Jump to ratings and reviews
Rate this book

ಅವಸಾನ

Rate this book
ON THE ONE HAND, THE INFAMOUS REALITY OF KAMATHIPURA, ON THE OTHER HAND, THE DEVOTION OF VITHOBA. UDYAST HAS THIS POWERFUL COMBINATION OF THE TWO. THIS IS THE STORY OF THE BOY BORN OF A PROSTITUTE IN KAMATHIPURA. SATYA WAS SENT TO AN ASHRAM FROM KAMATHIPURA TO HAVE A BRIGHT FUTURE. THERE NEW RITES TAKE ROOT IN HIM. THE LIFE OF SATYA TAKES ON NEW HEIGHTS. BUT EVEN HIS FATE DOES NOT GIVE HIM A HAPPY LIFE. THE OWNER OF THE FACTORY WHERE HE WAS WORKING DIES AND A NEW STORM COMES IN HIS LIFE. THIS IS A UNIQUE STORY OF A LIFE FILLED WITH THE INTRICACIES OF HUMAN RELATIONSHIPS AND THE CONCEPTS OF MORALITY AND IMMORALITY.


एकीकडे कामाठीपुऱ्यातलं बदनाम वास्तव, तर दुसरीकडं विठोबाची भक्ती. या दोन्हीचा अनोखा संगम साधत रचलेलं दमदार कथानक म्हणजे, उद्यास्त (अवसान) ही कादंबरी. कामाठीपुऱ्यातल्या वेश्येच्या पोटी जन्मलेल्या सत्याची ही कहाणी. सत्याचं भविष्य उज्वल असावं म्हणून त्याची कामाठीपुऱ्यातून एका आश्रमात रवानगी होते. तिथं त्याच्यात विठुभक्तीचे नवे संस्कार रुजतात. सत्याचं आयुष्य नवी उभारी घेतं. पण त्याचं भागदेय तरीही त्याला सुखासीन आयुष्य बहाल करत नाही. तो नोकरी करत असलेल्या कारखान्याच्या मालकाचा मृत्यू होतो आणि त्याच्या आयुष्यात नवं वादळ येतं. मानवी नात्यातली गुंतागुंत आणि नैतिक-अनैतिकाच्या संकल्पनांमध्ये भरडल्या जाणाऱ्या आयुष्यांची ही आगळीवेगळी कहाणी.

352 pages, Paperback

First published January 20, 2020

1 person is currently reading
44 people want to read

About the author

Sahana Vijayakumar

7 books35 followers
Sahana Vijayakumar is a Kannada author and IT professional. Her work has been Translated into English, Hindi and Marathi

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
10 (41%)
4 stars
11 (45%)
3 stars
2 (8%)
2 stars
0 (0%)
1 star
1 (4%)
Displaying 1 - 9 of 9 reviews
Profile Image for Abhi.
89 reviews20 followers
January 31, 2021
||• ಅವಸಾನ •||

ಒಂದು ಪುಸ್ತಕ, ಒಂದು ಸಿನಿಮಾ ಅಥವಾ ಒಂದು ಕವನ ಒಡಲು ಹೀಗೆ ಇಷ್ಟು ಎಂದು ಸುಲಭವಾಗಿ ಬರೆಯಬಹುದು. ಹೇಳಲೂಬಹುದು ಒಟ್ಟು ಆಶಯ ಹೀಗಿದೆ ಎಂದು. ಅದು ಸರ್ವೇ ಸಾಮಾನ್ಯ!! ಆದರೆ ಈ ರೀತಿಯ "ಒಂದು ಆಶಯದ ಪರಿಧಿಗೆ" ಸಿಗದೇ ಓದುಗನಿಗೆ ಹಲವಾರು ರೀತಿಯ ಅನುಭವಗಳನ್ನು ಅವಸಾನ ಪುಸ್ತಕ ನೀಡುತ್ತದೆ ಹಾಗೂ ಈ ಪುಸ್ತಕ ವಿಶೇಷವೆನಿಸುವುದು ಅದೇ ಕಾರಣಕ್ಕೆ.‌ ಇಲ್ಲಿ ಹೊಸತನವಿದೆ, ಆಧುನಿಕತೆಯಿದೆ, ಆಧುನಿಕ‌ ಜೀವನ ಶೈಲಿಯ ಜಂಜಾಟಗಳಿವೆ. ಹೀಗೆ ಬರೆಯುತ್ತಾ ಹೋದರೆ ನೂರು ವಿಷಯಗಳಾದರೂ ಅಚ್ಚರಿಯಿಲ್ಲ.

ಸೊಲ್ಲಾಪುರದ ಮೇಲ್ಮಧ್ಯವರ್ಗದ ಕುಟುಂಬವೊಂದರ ಕಥೆಯಿದು ಎಂದು ಶುರುವಾತಿನಲ್ಲಿ ಅನಿಸಿದರೂ ಕಾದಂಬರಿ ಮುಂದೆ ಸಾಗಿದಂತೆ ನಮ್ಮ ಕಲ್ಪನೆಗೆ ನಿಲುಕದಷ್ಟು ತೆರೆದುಕೊಳ್ಳುತ್ತದೆ. ಮೊದಲ ಎರಡು ಮೂರು ಅಧ್ಯಾಯದಲ್ಲಿ‌ ಆ ಕುಟುಂಬ ಮತ್ತು ಅವರ ವ್ಯಾಪಾರ ವಹಿವಾಟಿನ ಸುತ್ತಲೂ ನಡೆಯುವ‌ ಕಾದಂಬರಿಯಲ್ಲಿ ಬರುವ ತಿರುವು ಪುಸ್ತಕದ ತೀವ್ರತೆಯನ್ನು ಮತ್ತು ಓಘವನ್ನು ನೂರ್ಮಡಿಗೊಳಿಸಿದೆ ಎಂಬುದು ಅತಿಶಯೋಕ್ತಿ ಅಲ್ಲವೇ ಅಲ್ಲ.

