಸ್ತೆಯಿಂದ ಓದಿ ಪಾಲಿಸ ಬೇಕಾದ ಅನಿವಾರ್ಯತೆ ಪ್ರಸ್ತುತ ಪರಿಸ್ತಿತಿಯಲ್ಲಿ ಅತ್ಯಗತ್ಯ ಎನ್ನುವುದು ನನ್ನ ಅಭಿಪ್ರಾಯ.
Profile Image for Prashanth Bhat.
2,250 reviews143 followers
July 12, 2021
ಒಂದು ಕಾಡಿನ ಪುಷ್ಪಕ ವಿಮಾನ - ಪ್ರಸಾದ್ ಶೆಣೈ ಆರ್‌ ಕೆ.

ಪೇಟೆಯಲ್ಲಿರುವವರಿಗೆ ಧಿಗ್ಗನೆ ಮಲೆನಾಡಿನ ನೆನಪು ಒತ್ತರಿಸಿ ಬರುವಂತೆ ಮಾಡುವ ಕೃತಿ ಇದು. ಹಾಗೇ ಮಲೆನಾಡಿವರಿಗೆ ನಮ್ಮನೆ ಆಚೆ ಕಾಡು ಅದ್ನೇ ಎಂತ ಬರ್ದಿದ್ದ ಅನಿಸುವಂತೆ ಮಾಡುವುದೂ.. ಅಲೆಮಾರಿಗಳಿಗೆ ಈ ಕಾಲದಲ್ಲಿ ತಮ್ಮ ಅಂದಕಾಲತ್ತಿಲ್ ನಡೆದ ಸಾಹಸಗಳ ನೆನಪು ಮಾಡಿಕೊಳ್ಳುವಂತೆ ಇದು ಮಾಡುತ್ತದೆ.
ಚಾರಣ ಅಲೆದಾಟದ ನಡುವೆ ಹಿರಿಯರ ಬಾಯಲ್ಲಿ ಹಳೆಯ ಕತೆಗಳ ಕೇಳಿಸಿಕೊಳ್ಳುವ ಗಮ್ಮತ್..ಕತೆಯನ್ನು ಬಗೆಯದ ಪ್ರಜ್ಞಾವಂತಿಕೆ ಮತ್ತು ದಟ್ಟ ಹಸಿರು ಈ ಪುಸ್ತಕದ ಜೀವಾಳ.
ಲೇಖಕರದು ಒಂದಾದರೂ ಭಯಂಕರ ಫಜೀತಿ ಅಥವಾ ಸಾಹಸದ ಕತೆ ಇರಬೇಕಿತ್ತು ಅನ್ನೋದು ನಾನು ಎತ್ತಿದ ಕೊರೆ.
ತಡ ಮಾಡದೆ ಈ ಮಳೆಗಾಲದಲ್ಲಿ ‌ನಿಮ್ಮ ಅಪಾರ್ಟ್ಮೆಂಟ್‌ನ ಬಾಲ್ಕನಿಯಲ್ಲಿ ಕೂತ್ಕೊಂಡು
ಓದಿ.
ಕಳೆದು ಹೋಗಿ.
Profile Image for That dorky lady.
401 reviews78 followers
May 1, 2021
ಕೆಲವು ಓದು ಮನಸ್ಸು/ಬುದ್ದಿಗೆ ರಸದೌತಣವಾಗಿ ಹಸಿವು ತಣಿಸಿ i am full ಅನ್ನೋ ಭಾವಕ್ಕೆ ಕಾರಣವಾಗ್ತವೆ ಇನ್ನು ಕೆಲವು; ಅಂದ್ರೆ ಈ 'ಒಂದು ಕಾಡಿನ ಪುಷ್ಪಕ ವಿಮಾನ'ದಂಥವು ಮಡಕೆ ನೀರಿನ ಜೊತೆ ತಿಂದ ಬೆಲ್ಲದ ಚೂರಿನಂತೆ ಓದುವ ಹೃದಯ ತಂಪಾಗಿಸ್ತವೆ. ಆ ತಂಪಿಗಿಂತ ಹೆಚ್ಚಿನ ಏನನ್ನಾದರೂ ಬಯಸಿದ್ದೇ ಆದರೆ ನಮ್ಮ ಆಸೆಬುರುಕತನವಾದೀತು‌.
ಅತಿ ಭಾವುಕತೆ ಮತ್ತು ರಮ್ಯ ಕಲ್ಪನೆ ಈ ಪುಸ್ತಕಕ್ಕೆ ಎಷ್ಟು ಧನಾತ್ಮಕವಾಯ್ತೋ ಅಷ್ಟೇ ಋಣಾತ್ಮಕ ಅಂಶವಾಗಿವೆ (ಅತಿಯಾದರೆ ಅಮೃತವೂ ವಿಷ ಎಂದಂತೆ).
ಮಲೆನಾಡಿನಲ್ಲೇ ಹುಟ್ಟಿ ಬೆಳೆದಿದ್ದಕ್ಕೋ ಅಥವಾ ಈ ಹೊತ್ತು ಅದೇ ಮಲೆನಾಡಿನ ಬೆಚ್ಚನೆ ಮಡಿಲಲ್ಲಿ ಕೂತು ಈ ಪುಸ್ತಕ ಓದಿದ್ದಕ್ಕೋ ನನಗೆ ತೀರ ವಿಶೇಷ ಅನ್ನುವಂತದ್ದು ಏನೂ ಕಾಣಲಿಲ್ಲ. ದೂರದಲ್ಲೆಲ್ಲೋ ಕುಳಿತು ಮಲೆನಾಡನ್ನು ಹಂಬಲಿಸುವವರೂ ಬೆಟ್ಟ-ಗುಡ್ಡ ಕಾಡಿನ ಸಂದಿನಲ್ಲಿರುವ ಚಿಕ್ಕಪುಟ್ಟ ಊರುಗಳ ಮಾಯಾಜಗತ್ತಿನ ಪರಿಚಯವೇ ಇಲ್ಲದ ಪಟ್ಟಣವಾಸಿಗಳೂ ಕುಳಿತಲ್ಲೇ ಕಾಡನಡುವಿನ ಕನಸಿನ ಸಾಮ್ರಾಜ್ಯದಲ್ಲಿ ವಿಹಾರ ಹೊಕ್ಕು ಬರಲು ಒಮ್ಮೆ ಖಂಡಿತಾ ಓದಬಹುದು.
191 reviews23 followers
April 28, 2026
#ಪರಿಚಯ_೧೯_೨೦೨೬
ಕೃತಿ: ಒಂದು ಕಾಡಿನ ಪುಷ್ಪಕ ವಿಮಾನ
ಲೇಖಕರು: ಪ್ರಸಾದ್ ಶೆಣೈ ಆರ್.ಕೆ
ಪ್ರಕಾಶಕರು: ಬೆನಕ ಬುಕ್ಸ್ ಬ್ಯಾಂಕ್,ಯಳಗಲ್ಲು

