ಕಲೆಯ ಅಂತರಂಗ ಮತ್ತು ಬಹಿರಂಗ
Art is an expression ಎಂಬುದು ಸಾಮಾನ್ಯ ಮಾತು. ಇದಕ್ಕೆ ಯಾವುದೇ ರೀತಿಯ ಗಹನ ವ್ಯಾಪ್ತಿ ಇಲ್ಲ. ಏಕೆಂದರೆ Art is not merely an expression, imitation or representation. ಅಭಿವ್ಯಕ್ತಿ ಕಲೆಯಾಗಬಲ್ಲದು, ಆದರೆ ಅಭಿವ್ಯಕ್ತಿಯೇ ಕಲೆಯಲ್ಲ. ಕಲೆಯು ಜಗತ್ತಿನ ಪ್ರತಿಬಿಂಬ, ಕಲೆಯು ಜಗತ್ತಿನ ಕನ್ನಡಿ ಎಂಬ ಮಾತುಗಳಿವೆ. ಸೂರ್ಯನು ಪೂರ್ವದಲ್ಲಿ ಹುಟ್ಟಿದ, ನನಗೆ ದುಃಖವಾಗಿದೆ, E = mc 2. ಇವೂ ಕೂಡ ಅಭಿವ್ಯಕ್ತಿಯೇ, ಹೇಳಿಕೆಯೇ. ಆದರೆ ಇದು ಕಲೆಯೇ? ಹೇಳಿಕೆ, ಅನುಕರಣೆ, ಅಭಿವ್ಯಕ್ತಿಗಳೆಲ್ಲವೂ ಕಲೆಯಾಗುವುದಿಲ್ಲ. ಕಲೆಗೆ ವಸ್ತು ಮತ್ತು ರಚನೆ ಹೊರತಾಗಿ ಅದಕ್ಕೊಂದು ಸೌಂದರ್ಯ ಇರಬೇಕಾಗುತ್ತದೆ. ಸೌಂದರ್ಯ ಇರಬೇಕೆಂದರೆ ರಸವಿರಬೇಕು. ಪ್ರಚಲಿತ ಕಲೆಗಳು ಎಂದು ಮುಖ್ಯವಾಗಿ ನೋಡುವ ಸಂಗೀತ, ಸಾಹಿತ್ಯ, ನೃತ್ಯ, ಚಿತ್ರಕಲೆ ಇವೆಲ್ಲವು ಸೌಂದರ್ಯದಿಂದಲೇ ಪೂರ್ಣವಾಗುತ್ತದೆ ಹೊರತು ಅಭಿವ್ಯಕ್ತಿ ಇಂದಲ್ಲ. ಉದಾಹರಣೆಗೆ ‘ಚಂದ್ರ ಬಾನಿನಲ್ಲಿ ಬಂದ’ ಎಂಬುದು ಹೇಳಿಕೆ, ‘ಆ ಚಂದ್ರನು ಮನಸ್ಸಿನಲ್ಲಿ ಉಲ್ಲಾಸ ತರುತ್ತಿದ್ದಾನೆ’ ಎಂಬುದು ಅಭಿವ್ಯಕ್ತಿ. ಇಲ್ಲಿ ವಸ್ತುವೂ ಇದೆ, ವಿವರಣೆಯೂ ಇದೆ ಆದರೂ ಸೌಂದರ್ಯವಿಲ್ಲ. ಇದೇ ವಿಚಾರವನ್ನು ಸಂಗೀತಗಾರ ಯಾವುದೋ ರಾಗದ ಮಂದ್ರ ಷಡ್ಜದ ಸ್ಥಾನದಲ್ಲಿ ಸೌಂದರ್ಯ ನೀಡಿ ನಿಮ್ಮದೇ ಅಭಿವ್ಯಕ್ತಿಯು ಅಂತರಂಗದಲ್ಲಿ ಬಿಚ್ಚಿಕೊಳ್ಳುವಂತೆ ಮಾಡಬಲ್ಲ. ಸಾಹಿತಿಯು-ಕವಿಯು ಇದೇ ವಿವರಣೆಯನ್ನು ತನ್ನ ರೂಪಕಗಳೊಂದಿಗೆ ನಿಮಗೆ ಅಚ್ಚರಿಯಲ್ಲಿ ನೀಡಬಲ್ಲ. ನೃತ್ಯಗಾರ್ತಿಯೊಬ್ಬಳು ತನ್ನ ಹಸ್ತ ಚಲನೆಯಲ್ಲಿಯೇ ನಿಸರ್ಗ ರೂಪವನ್ನು ನಿಮಗೆ ಕಾಣಿಸಬಲ್ಲಳು. ಚಿತ್ರ ಕಲಾವಿದ ಇದೇ ನೋಟವನ್ನು ಕುಶಲ ವರ್ಣ ಸಂಯೋಜನೆಯೊಂದಿಗೆ ಗಾಢವಾಗಿ ನೆಲೆಗೊಳಿಸಬಲ್ಲ. ಆ ರೀತಿ ಆಗಬೇಬೇಕಾದರೆ ಪ್ರತಿ ಕಲಾವಿದನಿಗೂ ರಸಪ್ರಜ್ಞೆ ಇರಬೇಕಾಗುತ್ತದೆ, ಆ ರಸಕ್ಕೆ ತನ್ನ ಕಲಾಮಾಧ್ಯಮದ ಮಿತಿಯಲ್ಲಿ ರಚನಾತ್ಮಕವಾಗಿ ಸೌಂದರ್ಯ ಸೃಷ್ಟಿ ಮಾಡಬೇಕಾಗುತ್ತದೆ. ಇಲ್ಲಿ ಗಮನಿಸಬೇಕಾದ್ದು ಸೃಷ್ಟಿ ಎಂದರೆ ಉತ್ಪಾದನೆಯಲ್ಲ. ಉತ್ಪಾದನ ಕೌಶಲ್ಯ ಕಲೆ ಎನ್ನಲಿಕ್ಕೆ ಆಗುವುದಿಲ್ಲ. ಅಲ್ಲಿ ಸಿದ್ಧವಸ್ತುವಿನ ಆಧಾರದ ಮೇಲೆ ಉತ್ಪನ್ನ ಇರುತ್ತದೆ. ಕಲೆ ಎಂಬುದು ಸಿದ್ಧವಸ್ತು ಇಲ್ಲದಿದ್ದರೂ ಉತ್ಪನ್ನ ನೀಡಬಲ್ಲದ್ದಾಗಿರುತ್ತದೆ. ಕಲೆ ಎಂಬುದು ಸೃಷ್ಟಿ ಕಾರ್ಯ. ಅಲ್ಲಿ ಸೌಂದರ್ಯವೇ ಸೃಷ್ಟಿಯ ಧಾತು.