ಆರೇಳು ಪಾತ್ರಗಳು ಮುಖ್ಯ ಭೂಮಿಕೆಯಲ್ಲಿವೆ. ಒಂದೊಂದು ಪಾತ್ರದ್ದು ಒಂದೊಂದು ಕಥೆ. ತಮ್ಮವೇ ಆದ ವಿವರಣೆಗಳೊಂದಿಗೆ ತಮ್ಮನ್ನು ರೂಪಿಸಿಕೊಂಡಿವೆ. ಅವು ಕಾದಂಬರಿಯೊಂದಿಗೆ ಮಿಳಿತಗೊಂಡು ಓದುಗನನ್ನು ಎಡಬಿಡದೆ ಕಾಡುತ್ತವೆ!!!

೩೫೨ ಪುಟಗಳ ಅತ್ಯುತ್ಕೃಷ್ಟ ಓದಿನ ನಂತರ ವೈಯಕ್ತಿಕವಾಗಿ ಕಾಡಿದ ವಿಷಯಗಳೆಂದರೆ - ವ್ಯಕ್ತಿತ್ವ, ಕುಟುಂಬ, ಕಾನೂನು ಮತ್ತು ಭಾವನೆ, ಸಂಸ್ಕಾರ.

ನಮ್ಮ ವ್ಯಕ್ತಿತ್ವ ರೂಪವಾಗುವುದು ನಮ್ಮ ಪರಿಸರದ ಮೂಲಕ ಎನ್ನುತ್ತಾರೆ. ನಾನು ಅದನ್ನು ನಂಬಿದವನಲ್ಲ. ಅದೇ ರೀತಿಯ ಎರಡು ಪಾತ್ರಗಳು ಬೆಳೆದಿವೆ ಅವಸಾನ‌ ಪುಸ್ತಕದಲ್ಲಿ‌. ತಾವು ಬೆಳೆದುಬಂದ ಪರಿಸರಕ್ಕೂ ತಮ್ಮ ವ್ಯಕ್ತಿತ್ವಕ್ಕೂ ಹೊಂದಿಕೆಯಾಗದೇ ತಮ್ಮ ಆಲೋಚನೆಗಳನ್ನು ಆಂದೋಲನಗಳನ್ನು ಬೆಳೆಸಿಕೊಂಡಿವೆ.

ಕುಟುಂಬ ಬೇಕು! ಅದಕ್ಕೊಂದು ಚಿತ್ರ ಮೂಡಬೇಕು.‌‌ ಹೆತ್ತವರು ಹಡೆದವರೇ ಆಗಬೇಕಂತಿಲ್ಲ.‌ ವಿಠ್ಠಲ ಹೇಳುವಂತೆ ಯಾರಿಗಾದರೂ ಸೇವೆ ಮಾಡಬಹುದು. ಅವರೇ ನಮ್ಮ ಕುಟುಂಬವೆಂದುಕೊಳ್ಳಬಹುದು‌. ಇರುವವರಿಗೆ ಅದರ ಮಹತ್ವ ತಿಳಿದಿರುವುದಿಲ್ಲ. ಇಷ್ಟೆಂದ ಮಾತ್ರಕ್ಕೆ ನಿಮ್ಮೊಳಗಿನ ಓದುಗ ಇದು ಅನಾಥನೊಬ್ಬನ ಕಥೆಯೆಂದುಕೊಂಡರೇ ನೀವು ಅಕ್ಷರಶಃ ತಪ್ಪಾಗಿ ಎಣಿಸುತ್ತಿದ್ದೀರಿ.

ಕಾನೂನು ಮತ್ತು ಭಾವನೆ - ಎಷ್ಟೋ ಬಾರಿ ಕೆಲವು ಪ್ರಕರಣಗಳಿಗೆ ಕಾನೂನಿನಲ್ಲಿ ಉತ್ತರವೇ ಇರುವುದಿಲ್ಲ. ಉದಾಹರಣೆಗೆ ತಾಯಿಯೊಬ್ಬಳು ಮಗಳನ್ನು ದೈಹಿಕವಾಗಿ ಹಿಂಸಿಸುತ್ತಿದ್ದ ತಂದೆಯ ಕೊಂದರೆ ಅವಳನ್ನು ಶಿಕ್ಷಿಸಬಹುದಾ? ಕಾನೂನಿನ ಪ್ರಕಾರ ಹೌದು, ಭಾವನೆಗಳ ಪ್ರಕಾರ ಇಲ್ಲ!!! ನ್ಯಾಯವೆಂಬುದು ಶುದ್ದವಾಗಿ ಭಾವನೆಗಳನ್ನು ಅವಲಂಬಿಸಿರಬೇಕೆ ಹೊರತು ಕಾನೂನನ್ನಲ್ಲ.

ಸಂಸ್ಕಾರ - ಪೋಷಕರನ್ನು ನೋಡಿ ಮಕ್ಕಳ ಸಂಸ್ಕಾರವನ್ನು ಎಣಿಸುವುದು ಎಂಥ ಮೂರ್ಖತನ. ಬಾಹ್ಯವಾಗಿ ಬರುವ ಹೋಲಿಕೆಗಳಷ್ಟೇ ಹೆತ್ತವರಿಂದ ಬರುವುದು.‌ ಅಂತರಂಗದಲ್ಲಿ ಪ್ರತಿಯೊಬ್ಬರಿಗೂ ಹೇಗೆ ರೂಪುಗೊಳ್ಳಬೇಕು ಎಂಬುದರ ಆಯ್ಕೆಗಳಿರುತ್ತವೆ.

