Tejo Tungabhadra tells the story of two rivers on different continents whose souls are bound together by history. On the banks of the river Tejo in Lisbon, Bella, a young Jewish refugee, and her family face daily threats to their lives and dignity from the deeply antisemitic society around them. Gabriel, her lover, sails to India with General Albuquerque's fleet seeking wealth and a secure future for themselves. Meanwhile, on the banks of the Tungabhadra in the Vijayanagara Empire, the young couple Hampamma and Keshava find themselves caught in the storm of religious violence and the cruel rigmarole of tradition. The two stories converge in Goa with all the thunder and gush of meeting rivers. Set in the late 15th and early 16th century, Tejo Tungabhadra is a grand saga of love, ambition, greed, and a deep zest for life through the tossing waves of history.
Vasudhendra (ವಸುಧೇಂದ್ರ) was born at Sandur in Ballari district, Karnataka. After working as a software professional for more than twenty years, Vasudhendra now runs his own publication house, Chanda Pustaka, which publishes and encourages new writing in Kannada and has instituted the Chanda Pustaka Award which recognizes young short story writers. He is also associated with local support groups for LGBT individuals. The author of thirteen books in Kannada, that have sold over 80,000 copies, Vasudhendra has won many literary awards, including the Kannada Sahitya Academy Book Prize, the Da Raa Bendre Story Award and the Dr U.R. Ananthamurthy Award.
ಕನ್ನಡ ಚಲನಚಿತ್ರಗಳು ಬಿಡುಗಡೆಯ ಮುನ್ನವೆ ಟಿಕೆಟ್ಗಳೆಲ್ಲ ಖಾಲಿ ಆಯ್ತೆಂದ್ರೆ ಇಲ್ಲವೇ ಕನ್ನಡ ಪುಸ್ತಕವೊಂದು ಲೋಕಾರ್ಪಣದ ಮುನ್ನವೆ ಮೊದಲ ಮುದ್ರಣ ಖಾಲಿ ಆದಾಗ ಕನ್ನಡದ ಅಭಿಮಾನಿಯಾಗಿ ನಮಗೆ ಬಹಳ ಸಂತೋಷವಾಗುತ್ತದೆ.. ಈ ರೀತಿಯ ಸಂತೋಷ ನನಗೆ ಆಗಿದ್ದು ತೀರ ಇತ್ತೀಚೆಗೆ, ವಸುದೇಂದ್ರರ ತೇಜೋ ತುಂಗಭದ್ರಾ ಪುಸ್ತಕ ಬಿಡುಗಡೆಯ ಮುನ್ನವೇ ಮೊದಲ ಮುದ್ರಣ ಖಾಲಿ ಎಂಬ ಸುದ್ದಿ ಓದಿದಾಗ...ಬಿಡುಗಡೆಯ ಮುನ್ನವೇ ಪುಸ್ತಕ ನಿಮ್ಮ ಕೈ ಸೇರುತ್ತದೆ ಎಂಬ ಸುದ್ದಿ ಕೇಳಿದ ತಕ್ಷಣ order ಮಾಡಿದ್ದಯ್ತು, ಆದರೆ ನನ್ನ ದುರಾದೃಷ್ಟಕ್ಕೆ ನನ್ನ ಕೈ ಸೇರಿದ್ದು ಬಿಡುಗಡೆ ಆಗಿ 4 ದಿನದ ನಂತರ, ಏನೇ ಇರಲಿ ಪುಸ್ತಕ ಸಿಕ್ಕಿದ್ದು ಆಯ್ತು, ಓದಿದ್ದು ಆಯ್ತು.... ಒಂದೇ ಶಬ್ದದಲ್ಲಿ ಪುಸ್ತಕವನ್ನು ವಿಮರ್ಶಿಸಬೇಕಂದರೆ "ಅದ್ಬುತ"...
ವಸುದೆಂದ್ರರು ಈ ಕಾದಂಬರಿ ಬರೆಯೋಕೆ ಮಾಡಿಕೊಂಡಿರುವ ತಯ್ಯಾರಿ ಅಗಾಧ ಮತ್ತು ಅತ್ಯವಶ್ಯಕ, ಕೃಷ್ಣದೇವರಾಯರ ಕಾಲದ ಕಷ್ಟ ಕಾರ್ಪಣ್ಯ, ಅವರ ಉಡುಗೆ ತೊಡುಗೆ, ಅವರ ಆಹಾರ ಪದ್ದತಿ, ಪೋರ್ಚುಗೀಸರ ಪದ್ದತಿಗಳು, ಬಹಮನಿಗಳ ಪದ್ದತಿಗಳು, ಯಹೂದಿಗಳ ಪದ್ದತಿಗಳು ಇವೆಲ್ಲವನ್ನು ಅಗೆದು ಬಗೆದು ಒಂದು ಸುಕೃತಿಯನ್ನು ನಮ್ಮ ಮಡಿಲಿಗೇರಿಸಿದ್ದಾರೆ,
ಇಲ್ಲಿ ಚಿಕ್ಕ ಚಿಕ್ಕ ಪಾತ್ರಗಳು ಕಾಡುತ್ತದೆ, ಎಲ್ಲ ಪಾತ್ರಗಳು ಇಲ್ಲಿ ಎಷ್ಟು ಅದ್ಭುತವಾಗಿ ಕಾದಂಬರಿಗೆ ಹೊಂದುಕೊಳ್ಳುತದೆಯಂದರೆ ಒಂದು ಪಾತ್ರ ಇಲ್ಲದಿದ್ದರೂ ಕಾದಂಬರಿ ಅಪೂರ್ಣ ಆಗುತ್ತಿತೇನೋ ಎಂದು ಭಾಸವಾಗುತ್ತದೆ, ಗೇಬ್ರಿಯಲ್, ಬೆಲ್ಲಾ, ಹಂಪಮ್ಮ, ಕೇಶವ, ಮಾಪನ, ಚಂಪಕ್ಕ, ಗುಣಸುಂದರಿ, ಜಕೋಬ್, ಅಗ್ವೇದ, ಅಡವಿಸ್ವಾಮಿ, ಈಶ್ವರಿ, ಅಹ್ಮದಕಣ್ಣ, ಬ್ಯಾಲಮ್, ಮಮ್ತಾಜ್ ಮುಂತಾದವು ಒಂದೊಂದು ಪಾತ್ರವು ಒಂದೊಂದು ಕಥೆ ಹೇಳುತ್ತದೆ...
ಕಾದಂಬರಿಯ ಸಂಭಾಷಣೆ ಮತ್ತು ಭಾಷೆ ಎಷ್ಟು ಚಂದವೋ ಅಷ್ಟೇ ಹರಿತವು ಕೂಡ... ನನಗೆ ಬಹಳ ಕಾಡಿದ ಕೇಲವು ಹೀಗಿವೆ 1. ಒಮ್ಮೆಇಡೀ ಜಗತ್ತಿಗೆ ಒಂದೇ ಧರ್ಮವಿದ್ದರೆ ಚೆನ್ನಾಗಿತ್ತು ಹೀಗೆ ಒಬ್ಬರನ್ನೊಬ್ಬರು ಅಧರ್ಮಿಗಳೆಂದು ಜರಿದು ಬಡಿದಾಡುವ ಸಂದರ್ಭ ಇರುತ್ತಿರಲಿಲ್ಲ
2. ಸತ್ಯವನ್ನು ಅರುಹಿದರೂ ಅರ್ಥ ಮಾಡಿಕೊಳ್ಳುವ ಯೋಗ್ಯತೆ ಮನುಷ್ಯರಿಗಿಲ್ಲವೆಂದು ನದಿ ಬೆಟ್ಟಗಳು ಮೌನಿಗಳಾದವೆ?
3. ಭವಿಷ್ಯದ ತಿರುವುಗಳನ್ನು ನಮಗೆಲ್ಲ ಊಹಿಸಲು ಸಾಧ್ಯವಾಗಿಬಿಟ್ಟರೆ, ಇನ್ನು ಬದುಕಿನಲ್ಲಿ ಉಳಿಯುವ ಆಸಕ್ತಿಯಾದರು ಏನು?
4. ದ್ವೇಷ ಅದೆಷ್ಟು ಭೀಕರವಾಗಿತ್ತೆಂದರೆ, ಪೋರ್ಚುಗೀಸ್ ಯುವಕ ತುಂಬು ಬಸುರಿಯನ್ನು ಕೊಂದಿದ್ದು ಅಲ್ಲದೆ, ಆಕೆಯ ಹೊಟ್ಟೆಯನ್ನು ಬಗೆದು ಆ ಹುಟ್ಟದ ಮಗುವಿನ ತಲೆಯನ್ನು ಕಡಿದುಬಿಟ್ಟ. ಹೀಗೆ ಪುಟ ಪುಟಕ್ಕೂ ಅನಮ್ಯ ಪಾತ್ರಗಳ ಮತ್ತು ಸೊಗಸಾದ ಭಾಷೆಯ ಮೂಲಕ ವಸುದೆಂದ್ರರು ನಮ್ಮನ್ನು ಆವರಿಸುತ್ತ ಹೋಗುತ್ತಾರೆ.... ಈಗಿನ ಭಾರತೀಯ ರಾಜಕೀಯ ಪರಿಸ್ಥಿತಿಗು ಕಾದಂಬರಿಯ ವಸ್ತುವಿಗೂ ಬಹಳ ಸಾಮ್ಯವಿರುದರಿಂದ ಈ ಕೃತಿ ನಮ್ಮನ್ನು ಒಂದು ಗಳಿಗೆಗಾದರೂ, ಮನುಜ ಎಷ್ಟೇ ಪ್ರತಿಭಾವಂತನಾದರೂ ಇವ ಪಾಪಿಯೆ ಎನಿಸುತ್ತದೆ, ಏಕೆಂದರೆ ಶತಮಾನಗಳು ಉರಳಿದರೂ ಮನುಜ ಇತಿಹಾಸದಿಂದ ಏನನ್ನೂ ಕಲಿಯಲಿಲ್ಲ, ಅದಕ್ಕೆ ಎನೋ ಹಸ್ತಾಕ್ಷರದ ಜೊತೆಗೆ ಲೇಖಕರು ಇತಿಹಾಸವೆಮಗೆ ಗುರು ಎಂದು ಬರೆದದ್ದು....
ಹೀಗೆ ಹೇಳುತ್ತಾ ಹೋದರೆ ಗ್ರಂಥವಾದಿತು... ಒಟ್ಟಿನಲ್ಲಿ ಇದು ಎಲ್ಲ ಕನ್ನಡಿಗರು ಓದಲೇಬೇಕಾದ ಕೃತಿ.... ಇದು ದೀರ್ಘ ಅನ್ನಿಸೋದೆ ಇಲ್ಲ... ಗಾತ್ರ ನೋಡಿ ಓದದೇ ಇರಬೇಡಿ... ಮೊದಲ ಪುಟದಿಂದ 451ನೆ ಪುಟದ ವರೆಗೂ ಇದು ನಿಮ್ಮನ್ನು ನಿರಾಶೆ ಮಾಡೋದಿಲ್ಲ...
ಕಾದಂಬರಿಯ ಓದಿದ ಕೊನೆಗೆ ನಮಗೆ ಅನಿಸೋದು ಇಷ್ಟೇ "ಲೊಳಲೊಟ್ಟೆ ಎಲ್ಲ ಲೊಳಲೊಟ್ಟೆ"...