ಈ ಪುಸ್ತಕವು ಫೆಬ್ರವರಿ 2026ರಲ್ಲಿ ಬರೆದ ಉತ್ತಮ ಲೇಖನಕ್ಕಾಗಿ ಶ್ರೀಮತಿ ವೀಣಾ ನಾಯಕ್ ಮೇಡಂ ಅವರ ಪ್ರಾಯೋಜಕತ್ವದಲ್ಲಿ ಬಹುಮಾನವಾಗಿ ಸಿಕ್ಕಿತು.

ಬಹಳಷ್ಟು ಆಪ್ತತೆಯನ್ನು ಅನಿರ್ವಚನೀಯ ಆನಂದದ ಅನುಭವವನ್ನು ನೀಡಿದ ಓದು. ಕಾಡು, ಮಳೆ, ವೈವಿಧ್ಯಮಯ ಜೀವಸಂಕುಲಗಳೊಡನೆ ನಡೆಸಿದ ದಿವ್ಯ ಅನುಸಂಧಾನ ಈ ಕೃತಿ. ಲೇಖಕರಂತೆ ನಾನು ಸಹ ಕಾರ್ಕಳದವನಾಗಿದ್ದು, ಇಲ್ಲಿನ ಮಾಳ,ದುರ್ಗ,ಆಗುಂಬೆ ಪ್ರದೇಶಗಳಲ್ಲಿ ಓಡಾಡಿದವನು. ಅಲ್ಲಿಂದ ಕಾಣುವ ಕಾಡು ಮಳೆಗಳ ಚಿತ್ರ ವಿನ್ಯಾಸವನ್ನು ಸ್ವಲ್ಪ ಮಟ್ಟಿಗೆ ಅನುಭವಿಸಿದ್ದೇನೆ. ಹಾಗಾಗಿ ಓದುತ್ತಾ ಹೋದಂತೆ ಲೇಖಕರ ಒಳನೋಟಗಳ ಜೊತೆಯಲ್ಲಿ ನನ್ನ ಅನುಭವವೂ ಸೇರಿಕೊಂಡು ಒಂದು ವಿಶಿಷ್ಟವಾದ ಅನುಭೂತಿಯನ್ನು ಅನುಭವಿಸಿದೆ.... ಅಲ್ಲಲ್ಲ.... ಜೀವಿಸಿದೆ.

