ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ತಮ್ಮ ಬರವಣಿಗೆಯಲ್ಲಿ ಜಾನಪದ ಸೊಗಡನ್ನು ಮೈದಾಳಿಸಿಕೊಂಡು ಬಂದಿರುವ ಚಂದ್ರಶೇಖರ ಕಂಬಾರರು ಹಲವು ಪ್ರತಿಭೆಗಳ ಸಂಗಮ. ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಹಾಡುಗಾರ, ಅಧ್ಯಾಪಕ, ಜಾನಪದ ತಜ್ಞ ಹೀಗೆ ವಿವಿಧ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಸಮಗ್ರ ಸಾಹಿತ್ಯಕ್ಕೆ ೨೦೧೦ ರಲ್ಲಿ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಲಭಿಸಿತು.
ಪುಸ್ತಕ: ಮಾರೀಕಾಡು ಲೇಖಕರು: ಚಂದ್ರಶೇಖರ ಕಂಬಾರ ವಿಭಾಗ : ನಾಟಕ ರೂಪಾಂತರ
ನಾಗಮಂಡಲದ ತರುವಾಯ ಓದಿದ ಎರಡನೇ ನಾಟಕ ಕೃತಿ "ಮಾರೀಕಾಡು" .
ಆಂಗ್ಲ ನಾಟಕಕಾರ ವಿಲಿಯಂ ಷೇಕ್ಸ್ ಪಿಯರ್ ನ ಮ್ಯಾಕ್ ಬೆತ್ ನಾಟಕ ಆಧಾರಿಸಿ ಬರೆದ ನಾಟಕ " ಮಾರೀಕಾಡು" . ಕಂಬಾರರ ಕನ್ನಡ ಜಾನಪದ ಶೈಲಿಯಲ್ಲಿ ಬರೆದ ಚಿಕ್ಕ ಸುಂದರ ನಾಟಕ ಕೃತಿ ಇದು , ನಾಟಕ ಕೃತಿಗಳ ಬಗ್ಗೆ ಆಸಕ್ತಿ ಉಳ್ಳವರು ಓದಬೇಕಾದ ಪುಸ್ತಕ.
ಪ್ರತಿಯೊಬ್ಬನು ತನ್ನ ಮನದೊಳಗಿನ ಕಾಡಿನ ಹಾದಿ ತಿಳಿದಿರಬೇಕು , ದಿಕ್ಕುತಪ್ಪಿಸುವ ಧ್ವನಿಗಳ ಬಗ್ಗೆ ಅರಿವಿರಬೇಕು , ಇಲ್ಲದೇ ಹೋದರೆ ಅದೇ ಕಾಡು ಕೊನೆಗೆ ನಮ್ಮನ್ನ ನುಂಗಿಬಿಡುವುದು. ಇದಕ್ಕೆ ಉದಾಹರಣೆಯೇ ಇಲ್ಲಿಬರುವ ಮದಕರಿ ಮತ್ತು ಆತನ ರಾಣಿ . ಮಾರಿಯ ಧ್ವನಿಗಳಿಗೆ ಓಗೊಟ್ಟು, ರಕ್ತದಲ್ಲಿ ಸಿಂಹಾಸನ ಕಟ್ಟಿದರು ಕೊನೆಗೆ ಏನಾದರು ??? ತಿಳಿಯಲು ಓದಿ.
It is very difficult to pen about Maarikaadu. It unfolds itself in different ways, everytime you read it. To know what it speaks off, you will have to read it yourself!