ಇತಿಹಾಸವ ವಸ್ತುನಿಷ್ಟವಾಗಿ ಬೆರೆಸಿ ಕಾದಂಬರಿ ಬರೆಯುವುದು ಒಂದು ಕಲೆ. ಹದ ತಪ್ಪಿದರೆ ಕಥೆ ಹೋಗಿ ಪ್ರಬಂಧವಾಗುವ ಅಪಾಯವೂ, ಕಥೆಯ ರಸಾಸ್ವಾದನೆ ಹೋಗಿ ಶುಷ್ಕ ಮಾಹಿತಿಗಳ ಕಣಜವೂ ಅಗುವ ಅಪಾಯ ಇದೆ. ಇದೆಲ್ಲವನ್ನೂ ಸಂಭಾಳಿಸಿದ ರೀತಿ ಮತ್ತು ಈ ಕಥೆಗಳ ಹೆಣೆದ ರೀತಿ ' ವ್ಹಾ ಉಸ್ತಾದ್' ಅನ್ನುವಂತಿದೆ.
ವಿಜಯನಗರ ಸಾಮ್ರಾಜ್ಯ, ಪೋರ್ಚುಗಲ್,ತೇಜೋ ನದಿ,ತುಂಗಭದ್ರೆ,ಗೋವಾ,ಮುಸ್ಲಿಮರು ಎಷ್ಟೆಲ್ಲ ಅಂಶಗಳ ಇದು ಕೇವಲ ಚಿಕ್ಕ ಕಾಲಘಟ್ಟವೊಂದರಲ್ಲಿ ಸೇರಿಸಿ ಬಿಗಿಯಾಗಿ ಕಟ್ಟಿದೆ ಎಂಬ ಆಶ್ಚರ್ಯ ಪುಟಪುಟದಲ್ಲೂ ಕಾಡುತ್ತದೆ. ಎಲ್ಲಕ್ಕಿಂತ ಮುಖ್ಯ ಅಂಶ ಇದು ರಾಜರ ಕಥೆ ಅಲ್ಲ ಇದು ಜನಸಾಮಾನ್ಯರ ಕಥೆ! ಅಂದವಾದ ಮುದ್ರಣ, ಮತ್ತೆ ಮತ್ತೆ ಓದಿಸಿಕೊಳ್ಳುವ ವಿವರಣೆಗಳು.
ನಾವೆಯ ಯಾನದ ದೃಶ್ಯಾವಳಿಗಳು ಉತ್ಕೃಷ್ಟ ಮಟ್ಟ ಅಮಿತಾವ್ ಘೋಷರ ಇಬಿಸ್ ಟ್ರೈಯಾಲಜಿಯ ಮಟ್ಟಕ್ಕಿದೆ. (ಎರಡೂ ಸಂಪೂರ್ಣ ಬೇರೆ ಬೇರೆ ಕಥೆಗಳು.ಅದರಲ್ಲೂ ನೌಕಾಯಾನದ ವಿವರಣೆ ಬರುವುದರಿಂದ ನೆನಪಾಯಿತು)
ಗೆಳೆಯರೂ, ರಸಾನ್ವೇಷಿ ಓದುಗರೂ ಆದ Krishna Prakasha Ulithaya ಅವರು ಕರೆ ಮಾಡಿ ಕಾದಂಬರಿಯ ಕೆಲ ವಿವರಣೆಗಳ ಬಗ್ಗೆ ಹೊಗಳಿದಾಗ ಕುತೂಹಲ ಹೆಚ್ಚಾಗಿತ್ತು.ಹಾಗಾಗಿಯೇ ಬೇರೆಲ್ಲ ಪುಸ್ತಕ ಬದಿಗೊತ್ತಿ ಇದನ್ನು ಓದಿದ್ದು. ನಿನ್ನೆ ಮಧ್ಯಾಹ್ನ ಶುರುಮಾಡಿದ್ದು ಈಗ ಮುಗಿಯಿತು. ಇನ್ನೊಂದು ಮುಖ್ಯ ಅಂಶ ಪುಟ ಪುಟದಲ್ಲಿ ಕೂಡ ಬರೆದಿಟ್ಟುಕೊಳ್ಳಬಹುದಾದ 'ಜೀವನ ಸತ್ಯ'ದ ಸಾಲುಗಳು.
ಕನ್ನಡ ಕಾದಂಬರಿ ಲೋಕದಲ್ಲಿ ಈ ಕೃತಿ ಅಪೂರ್ವ ಅಂತ ನನಗನಿಸಿತು.
ಸೂಚನೆ - ಇದನ್ನು ಓದಿ ಮುಗಿಸಿ ಗೋಪಾಲಕೃಷ್ಣ ಪೈ ಅವರ ಸ್ವಪ್ನ ಸಾರಸ್ವತ ಓದಿ. ಇಲ್ಲಿ ಮುಗಿವ ಕಥೆಯಿಂದ ಅಲ್ಲಿ ಕಥೆ ಶುರುವಾಗುತ್ತದೆ. ದಯವಿಟ್ಟು ಓದಿ.
Vasudhendra ಅಭಿನಂದನೆ. ನಿಮ್ಮ ಮೂರು ವರ್ಷದ ಶ್ರಮಕ್ಕೆ ಮೆಚ್ಚುಗೆ.
I first heard of ‘Tejo Tungabhadra’ when my 81-year-old mom, an ardent fan of Vasudhendra’s books, read it in Kannada. My sister then read it. I bemoaned my inability to read in Kannada and didn’t imagine there would be an English translation, even though I have been hoping that more of Vasudhendra’s works would be translated.
Imagine my delight when I saw that there was finally an English translation when I read Rashmi Vasudeva’s interview with translator Maithreyi Karnoor in Deccan Herald. I abandoned all the other books I was reading and clicked ‘Buy’ on Amazon. For 5 days, I was transported to 15th-16th century Portugal and India.
The sweep of Vasudhendra’s world is vast. There were so many historical nuggets that I had never known before. Who knew that chillies were introduced into India? Or that no one in Karnataka knew what a dosa was then?
The translation is superb, and my reading world came alive with this book.
In giving an intricate glimpse into life then, Vasudhendra has created one of the masterpieces in Indian historical fiction. And no, that's not hyperbole but an understatement.
Being a History lover. I always love to read historical fiction and non fiction history books. The Portugal angle story kinda reminds me of The Last Kabbalist of Lisbon and Guardian of the Dawn by Richard Zimler. You can read the blurb know to more. I so wanted to love this book but sadly this book didn't workout well for me. I am so disappointed with this one. Even Kannadiga friends of mine know that I was dying to read this book for a long time. Story wasn't that interesting for me. We Indians deserves a lot of good historical fiction books. Not recommended.
A good friend of mine had bought the English translation. Since he was reading the book wanted to know how he felt about the book I was appalled by his take on few references from the book. Since I had read it a 1.5 year ago had not given much thought about the biased opinions of author so decided to re read the book to my dismay there are lot of things in the book that is far from the truth. Fake narrative of Shaiva, Vaishnava, coverup of Islamic and Christian atrocities , Showing The great Hindu King Sri Krishnadevaraya as power hungry,selfish and the list goes on. Many including me have / had given 5 star rating don’t think this books deserves it.
ಪುಸ್ತಕದ ಕೊನೆಗೆ ಮೌನಕ್ಕೊರಗಿ ಕುಳಿತುಬಿಟ್ಟೆ. ವಸುಧೇಂದ್ರರವರ ಬರಹದ ಮೋಡಿಗೆ ಸಿಕ್ಕು ಕಣ್ಣು ಧಾರಾಕಾರವಾಗಿ ಹರಿಯುತ್ತಿತ್ತು. ಒಂದೊಂದು ಕಥೆಗೂ ಉಪಕಥೆ, ಎಲ್ಲವನ್ನೂ ಬೆಸೆಯುವ ಕೊಂಡಿಗಳು. ಓದುಗನೆದೆಗೆ ಸೀದಾ ದಾಳಿ ಮಾಡುತ್ತವೆ. ಪ್ರತಿ ಪಾತ್ರಕ್ಕೂ ಅದರದ್ದೇ ಆದ ಮಹತ್ವ ನೀಡಿದ್ದಾರೆ. ೪೫೧ ಪುಟಗಳ ಪುಸ್ತಕ ಸರಾಗವಾಗಿ ಒಂದು ಓದಿಗೆ ಓದಿಸಿಕೊಂಡಿತು.
ಪೋರ್ಚುಗಲ್ ದೇಶದ ಲಿಸ್ಬನ್ನಲ್ಲಿ ಹರಿಯುವ ತೇಜೋ ಇಂದಿನ ಟೈಗ್ರಿಸ್ ನದಿಯ ತೀರ ಮತ್ತು ನಮ್ಮ ತುಂಗಭದ್ರಾ ನದಿಯ ತೀರಗಳಲ್ಲಿ ನಡೆಯುವ ಎರಡು ಕಥೆಗಳನ್ನು ಹೇಳುತ್ತಾ ಸಾಗುವ ಕಾದಂಬರಿಯು ಎಂಥ ಓದುಗನನ್ನು ಹಿಡಿದಿಡುತ್ತದೆ. ಈ ಎರಡೂ ಕಥೆಯಲ್ಲಿ ತಿರುವಿಗಳಿಗೆ ಒಂದು ಚೂರು ಕೊರತೆ ಮಾಡದೇ ಲೇಖಕ ವಸುಧೇಂದ್ರರವರು ಓದುಗನ ಮನಸ್ಸಿನೊಳಗೆ ಇಳಿಯುತ್ತಾರೆ.
ಕಥೆ ಕೊಂಚ ದೂರ ಸಾಗಿದ ನಂತರ ಲಿಸ್ಬನ್ನ ಪ್ರೇಮಿಗಳಾದ ಗೇಬ್ರಿಯಲ್ ಮತ್ತು ಬೆಲ್ಲಾ ಮದುವೆಯಾಗಲು ಇಚ್ಛಿಸುತ್ತಾರೆ. ಕ್ರೈಸ್ತನಾದ ಗೇಬಿ ಮತ್ತು ಯಹೂದಿಯಾದ ಬೆಲ್ಲಾ ಮದುವೆಯಾಗಲು ಮತಗಳ��� ತೊಂದರೆ ಅಡ್ಡ ಬರದಿದ್ದರೂ ಅಂತಸ್ತಿನ ಅಂತರ ಬರುತ್ತದೆ. ಬೆಲ್ಲಾಳ ತಂದೆಯ ಮಾತುಗಳಿಗೆ ನೊಂದು ಗೇಬಿ, ಗಾಮಾ ಮತ್ತು ಅಲ್ಬೂಕರ್ಕ್ನ ಜೊತೆ ಭಾರತಕ್ಕೆ ಬಂದು ಮಸಾಲೆ ಪದಾರ್ಥಗಳನ್ನು ದೋಚಿ ಅಥವಾ ಭಾರತದ ಶ್ರೀಮಂತನ ಬಳಿ ಕೆಲಸಕ್ಕೆ ಸೇರಿ ಬೆಲ್ಲಾಳ ಅಂತಸ್ತಿಗೆ ತೂಗಬೇಕು ಎಂದು ನಿಶ್ಚಯಿಸುತ್ತಾನೆ. ಅವರೊಂದಿಗೆ ಪಯಣಿಸಿ ಭಾರತಕ್ಕೆ ಬಂದು ಗೇಬಿ ಶ್ರೀಮಂತನಾಗಿ ಹೋಗುತ್ತಾನಾ? ಅಥವಾ ಮಾರ್ಗ ಮಧ್ಯವೇ ಕಾಲವಾಗುತ್ತಾನಾ? ಉತ್ತರ ಪುಸ್ತಕದಲ್ಲಿ.