ವಾರಾಂತ್ಯ ಬಂದರೆ ಸಾಕು ಚಾರಣದ ಹೆಸರಿನಲ್ಲಿ ಮಲೆನಾಡಿನ ಕಾಡುಗಳಲ್ಲಿ ಮನುಷ್ಯ ಎಂಬ ಪ್ರಾಣಿಯು ಉಂಟು ಮಾಡುವ ಅಪಸವ್ಯಗಳನ್ನು ಕಣ್ಣಾರೆ ಕಂಡ ಅನುಭವದಿಂದ ಹೇಳುವುದಾದರೆ, ಕಾಡಿನ ಒಳಹೊಕ್ಕು ಕೇಕೆ ಹಾಕುವುದು, ಪ್ಲಾಸ್ಟಿಕ್ ಮುಂತಾದ ತ್ಯಾಜ್ಯಗಳನ್ನು ಕಂಡಕಂಡಲ್ಲಿ ಎಸೆಯುವುದು, ಸಿಕ್ಕಾಪಟ್ಟೆ ಚೀರಾಟ ಹಾರಾಟಗಳನ್ನು ಕಂಡಿದ್ದೇನೆ. ಆದರೆ ಲೇಖಕರು ಇದಕ್ಕೆ ತದ್ವಿರುದ್ಧವಾಗಿ ಕಾಡಿನ ಮೌನವನ್ನು ಧೇನಿಸುತ್ತಾ, ಕಾಡು ಹೇಳಿದ ಕತೆಗಳಿಗೆ ಧ್ವನಿಯಾಗುತ್ತಾ ಹೋಗುತ್ತಾರೆ. ಕಾಡಿನ ಅಂಚಿನಲ್ಲಿ ಬದುಕುವ ಜನರ ಅನುಭವಗಳನ್ನು ಕಣ್ಣಿಗೆ ಕಟ್ಟುವಂತೆ ಓದುಗರಿಗೆ ದಾಟಿಸುತ್ತಾರೆ. ಹಲವಾರು ಸವಾಲುಗಳ ನಡುವೆ ಬದುಕನ್ನು ಕಟ್ಟಿಕೊಂಡ ಅವರುಗಳ ಮಣ್ಣಿನ ಮಮತೆಯ ಕತೆಗಳನ್ನು ಓದುವಾಗ ಒಂದು ರೀತಿಯ ನಿರಾಳತೆ ಆವರಿಸಿಕೊಳ್ಳುತ್ತದೆ. ಸರಳ ಸುಂದರ ಬದುಕನ್ನು ನಾವೆಷ್ಟು ಕುಲಗೆಡಿಸಿಕೊಂಡಿದ್ದೇವೆ ಎಂಬ ಭಾವ ಬರದಿರದು.

ಕಾಡಿನಲ್ಲಿ ಬೀಸುವ ಗಾಳಿ, ಹಕ್ಕಿಗಳ ಚಿಲಿಪಿಲಿ ಕಲರವ, ದೂರದಲ್ಲಿ ಕೂಗುವ ಪ್ರಾಣಿಯ ಸದ್ದು, ಪಕ್ಕದಲ್ಲಿಯೇ ಎಲ್ಲಿಯೋ ಹರಿಯುತ್ತಿರುವ ತೊರೆಯ ಜುಳುಜುಳು ನಿನಾದ, ಧುಮ್ಮಿಕ್ಕುವ ಜಲಧಾರೆಯ ನರ್ತನ, ರಾತ್ರಿಯೆಲ್ಲ ಆಕಾಶವೆಲ್ಲ ತುಂಬುವ ನಕ್ಷತ್ರ ಪುಂಜಗಳು, ನೆರಳು ಬೆಳಕಿನ ವಿನ್ಯಾಸದಲ್ಲಿ ಕಂಗೊಳಿಸುವ ಬೆಟ್ಟಗಳು, ಶುಭ್ರ ನೀಲಿ ಆಕಾಶವು ಕ್ಷಣಾರ್ಧದಲ್ಲಿ ಕಪ್ಪಿಟ್ಟು ಧೋ ಎಂದು ಸುರಿಯುವ ಮಳೆ, ಭಾಸ್ಕರನಿಂದ ಬಣ್ಣವನ್ನು ಕಡ ತೆಗೆದುಕೊಂಡು ಶೃಂಗಾರಗೊಳ್ಳುವ ಮೋಡಗಳ ಚಿತ್ತಾರಗಳು.‌‌... ಆಹ್‌... ಎಂತಹಾ ಸೊಬಗು. ಪೂರ್ತಿ ಪುಸ್ತಕವು ಇಂತಹುದೇ ಅನುಭವಗಳನ್ನು ಮತ್ತೆ ಮತ್ತೆ ಮೆಲುಕು ಹಾಕುವಂತೆ ಮಾಡುತ್ತದೆ. ಪ್ರಕೃತಿಯು ನಿರಂತರವಾಗಿ ನಮ್ಮೊಂದಿಗೆ ಸಂವಹನವನ್ನು ನಡೆಸುತ್ತಿರುತ್ತದೆ. ಆದರೆ ಕಾಣುವ ಕಣ್ಣು,ಕೇಳುವ ಕಿವಿಗಳು,ತೆರೆದ ಮನಸ್ಸಿದ್ದವರಿಗೆ ಮಾತ್ರ ಅದು ಅನಾಯಾಸವಾಗಿ ಲಭ್ಯವಾಗುತ್ತದೆ.

