ಅಪಮೃತ್ಯು ಮತ್ತು ಅನಿಶ್ಚಿತತೆ
ಈ ಹಿಂದೆ ನಮ್ಮಲ್ಲೇ ಒಂದು ಮನೆಯಲ್ಲಿ ಹತ್ತಾರು ಮಕ್ಕಳು, ಖಾಯಿಲೆ ಕಸಾಲೆ ಇಂದ ಒಂದೆರೆಡು ಸಾಯುವವು. ಪ್ಲೇಗ್, ವಿಷಮ ಶೀತ ಜ್ವರವೋ ಮತ್ತೇನೋ ಕಾಲರಾ ಬಂದು ಮನೆಯ ಸದಸ್ಯರು ದಿಢೀರನೆ ಮರೆಯಾಗಿ ಅನಿಶ್ಚಿತತೆ ಬದುಕಿಗೆ ಬರುವುದು ಕಾಣಬಹುದಿತ್ತು. ಇಂದು ಅದೇ ರೀತಿ ಆಯಿತು ಅಂತಿಟ್ಟುಕೊಳ್ಳಿ, ದೈವವಶಾತ್, ಮನೋಬಲವಶಾತ್, ವಿಜ್ಞಾನವಶಾತ್ ಹಾಗಾಗದಿರಲಿ, ಆದರೆ ಇವತ್ತಿನ ವ್ಯವಸ್ಥೆ ಅದನ್ನು ತಾಳಿಕೊಳ್ಳುವುದಿಲ್ಲ. ಏಕೆಂದರೆ ಬದುಕು ತುಂಬಾ ರಚನಾತ್ಮಕವಾಗಿಬಿಟ್ಟಿದೆ, ನಿಶ್ಚಿತತೆ ಅವಿಭಾಜ್ಯ ಅಂಗ ಎಂಬಂತಾಗಿದೆ, ಒಂದು ಮಗು ಇರುವ ಮನೆಗಳಿವೆ, ಆದಾಯಕ್ಕಾಗಿ ಒಬ್ಬನ ಮೇಲೆ ನಂಬಿರುವ ಕುಟುಂಬವಿದೆ, ಆಹಾರ ಸಿಗದೆ ಇದ್ದರೆ ಪಕ್ಕದ ಮನೆಯವನ ಮುಂದೆ ಕೈ ಒಡ್ಡಬಹುದಾದ ಸಹಜ ಸಹಕಾರವು... ದಾನ, ಸಹಾಯ ಎಂಬಂತಹ ಅಹಂಕಾರಿ ಶಬ್ದಗಳಿಂದ ಅಟ್ಟಕ್ಕೇರಿದೆ. ಒಂದಲ್ಲ ಒಂದು ರೀತಿ ಜಗತ್ತಿನ ಪ್ರತಿ ದೇಶವು ಇನ್ನೊಂದರ ಜೊತೆ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ನಿಂತಿದೆ. ಬಿದ್ದರೆ, ಸತ್ತರೆ ಅವನೊಬ್ಬನೇ ಸಾಯಲ್ಲ, ಇನ್ನೊಬ್ಬರನ್ನು ಎಳೆದುಕೊಂಡು ಹೋಗುತ್ತಾನೆ.