ಈ ನಾಲ್ಕು ಪ್ಯಾರಾಗಳು ಅಸಂಬದ್ಧವೆನಿಸಬಹುದು. ಆದರೆ, ಪುಸ್ತಕ ಓದಿದ ನಂತರ‌ ಈ ವಿಷಯಗಳು ನಿಮ್ಮನ್ನು ಕೆದಕಲಿವೆ.‌ ಮತ್ತಷ್ಟು ವಿಷಯಗಳನ್ನು ಬೆದಕುವಂತೆ ಮಾಡಲಿವೆ.

ಇಷ್ಟಲ್ಲದೇ, ಕಾಮಾಠಿಪುರ‌ ಮತ್ತು ಅಲ್ಲಿನವರ ಬದುಕನ್ನು ಬಿಚ್ಟಿಡುವಲ್ಲಿ ಕಾದಂಬರಿ ಯಶಸ್ವಿಯಾಗಿದೆ. ಅಲ್ಲಿ‌ಯವರಿಗೆ ಹುಟ್ಟಿದ ಮಕ್ಕಳಿಗೆ "ಸೂಳೆಯ ಮಗ" ಎಂದು ಕರೆಯುತ್ತಾರೆ. ಆ ಪರಿಸರದಿಂದಾಚೆ ಹುಟ್ಟಿದ ಮಕ್ಕಳಿಗೆ ಅಪ್ಪನ ಹೆಸರು ಸಿಗುತ್ತದೆ. ಕಾಮಾಠಿಪುರದಲ್ಲಿ ಹುಟ್ಟಿದ ಮಗುವಿಗೂ ಅಂಥ ಗಂಡಸೇ ಕಾರಣವಲ್ಲವೇ? ಆ ವೃತ್ತಿಯಲ್ಲಿನ ಹೆಣ್ಣೊಬ್ಬಳನ್ನು ದೂರವಿರಿಸುವ ನಾವು, ಅವರ ಸಹವಾಸ ಮಾಡಿದ ಗಂಡಿನೆಡೆಗೆ ತೋರುವ ತಾರತಮ್ಯ ಅಸಹನೀಯ. ಆ ಪರಿಸರದ ‌ಹೆಣ್ಣುಮಕ್ಕಳನ್ನು ಉಳಿಸುವುದು, ಅವರ ಸೇವೆ‌ ಮಾಡುವುದು ಈಗ ರಾಜಕೀಯದ ಮಾರ್ಕೆಟಿಂಗ್ ಆಗುತ್ತಿರುವುದು ಅಂತ್ಯದ ಆರಂಭ. ಪುನಶ್ಚೇತನ ಕೇಂದ್ರ ಸ್ಥಾಪಿಸಿ‌ ಅಲ್ಲಿನ‌ ಮುಖ್ಯಸ್ಥನೇ ಅವಳನ್ನು ಬಳಸಿಕೊಂಡದ್ದನ್ನು ನಾವು ಕೇಳಿದ್ದೇವೆ.

ನಾಲ್ಕೈದು ವರ್ಷಗಳ ಹಿಂದೆ ಮೆಜೆಸ್ಟಿಕ್ ಬಸ್‌ಸ್ಟಾಪಿನಲ್ಲಿ ತಮ್ಮನಂತೆ ಕಂಡು ತನ್ನ ಅಂತರಾಳವನ್ನು ತೆರೆದು ಮಾತನಾಡಿದ್ದ ಒಬ್ಬ ಸೆಕ್ಸ್ ವರ್ಕರ್‌ನ ಅಷ್ಟೂ ಮಾತುಗಳೂ ಇಲ್ಲಿ ಪುನರ್ಮನನ ಮಾಡಿಕೊಂಡೆ. ಅವರ ನೋವುಗಳನ್ನು ಶಮನ ಮಾಡಲು ಗುಳಿಗೆ, ನಿರೋಧಕಗಳು, ಆಯಿಂಟ್‌ಮೆಂಟುಗಳಷ್ಟೇ ಸಾಲುವುದಿಲ್ಲ. ಬದಲಾಗಬೇಕಿರುವುದು ಸಮಾಜ!!! ಇರಲಿ :)

ಲೇಖಕಿಯವರಿಗೆ ಇಂಥದೊಂದು ಅದ್ಬುತ ಕಾದಂಬರಿ ಬರೆದದ್ದಕ್ಕೆ ಅಭಿನಂದನೆಗೆಳು.

ಸಮಾಜದಲ್ಲಿನ ಓರೆಕೋರೆಗಳನ್ನು ಮುಕ್ತವಾಗಿ ಲೇಖಕಿ ಸಹನಾ ವಿಜಯಕುಮಾರ್ ಬರೆದಿದ್ದಾರೆ. "ಅಪ್ಪ ಒಬ್ಬ ನೆಟ್ಟಗಿದ್ದಿದ್ರೆ ನಾವ್ ಯಾಕ್‌ ಹೀಗಾಗ್ತಿದ್ವಿ" ಎನ್ನುವ ಮಕ್ಕಳು ಈ ಪುಸ್ತಕ ‌ಓದಬೇಕು.‌ "ಅಮ್ಮ ಸರಿ ಇರ್ಲಿಲ್ಲ" ಎನ್ನುವವರು ಓದಬೇಕು. ಅವರನ್ನು ದೇವರಂತೆ ಪೂಜಿಸುವವರು ಓದಬೇಕು. ಈ ಪುಸ್ತಕ ಕೇವಲ ಪುಸ್ತಕವಾಗಿರದೇ ನಮ್ಮದೇ ಬದುಕಿನ ಚಿತ್ರಣ ಎನಿಸಿಬಿಡುತ್ತದೆ.