ತುಂಗೆಯ ತಟದಲ್ಲಿ ವಿಜಯನಗರದ ಅರಸರ ಆಳ್ವಿಕೆಯಲ್ಲಿರುವ ತೆಂಬಕಪುರದ ಸಾಮಾಜಿಕ ಜನ ಜೀವನದ ಕುರಿತು ಹೇಳುತ್ತಾ ಶುರುವಾಗುವ ಈ ಕಥೆಯಲ್ಲಿ ಸುಂದರಿ ಹಂಪಮ್ಮನನ್ನು ವರಿಸಲು ಮಾಪಳ ಮತ್ತು ಕೇಶವ, ಭೀಮಸೇನ ಯುದ್ಧಕ್ಕೆ ಅಖಾಡಕ್ಕೆ ಇಳಿಯುತ್ತಾರೆ. ಗೆದ್ದವರು ಯಾರು? ಹಂಪಮ್ಮಳನ್ನು ಪಡೆದವರು ಯಾರು? ಸೋತವರೇನಾದರು? ಎಷ್ಟು ಸಂತಸದಿಂದ ಸಂಸಾರ ಮಾಡಿದಳು ಎಂಬ ಪ್ರಶ್ನೆಗೆ ಉತ್ತರ ಪುಸ್ತಕದಲ್ಲಿದೆ.
ಲಿಸ್ಬನ್(ತೇಜೋ) - ವಿಜಯನಗರ(ತುಂಗಭದ್ರಾ) ಅರ್ಥವಾಗುತ್ತದೆ. ಗೋವಾ ಯಾಕೆ ಎಂಬ ಪ್ರಶ್ನೆಗೂ ಉತ್ತರವಿದೆ.
ತೆಂಬಕ್ಕ, ಚಂಪಕ್ಕ, ಕಮಲೀ ಮತ್ತು ಈಶ್ವರಿ ಪಾತ್ರಗಳು ನೆನಪಿನಲ್ಲಿ ಉಳಿಯುತ್ತವೆ. ಎಲ್ಲಾ ಪಾತ್ರಗಳೂ ಒಂದಲ್ಲ ಒಂದು ಕಡೆ ಓದುಗನ ಕಣ್ಣಂಚನ್ನು ಒದ್ದೆ ಮಾಡಿಸಿ ಇಂಥದೊಂದು ಪಾಡು ಶತ್ರುವಿಗೂ ಬರುವುದು ಬೇಡ ಎನಿಸುವಷ್ಟು ಕರುಳನ್ನು ಕರಗಿಸುತ್ತವೆ. ಮತ್ತೇನೂ ಹೇಳಲಾರೆ!
ಪ್ರೀತಿ, ಮತೀಯ ಭಿನ್ನಾಭಿಪ್ರಾಯಗಳು, ಆರ್ಥಿಕ ಸಂಕಷ್ಟಗಳು, ರಾಜಕೀಯ ಒಳತಂತ್ರಗಳು, ಮತಾಂಧ ಅರಸರುಗಳು, ದ್ವೇಷ ಸಾಧನೆ, ಧರ್ಮಾತೀತ ನಿಲುವುಗಳು ಸೇರಿದಂತೆ ಹತ್ತು ಹಲವು ವಿಷಯಗಳು ಹೇರಳವಾಗಿರುವ ತೇಜೋ ತುಂಗಭದ್ರಾ ಪುಸ್ತಕ ತೇಜೋಮಯವಾಗಿ ಹೊಳೆದಿದೆ ತುಂಗಭದ್ರೆಯಂತೆ ಹರಿದಿದೆ. ಆ ಅಷ್ಟು ವಿಷಯಗಳಲ್ಲಿ ನನ್ನೊಳಗಿನ ಓದುಗನನ್ನು ತುಸು ಹೆಚ್ಚೇ ಕಾಡಿದ್ದು ಪ್ರೀತಿ.
ಇದೊಂದು ಪುಸ್ತಕವನ್ನು ದಯಮಾಡಿ ಸಮಯ ಮಾಡಿಕೊಂಡು ಓದಿ, ನಾಲ್ಕುನೂರು ಪುಟಗಳ ಭಾವನಾತ್ಮಕ ಪಯಣವಿದೆ ನಿಮಗಾಗಿ!! ಎಂದಿನಂತೆ ನೀವು ಓದಿದ್ದರೇ ನಿಮ್ಮ ಅಭಿಪ್ರಾಯವನ್ನು ನನ್ನೊಂದಿಗೂ ಹಂಚಿಕೊಳ್ಳಿ.
ಪುಟಗಳು 464 ಓದಿ ಮುಗಿಸಿದ ಕೂಡಲೇ ,ಧೀರ್ಘವಾದ ಉಸಿರು ತೊಗೊಂಡು ಉಸಿರು ಹೊರಹಾಕಿದೆ , ಒಂದು ಕಡೆ ಇಷ್ಟು ಬೇಗ ಈ ಕಾದಂಬರಿ ಓದಿ ಮುಗಿಸಿದೆ ಎಂಬ ಬೇಸರ ,ಮತ್ತೊಂದು ಕಡೆ ಕಾದಂಬರಿ ಮನಸ್ಸು ತೃಪ್ತಿ ನೀಡಿದೆ .
ಮುಖಪುಟದ ಚಿತ್ರದಲ್ಲಿ ಇಡೀ ಕತೆ ಅಡಗಿ ಕೂತಿದೆ ಅಂತ ಹೇಳಿದರು ತಪ್ಪಾಗುವುದಿಲ್ಲ , ಕತೆ ಹೇಳಲು ಹೊರಟಿರುವ ಮುಖಪುಟ ನಿಜಕ್ಕೂ ಆಕರ್ಷಕವಾಗಿದೆ . ಎರಡು ದೇಶಗಳ ,ಎರಡು ಸಂಸ್ಕೃತಿಯ ವಿಸ್ತಾರವಾಗಿ ಈ ಬೃಹತ್ ಕಾದಂಬರಿ ರಚನೆಯ ವಸುದೇಂದ್ರ ಅವರಿಗೆ ಧನ್ಯವಾದಗಳು ಸರ್ .
ತೇಜು ನದಿಯಿಂದ ಪೋರ್ಚುಗೀಸರ ನೌಕೆಯ ಪ್ರಯಾಣ ಭಾರತದ ಕಡೆ , ಇತ್ತ ಭಾರತದ ವಿಜಯನಗರದ ಆಚಾರ-ವಿಚಾರ ,ಧರ್ಮ, ಸತಿ ಪದ್ಧತಿ, ಪೋರ್ಚುಗೀಸ್ ಜನಾಂಗದವರು ಯಹೂದಿ ಧರ್ಮದವರು ಮತಾಂತರ ಹೊಂದಿಸಿ ಕ್ರೈಸ್ತರ ನ್ನಾಗಿ ಪರಿವರ್ತಿಸುವುದು , ಪೋರ್ಚುಗೀಸ್ ಕ್ರೈಸ್ತರನ್ನು ಗೋವಾದ ಆದಿಲ್ ಶಾನ್ ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದಿಸಿಕೊಳ್ಳುವ ಅಂತ ಆಗಿರುತ್ತದೆ
16 ನೆಯ ಶತಮಾನದ ಕೃತಿ ದಾಖಲಿಸಿದರೂ ಈ ಕಾದಂಬರಿ ಇಂದಿನ ಸಾಮಾನ್ಯ ಬದುಕಿನಲ್ಲಿ ನಡೆಯುವ ಘಟನೆಗಳು ಆಗುತ್ತಿದೆ . ಧರ್ಮ, ವಾಣಿಜ್ಯ, ಪ್ರೀತಿ, ವ್ಯಾಪಾರ, ರಾಜ್ಯಪಾಲ, ದೇಶ, ಮನುಷ್ಯ, ಯುದ್ಧ ,ಮತ, ಕಾಲ, ವಿಸ್ತಾರ ವೈಭವನ್ನು ಹೊಂದಿಕೊಂಡು , ಕಾದಂಬರಿ ನಾಯಕರೆ ಜನಸಾಮಾನ್ಯರೇ ಕಥೆ , ಇದು ರಾಜರ ಕಥೆ ಅಲ್ಲ .
ತೇಜೋ-ತುಂಗಭದ್ರಾ ನದಿಗಳು ,ಪೋರ್ಚುಗೀಸ್ ವಿಜಯನಗರ , ಕ್ರೈಸ್ತ -ಸನಾತನ ,ಎರಡು ಜೋಡಿಗಳ ಪ್ರೇಮದ ಕಥೆ ಆಳ ಹಾಗೂ ಗಟ್ಟಿತನದಿಂದ ಬಿಗಿಯಾಗಿ ಕಟ್ಟಿದೆ ,ಕೊನೆಯ ದೃಶ್ಯಗಳು ಸಂಕಟ ಹಾಗೂ ಕಣ್ಣು ತುಂಬಿಸುತ್ತದೆ .
This is a quick and interesting read that starts at the banks of two rivers, Tejo in Portugal and Tungabhadra in Karnataka, and brings the life in early 16th century before your eyes. The author has done extensive reading about the times by contemporary and later resources. The style is quite easy to read. However I felt there were some expressions that did not look native. Such artificial language constructs could have been avoided, to make it even more readable
Recommended for those who are curious about how life was at a time the European colonists flocked to India to become the masters of the ocean trade.
There are some historical impossibilities/inaccuracies in the story, however I am not going to the nitpick them here. Also I felt that the author was more than eager to make a statement that all religions were equally cruel without stating so as much - which has resulted in somewhat un-needed monkey balancing. Readers can come to their own conclusions!
ಕನ್ನಡದಲ್ಲಿ ಐತಿಹಾಸಿಕ ಕಾದಂಬರಿಗಳು ಬಹಳ ಕಡಿಮೆ. ವಸುಧೇಂದ್ರ ಅವರ ಹೊಸ ಕಾದಂಬರಿ ತೇಜೋ ತುಂಗಭದ್ರಾ ಐತಿಹಾಸಿಕ ಕಾದಂಬರಿಯಾಗಿದ್ದು ಎರಡು ವಿಭಿನ್ನ ಸಂಸ್ಕೃತಿಗಳನ್ನು ಬಿಂಬಿಸುತ್ತದೆ. ವಸುಧೇಂದ್ರ ಅವರ ಪೂರ್ಣ ಪ್ರಮಾಣದ ಸಂಶೋಧನೆಯ ಫಲವಾಗಿ ಕನ್ನಡ ಸಾಹಿತ್ಯಕ್ಕೆ ಒಂದೊಳ್ಳೆ ಗ್ರಂಥದ ಸೇರ್ಪಡೆಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.
ತೇಜೋ ನದಿಯಿಂದ ಶುರುವಾಗುವ ಕತೆ ತುಂಗಭದ್ರಾವರೆಗೂ ದಾರಿಯಲ್ಲಿ ಸಿಗುವ ಸಣ್ಣ ತೊರೆ, ಝರಿಗಳನ್ನು ಕೂಡಿಕೊಂಡು ಹರಿಯುತ್ತ ಸಾಗುತ್ತದೆ. ಕತೆಯಂತೂ ಸ್ವಾರಸ್ಯಪೂರ್ಣವಾಗಿದೆ. ಎರಡು ಸಂಸ್ಕೃತಿಗಳು ಓದುಗನ ಸ್ಮೃತಿಗೆ ನಿಲುಕದಂತೆ ಸಮಾಗಮವಾಗುವುದು ಲೇಖಕರ ಕಥಾ ನಿರೂಪಣೆಯ ನೈಪುಣ್ಯಕ್ಕೆ ಸಾಕ್ಷಿ.
ಪ್ರತಿಯೊಬ್ಬರೂ ಓದಲೇಬೇಕಾದಂತಹ ಕಾದಂಬರಿ. ಅಲ್ಲಲ್ಲಿ ಕೆಲವು ಐತಿಹಾಸಿಕ ತಿದ್ದುಪಡಿಗಳಿವೆಯಾದರೂ ಪುಸ್ತಕದ ತೂಕದ ಮುಂದೆ ಅವೆಲ್ಲವೂ ನಗಣ್ಯ.
ತೇಜೋ- ತುಂಗಭದ್ರ - ಹೆಸರಿನಷ್ಟೇ ವಿಭಿನ್ನ ಹಾಗೂ ವಿಶಿಷ್ಟ ಕಾದಂಬರಿ. ವಸುಧೇಂದ್ರರ ಇತರ ಬರಹಗಳದ್ದೇ ಒಂದು ಧಾಟಿಯಾದರೆ ಇದು ಹೊಸದೊಂದೇ ದಾಟಿಯಲ್ಲಿ ಮೂಡಿಬಂದಿದೆ. ಐತಿಹಾಸಿಕ ದಾಖಲೆಗಳ ಸುತ್ತ ಹೆಣೆದಿರುವ ಕಾಲ್ಪನಿಕ ಕತೆ ಎಲ್ಲಿಯೂ ಬೇಸರವಾಗದಂತೆ ಓದಿಸಿಕೊಳ್ಳುತ್ತದೆ. Its a classic!
ಪೋರ್ಚುಗಲ್ನ ಲಿಸ್ಬನ್ ಹಾಗೂ ಭಾರತದ ವಿಜಯನಗರ ಸಾಮ್ರಾಜ್ಯ, ಈ ಎರಡೂ ದೇಶಗಳಲ್ಲಿ, ಐದು ಶತಮಾನಗಳ ಹಿಂದೆ ನಡೆಯುವ ಐತಿಹಾಸಿಕ ಘಟನೆಗಳು ಜನಸಾಮಾನ್ಯರ ಮೇಲೆ ಹೇಗೆ ಪರಿಣಾಮವನ್ನುಂಟು ಮಾಡಿದವು ಅನ್ನುವ ಕಥಾಹಂದರವನ್ನುಳ್ಳ ಕಾದಂಬರಿ ವಸುಧೇಂದ್ರ ಅವರ "ತೇಜೋ-ತುಂಗಭದ್ರಾ". ಐತಿಹಾಸಿಕ ಘಟನೆಗಳಷ್ಟೇ ಅಲ್ಲದೆ ಎರಡು ದೇಶಗಳ ಧರ್ಮ,ವಾಣಿಜ್ಯ, ವ್ಯಾಪಾರ, ರಾಜಧರ್ಮ ಮತ್ತು ಅಲ್ಲಿನ ಆಚಾರ ವಿಚಾರಗಳ ಪರಾಮರ್ಶೆಯಾಗಿದೆ.
ಇಂತದ್ದೊಂದು ಅದ್ಭುತ ಕೃತಿ ರಚಿಸುವಲ್ಲಿ ಲೇಖಕರ ಸಮೃದ್ಧ ಸೃಜನಶೀಲತೆಯಷ್ಟೇ ಅಲ್ಲದೆ ಅವರು ನಡೆಸಿದ ಅಗಾಧ ಸಂಶೋಧನೆಯು ಪ್ರತಿ ಪುಟಪುಟಗಳಲ್ಲೂ ಕಾಣುತ್ತದೆ.
ನಾನಿನ್ನೂ ಹೆಚ್ಚು ಪುಸ್ತಕಗಳನ್ನು ಓದದೇ ಇರುವುದರಿಂದ, ಕನ್ನಡ ಅಥವಾ ಬೇರೆ ಯಾವುದೇ ಭಾಷೆಯಲ್ಲಿ ಇಂತದ್ದೊಂದು ವಿಭಿನ್ನ ಕೃತಿ ರಚನೆ ಆಗಿದೆಯೋ ಇಲ್ವೋ ಅನ್ನೋ ಮಾಹಿತಿ ನನಗಿಲ್ಲ. ಆದರೆ ತೇಜೋ-ತುಂಗಭದ್ರಾದಂತಹ ಮೇರು ಕೃತಿಯನ್ನು ವಸುಧೇಂದ್ರ ಅವರು ಕನ್ನಡಕ್ಕೆ ಕೊಟ್ಟಿದ್ದಾರೆ, ಇದು ಕನ್ನಡಿಗರೆಲ್ಲರೂ ಹೆಮ್ಮೆ ಪಡುವಂತಹ ವಿಚಾರ.
ನಮ್ಮನ್ನು 15ನೇ ಶತಮಾನಕ್ಕೆ ಕರೆದುಕೊಂಡು ಹೋಗುವ ಈ ಕಥೆ ತುಂಬಾ ಸ್ವಾರಸ್ಯಕರವಾಗಿದ್ದು ಓದುಗರನ ಮನ ಸೆಳೆಯುವುದು. ಭಾರತ ದೇಶದ ಶ್ರೀಮಂತಿಕೆಯನ್ನು ಹಲವು ಬಾರಿ ವರ್ಣಿಸಿರುವ ರೀತಿ ಹಾಗೂ ಪೋರ್ಚುಗಲ್ ನಾಡಿನ ಜನರ ಮನಸ್ಥತಿಯನ್ನು ಚಿತ್ರಿಸಿರುವ ರೀತಿ ನನಗೆ ಬಹಳ ಇಷ್ಟವಾಯಿತು. ತೇಜೋ ತುಂಗಭದ್ರಾ ಈ ಕಥೆಗೆ ತುಂಬಾ ಸೂಕ್ತವಾದ ಹೆಸರು. ಇದು ಒಂದು ಐತಿಹಾಸಿಕ, ಕಾಲ್ಪನಿಕ ಕಥೆ ಇದ್ದರೂ, ಅದಕ್ಕೂ ಮೊದಲು ಒಂದು ಸುಂದರ ಪ್ರೇಮ ಕಥೆ ಎ��ದೇ ಹೇಳಬಹುದು.
ತೇಜೋ ತುಂಗಭದ್ರಾ ನಾನು ಓದಿದ ವಸುಧೇಂದ್ರ ಅವರ ಮೊದಲನೇ ಕೃತಿ. ಹೊಸ ಲೇಖಕರ ಕೃತಿಯನ್ನು ಓದಬೇಕಾದಾಗ ಇದ್ದ ಕಸಿವಿಸಿಯನ್ನು ಈ ಕಾದಂಬರಿ ನಿವಾರಿಸಿತ್ತು. ತುಂಬಾ ಸರಳವಾಗಿ ಓದಿಸಿಕೊಂಡು ಹೋಗುವ ಮತ್ತು ಸರಳ ಭಾಷೆಯಲ್ಲಿ ಬರೆದ ಪುಸ್ತಕ. ಲಿಸ್ಬನ್ ನ್ನಿನಲ್ಲಿ ನಡೆಯುವ ಸಂಗತಿಗಳನ್ನು ಓದುವಾಗ ನೀವು ಅಲ್ಲಿಯೇ ಇದ್ದಿರೆನ್ನುವ ಭಾವವನ್ನು ತಂದು ಕೊಡುತ್ತವೆ, ಹಾಗೆಯೇ ವಿಜಯನಗರದ ಸಂಗತಿಗಳು, ವಿಜಯನಗರಕ್ಕೆ ಮರಳಿದಾಗ ಆ ಗತವೈಭವಕ್ಕೆ ಕರೆದುಕೊಂಡು ಹೋಗುತ್ತವೆ. ಯುರೋಪಿಯನ್ ದೇಶಗಳಲ್ಲಿ ಯಹೂದಿಗಳ ಮೇಲೆ ಆದ ಅನ್ಯಾಯವನ್ನು, ಅದರಂತೆ ಭಾರತದ ಮೇಲೆ ಮುಸ್ಲಿಮರ ದಾಳಿ ಮತ್ತು ಅವರ ಕ್ರೌರ್ಯಗಳನ್ನೂ ಸ್ಪಷ್ಟವಾಗಿ ಬಿಂಬಿಸಲಾಗಿದೆ. ಈ ಎರಡೂ ದೇಶಗಳಲ್ಲಿ, ಮತ್ತು ಜಗತ್ತಿನಲ್ಲಿ ಆ ಕಾಲದಲ್ಲಿ ನಡೆದ ರಾಜಕೀಯ, ಸಾಮಾಜಿಕ ಬದಲಾವಣೆಗಳಲ್ಲಿ ಒಂದು ಪ್ರೇಮ ಕಥೆಯನ್ನು, ಮತ್ತು ಅನೇಕ ಮನ ಮುಟ್ಟುವ ಸಣ್ಣ ಸಾಂಸಾರಿಕ, ಭಾವುಕ ಕಥೆಗಳನ್ನು ಹೆಣೆಯುವಲ್ಲಿ ಲೇಖಕರು ಮನ ಗೆದ್ದಿದ್ದಾರೆ. ಕಾದಂಬರಿಯ ಕೊನೆ ಮಾತ್ರ ಊಹಿಸಿದಂತೆಯೇ ನಡೆಯುವುದು ಸ್ವಲ್ಪ ಬೇಸರ ತಂದರೂ, ಒಟ್ಟಿನಲ್ಲಿ ಒಂದು ಬಾರಿ ಓದಬಹುದಾದ ಕೃತಿ.