ಇನ್ನು ಅಭಿವೃದ್ಧಿ ಎಂಬ ಅಧಃಪತನದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಪ್ರಕೃತಿಯ ವಿನಾಶದ ಬಗೆಗಿನ ಲೇಖಕರ ಕಾಳಜಿ ಸ್ಪಷ್ಟವಾಗಿ ಅರ್ಥೈಸಿಕೊಳ್ಳಬೇಕು. ನಮ್ಮಷ್ಟೇ ಹಕ್ಕು ಇತರ ಜೀವಸಂಕುಲಗಳಿಗೆ ಇದೆ ಎಂಬ ಅರಿವು, ಸಾಮಾನ್ಯ ಪ್ರಜ್ಞೆ ಒಂದು ಇದ್ದಿದ್ದರೆ ಪ್ರತೀ ಕಿಲೋಮೀಟರಿಗೆ ಒಂದರಂತೆ ಜಾಗ ಮಾರಾಟಕ್ಕಿದೆ/site for sale ಎಂಬ ಫಲಕಗಳು ಕಾಣುತ್ತಿರಲಿಲ್ಲ ಅಲ್ಲವೇ...

ಈ ಪುಸ್ತಕವನ್ನು ಕಳುಹಿಸಿಕೊಟ್ಟದ್ದಕ್ಕೆ ವೀಣಾ ನಾಯಕ್ ಮೇಡಂ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುವೆ.

ನಮಸ್ಕಾರ,
ಅಮಿತ್ ಕಾಮತ್
Profile Image for ವಿಧಿ.
20 reviews13 followers
March 16, 2023
ಮೌನವೊಂದು ಜ��ತ್ತಿನ ಅತ್ಯಂತ ದೊಡ್ಡ ಮಾತು ಅನ್ನಿಸೋದು, ಈ ಕಾಡಿನ ತಪ್ಪಲಲ್ಲಿ ನಿಂತಾಗ...

ಇಡೀ ಪುಸ್ತಕ ಈ ಮೇಲಿನ ಸಾಲಿನ ಮೇಲೆ ನಿಂತಿದೆ ಎಂದರೆ ತಪ್ಪಾಗಲಾರದು. ಈ ಪುಷ್ಪಕ ವಿಮಾನ ಮಳೆಗಾಲದ ಬೇಸಿಗೆ ಕಾಲದ ಹಾಗೂ ಚಳಿಗಾಲದ ಕಾಡಿನ ಅನುಭವಗಳನ್ನು ನಿಮಗೆ ತಿಳಿಸಿಕೊಡುತ್ತ ಒಂದು ಸುತ್ತು ಹಾಕಿಸುತ್ತದೆ. ಈಗಾಗಲೇ ಮಲೆನಾಡಿನ ಕಾಡಿನ ಬಗ್ಗೆ ತುಂಬಾ ಪುಸ್ತಕಗಳು ಬಂದು ಹೋದ ಕಾರಣವೋ ಅಥ್ವಾ ನಾನು ಮಲೆನಾಡಿನವಳೆ ಆದ ಕಾರಣವೋ ತುಂಬಾ ವಿಶೇಷ ಅನಿಸದೇ ಹೋದರು ಅಲ್ಲಲ್ಲಿ ನಮ್ಮ ಒಂದಿಷ್ಟು ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿತು. ಇನ್ನು ಆಗಾಗ ತೇಜಸ್ವಿಯವರ ನೆನಪುಗಳು ಇಲ್ಲಿ ಅಚ್ಚಾಗಿವೆ.
ಧನ್ಯವಾದಗಳು.
18 reviews7 followers
December 30, 2020
A well written book on the forest, a small village Maala, it's beaty in rain, the mysteries of the forest when you have eyes to see it. Also there's a constant concern about the nature being continuously manipulated by human for his benefits. The book reminds us that it's everyone's duty to save the nature.
Displaying 1 - 6 of 6 reviews