ಬರೆಯುತ್ತಾ ಹೋದರೆ, ಪುಟಗಳಷ್ಟು ಬರೆಯಬಹುದು. ಆದರೆ ಇಲ್ಲಿಗೆ ನಿಲ್ಲಿಸುತ್ತೇನೆ!! ಈ ವ್ಯಕ್ತಿತ್ವ, ಕಾನೂನು, ಭಾವನೆ, ತಂದೆ ತಾಯಿ, ಕುಟುಂಬ ಸತ್ಯ ಸಂಸ್ಕಾರ ಎಲ್ಲದರ ನಡುವೆ ಸೊಲ್ಲಾಪುರದಿಂದ ಕಾಮಾಠಿಪುರದ ಸುಕಲಾಜಿಗಲ್ಲಿಗೆ ಕಾದಂಬರಿ‌ ಹೇಗೆ ಸಾಗಿತು. ಉತ್ತರ ಪುಸ್ತಕದಲ್ಲಿ!! ಓದಿ

ಶುಭವಾಗಲಿ

ಅಭಿ...
9 reviews3 followers
September 8, 2021
Very good book. Provides food for thought into various aspects of relationship. Everything is right or wrong depending upon one's perspective. An action or behavior when seen from one person's perspective will make it acceptable while another person may not be able to perceive it in the same sense.
Revolving around a family and the nuances of the family relations also weaves into it the details of lives of Kamathipura in a very natural businesslike way.
It is in par with S.L Bhairappa's books. Can't say more.
Profile Image for Soumya.
218 reviews49 followers
February 20, 2022
ಒಂದು ಪುಸ್ತಕದಲ್ಲಿ ಎಷ್ಟೆಲ್ಲ ವಿಷಯವನ್ನ ಎಷ್ಟೊಂದು ವಿಸ್ತಾರವಾಗಿ ಹೇಳಬಹುದು ಅನ್ನೋದಕ್ಕೆ ಈ ಪುಸ್ತಕ example.

ಮನುಷ್ಯ ಸಂಬಂಧ, ಜೀವನ, ಭಕ್ತಿ, ಕರ್ಮ, ಜ್ಞಾನ, ಸೇವೆ, ವ್ಯಕ್ತಿತ್ವ, ಸಂಸ್ಕಾರ ಈ ರೀತಿಯ ಎಷ್ಟೋ ವಿಚಾರಗಳನ್ನ ಬರುವ ಪ್ರತಿಯೊಂದು ಪಾತ್ರಗಳಲ್ಲಿ ಬೇರೆ ಬೇರೆ ಕೋನಗಳಲ್ಲಿ ನೋಡಬಹುದು.
ವೇಶ್ಯಾವೃತ್ತಿಯ ಬಗ್ಗೆ ಬಹಳ ವಿಸ್ತಾರವಾಗಿ ತಿಳಿಸಿದ್ದಾರೆ.

ಪ್ರತಿ ಪುಟ ಓದುವಾಗ ತಲೆಯಲ್ಲಿ ಏನೋ ಓಡುತ್ತಾ ಇರುವಂತೆ ಮಾಡುವ ಪುಸ್ತಕ.
ಚೆನ್ನಾಗಿದೆ.

ಓದಿದ ನಂತರ ಕೂಡ ಒಂತರ ಯೋಚನಾ ಗುಂಗು ಉಳಿಸುತ್ತದೆ.
Profile Image for Soumya.
218 reviews49 followers
March 30, 2022
ಒಂದು ಪುಸ್ತಕದಲ್ಲಿ ಎಷ್ಟೆಲ್ಲ ವಿಷಯವನ್ನ ಎಷ್ಟೊಂದು ವಿಸ್ತಾರವಾಗಿ ಹೇಳಬಹುದು ಅನ್ನೋದಕ್ಕೆ ಈ ಪುಸ್ತಕ example.

ಮನುಷ್ಯ ಸಂಬಂಧ, ಜೀವನ, ಭಕ್ತಿ, ಕರ್ಮ, ಜ್ಞಾನ, ಸೇವೆ, ವ್ಯಕ್ತಿತ್ವ, ಸಂಸ್ಕಾರ ಈ ರೀತಿಯ ಎಷ್ಟೋ ವಿಚಾರಗಳನ್ನ ಬರುವ ಪ್ರತಿಯೊಂದು ಪಾತ್ರಗಳಲ್ಲಿ ಬೇರೆ ಬೇರೆ ಕೋನಗಳಲ್ಲಿ ನೋಡಬಹುದು.
ವೇಶ್ಯಾವೃತ್ತಿಯ ಬಗ್ಗೆ ಬಹಳ ವಿಸ್ತಾರವಾಗಿ ತಿಳಿಸಿದ್ದಾರೆ.

ಪ್ರತಿ ಪುಟ ಓದುವಾಗ ತಲೆಯಲ್ಲಿ ಏನೋ ಓಡುತ್ತಾ ಇರುವಂತೆ ಮಾಡುವ ಪುಸ್ತಕ.
ಚೆನ್ನಾಗಿದೆ.