#ಮಸ್ತಕಬೆಳಗಿದಪುಸ್ತಕ ಪುಸ್ತಕ: ತೇಜೋ-ತುಂಗಭದ್ರಾ ಲೇಖಕರು: ವಸುಧೇಂದ್ರ ಪ್ರಕಾಶಕರು: ಛಂದ ಪುಸ್ತಕ ಬೆಂಗಳೂರು
ಇದು ನಾನು ಓದಿದ ವಸುಧೇಂದ್ರ ಅವರ ಮೊದಲ ಕೃತಿ. ಇತಿಹಾಸದ ಒಂದು ಕಾಲಘಟ್ಟದಲ್ಲಿ ಎರಡು ಬಲಿಷ್ಠ ಪ್ರಭುತ್ವಗಳ ಸಾಮಾನ್ಯ ಜನರ ಜೀವನವನ್ನು ಎರಡು ನದಿಗಳ ದಂಡೆಯ ಹಿನ್ನೆಲೆಯಲ್ಲಿ ಚಿತ್ರಿಸಿದ ಅರ್ಥಪೂರ್ಣ ಕಾದಂಬರಿ. ಕಾದಂಬರಿಯ ಪ್ರತಿ ಪುಟದಲ್ಲೂ ಲೇಖಕರ ಅಧ್ಯಯನಶೀಲತೆ ಹಾಗೂ ಪರಿಶ್ರಮಗಳು ಎದ್ದುಕಾಣುತ್ತವೆ. ಸಾಮಾನ್ಯವಾಗಿ ಎಲ್ಲಾ ಐತಿಹಾಸಿಕ ಕಾದಂಬರಿಗಳಲ್ಲಿ ಪ್ರಭುತ್ವದ ವರ್ಣನೆ, ಅವರು ಗೆದ್ದ ಸೋತ ಯುದ್ಧಗಳು ಹಾಗೂ ರಾಜಕೀಯ ತಂತ್ರ ಕುತಂತ್ರಗಳು ಚಿತ್ರಿತವಾದರೆ, ಈ ಕಾದಂಬರಿಯಲ್ಲಿ ಜನಸಾಮಾನ್ಯರ ಬದುಕು ಬವಣೆಗಳನ್ನು, ರಾಜಕಾರಣವು ಸಾಮಾನ್ಯ ಜನರಲ್ಲಿ ಉಂಟುಮಾಡುವ ಅಲ್ಲೋಲ-ಕಲ್ಲೋಲಗಳನ್ನು ಯಶಸ್ವಿಯಾಗಿ ಕಟ್ಟಿಕೊಟ್ಟಿದೆ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಅಂದಿನ ಕಾಲದಲ್ಲಿ ನಡೆಯುತ್ತಿದ್ದ ಬಲವಂತದ ಮತಾಂತರಗಳು.ಅವು ಜನಜೀವನವನ್ನು ಎಂತಹ ಸಂಕಷ್ಟಕ್ಕೆ ಗುರಿಪಡಿಸುತ್ತಿದ್ದವು, ಜನಗಳ ನಡುವೆ ಎಂತಹ ದ್ವೇಷದ ಬೀಜವನ್ನು ಬಿತ್ತುತ್ತಿದ್ದವೆಂಬುದು ಹಾಗೂ ಮತಾಂತರಗೊಂಡ ವ್ಯಕ್ತಿ ಅನುಭವಿಸುತ್ತಿದ್ದ ಮಾನಸಿಕ ಕಿರುಕುಳಗಳು ಹೇಗೆ ಅವರ ಜೀವನವನ್ನು ಬಲಿ ತೆಗೆದುಕೊಳ್ಳುತ್ತಿದ್ದವು ಎಂಬುದರ ಸ್ಪಷ್ಟ ಚಿತ್ರಣವಿದೆ. ಧರ್ಮ, ಹಸಿವು ಮತ್ತು ಜೀವ ಉಳಿಸಿಕೊಳ್ಳುವ ಬಯಕೆ ಈ ಮೂರು ಅಂಶಗಳು ಒಂದಕ್ಕೊಂದು ತಳಕು ಹಾಕಿಕೊಂಡು ಮನುಷ್ಯನಲ್ಲಿ ಪ್ರಚೋದಿಸುವ ಭಾವನೆಗಳನ್ನು ಬೇರೆ ಯಾವುದು ಸಹ ಅಷ್ಟು ಪರಿಣಾಮಕಾರಿಯಾಗಿ ಉಂಟು ಮಾಡುವುದಿಲ್ಲ. ಒಬ್ಬ ವ್ಯಕ್ತಿಗೆ ತಾನು ಅನುಸರಿಸುವ ಧರ್ಮಕ್ಕಿಂತ ತನ್ನ ಜೀವ ಉಳಿಸಿಕೊಳ್ಳುವುದು ಹಾಗೂ ಹಸಿವನ್ನು ನೀಗಿಸಿಕೊಳ್ಳುವುದು ಅತ್ಯಂತ ದೊಡ್ಡ ಧರ್ಮವಾಗಿರುತ್ತದೆ ಎಂಬುದು ಈ ಕಾದಂಬರಿ ಓದುತ್ತಾ ಹೋದಂತೆ ಈ ಸ್ಫುಟವಾಗುತ್ತದೆ. ಧರ್ಮಾಂಧತೆ-ಧರ್ಮಸಹಿಷ್ಣುತೆಗಳ ನಡುವೆ ಇರುವ ಸಾಮ್ಯತೆ ಮತ್ತು ವೈರುಧ್ಯಗಳನ್ನು ಬಹಳ ಚೆನ್ನಾಗಿ ವಿವರಿಸಿದ್ದಾರೆ.
ಸನಾತನ ಧರ್ಮದಲ್ಲಿರುವ ಪದ್ಧತಿಗಳಾದ ಸತಿ ಹಾಗೂ ಲೆಂಕತನ ಎಷ್ಟು ಕ್ರೂರ ಹಾಗೂ ಭೀಭತ್ಸ ಎಂಬುದು ಓದಿಯೇ ತಿಳಿಯಬೇಕು. ಕೃಷ್ಣದೇವರಾಯನ ಕಾಲದಲ್ಲಿ ಇದ್ದ ಶೈವ-ವೈಷ್ಣವ ಜಗಳಗಳು, ಅವರ ಆಂತರಿಕ ತಿಕ್ಕಾಟಗಳು ಸಹ ಇಲ್ಲಿ ಕಂಡುಬರುತ್ತದೆ. ಇದರ ಜೊತೆಗೆ ಸಮುದ್ರಯಾನ, ನಾವಿಕರು ಪಡುವ ಪಾಡು ಹಾಗೂ ಅವರ ಕ್ರೌರ್ಯಗಳು ಅನಾವರಣಗೊಳ್ಳುತ್ತವೆ.
ಇಡೀ ಕಾದಂಬರಿಯುದ್ದಕ್ಕೂ ರೂಢಿಯಲ್ಲಿರುವ ನಂಬಿಕೆಗಳ ಬಗ್ಗೆ ಮತ್ತು ಮಾನವನ ಮೂಲಭೂತ ಪ್ರವೃತ್ತಿಯ ಬಗ್ಗೆ ಚರ್ಚಿಸಲಾಗಿದೆ. ಕೆಲವೊಂದು ಸಾಲುಗಳು ಅನೇಕ ಜಿಜ್ಞಾಸೆಗಳನ್ನು ಹುಟ್ಟುಹಾಕುತ್ತವೆ. ಕಾದಂಬರಿಯ ಕೊನೆಯಲ್ಲಿ ಪಡೆಯುವ ತಿರುವುಗಳು ನಮ್ಮನ್ನು ಮಂತ್ರಮುಗ್ಧವಾಗಿಸುತ್ತವೆ. ಈ ಕಾದಂಬರಿಯು ಸಾಹಿತ್ಯಕ್ಷೇತ್ರದಲ್ಲಿ ವಿಶಿಷ್ಟ ಮೈಲುಗಲ್ಲು ಆಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.
ಕೊನೆಯದಾಗಿ, ಲೇಖಕರು ಹೇಳಿದಂತೆ ನಮ್ಮ ದೃಷ್ಟಿಕೋನದಲ್ಲಿ ಪಲ್ಲಟವಾಗದೆ ಯಾವ ಆವಿಷ್ಕಾರಗಳು ನಡೆಯುವುದಿಲ್ಲ. ಈ ಮಾತು ಪ್ರಸ್ತುತ ಕಾದಂಬರಿಗೂ ಅನ್ವಯಿಸುತ್ತದೆ. ಇಂತಹ ಒಂದು ಅಪರೂಪದ ಕಾದಂಬರಿಯನ್ನು ಕೊಟ್ಟ ಲೇಖಕರಿಗೆ ಧನ್ಯವಾದಗಳನ್ನು ಅರ್ಪಿಸಬೇಕು. ಥ್ಯಾಂಕ್ಯೂ ವಸುಧೇಂದ್ರ ಸರ್.
15-16 ನೆಯ ಶತಮಾನದ ಲಿಸ್ಬನ್, ವಿಜಯನಗರ ಮತ್ತು ಗೋವಾ ನಗರಗಳ ಸಾಮಾಜಿಕ ಜೀವನದ ಅಧ್ಯಯನದ ಮೇಲೆ ರಚಿಸಲಾದ ಕಾದಂಬರಿ.
ಗೇಬ್ರಿಯಲ್, ಬೆಲ್ಲಾ, ಹಂಪಮ್ಮ. ಲಿಸ್ಟನ್, ಗೋವಾ, ವಿಜಯನಗರ ಹೀಗೆ ನನ್ನನ್ನು ಬಹಳಷ್ಟು ಕಾಡಿದ, ಎಂದೂ ಮರೆಯಲಾಗದ ಕಾದಂಬರಿ. ಎರಡು ಕಾಲಮಾನ ಎರಡು ದೇಶಗಳ ನಡುವೆ ನಡೆದ ಕಥೆ ತೇಜೋ ನದಿಯಿಂದ ಸಮುದ್ರದಲ್ಲಿ ಹರಿದು ತುಂಗಭದ್ರಾ ಸೇರಿ ಒಂದುಗೂಡುತ್ತ ಹೋಗುತ್ತೆ. ಆ ಕಾಲಘಟ್ಟದ ರಾಜಕೀಯ ಹೊಡೆದಾಟದಲ್ಲಿ ಬಳಲುವ ಜೀವ ಸಾಮಾನ್ಯರ ನಂಬಿಕೆಗಳ ಜೊತೆ ಹೊಸ ಭರವಸೆಗಳನ್ನು ತೊಟ್ಟು ಭವಿಷ್ಯದ ಚಿಂತೆಯ ಜೊತೆ ಹೋರಾಡುತ್ತಾ, ಯೋಚಿಸದ ದಡ ಸೇರಿ ಹೊಟ್ಟೆ ಬಟ್ಟೆಗಾಗಿ ಪರಿಸ್ಥಿತಿಗೆ ಬದಲಾಗುವ ಜೀವನದೊಂದು ರೋಚಕ ಅನುಭವವಿಲ್ಲಿದೆ. ಪ್ರತಿ ಪುಟದಲ್ಲೂ ಕುತೂಹಲತೆ, ಒಂದು ಕಡೆ ಸಮುದ್ರ ಇನ್ನೊಂದು ಕಡೆ ತುಂಗಭದ್ರಾದಲ್ಲಿ ಹರಿಯುವ ಕಥೆ ಕೊನೆ ಮುಟ್ಟುತ್ತಾ ಕಣ್ತುಂಬಿಸುವುದು ಸತ್ಯ. ಪ್ರೀತಿ, ಪ್ರೇಮ, ಧರ್ಮ, ಧ್ವೇಷ, ನಂಬಿಕೆ, ರಾಜಕೀಯ ಅಲ್ಲೋಲ ಕಲ್ಲೋಲ, ತ್ಯಾಗ ಹೀಗೆ ಇದೊಂದು ಕೃತಿಯನ್ನು ಎಷ್ಟು ಸಲ ಓದಿದರೂ ಕೊನೆಯಲ್ಲಿ ಏನೋ ಕಳೆದುಕೊಂಡಂತನಿಸೋದು.