ಹಾಗಾದರೆ ಸೌಂದರ್ಯದ ಮಾಪನ ಯಾವುದು? ಸೌಂದರ್ಯ ಎಂಬುದು ವಸ್ತುವಲ್ಲ ಅದು ಸ್ಥಿತಿ. ಆ ಸ್ಥಿತಿಯನ್ನು ಗ್ರಹಿಸುವ ರಸಿಕನಿದ್ದಾಗ ಮಾತ್ರ ಸೌಂದರ್ಯವು ಕಲಾವಿದನಿಂದ ರಸಿಕನಿಗೆ ದಾಟಬಲ್ಲದು. ರಸವನ್ನು ಗ್ರಹಿಸಬಲ್ಲವನೇ ರಸಿಕ. ಒಂದು ನಿರ್ದಿಷ್ಟ ಆಲಾಪ, ಸ್ವರ ವಿಸ್ತಾರದಲ್ಲಿ ತನ್ನ ಸೃಷ್ಟಿಯನ್ನು ಸಂಗೀತಗಾರ ತೋರ್ಪಡಿಸುತ್ತಿರುತ್ತಾನೆ, ಆ ನಿರ್ದಿಷ್ಟ ಸ್ಥಿತಿಯನ್ನು ರಸಿಕ ಗ್ರಹಿಸುತ್ತಾನೆ. ಅವನಿಗೆ ಆನಂದವಾಗುತ್ತದೆ (ಆನಂದ ಎಂಬುದು ಸ್ವಾದ ಸ್ಥಿತಿ, ಅದು ವಿವಿಧ ರಸದಿಂದ ಕೂಡಿರಬಹುದು). ಆತ ಗ್ರಹಿಸಿದ ಆನಂದವನ್ನು, ಕಲಾವಿದ ಸ್ಪುರಿಸಿದ ಸೃಷ್ಟಿ ಸೌಂದರ್ಯವನ್ನು ನಂತರದಲ್ಲಿ ವಿವರಿಸಲು ಇಬ್ಬರಿಗೂ ಸಾಧ್ಯವಿಲ್ಲ. ಆ ಸಾಫಲ್ಯವೇ ಕಲೆಯ ಗುರಿ. ಸಾಹಿತ್ಯ ಬರೆಯುತ್ತಾ-ಓದುತ್ತಾ, ನೃತ್ಯ ಮಾಡುತ್ತಾ-ನೋಡುತ್ತಾ, ಚಿತ್ರವನ್ನು ರಚಿಸುತ್ತಾ-ಆಸ್ವಾದಿಸುತ್ತಾ... ಹೀಗೆ ಎಲ್ಲಾ ಕ್ರಿಯೆಯೂ ಇದನ್ನೇ ಒಳಗೊಂಡಿರುತ್ತದೆ. ಇದು ಏಕಕಾಲದಲ್ಲಿ ಅಂತರಂಗದ ಸೌಂದರ್ಯವೂ ಹೌದು, ಬಹಿರಂಗ ಸೌಂದರ್ಯವೂ ಹೌದು. ಕಲಾವಿದ ರಸಿಕನಾಗದಿದ್ದಲ್ಲಿ ಅವನು ಕಲಾವಿದನೇ ಆಗಿರುವುದಿಲ್ಲ. ಸೃಷ್ಟಿ ಕ್ರಿಯೆಯಲ್ಲಿ ಅವನೇ ರಸಿಕನಾಗಿ ತನ್ನ ಅಂತರಂಗವನ್ನ ಅವನೇ ಕಂಡುಕೊಳ್ಳಬೇಕು. ಆದ್ದರಿಂದ ಕಲೆ ಕೇವಲ ಅಭಿವ್ಯಕ್ತಿಯಲ್ಲ, ಅದು ಅಂತರಂಗದ ಒಟ್ಟು ಬಹಿರಂಗ ರೂಪ. ಅಂತರಂಗದಿಂದ, ಬಹಿರಂಗದವರೆಗೂ ಇರುವ ಪ್ರಕ್ರಿಯೆಯೇ ಸೃಷ್ಟಿ, ಅದರ ಒಟ್ಟು ರೂಪವೇ ಸೌಂದರ್ಯ.