ಓದಿದ ನಂತರ ಕೂಡ ಒಂತರ ಯೋಚನಾ ಗುಂಗು ಉಳಿಸುತ್ತದೆ.
Profile Image for Kanarese.
136 reviews19 followers
November 22, 2021
ಭಾವನೆ ಮನಸ್ಸುಗಳ ಜಂಜಾಟ, ಓದಲು ಎದೆಯಿರಬೇಕು, ತಡೆಯಲು ಧೈರ್ಯಬೇಕು.
Profile Image for That dorky lady.
376 reviews73 followers
July 22, 2025
ಇತ್ತೀಚಿನವರೆಗೂ ಪುಸ್ತಕ ಓದಿನ ವಿಷಯದಲ್ಲಿ ಕಥಾಸಂಕಲನ ನನ್ನ ನೆಚ್ಚಿನ ಪ್ರಕಾರವಾಗಿತ್ತು. ಸಿಗುವ ಅಷ್ಟಷ್ಟೇ ಬಿಡುವಿನಲ್ಲಿ ಒಂದೊಂದಾಗಿ ಓದಿ ಮುಗಿಸಬಹುದಾದ ಕಥೆಗಳ ಸಂಗ್ರಹವೆಂದರೆ ಖುಷಿಯಾಗಿ ಎತ್ತಿಕೊಳ್ಳುತ್ತಿದ್ದೆ. ಅದು ಯಾವಾಗಲೋ ನನಗೇ ತಿಳಿಯದಂತೆ; ತುಸು ಹೆಚ್ಚು ಸಮಯ ಬೇಡುವ, ವಿಸ್ತಾರ ಹರವಿನ ಕಾದಂಬರಿಗಳು.. ಅದರಲ್ಲೂ 250+ ಪುಟಗಳ ಕಾದಂಬರಿಗಳು ಹೆಚ್ಚು ಆಪ್ತವಾಗುತ್ತಿವೆ. ರಂಗ ಸಿದ್ಧತೆಗೆ, ಪಾತ್ರಗಳ ಬೆಳವಣಿಗೆಗೆ, ಸಾವಕಾಶವಾಗಿ ಕಥೆಯೊಂದು ಬಿಚ್ಚಿಕೊಳ್ಳಲು, ಓದುವ ನಮ್ಮನ್ನು ಆವರಿಸಿಕೊಳ್ಳಲು ಅನುವು ಮಾಡಿಕೊಡುವ big size ��ಾದಂಬರಿಯೊಂದರೊಳಗೆ ಮೊದಲ ಪ್ರವೇಶವೊಂದು ದೊರೆತರೆ ಮತ್ತೆಲ್ಲಾ ಸುಲಭ ಪ್ರಯಾಣ. 


'ಸಹನಾ ವಿಜಯಕುಮಾರ'ರ ಅವಸಾನ ಕಾದಂಬರಿ ಓದಲು ಕೈಗೆತ್ತಿಕೊಂಡದ್ದೂ ಇದೇ ಕಾರಣದಿಂದಲೇ. ಬಹು ಹಿಂದೆ ಲೇಖಕಿಯ 'ಕ್ಷಮೆ' ಕಾದಂಬರಿ ಓದಿ, ಆಗಿನ ನನ್ನ ಮನೋಭಾವಕ್ಕೆ ಅದನ್ನು ಸ್ವೀಕರಿಸುವ ಬಗೆ ತಿಳಿಯದೇ ಗೊಂದಲವಾಗಿತ್ತು. ಈಗ ಅದೇ ಸಬ್ಜೆಕ್ಟಿನ ಸುಮಾರಷ್ಟು ಕಥೆ, ಕಾದಂಬರಿಗಳು ಬಂದಿವೆ (ಪ್ರೀತಿ ಪ್ರೇಮ ಪುಸ್ತಕದಾಚೆಯ ಬದನೇಕಾಯಿ, ಕಿಲಿಗ್ ಇತ್ಯಾದಿ). 


ಪ್ರಸ್ತುತ ಕಾದಂಬರಿಯಲ್ಲಿ ವಿಠೂ ಮಾವುಲಿಯ ದರ್ಶನಕ್ಕಾಗಿ ವಾರಿ ಹೋಗುವುದು ಮತ್ತು ಭಕ್ತಿಯಲ್ಲಿ ಭವದ ದುಃಖಗಳನ್ನು ಕಳೆಯಲು ಯತ್ನಿಸುವ ಸತ್ಯನ ಅಧ್ಯಾಯಗಳು ಓದಲು ಹಿತವೆನಿಸುವಂತಿವೆ. ಭಕ್ತಿ ಎನ್ನುವುದು ಅಂತಃಶ್ಶಕ್ತಿಗೆ ಕೊಡುವ ಸಾಮರ್ಥ್ಯ ಎಂಥದೋ ತಿಳಿಯದೆ ನಾಸ್ತಿಕವಾದವನ್ನು ಫ್ಯಾಷನ್ನಿನಂತೆ ಅಳವಡಿಸಿಕೊಳ್ಳುತ್ತಿರುವವರ ಬಗ್ಗೆ ಕನಿಕರ ಮೂಡುತ್ತದೆ. 


ಕಾಮಾಠಿಪುರದ ಕರ್ಮಚಾರಿಗಳ ಬಗ್ಗೆ ಬರೆಯುವಾಗ ಓದುಗರನ್ನು ರಂಜಿಸುವ, ಪ್ರಭಾವಿಸುವ ಯಾವ ಪ್ರಯತ್ನಗಳನ್ನೂ ಮಾಡದೇ ಮನಸು ಆರ್ದ್ರವಾಗುವಂತೆ ಬರೆದದ್ದು ಮೆಚ್ಚುಗೆಯಾದ ವಿಷಯ. 


ಬಾಬುರಾಯರ ಕರ್ತವ್ಯ ವಿಮುಖತೆಯನ್ನು ಪತ್ನಿಯಾಗಿ ಗಂಗಾಬಾಯಿ ಭರಿಸಬಹುದು, ಮಗನಾಗಿ ವಿಶಾಲನೂ ಭರಿಸಲಿ ಎಂಬ ನಿರೀಕ್ಷೆ ಸಲ್ಲದಾದರೂ ಕೆಳಗೆ ಬಿದ್ದವರನ್ನು ಮತ್ತಷ್ಟು ತುಳಿಯುವುದು ಅವನ ವ್ಯಕ್ತಿತ್ವದ ಅವಸಾನ. ಸಮಾಜದ ಉದ್ಧಾರಕ್ಕಾಗಿ ತಾನು ಸಹಿಸಿದ ಅನ್ಯಾಯಗಳನ್ನು ನೇತ್ರಾಳೂ ಸಹಿಸಲಿ ಎಂದುಕೊಳ್ಳುವುದು ದೀದಿಯ ಅವಸಾನದ ಹಾದಿ. ಇದೇ ರೀತಿ ಇಲ್ಲಿನ ಪಾತ್ರಗಳೆಲ್ಲವೂ ಬಾಗಿಲು ತೆರೆದೇಯಿರುವ ಪಂಜರದಲ್ಲಿ ಸ್ವಯಂ ಬಂಧಿಗಳಂತೆ ಕಾಣುತ್ತಾರೆ. ಅದೇಕೋ ಲೇಖಕಿಯ ಅಷ್ಟೂ ಪ್ರಯತ್ನಗಳ ನಂತರವೂ ವಿಶಾಲ್ ಖಳನಂತೆ ಕಾಣದೆ ಪರಿಸ್ಥಿತಿಯ ಕೈಗೊಂಬೆಯೆನಿಸುತ್ತಾನೆ.


 ಪುಸ್ತಕದ ಬಗ್ಗೆ ಇಷ್ಟು ಪಾಸಿಟಿವ್ ಅಂಶಗಳಿದ್ದೂ ಅಸಹನೆ ಹುಟ್ಟಿಸಿದ್ದು ಲೇಖಕಿಯ ವಾಕ್ಯರಚನಾ ಶೈಲಿ. ತುಂಡುತುಂಡಾದ ಚಕ್ಕುಲಿಯಂತಿರುವ ಅಪೂರ್ಣ ವಾಕ್ಯಗಳು. ಗಂಭೀರ ಕ್ಷಣಗಳನ್ನು, ತಳಮಳ ತುಂಬಿದ ಮನಸ್ಥಿತಿಯನ್ನು ಚಿತ್ರಿಸಲು ಈ ಪ್ರಕಾರದ ಬರವಣಿಗೆ ಪರಿಣಾಮಕಾರಿ ನಿಜ, ಇಡೀ ಪುಸ್ತಕವೇ ಹಾಗಿದ್ದರೆ ಓದಲು ಬಹಳ ಕಿರಿಕಿರಿ. ಅದೊಂದು ಕೊರೆಯ ಹೊರತಾಗಿ ಒಳ್ಳೆಯ ಓದು.
Profile Image for ಸುಶಾಂತ ಕುರಂದವಾಡ.
425 reviews25 followers
December 25, 2022
ಪುಸ್ತಕ: ಅವಸಾನ
ಲೇಖಕರು: ಸಹನಾ ವಿಜಯಕುಮಾರ್

ಸಹನಾ ಅವರ ಎರಡನೇ ಪುಸ್ತಕ ಇದು ನಾನು ಓದುತ್ತಿರುವುದು. ಈ ಮೊದಲೇ ಕಶೀರ ಓದಿದ್ದೆ. ಆ ಪುಸ್ತಕ ಓದಿಸಿಕೊಂಡ ಹಾಗೆ ಈ ಪುಸ್ತಕ ಹೋಗಲಿಲ್ಲ. ಆದರೆ ಈ ಪುಸ್ತಕದ ಕಥಾವಸ್ತು ಚೆನ್ನಾಗಿದೆ. ಇಂದಿನ ಕಾಲಘಟ್ಟದಲ್ಲಿ ಸರ್ವೇಸಾಮಾನ್ಯವಾಗಿರುವ ಘಟನೆಗಳು ಈ ಪುಸ್ತಕದಲ್ಲಿ ಮೂಡಿ ಬಂದಿವೆ.
ಬಾಬುರಾಯರು ತಕ್ಕಮಟ್ಟಿನ ಉದ್ಯಮಿ. ಒಂದು ಕಾಲಕ್ಕೆ ಒಳ್ಳೆಯ ಲಾಭದಲ್ಲಿ ಓಡುತ್ತಿದ್ದ ಉದ್ಯಮ ಹಠಾತ್ತಾಗಿ ನೆಲಕ್ಕಚ್ಚಿತು. ಮುಂಚಿನಿಂದಲೂ ಅವರ ಮೇಲಿದ್ದ ಕುಟುಂಬದ ಜವಾಬ್ದಾರಿಯೆಲ್ಲವೂ ಒತ್ತಡಕರವಾಗುತ್ತದೆ. ಅವರ ಕುಟುಂಬದ ಸದಸ್ಯರೆಲ್ಲರೂ ಅವರನ್ನು ಒಂಟಿಮಾಡಿ ತಮ್ಮದೇ ದಾರಿಯನ್ನು ಹುಡುಕುತ್ತಾರೆ. ಇಂತಹ ಸಮಯದಲ್ಲಿ ಅವರ ಧರ್ಮಪತ್ನಿ ಗಂಗಾಬಾಯಿಯ ಸಹಾಯದಿಂದ ಹೇಗೋ ಸುಧಾರಿಸಿಕೊಂಡು ಜೀವನ ಸಾಗಿಸುತ್ತಾರೆ. ಅವರ ಏಕೈಕ ಮಗ ವಿಶಾಲನಿಗೆ ಆ ಸಂದರ್ಭದಲ್ಲಿ ತಂದೆಯ ಮೇಲೆ ರೋಷ ಉಕ್ಕೇರುತ್ತದೆ. ಕಾರಣ ದೊಡ್ಡ ಬದುಕನ್ನು ನಿರ್ಮಿಸುವ ಕನಸ್ಸನ್ನು ಹೊಂದಿದ್ದ ವಿಶಾಲನಿಗೆ ತಂದೆಯಿಂದ ಯಾವುದೇ ಸಹಾಯ ಸಿಗುವುದಿಲ್ಲ. ಅಂದಿನಿಂದ ಶುರುವಾಯಿತು ತಂದೆಯ ಮೇಲಿನ ತಿರಸ್ಕಾರ ಭಾವ ವಿಶಾಲನ ಬದುಕಿನಲ್ಲಿ. ಅವನ ಮಾಸ್ತರರ ಸಹಾಯದಿಂದ ವಿದ್ಯಾಭ್ಯಾಸ ಮುಂದುವರಿಸಿ ದೊಡ್ಡ ಉದ್ಯಮಿಯಾಗುತ್ತಾನೆ. ಸದಾ ಬೆನ್ನೆಲುಬಾಗಿ ನಿಲ್ಲುವ ಸುಲಭಾಳಂತಹ ಮುದ್ದಿನ ಹೆಂಡತಿ ಸಿಗುತ್ತಾಳೆ. ಅವನಿಗೆ ಉದ್ಯಮದ ಉತ್ತುಂಗಕ್ಕೇರುವ ಬಯಕೆ, ಆ ಸಮಯದಲ್ಲಿ ಅವನ ಸಹಾಯಕ್ಕೆ ಬಂದವನು ಸತ್ಯ.
ಮುನ್ನಾ ಮುಂಬೈಯ ಸುಳಿಗೇರಿಯಲ್ಲಿ ಬೆಳೆದವನು. ಅವನ ತಾಯಿ ವ್ಯಭಿಚಾರಿಣಿಯಾದರು ಒಳ್ಳೆಯ ಹೃದಯದವಳು, ಅಂತೆಯೇ ಅಲ್ಲಿ ಒಳ್ಳೆಯ ಹೆಸರು ಮಾಡಿದವಳು. ಸತ್ಯ ದೊಡ್ಡವನಾಗುವ ಸಮಯದಲ್ಲೇ ಅನಾರೋಗ್ಯದಿಂದ ಕೊನೆಯುಸಿರೆಳೆಯುತ್ತಾಳೆ. ಅವಳ ನೆನಪನ್ನು ಹೊತ್ತು ಆಶ್ರಮವನ್ನು ಸೇರುತ್ತಾನೆ. ತಂದೆ ತಾಯಿ ಅನುಪಸ್ಥಿತಿಯಲ್ಲಿ ಬೆಳೆದ ಮುನ್ನಾ ಚೆನ್ನಾಗಿ ಕಲಿತು ಮುಂದೆ ಉದ್ಯಮದಲ್ಲಿ ಕೆಲಸಕ್ಕೆ ಸೇರುತ್ತಾನೆ. ಆಗ ಅವನ ಹೆಸರಾಗುತ್ತದೆ ಸತ್ಯ.
ಸಂದರ್ಶನಕ್ಕೆ ಬಂದಾಗಲೇ ಬಂದಾಗಲೇ ಬಾಬುರಾಯರು ಅನಾರೋಗ್ಯಕ್ಕೆ ತುತ್ತಾಗಿ ನೆಲಕ್ಕುರುಳಿದಾಗ ಸತ್ಯ ಸಹಾಯಕ್ಕೆ ನಿಂತು ಮನೆಯವರಿಗೆ ಬೇಕಾಗುವವನಾಗುತ್ತಾನೆ. ಪ್ರತಿದಿನವೂ ಅವರನ್ನು ಮಾತಾಡಿಸಿ ಅವರ ಆಶೀರ್ವಾದ ತೆಗೆದುಕೊಂಡು ಕೆಲಸಕ್ಕೆ ಹೋಗುತ್ತಿರುತ್ತಾನೆ.
ವಿಶಾಲನ ಆಫೀಸು ಪಕ್ಕದ ಕೋಣೆಯಲ್ಲೇ. ವಿಶಾಲವಾದ ಮನೆಯಲ್ಲಿ ಪಕ್ಕದಲ್ಲೊಂದು ದೊಡ್ಡ ಕೋಣೆಯನ್ನು ಮಾಡಿ ಅಲ್ಲೇ ಆಫೀಸು ಮಾಡಿಕೊಂಡಿರುತ್ತಾನೆ ವಿಶಾಲ್. ತುಂಬಾ ಹಠಮಾರಿ ಸ್ವಭಾವದ ವಿಶಾಲ್ ತನ್ನ ತಂದೆಯಿಂದಲೇ ಆ ಗುಣವನ್ನು ಪಡೆದಿದ್ದು. ತಂದೆಯನ್ನು ಕಂಡರೆ ಆಗುತ್ತಿರಲಿಲ್ಲ. ಬಾಬುರಾಯರು ಮಾತ್ರ ಸದಾ ಕಿರುಚುತ್ತಾ ತಮ್ಮ ಮಡದಿಯನ್ನು ಪಕ್ಕಕ್ಕೆ ಕೂಡುವಂತೆ ಮಾಡುತ್ತಿರುತ್ತಾರೆ. ಅದರಿಂದ ರೋಸಿಹೋಗಿದ್ದ ವಿಶಾಲ್ ತಂದೆಯನ್ನು ಹಲವು ಬಾರಿ ಮನಬಂದಂತೆ ಬೈದಿದ್ದ, ಹೊಡೆದಿದ್ದ ಕೂಡ ಅದಕ್ಕೆ ಮನೆಯಲ್ಲಿ ಅವನಿದ್ದರೆ ಮನೆಯೆಲ್ಲವೂ ಶಾಂತಮಯ. ವಿಶಾಲನ ಈ ಸ್ವಭಾವದಿಂದ ಬೇಸತ್ತಿದ್ದ ಗಂಗಾಬಾಯಿ ತನ್ನ ಕೆಲಸದಾಳು ಮೋಟಾರಾಮನ ಸಹಾಯದಿಂದ ಸಮೀಪದ ವೃದ್ಧಾಶ್ರಮದ ಮಾಹಿತಿಯನ್ನು ಕಲೆಹಾಕಿರುತ್ತಾಳೆ. ಯಾವಾಗ ವಿಶಾಲನ ತಂದೆಯ ಮೇಲಿನ ತಿರಸ್ಕಾರ ಭಾವ ವಿಕಾರಗೊಳ್ಳುತ್ತದೋ ಅಂದೆಯೇ ತಾವು ಗಂಡನ ಸಮೇತ ವೃದ್ಧಾಶ್ರಮ ಸೇರುವ ನಿರ್ಧಾರ ಮಾಡಿರುತ್ತಾರೆ.