ಪ್ರೀತಿ ಅಂದ್ರೆ ಏನು ಅನ್ನೋದಕ್ಕೆ ಈ ಕಾದಂಬರಿ ಧೀರ್ಘ, ಅಮೋಘ, ಸರಳ ವ್ಯಾಖ್ಯಾನ ನೀಡುತ್ತೆ.
In 16th century Lisbon, on the banks of River Tejo, under King Manuel, men leave in droves to India to get their hands on the spice trade wealth. Lisbon is plague-riddled and anti-semitism is on the rise. In contrast, the Tungabhadra in Karnataka is turbulent, teeming with crocodiles and religious tensions although deeply entrenched are yet to bubble to the surface.
The two rivers are wonderfully integrated into the storytelling, and the story itself is expansive, well-researched and well-plotted. My issues with the book then, are perhaps more personal to me. Maitreyi Karnoor's translation is exquisite. I couldn't have asked for a better translation. But the telling felt almost annal-like. This happened and then this and then this. A confession here-perhaps my reading aesthetics are so overtaken by western literary styles that I'm unable to appreciate storytelling in this style. The Indian part of the story felt choppy-there was so much to write about and Vasudhendra did just that-perhaps that's what the issue was. Maybe a less-is-more approach would have served it better.
But again, perhaps for the story to come together, all its threads have to be tugged at? Maybe.
ಓದಿ ಮುಗಿಸಿದ ಎರಡು ದಿನವಾದರೂ ಅದೇ ಗುಂಗಿನಲ್ಲಿ ಇದ್ದೇನೆ. ಬೇರೆ ಏನು ಓದುವುದು ಬೇಡ ಅನ್ನಿಸುತ್ತೆ. ಅತ್ಯುತ್ತಮ ನಿರೂಪಣೆ. ಪ್ರತಿಯೊಂದು ಪಾತ್ರಕ್ಕೂ ಮಹತ್ವ ಕೊಟ್ಟು ಅವರ ಸಾಮಾಜಿಕ ಸ್ಥಿತಿಗತಿಗಳನ್ನು ಕಣ್ಣಿಗೆ ಕಟ್ಟುವ ಹಾಗೆ ವರ್ಣಿಸಲಾಗಿದೆ. ಓದಲೇ ಬೇಕಾದ ಕಾದಂಬರಿ.
*ತೇಜೋ-ತುಂಗಭದ್ರಾ* ಲೇಖಕ : ವಸುಧೇಂದ್ರ ಪುಟಗಳು: 451 ರೇಟಿಂಗ್ :4.5/5
1492 -1518 ರ ನಡುವಿನ ಕಾಲಘಟ್ಟದಲ್ಲಿ ಎರಡು ಬೇರೆ-ಬೇರೆ ಪ್ರಭುತ್ವ, ಸಂಸ್ಕೃತಿ, ಜನ-ಜೀವನವನ್ನು ತೇಜೋ - ತುಂಗಭದ್ರಾ ನದಿ ದಂಡೆಯಾಗಿ ಚಿತ್ರಿಸಿದ ವಿಶಿಷ್ಟ ಕಾದಂಬರಿ.
ಐತಿಹಾಸಿಕ ಕಾದಂಬರಿ ರಚನೆ ಸುಲಭವಾದುದ್ದಲ್ಲ. ಹಲವಾರು ಗ್ರಂಥಗಳ ಅಧ್ಯಯನವನ್ನದು ಬೇಡುತ್ತದೆ. ಕಾದಂಬರಿಕಾರ ತನ್ನ ಕಲ್ಪನೆಗೆ ಗರಿಗೊಡಲು ಹೋದರೆ ಇತಿಹಾಸವನ್ನು ತಿರುಚಿದ ಅಪರಾಧವಾಗುವ ಸಂಭವವಿದೆ! ಈ ನಿಟ್ಟಿನಲ್ಲಿ ವಸುಧೇಂದ್ರ ಅವರ ಪ್ರಯತ್ನ ಅತ್ಯಂತ ಸಫಲವಾಗಿದೆ.
ಲಿಸ್ಬನ್ ನಗರ, ಆಗಿನ ಪೋರ್ಚುಗೀಸರ ಜನಜೀವನ, ಯಹೂದಿಗಳ ಅಲೆದಾಟ, ಸಮುದ್ರಯಾನದಲ್ಲಿ ನಾವಿಕರ ಪಾಡು, ಕೃಷ್ಣದೇವರಾಯನ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ಸಿರಿತನ, ಅಲ್ಲಿನ ಶೈವ ವೈಷ್ಣವರ ಲ್ಲಿನ ಹೊಡೆದಾಟ ಹೀಗೆ ಹಲವು ಸಾಮಾಜಿಕ ಸ್ಥಿತಿ-ಗತಿಗಳ್ನೊಡಗೂಡಿಸಿ, ಓದುಗರ ಕುತೂಹಲವನ್ನು ಕೆರಳಿಸುವ ಪಾತ್ರಗಳನ್ನು ಸೃಷ್ಟಿಸಿ, ಇತಿಹಾಸದ ನೈಜತೆಗೆ ಚ್ಯುತಿಯಾಗದಂತೆ ಕಥೆಯನ್ನು ಹೆಣೆದು ಅದಕ್ಕೆ ರೋಚಕ ಅ���ತ್ಯವನ್ನು ನೀಡಿದ ಪರಿ ನಿಜಕ್ಕೂ ಮೈನವಿರೇಳಿಸುವಂತದ್ದು!! ಧರ್ಮಾಂಧತೆ ಅಂದಿಗೂ-ಇಂದಿಗೂ ಸಮಾಜ ಎದುರಿಸುವ ದೊಡ್ಡ ಸಮಸ್ಯೆ. 15-16ನೇ ಶತಮಾನದಲ್ಲಿ ನಡೆಯುತ್ತಿದ್ದ ಮತಾಂತರಗಳು ಜನರ ಮೇಲೆ ಅದರ ಪರಿಣಾಮ ಹಾಗೂ ಹೊಡೆದಾಟಕ್ಕೆ, ಜನರ ನಡುವಿನ ದ್ವೇಷಕ್ಕೆ ಕಾರಣವಾದುದು ಈ ಕಾದಂಬರಿಯಲ್ಲಿ ವಿವರಿಸಿದೆ.
ಆಗಿನ ಕಾಲದಲ್ಲಿ ಚಾಲ್ತಿಯಲ್ಲಿದ್ದ ಸತಿ ಪದ್ದತಿ, ಲೆಂಕತನದಂತಹ ಕ್ರೂರ ಮೂಢನಂಬಿಕೆಗಳ ಉಲ್ಲೇಖವು ಈ ಕಾದಂಬರಿಯಲ್ಲಿದೆ. ಆದರೆ *ಜೀವ ಉಳಿಸಿಕೊಳ್ಳುವುದೇ ಈ ಜಗತ್ತಿನ ಶ್ರೇಷ್ಠ ಧರ್ಮ* ಎಂಬ ಮಾತಿಗೆ ಈ ಪುಸ್ತಕದಲ್ಲಿನ ಹಲವಾರು ಸನ್ನಿವೇಶಗಳು ಸಾಕ್ಷಿಯಾದಂತಿದೆ.
ಇತಿಹಾಸದಲ್ಲಿ ಆಸಕ್ತಿಇದ್ದವರು, ಐತಿಹಾಸಿಕ ಕಾದಂಬರಿಗಳನ್ನು ಇಷ್ಟಪಡುವವರು ಓದಲೇಬೇಕಾದಂತಹ ಪುಸ್ತಕವಿದು. ಪುಸ್ತಕದ ಕೊನೆಯಲ್ಲಿ ಕಾದಂಬರಿ ರಚನೆಗೆ ನೆರವಾದ ಪ್ರಮುಖ ಗ್ರಂಥಗಳ ವಿವರವೂ ಇದೆ. ಲೇಖಕರ ಬರಹದ ಶೈಲಿಯು ಅತ್ಯಂತ ಸರಳ ಹಾಗೂ ಆಕರ್ಷಕವಾಗಿದ್ದು ಓದುಗರನ್ನು ಆಗಿನ ಕಾಲಕ್ಕೆ ಒಯ್ಯುವುದರಲ್ಲಿ ಆಶ್ಚರ್ಯವಿಲ್ಲ.
ಕನ್ನಡ ಪುಸ್ತಕಗಳನ್ನು ನನಗೆ ಓದಲು ಇಷ್ಟವಿದ್ದರೂ, ಹಲವು ಕಾರಣಗಳಿಂದಾಗಿ ಅವನ್ನು ನಾನು ಓದುವುದು ಬಹಳ ಕಡಿಮೆ. ಆದ್ದರಿಂದ ವಸುಧೇಂದ್ರ ಅವರ ತೇಜೋ-ತುಂಗಭದ್ರಾ ಕಾದಂಬರಿಯು ಬಹುಶಃ ನಾನು ಓದಿದ ಐದನೇ ಅಥವಾ ಆರನೆಯ ಪುಸ್ತಕವಾಗಿದೆ. ಪುಸ್ತಕದ ಶೀರ್ಷಿಕೆಯೇ ಹೇಳುವ ಹಾಗೆ, ಇದೊಂದು ಐತಿಹಾಸಿಕ ಪ್ರಕಾರದ ಕಾದಂಬರಿಯಾಗಿದ್ದೂ, 15-16ನೇ ಶತಮಾನದಲ್ಲಿ ನಡೆದ ಕೆಲವು ಪ್ರಮುಖ ಘಟನೆಗಳನ್ನು ವಸ್ತುವಾಗಿ ಇಟ್ಟುಕೊಂಡು ಲೇಖಕರು ಒಂದು ಅದ್ಭುತವಾದ ಕಥೆಯನ್ನು ಹೆಣೆದಿದ್ದಾರೆ. ಅದರಂತೆ, ಪೋರ್ಚುಗಲ್ ಭಾರತಕ್ಕೆ ಮಾಸಾಲೆ ಪದಾರ್ಥಗಳ ವ್ಯಾಪರದ ಸಲುವಾಗಿ ಸಮುದ್ರ ಮಾರ್ಗ ಕಂಡುಹಿಡುಯುವಿಕೆ ಮತ್ತು ಗೋವಾ ನಗರವನ್ನು ವಶಪಡಿಸಿಕೊಳ್ಳವ ಮೂಲಕ ಪೋರ್ಚುಗೀಸರು ಭಾರತದಲ್ಲಿ ಭದ್ರ ಬುನಾದಿ ಹಾಕುವಿಕೆ ಇದರ ಮುಖ್ಯ ಕಥಾವಸ್ತುವಾಗಿದೆ. ಇದಲ್ಲದೆ, ಲಿಸ್ಬನ್ ಮತ್ತು ವಿಜಯನಗರದಲ್ಲಿನ ಸಾಮಾಜಿಕ, ಆರ್ಥಿಕ, ವಾಣಿಜ್ಯ, ರಾಜಕೀಯ, ಧಾರ್ಮಿಕ ಹಾಗೂ ಇನ್ನೂ ಹಲವು ಆಯಾಮಗಳನ್ನು ಲೇಖಕರು ಸೊಗಸಾಗಿ ಪ್ರಸ್ತುತ ಪಡಿಸಿದ್ದಾರೆ.