ಕಲೆಯ ಹಲವಾರು ಮಾಧ್ಯಮವು ನಿಸರ್ಗದ ವರ್ಣನೆಯೊಂದಿಗೇ ಪ್ರಾರಂಭವಾದದು. ಕಾಲಾಕಾಲಾದಲ್ಲಿ ನಿಸರ್ಗದಿಂದ ಹೊರಟು ತನ್ನ ಒಳಗನ್ನೇ ಅಲ್ಲಿ ಕಾಣಲು ಮನುಷ್ಯ ಹೊರಟ. ಈ ನಿಟ್ಟಿನಲ್ಲಿ ಜಗತ್ತಿಗೆ ಕನ್ನಡಿ ಹಿಡಿಯುವುದೇ ಕಲೆ ಎನ್ನುವುದಕ್ಕೆ ಅರ್ಥವಿದೆ. ಒಬ್ಬ ದಾರ್ಶನಿಕ ಮಂಡಿಸುವಂತೆ ಈ ಜಗತ್ತೇ ಮಿಥ್ಯೆ ಎಂದಮೇಲೆ, ಅದರ ಮಿಥ್ಯಾರೂಪವನ್ನು ಪ್ರತಿಬಿಂಬಿಸುವ ಈ ಕಲೆ ಇನ್ನಷ್ಟು ಮಿಥ್ಯೆ ಎನ್ನಬೇಕಾಗುತ್ತದೆ. ಇದಕ್ಕೆ ಉತ್ತರವನ್ನು ಕಲ್ಪಿಸುವುದು ಕಷ್ಟವೇ ಆಗಿದೆ. ಏಕೆಂದರೆ ಕಲೆಯು ಹೊರಗಿನ ಮಾಪನಗಳಿಗೆ ಬದ್ಧವಾಗಿಲ್ಲ. ಸೌಂದರ್ಯ ಎಂಬ ಸ್ಥಿತಿಯೂ ಕೂಡ ಯಾವುದೇ ಮಾಪನಕ್ಕೆ ಒಳಗಾಗಿಲ್ಲ. ಅನುಭವದಲ್ಲಿ ಸೌಂದರ್ಯ ಕಾಣಬಹುದಾದರು, ಕಂಡದ್ದನ್ನು ವಿವರಿಸಿ ತಿಳಿಸಲು ಸಾಧ್ಯವಿಲ್ಲ. ವಿಜ್ಞಾನದ ಎಲ್ಲಾ ನಿಯಮಗಳು ಕೂಡ ಹೊರಗಿನ ಮಾಪನಗಳಿಗೆ ಬದ್ಧವಾಗಿರುವುದರಿಂದ ತಕ್ಕಮಟ್ಟಿಗೆ ಅಲ್ಲಿ ಒಮ್ಮತ ಸಾಧಿಸಬಹುದು. ಆದರೆ ಅಲ್ಲಿಯೂ ಕೂಡ ವಸ್ತುವಿನ ಮೌಲ್ಯ ನಿರ್ಣಯದಲ್ಲಿ ವಿವಿಧ ಅಭಿಪ್ರಾಯ ಮೂಡುತ್ತದೆ. ಸೌಂದರ್ಯವನ್ನು ಅದರ ವಸ್ತುವಿನಿಂದ, ರಚನೆಯಿಂದ ಅಳೆಯಲಿಕ್ಕೂ ಸಾಧ್ಯವಿಲ್ಲ. ಒಂದು ದೊಡ್ಡ ವೃತ್ತಕ್ಕೂ, ಚಿಕ್ಕ ವೃತ್ತಕ್ಕೂ ಇರುವ ವ್ಯತ್ಯಾಸ ಅಳತೆಯಲ್ಲೇ ಹೊರತು, ಅದರ ರೂಪ ವೃತ್ತಾಕಾರವೇ ಆಗಿದೆ. ಹಾಗೆಯೇ ಸೌಂದರ್ಯವು ಒಂದೇ ರೂಪದಲ್ಲೂ, ಸ್ಥಿತಿಯಲ್ಲೂ ಇರುವಂಥದ್ದು. ಅನುಭವ ಜನ್ಯವೂ ಕಲೆಯಲ್ಲಿರುತ್ತದೆ, ಭವ್ಯಾನುಭವೂ ಕಲೆಯಲ್ಲಿರುತ್ತದೆ. ಮನುಷ್ಯ ಅನುಭವವನ್ನು ಕಲೆಯ ಮೂಲಕ ವ್ಯಕ್ತಪಡಿಸುತ್ತಾ ಹೊರಟು ಭವ್ಯಾನುಭವದ ಕಡೆಗೆ ನಡೆದಿದ್ದಾನೆ. ಕೇವಲ ಅನುಭವ ವ್ಯಕ್ತಪಡಿಸುವುದು ಕಲೆಯ ಪ್ರಕ್ರಿಯೆಯನ್ನೇ ಅಲ್ಲಗೆಳೆದಂತೆ. ಕಲೆಯು ಆ ಪ್ರಕ್ರಿಯೆಯಲ್ಲಿ ಕಂಡುಕೊಂಡ ಭವ್ಯಾನುಭವದ ಸ್ವರೂಪವನ್ನೇ ಅಲ್ಲಗೆಳದಂತೆ. ಕಲೆಯು ಮಿಥ್ಯೆಯೋ, ಕನ್ನಡಿಯೋ, ಅನುಭವವೋ ಆಷ್ಟೇ ಆಗಿಲ್ಲ. ಅದು ಮನುಷ್ಯ ಲೋಕದ ಭವ್ಯಾನುಭವದ ಸಶಕ್ತ ಮಾಧ್ಯಮವಾಗಿದೆ. ಭವ್ಯಾನುಭವ ಎಂಬುದು ಸೌಂದರ್ಯದ ಪರಮೋಚ್ಛ ಸ್ಥಿತಿಯಾಗಿದೆ.
ಹಾಗಾದರೆ ಸೌಂದರ್ಯದ ಮಾಪನ ಯಾವುದು? ಸೌಂದರ್ಯ ಎಂಬುದು ವಸ್ತುವಲ್ಲ ಅದು ಸ್ಥಿತಿ. ಆ ಸ್ಥಿತಿಯನ್ನು ಗ್ರಹಿಸುವ ರಸಿಕನಿದ್ದಾಗ ಮಾತ್ರ ಸೌಂದರ್ಯವು ಕಲಾವಿದನಿಂದ ರಸಿಕನಿಗೆ ದಾಟಬಲ್ಲದು. ರಸವನ್ನು ಗ್ರಹಿಸಬಲ್ಲವನೇ ರಸಿಕ. ಒಂದು ನಿರ್ದಿಷ್ಟ ಆಲಾಪ, ಸ್ವರ ವಿಸ್ತಾರದಲ್ಲಿ ತನ್ನ ಸೃಷ್ಟಿಯನ್ನು ಸಂಗೀತಗಾರ ತೋರ್ಪಡಿಸುತ್ತಿರುತ್ತಾನೆ, ಆ ನಿರ್ದಿಷ್ಟ ಸ್ಥಿತಿಯನ್ನು ರಸಿಕ ಗ್ರಹಿಸುತ್ತಾನೆ. ಅವನಿಗೆ ಆನಂದವಾಗುತ್ತದೆ (ಆನಂದ ಎಂಬುದು ಸ್ವಾದ ಸ್ಥಿತಿ, ಅದು ವಿವಿಧ ರಸದಿಂದ ಕೂಡಿರಬಹುದು). ಆತ ಗ್ರಹಿಸಿದ ಆನಂದವನ್ನು, ಕಲಾವಿದ ಸ್ಪುರಿಸಿದ ಸೃಷ್ಟಿ ಸೌಂದರ್ಯವನ್ನು ನಂತರದಲ್ಲಿ ವಿವರಿಸಲು ಇಬ್ಬರಿಗೂ ಸಾಧ್ಯವಿಲ್ಲ. ಆ ಸಾಫಲ್ಯವೇ ಕಲೆಯ ಗುರಿ. ಸಾಹಿತ್ಯ ಬರೆಯುತ್ತಾ-ಓದುತ್ತಾ, ನೃತ್ಯ ಮಾಡುತ್ತಾ-ನೋಡುತ್ತಾ, ಚಿತ್ರವನ್ನು ರಚಿಸುತ್ತಾ-ಆಸ್ವಾದಿಸುತ್ತಾ... ಹೀಗೆ ಎಲ್ಲಾ ಕ್ರಿಯೆಯೂ ಇದನ್ನೇ ಒಳಗೊಂಡಿರುತ್ತದೆ. ಇದು ಏಕಕಾಲದಲ್ಲಿ ಅಂತರಂಗದ ಸೌಂದರ್ಯವೂ ಹೌದು, ಬಹಿರಂಗ ಸೌಂದರ್ಯವೂ ಹೌದು. ಕಲಾವಿದ ರಸಿಕನಾಗದಿದ್ದಲ್ಲಿ ಅವನು ಕಲಾವಿದನೇ ಆಗಿರುವುದಿಲ್ಲ. ಸೃಷ್ಟಿ ಕ್ರಿಯೆಯಲ್ಲಿ ಅವನೇ ರಸಿಕನಾಗಿ ತನ್ನ ಅಂತರಂಗವನ್ನ ಅವನೇ ಕಂಡುಕೊಳ್ಳಬೇಕು. ಆದ್ದರಿಂದ ಕಲೆ ಕೇವಲ ಅಭಿವ್ಯಕ್ತಿಯಲ್ಲ, ಅದು ಅಂತರಂಗದ ಒಟ್ಟು ಬಹಿರಂಗ ರೂಪ. ಅಂತರಂಗದಿಂದ, ಬಹಿರಂಗದವರೆಗೂ ಇರುವ ಪ್ರಕ್ರಿಯೆಯೇ ಸೃಷ್ಟಿ, ಅದರ ಒಟ್ಟು ರೂಪವೇ ಸೌಂದರ್ಯ.
ಕಲೆಯ ಹಲವಾರು ಮಾಧ್ಯಮವು ನಿಸರ್ಗದ ವರ್ಣನೆಯೊಂದಿಗೇ ಪ್ರಾರಂಭವಾದದು. ಕಾಲಾಕಾಲಾದಲ್ಲಿ ನಿಸರ್ಗದಿಂದ ಹೊರಟು ತನ್ನ ಒಳಗನ್ನೇ ಅಲ್ಲಿ ಕಾಣಲು ಮನುಷ್ಯ ಹೊರಟ. ಈ ನಿಟ್ಟಿನಲ್ಲಿ ಜಗತ್ತಿಗೆ ಕನ್ನಡಿ ಹಿಡಿಯುವುದೇ ಕಲೆ ಎನ್ನುವುದಕ್ಕೆ ಅರ್ಥವಿದೆ. ಒಬ್ಬ ದಾರ್ಶನಿಕ ಮಂಡಿಸುವಂತೆ ಈ ಜಗತ್ತೇ ಮಿಥ್ಯೆ ಎಂದಮೇಲೆ, ಅದರ ಮಿಥ್ಯಾರೂಪವನ್ನು ಪ್ರತಿಬಿಂಬಿಸುವ ಈ ಕಲೆ ಇನ್ನಷ್ಟು ಮಿಥ್ಯೆ ಎನ್ನಬೇಕಾಗುತ್ತದೆ. ಇದಕ್ಕೆ ಉತ್ತರವನ್ನು ಕಲ್ಪಿಸುವುದು ಕಷ್ಟವೇ ಆಗಿದೆ. ಏಕೆಂದರೆ ಕಲೆಯು ಹೊರಗಿನ ಮಾಪನಗಳಿಗೆ ಬದ್ಧವಾಗಿಲ್ಲ. ಸೌಂದರ್ಯ ಎಂಬ ಸ್ಥಿತಿಯೂ ಕೂಡ ಯಾವುದೇ ಮಾಪನಕ್ಕೆ ಒಳಗಾಗಿಲ್ಲ. ಅನುಭವದಲ್ಲಿ ಸೌಂದರ್ಯ ಕಾಣಬಹುದಾದರು, ಕಂಡದ್ದನ್ನು ವಿವರಿಸಿ ತಿಳಿಸಲು ಸಾಧ್ಯವಿಲ್ಲ. ವಿಜ್ಞಾನದ ಎಲ್ಲಾ ನಿಯಮಗಳು ಕೂಡ ಹೊರಗಿನ ಮಾಪನಗಳಿಗೆ ಬದ್ಧವಾಗಿರುವುದರಿಂದ ತಕ್ಕಮಟ್ಟಿಗೆ ಅಲ್ಲಿ ಒಮ್ಮತ ಸಾಧಿಸಬಹುದು. ಆದರೆ ಅಲ್ಲಿಯೂ ಕೂಡ ವಸ್ತುವಿನ ಮೌಲ್ಯ ನಿರ್ಣಯದಲ್ಲಿ ವಿವಿಧ ಅಭಿಪ್ರಾಯ ಮೂಡುತ್ತದೆ. ಸೌಂದರ್ಯವನ್ನು ಅದರ ವಸ್ತುವಿನಿಂದ, ರಚನೆಯಿಂದ ಅಳೆಯಲಿಕ್ಕೂ ಸಾಧ್ಯವಿಲ್ಲ. ಒಂದು ದೊಡ್ಡ ವೃತ್ತಕ್ಕೂ, ಚಿಕ್ಕ ವೃತ್ತಕ್ಕೂ ಇರುವ ವ್ಯತ್ಯಾಸ ಅಳತೆಯಲ್ಲೇ ಹೊರತು, ಅದರ ರೂಪ ವೃತ್ತಾಕಾರವೇ ಆಗಿದೆ. ಹಾಗೆಯೇ ಸೌಂದರ್ಯವು ಒಂದೇ ರೂಪದಲ್ಲೂ, ಸ್ಥಿತಿಯಲ್ಲೂ ಇರುವಂಥದ್ದು. ಅನುಭವ ಜನ್ಯವೂ ಕಲೆಯಲ್ಲಿರುತ್ತದೆ, ಭವ್ಯಾನುಭವೂ ಕಲೆಯಲ್ಲಿರುತ್ತದೆ. ಮನುಷ್ಯ ಅನುಭವವನ್ನು ಕಲೆಯ ಮೂಲಕ ವ್ಯಕ್ತಪಡಿಸುತ್ತಾ ಹೊರಟು ಭವ್ಯಾನುಭವದ ಕಡೆಗೆ ನಡೆದಿದ್ದಾನೆ. ಕೇವಲ ಅನುಭವ ವ್ಯಕ್ತಪಡಿಸುವುದು ಕಲೆಯ ಪ್ರಕ್ರಿಯೆಯನ್ನೇ ಅಲ್ಲಗೆಳೆದಂತೆ. ಕಲೆಯು ಆ ಪ್ರಕ್ರಿಯೆಯಲ್ಲಿ ಕಂಡುಕೊಂಡ ಭವ್ಯಾನುಭವದ ಸ್ವರೂಪವನ್ನೇ ಅಲ್ಲಗೆಳದಂತೆ. ಕಲೆಯು ಮಿಥ್ಯೆಯೋ, ಕನ್ನಡಿಯೋ, ಅನುಭವವೋ ಆಷ್ಟೇ ಆಗಿಲ್ಲ. ಅದು ಮನುಷ್ಯ ಲೋಕದ ಭವ್ಯಾನುಭವದ ಸಶಕ್ತ ಮಾಧ್ಯಮವಾಗಿದೆ. ಭವ್ಯಾನುಭವ ಎಂಬುದು ಸೌಂದರ್ಯದ ಪರಮೋಚ್ಛ ಸ್ಥಿತಿಯಾಗಿದೆ.
Published on July 24, 2017 23:27
No comments have been added yet.