ಸತ್ಯನಿಗೆ ಬಾಬುರಾಯರು ಮತ್ತು ಗಂಗೂಬಾಯಿಯ ಮೇಲೆ ಅತೀವ ಪ್ರೀತಿ. ಚಿಕ್ಕಂದಿನಿಂದಲೂ ಅನಾಥವಾಗಿ ಬೆಳೆದ ಸತ್ಯನಿಗೆ ತಂದೆತಾಯಿಯ ಮಹತ್ವ ಚೆನ್ನಾಗಿ ಗೊತ್ತಿತ್ತು. ಅದಕ್ಕೆ ವಿಶಾಲನಿಗೆ ತಾನು ಅವರನ್ನು ಕರೆದುಕೊಂಡು ಹೋಗುತ್ತೇನೆಂದು ಹೇಳಿರುತ್ತಾನೆ. ಆದಾಗ್ಯೂ ಅವರ ನಡುವೆ ಎಂದಿನಂತೆ ಕೆಲಸ ನಡೆಯುತ್ತಿರುತ್ತವೆ. ವಿಶಾಲನಿಗೆ ಗಂಡುಮಗುವಾದಾಗ ಬಾಬುರಾಯರ ಮರಣವಾಗುತ್ತದೆ ಆದರೆ ಅದು ತನ್ನ ಮಗನಿಂದಲೇ ಆಗಿರುತ್ತದೆ ಅಂತ ಗಂಗೂಬಾಯಿಯ ವಾದ, ಅಲ್ಲವೆಂದು ಅವರ ಮಗನ ವಾದ ಹೀಗೆ ನಡೆದು ಕೊನೆಗೆ ಗಂಗೂಬಾಯಿ ವೃದ್ಧಾಶ್ರಮ ಸೇರುತ್ತಾರೆ.
ಈಗಿನ ದಿನಗಳಲ್ಲಿ ಈ ಘಟನೆಗಳು ಸರ್ವೇಸಾಮಾನ್ಯ. ದೊಡ್ಡ ಕೆನಸ್ಸಿನಬೆನ್ನೆತ್ತಿ ಮಗ ಹೋರಾಡುತ್ತಾನಾದರೂ ಕನಸ್ಸಿನ ಭರದಲ್ಲಿ ತಂದೆ ತಾಯಿಯ ಅರಿವೇ ಅವರಿಗಿರುವುದಿಲ್ಲ. ದಿನ ಕಳೆದಂತೆ ಕನಸು ನನಸಾಗುವ ದಿನಗಳು ಬಂದಾಗ ಅಪ್ಪಅಮ್ಮಂದಿರು ವೃದ್ಧರಾಗಿರುತ್ತಾರೆ. ಇನ್ನು ಕನಸನ್ನು ಮುಂದುವರೆಸಿವುದೋ ಅಥವಾ ಅಪ್ಪ ಅಮ್ಮನ ಜೊತೆ ಇರುವುದೋ ಅದೇ ದೊಡ್ಡ ಧರ್ಮಸಂಕಟ!
Profile Image for Anirudh .
833 reviews
March 29, 2023
It's a bitter pill to swallow, knowing you've read two bad books from an author you liked.

Kshame, the author's debut can be forgiven for not meeting expectations. However, Avasana, written after the famous Kasheera is a real disappointment. Lack of a strong premise (which the author had in Kasheera) really brings out some of the shortcomings in this character driven book.

There is no real story as such. Avasana follows the story of a small family and a flashback set in Kamathipura. This is not the most original storyline as dozens if not hundreds of movies and books have already covered this topic.

The characters are also less appealing than expected. While the character study starts well, without a strong story to back it up, things quickly turn into a bore. Satya's character comes off as unrealistic in his approach towards life. (Same issue was with Narendra in Kasheera) Gangubai's character draws sympathy but Baburao's character remains a mystery. Only character I liked was Vishal with his dilemma and complex personality.

The ending of the novel with its moral stand that the parents were somehow right and the kids were to blame was utterly disappointing. I felt no sympathy at all for Baburao or his wife by the end.

A truly forgettable affair.
Displaying 1 - 9 of 9 reviews

Can't find what you're looking for?

Get help and learn more about the design.