ಪೋರ್ಚುಗಲ್ ನ ಇಮಾನ್ಯುಲ್, ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯ, ಬಹಮನಿ ಸಾಮ್ರಾಜ್ಯದ ಆದಿಲ್ ಶಾ ಹಾಗೂ ಇನ್ನಿತರ ರಾಜ ರಾಣಿಯರ ಕುರಿತು ಆಗಾಗ ಉಲ್ಲೇಖವಿದ್ದರೂ, ಈ ಕಾದಂಬರಿಯು ಜನಸಾಮಾನ್ಯರು ಮತ್ತು ಅವರ ಜೀವನಶೈಲಿಯ ಕುರಿತದ್ದಾಗಿರುವುದರಿಂದ ಓದುಗರಿಗೆ ಹೆಚ್ಚು ಹತ್ತಿರವೆನಿಸುತ್ತದೆ ಮತ್ತು ಅನೇಕ ಸನ್ನಿವೇಶಗಳು ಇಂದಿಗೂ ಸೂಕ್ತವಾದಂತೆ ಭಾಸವಾಗುತ್ತದೆ.
ಇದನ್ನು ಹೊರತುಪಡಿಸಿ, ಒಂದೆಡೆ ಭಾರತದಲ್ಲಿ ಬಹು ಪ್ರಚಲಿತದಲ್ಲಿದ್ದ ಸತಿ, ಲೆಂಕತನ ಇತ್ಯಾದಿ ದುಷ್ಟ ಪದ್ಧತಿಗಳನ್ನೂ, ಪೋರ್ಚುಗಲ್ ನಲ್ಲಿ ನಡೆಯುತ್ತಿದ್ದ ಯಹೂದಿ ನರಮೇಧ (genocide) ಮತ್ತು ಧಾರ್ಮಿಕ ಮತಾಂತರಗಳನ್ನೂ ಹಾಗೂ ಮತ್ತೊಂದೆಡೆ ಪೋರ್ಚುಗೀಸ್ ನಾವಿಕರಾದ ವಾಸ್ಕೋ ಡ ಗಾಮಾ ಮತ್ತು ಆಲ್ಬುಕರ್ಕ್ ಅನೇಕ ದೇಶಗಳ, ಜನರ ಮೇಲೆ ನಡೆಸುತ್ತಿದ್ದ ದೌರ್ಜನ್ಯ ಶೋಷಣೆಗಳೂ ಮತ್ತು ಧಾರ್ಮಿಕ ಸಹಿಷ್ಣುತೆ-ಅಸಹಿಷ್ಣುತೆಗಳನ್ನು ಎತ್ತಿಹಿಡಿಯುವಂತಹ ಕನ್ನಡಿ ತೇಜೋ-ತುಂಗಭದ್ರಾ ಆಗಿದೆ.
ಈ ಪುಸ್ತಕದ ಮತ್ತೊಂದು ಗಮನಾರ್ಹ ಸಂಗತಿ ಎಂದರೆ ಇದರಲ್ಲಿ ಇರುವ nativity. ಆಯಾ ದೇಶದ—ಪೋರ್ಚುಗಲ್ ಹಾಗು ಭಾರತ—ಸೊಗಡನ್ನು ಬಹಳ ಚೆನ್ನಾಗಿ ವಸುಧೇಂದ್ರರವರು ತೋರಿಸಿದ್ದಾರೆ. ಪಾತ್ರ ಚಿತ್ರಣ ಒಂದು ಕಾದಂಬರಿಯು ಕುತೂಹಲಕಾರಿಯಾಗಿರಲು ಮುಖ್ಯವಾಗಿರುತ್ತದೆ. ಅದರಂತೆಯೇ, ತೇಜೋ-ತುಂಗಭದ್ರಾ ಕಾದಂಬರಿಯಲ್ಲಿ ಬರುವ ಕೇವಲ ಪ್ರಮುಖ ಪಾತ್ರಗಳು ಮಾತ್ರವಲ್ಲದೆ, ಇತರ ಎಲ್ಲಾ ಪಾತ್ರಗಳು ಕಥೆಗೆ ಪೂರಕವಾಗಿದ್ದೂ, ಓದುಗರಿಗೆ ಒಂದೇ ಸಂಗತಿಯ ಕುರಿತು ಹಲವು ದೃಷ್ಟಿಕೋನಗಳನ್ನು (perspective) ಕೊಡುವಂತೆ ಅದ್ಭುತವಾಗಿ ಚಿತ್ರಿಸಲಾಗಿದೆ.
ಈ ಎಲ್ಲಾ ಅಂಶಗಳೊಂದಿಗೆ ನನಗೆ ಬಹಳ ಇಷ್ಟವಾದ ಸಂಗತಿ ಎಂದರೆ ಅದರ ಸರಳವಾದ ಭಾಷೆ. ಪಾತ್ರಗಳ ನಡುವಿನ ಸಂಭಾಷಣೆ, ಮಿತವಾದ ಲಘು ಹಾಸ್ಯಗಳೆಲ್ಲವು ಸೇರಿ ಕಾದಂಬರಿಯನ್ನು ಮತ್ತಷ್ಟು ಸುಂದರವಾಗಿಸಿದೆ. ಇದಲ್ಲದೆ ಪುಸ್ತಕದ ಪ್ರತಿಯೊಂದು ಪುಟದಲ್ಲೂ ವಸುಧೇಂದ್ರರವರ ಆಳವಾದ ಸಂಶೋಧನೆಯು ಓದುಗರಿಗೆ ತಿಳಿಯುತ್ತದೆ. ಆದರೆ ಅದು ಎಲ್ಲಿಯೂ ಸಹ information overload ಎನ್ನಿಸದೆ, ಕಥೆಯೊಂದಿಗೆ ಬಹಳ ನಾಜೂಕಾಗಿ ಲೇಖಕರು ಪೋಣಿಸುರುವುದು ಅತ್ಯಂತ ಶ್ಲಾಘನೀಯ. ಆದ್ದರಿಂದ ಈ ಕಾದಂಬರಿಯು ಕೇವಲ ಇತಿಹಾಸ ಪ್ರಿಯರಿಗೆ ರುಚಿಸುವುದಲ್ಲದೆ ಮತ್ತಿತರರಿಗೂ ಇಷ್ಟವಾಗುವುದರಲ್ಲಿ ಹೆಚ್ಚು ಸಂಶಯವಿಲ್ಲ.
ಕೊನೆಯದಾಗಿ, ತೇಜೋ-ತುಂಗಭದ್ರಾ ಕಾದಂಬರಿಯು ಓದುಗರನ್ನು 15ನೇ ಶತಮಾನದ ಲಿಸ್ಬನ್, ವಿಜಯನಗರ ಹಾಗು ಗೋವಾಕ್ಕೆ ಕರೆದೊಯ್ಯುವುದರೊಂದಿಗೆ, ಅವರಲ್ಲಿ ಎಲ್ಲಾ ಬಗೆಯ ಭಾವನೆಗಳನ್ನು ಮೂಡಿಸಿ ಹಲವು ದಿನ ಅದರ ಗುಂಗಿನಲ್ಲಿರುವಂತೆಯೇ ಮಾಡುತ್ತದೆ.
This book is just wow! ಅತ್ಯದ್ಭುತ!!! It's a historical fiction book. As the cover of the book says, it's an amazing story happening at Lisben, Vijayanagara and Goa around 15th-16th century. Hats off to the author, who has done brilliant ground work on the data that's shared in this book. I have been following the author for a long time on FB. Being frank I never wanted to read this book (note - I have read and loved various other books of Vasudhendra) despite the amazing reviews I saw all over social media. But one fine day I decided and picked this book and now I am beyond happy that I read this book :) This book stands out for multiple reasons.
1. When it comes to history it's most of the times about king, kingdom etc. Details of common man during those era ಸಿಗದು ತುಂಬಾ ಕಮ್ಮಿ. But this book is all about common people with required details about kings, provinces etc etc.. Here also u get to read about big names like to Sri krishnadevaraya, vasco da gama, adil shah, Albuquerque etc.. but along with these names, there is a beautiful story of common man of those era!
2. Heard that few of the character names and the food habit details of the book were fetched from the inscriptions of those times. ತೆಂಬಕ್ಕ, ಅಡವಿ ಸಾಮಿ, ಆಮ್ದ್ ಕಣ್ಣ, ಚಂಪಕ್ಕ, ಕೇಶವ ಓಜ, ಮಾಪಳ, ಹಂಪಮ್ಮ , ಗುಣಸುಂದರಿ, ಬೆಲ್ಲಾ, ಗೇಬ್ರಿಯಲ್, ಬೆಷ್ಯಾಮ್, ಆಂಟೋನಿಯೋ names will remain in head for long time.
3. Religious conflicts between Shaiva and vaishnava, conversions between religions(yahudi to Christianity, Christianity to Muslim, Muslim to Christianity) sati system, cruelty of rulers(Indian/Portuguese/mughals) during 15th century etc are so well narrated being part of the storyline.
4. ಮೆಣಸಿನ ಕಾಯಿ ಹೆಸರು ಹೆಂಗೆ ಬಂತು ಅಂತ ಕೊಟ್ಟಿರೋ ವಿವರಣೆ ಸೂಪರ್ ಆಗಿ ಇದೆ🤣
5. ಈ ಎಲ್ಲ ಕಥಾ ಹಂದರದ ಮಧ್ಯೆ , amazing one liners on life is the best part of the book.
Per to me one of the amazing books which has go to 'must read' tags of everyone's reading list !! ☺️
೧೫ನೇ ಶತಮಾನದಲ್ಲಿ ಪೋರ್ಚುಗಲ್, ವಿಜಯನಗರ ಹಾಗು ಗೋವಾಗಳಲ್ಲಿ ನಡೆದ ಹಲವಾರು ಚಾರಿತ್ರಿಕ ಘಟನೆಗಳನ್ನೆಲ್ಲಾ ಒಟ್ಟಾಗಿ ಕೂಡಿಸಿ ಕಾಲ್ಪನಿಕ ಪಾತ್ರಗಳ ಮೂಲಕ ವಸುಧೇಂದ್ರ ಅವರು ಸೊಗಸಾದ, ಕುತೂಹಲಭರಿತ ಕಾದಂಬರಿಯೊಂದನ್ನು ನಮಗೆಲ್ಲಾ ಕೊಟ್ಟಿದ್ದಾರೆ. ಈ ಕಾದಂಬರಿ ಆಂಗ್ಲ ಭಾಷೆಗೆ ಅನುವಾದವಾದರೆ ಮತ್ತಷ್ಟು ಜನ ಓದುವಂತಾಗುತ್ತದೆ ಅನ್ನುವುದು ನನ್ನ ಆಶಯ, ಅನಿಸಿಕೆ.
This is a fantastic story of common men and women and lived around 1500 AD in the banks and f tungabhadra and tejo river in Lisbon. The author has stated in multiple interviews that his interest is in telling the common man's story and not that of a king or an army commander.
It's a great book wherw the characters and situations are woven beautifully ... There are enough twists to keep the reader engaged right till the last page.
I have no hesitation in saying that this is one of the best novels written in recent times ...
It brings me immense pleasure that such a high quality author has entered the kannada literature!! I wish him good luck!!
ವಾಡಿಕೆ ಪ್ರಕಾರ, ಒಂದು ಪುಸ್ತಕ ಚೆನ್ನಾಗಿದೆಯೆಂದು ಹೇಳಬೇಕೆಂದರೆ, ಅದನ್ನ ವಿಭಿನ್ನ ದೃಷ್ಟಿಕೋನಗಳಿಂದ ಅಳೆದು, ತೂಗಿ , ವಿವಾದವೋ/ರಹಿತವೋ, ನಿಜವೋ, ಕಲ್ಪನೆಯೋ, ಇತಿಹಾಸವೋ, ವ್ಯಕ್ತಿಗತವೋ ಹೀಗೆ ಹತ್ತು ಹಲವಾರು ಮುಖಗಳಿಂದ ರಂಜಿಸುತ್ತದೆಯೇ ಅಥವಾ ಸಾಹಿತ್ಯಕ್ಕೆ ಕೊಡುಗೆಯಾಗುವುದೇ ಎಂಬುದನ್ನೆಲ್ಲಾ ಪರಿಗಣಿಸುತ್ತೇವೆ.
ದಿನದಿಂದ ದಿನಕ್ಕೆ, ಹೆಚ್ಚು ಓದಿನ ಅನುಭವಾಗುತ್ತಾ, ಮೇಲಿನ ನನ್ನ ಮಾನದಂಡ ಕೊಂಚ ಬದಲಾವಣೆಯಾಗಿದೆ.
ಪುಸ್ತಕ ಯಾವಾಗಲೂ ಓದುಗನಲ್ಲಿ ಕುತೂಹಲ ಮತ್ತು ರಂಜನೆಗಿಂತ ಹೆಚ್ಚು ಪ್ರಶ್ನೆಗಳನ್ನ ಹುಟ್ಟಿಸಬೇಕು ಎಂಬುದು ನನ್ನ ಅನಿಸಿಕೆ. ಆದಷ್ಟು ಇನ್ನಷ್ಟು ಮತ್ತಷ್ಟು ಸಂಶೋಧನಾವಸ್ಥೆಗೆ ನೂಕಬೇಕು.
ಮೇಲಿನ ಅನಿಸಿಕೆಯ ಪ್ರಕಾರ, ತೇಜೋ-ತುಂಗಭದ್ರ ನನ್ನಲ್ಲಿ ಎಷ್ಟು ಪ್ರಶ್ನೆಗಳನ್ನು ಹುಟ್ಟಿಸಿದೆ ಮತ್ತು ಯಾವ ಹೊಸ ವಿಷಯಗಳು ಸಿಕ್ಕಿವೆ ? ಕೆಳಗೆ ಪಟ್ಟಿ ಮಾಡಿದ್ದ���ನೆ.
೧. ತೇಜೋ ನದಿ ಇದೆಯೇ ? - ಮೊದಲೆಂದೂ ಕೇಳಿರದ ನದಿ ಹೆಸರು .! ಆದರೆ ಹುಡುಕಿದಾಗ ಸಿಕ್ಕಿದ್ದು - ಇದೆ. "Tagus" - ಸ್ಪಾನಿಷ್ ಮತ್ತು ಪೋರ್ಚುಗಲ್ ನಲ್ಲಿ 'tejo' (ಉಚ್ಚಾರಣೆ) ಎಂದು ಕರೆಯುತ್ತಾರೆ. ಐಬೀರಿಯನ್ ಪೆನಿನ್ಸುಲಾದ ಅತೀ ದೊಡ್ಡ ನದಿ. ಸ್ಪೇನ್ ಮತ್ತು ಪೋರ್ಚುಗಲ್ ನಲ್ಲಿ ಹರಿದು, ಲಿಸ್ಬನ್ ಎಂಬ ನಗರದಲ್ಲಿ ಅಟ್ಲಾಂಟಿಕ್ ಸಾಗರವನ್ನು ಸೇರುತ್ತದೆ. ೨. ಯಹೂದಿಗಳು ಮೂಲತಃ ಯಾರು ? ಕೆದಕಿದಾಗ ಸಿಕ್ಕಿದ್ದು, Judaism ಧರ್ಮದ ಅನುಯಾಯಿಗಳು. Jews - ಎರಡನೇ ಮಹಾಯುದ್ಧದಲ್ಲಿ ಹಿಟ್ಲರ್, ಈ ಧರ್ಮದ ಅನುಯಾಯಿಗಳನ್ನು ಅದೆಷ್ಟೋ ಸಂಖ್ಯೆಯಲ್ಲಿ ಮಾರಣಹೋಮಗೈದಿದ್ದ. ಕುತೂಹಲ ಮೂಡಿಸಿದ್ದು, ಮೂಲತಃ "ಏಸು ಕ್ರಿಸ್ತರೂ" ಒಬ್ಬ ಯಹೂದಿ. ೩. ಸಿಡಿ , ಲೆಂಕನ ಪದ್ಧತಿ, ಭೀಮ ಕುಸ್ತಿ , ಜರಾಸಂಧ ಕುಸ್ತಿ , ಹನುಮಂತ ಕುಸ್ತಿ. ೪. ಪರ್ಷಿಯನ್ ಕುದುರೆಗಳು - ಪರ್ಷಿಯಾ ಅಂದರೆ ಈಗಿನ ಇರಾನ್ - ಅರೇಬಿಯನ್ ಕುದುರೆಗಳು. ೫. ಪೋರ್ಚುಗೀಸರ ನೌಕಾಯಾನ. ೬. ಮತಾಂತರಗಳು.
ಹಂಪಮ್ಮ ಸತಿಯಾಗುವ ಜಾಗದಿಂದ ತಪ್ಪಿಸಿಕೊಂಡು, ನದಿ ದಾಟಿ ದಿಬ್ಬಕ್ಕನಿಗೆ ಪ್ರಾರ್ಥನೆ ಮಾಡುವಾಗ, ಭೋರ್ಗರೆದು ಬರುವ ತುಂಗಭದ್ರಾ ನದಿಯನ್ನು ಮೊದಲೇ ನಿರೀಕ್ಷಿಸಿದೆ.(ಎನ್ನುವುದು ಖುಷಿಯಾಯಿತು) ಮತ್ತು ಅಮ್ಮದಕಣ್ಣ ವಿಜಯನಗರಕ್ಕೆ ಬಂದಾಗ ಪರಿಚಯದವರು ಎಂದರೆ ಆಗ್ವೇದ ಎಂಬ ವೇಶ್ಯೆ ಮತ್ತು ಪಂಪಾಪತಿ ಅವಳ ಮಗ ಎನ್ನುವುದು ಆಶ್ಚರ್ಯ !!! ಅಮ್ಮದಕಣ್ಣ ಮತ್ತು ಹಂಪಮ್ಮ ಪಾಳುಗುಡಿಯ ಹತ್ತಿರ ಯಾವುದೋ ಉರಿಯುತ್ತಿರುವ ದೀಪವನ್ನು ನೋಡಿದಾಗ, ನನ್ನ ನಿರೀಕ್ಷೆ "ಅಡವಿಸಾಮಿ" ಯತ್ತ ಹೋಯಿತು. ಮುಂದಿನ ಸಾಲುಗಳಲ್ಲಿ ಅದು ನಿಜವಾಯಿತು. (ಆಗ ನಾನು ಸಂಪೂರ್ಣಾವಾಗಿ ಪುಸ್ತಕದಲ್ಲಿ ಮುಳುಗಿದ್ದೇನೆ ಎಂಬ ಅರಿವಾಯಿತು).
ಸರಳವಾಗಿ ಓದಿಸಿಕೊಂಡು ಹೋಗುವ ಸಾಹಿತ್ಯ. ಅದ್ಭುತವೆಂದರೆ ತಪ್ಪಾಗಲಾರದು. ಕೊನೆಯ ಕೆಲವು ಪುಟಗಳಲ್ಲಿ, ಕಥೆಯೂ ಓಡುತ್ತದೆಯಾದರು, ಆಸಕ್ತಿ ಕುಂದಿಸುವುದಿಲ್ಲ. ಚಮತ್ಕಾರವನ್ನು ಸರಳ ಸಾಹಿತ್ಯದಲ್ಲಿ ಸೃಷ್ಟಿಸಿದ ವಸುದೇಂಧ್ರ Vasudhendra ರಿಗೊಂದು ನಮಸ್ಕಾರಗಳು.
ತುಂಬಾ ದಿನಗಳ ನಂತರ ಒಂದೇ ಧಾಟಿಯಲ್ಲಿ ಓದಿಸಿಕೊಂಡು ಹೋದ ಪುಸ್ತಕ ತೇಜೋ ತುಂಗಭದ್ರಾ. ವಸುಧೇಂದ್ರರವರ ಬರವಣಿಗೆ ಅತ್ಯುತ್ತಮ. ಲೇಖಕರ ಅಧ್ಯಯನ ಮತ್ತು ತಯಾರಿ ಪ್ರಶಂವಸನಿಯ. ಇತಿಹಾಸದ ಬಗ್ಗೆ ಕುತೂಹಲ ಇರುವವರಿಗೆ ತುಂಬಾ ಒಳ್ಳೆಯ ಓದು. ಇತಿಹಾಸದ ನಿಜ ಘಟನೆಗಳ ಸುತ್ತ ಹೆಣೆದಿರುವ ಕಾಲ್ಪನಿಕ ಕಥೆ, ಇವತ್ತಿಗೂ ಸಂಬಂಧಿತ ಅನಿಸುತ್ತದೆ. ಕಣ್ಣಿಗೆ ಕಟ್ಟುವಂತೆ ಮೂಡಿಬಂದಿರುವ ಕೆಲವೊಂದು ವಿವರಣೆಗಳು ಓದು ಮುಗಿದ ನಂತರವು ಕಾಡುತ್ತವೆ. ದೇಶ, ಗಡಿ, ಭಾಷೇ, ಧರ್ಮ , ಜಾತಿ ಎಲ್ಲವನ್ನು ಮೀರಿದ್ದು ಪ್ರೀತಿ ಎಂದು ಸಾರಿ ಹೇಳುತ್ತದೆ ತೇಜೋ ತುಂಗಭದ್ರಾ.
Uniquely entertaining and enlightening at the same time. The book carves a fascinating story world in history, setting itself up for showing the interplay of religions, politics, family life, community life and personal lives. And does a great job of it. It is heartening to see that the book found appeal across the political spectrum among the Kannada literati. Can't stop wondering if people on one side of the spectrum got deceived by the craft work!
ಮೊದಲ ಪುಟದಿಂದ ಕೊನೆಯ ಪುಟದವರೆಗೂ ಓದುಗನನ್ನು ಹಿಡಿದಿದುವ ಕಾದಂಬರಿ. ಕೊನೆಯ ಪುಟದ ತನಕ ನನಗೆ ಮೊದಲಿನಷ್ಟೇ ಅಸಕ್ತಿ ಉಳಿದಿತ್ತು. ವಸುದೇಂಧ್ರ ಅವರ ಶ್ರಮಕ್ಕೆ ದೊಡ್ಡ ಸಲಾಮ್! ಎಲ್ಲಾ ಪಾತ್ರಗಳು ಮನಸ್ಸಿನ ಮೇಲೆ ಬಹಳ ಪ್ರಾಭಾವ ಬೀರುತ್ತವೆ. ಓದಿದ ಮೆಲೂ ಅದೇ ಗುಂಗು ಇದೆ.