ಈಜಿಪ್ಟಿನ ರೆಮಸಿಸ್ ಕಾಲದ ಪ್ಲೇಗುಗಳು, ಬ್ಲಾಕ್ ಡೆತ್, ಇಂಡಿಯನ್ ಕಾಲರಾ, ಸ್ಪ್ಯಾನಿಷ್ ಫ್ಲು ಹೀಗೆ ಇತಿಹಾಸದಲ್ಲಿ ಹಲವು ಅಪಮೃತ್ಯು ಜನಕಗಳು ಬಂದಿವೆ ಆದರೆ ಅದು ಈಗ ನಾವು ಮಾಡಿಕೊಂಡಿರುವ ವ್ಯವಸ್ಥಿತ ಬದುಕಿಗೆ ಬಂದಿದ್ದರೆ ನಾವು ತಾಳಿಕೊಳ್ಳುತ್ತಿರಲಿಲ್ಲ ಅಥವಾ ಆ ಬ್ಯಾಕ್ಟೀರಿಯಾ, ವೈರಾಣು ತಾಳಿಕೊಳ್ಳುತ್ತಿರಲಿಲ್ಲ. ಬೇರೆ ವಿಧದಲ್ಲಿ ನೋಡುವುದಾದರೆ ಇದೆ ಕೊರೊನಾ ಮಧ್ಯ ಯುಗದಲ್ಲಿ ಬಂದಿದ್ದರೆ ಅರ್ಧ ಮಾನವ ಜನಾಂಗವನ್ನೇ ಹೊಸಕಿ ಹಾಕುತ್ತಿತ್ತೇನೋ! ಈಗ ನಾವು ನಿಶ್ಚಿತ ಬದುಕು ಸವೆಸುತ್ತಿದ್ದೇವೆ. ಒಂದು ಸರ್ಕಾರವಿದೆ, ಆರೋಗ್ಯ ವ್ಯವಸ್ಥೆ ಇದೆ, ಅರಾಜಕತೆ ಇಲ್ಲ, ಇತರೆ ಇತರೆ... ಇದನ್ನು ಈ ಹಿಂದೆಯೇ ಡೆಮಾಕ್ರಟಿಕ್ ಸೆಟಲ್ಮೆಂಟ್ ಎರಾ ಎಂದು ನಾನು ಗುರುತಿಸಿದ್ದೇನೆ. ನಿಯಮಿತ ದೈನಂದಿನ chaos ಈಗಿಲ್ಲ. ನಾಳೆ ಬೆಳಗ್ಗೆ ಪೇಪರ್ ಮನೆಯ ಮುಂದೆ ಬೀಳುತ್ತದೆ, ಕರೆಂಟ್ ಸಿಗುತ್ತದೆ, ತಕ್ಕ ಸಮಯಕ್ಕೆ ನೀರು ಬರುತ್ತದೆ, ಸಂಬಳದಲ್ಲಿ ಹೈಕ್ ಬೇಕು, ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟಲ್ವ? ನೋಡುಕೊಳ್ಳಿ ನಮ್ಮನ್ನ ಅನ್ನುವ ಒಪ್ಪಂದಗಾರಿಕೆ ಇದೆ, ಈಗಲೂ ಎಸ್ ಎಸ್ ಎಲ್ ಸಿ ಎಕ್ಸಾಂ ಯಾವಾಗ ನಮ್ಮ ಮಕ್ಕಳಿಗೆ ಎನ್ನುವ ಚಿಂತೆ ಪೋಷಕರದ್ದು! ಏಕೆಂದರೆ ನಿಶ್ಚಿತತೆ ಸಿಕ್ಕಿದೆ. ಇದು ಕಳೆದುಹೋಗುತ್ತದೆ ಎಂಬ ನಿರಾಳ. ನಾಳೆ ಪಕ್ಕದ ರಾಜ್ಯ ದಂಗೆ ಎದ್ದು ಬೆಳಗ್ಗೆ ನಮ್ಮನ್ನು ಲೂಟಿ ಮಾಡುತ್ತದೆ ಎಂಬ ಭಯವಿಲ್ಲ, ಪ್ಲೇಗ್ ಬಂದು ಮನೆ ಬಿಡಬೇಕೆಂಬ ದುಗುಡವಿಲ್ಲ, ಸರ್ವಾಧಿಕಾರಿ ಬೀದಿಯಲ್ಲಿ ನೇಣುಗೇರಿಸುತ್ತಾನೆ ಎಂಬ ಆತಂಕವಿಲ್ಲ. ಈ ನಿಶ್ಚಿತತೆ ಹೆಚ್ಚಿರುವುದರಿಂದ ಅಕಸ್ಮಾತ್ ದೊಡ್ಡಮಟ್ಟದ ಅನಿಶ್ಚಿತತೆ ಎದುರಾದರೆ ಈಗಿನ ಸಮಾಜ ತಾಳಿಕೊಳ್ಳುವುದಿಲ್ಲ. ಅದಕ್ಕೆ ಉದಾಹರಣೆ, ನಮಗೆ ವಾಕಿಂಗ್ ಹೋಗಲಿಕ್ಕೆ ಆಗೋಲ್ಲ, ಪಾನಿಪುರಿ ತಿನ್ನಲು ಆಗುತ್ತಿಲ್ಲ, ಎಂಬುದೇ ಮುಖ್ಯವಾಹಿನಿ ಸಮಸ್ಯೆ ಎಂಬಂತೆ ನಮಗೆ ಕಾಣುತ್ತಿರುವುದು.
ಆದರೆ... ಆದರೆ... ಹಳೆಯುಗದಲ್ಲಿ ಒಂದು ಕೋಟಿ ಜನ ಸತ್ತರೆ ಅದರಿಂದ ನಾಲ್ಕು ಕೋಟಿ ಜನ ಸಫರ್ ಆಗುತ್ತಿದ್ದರು. ಈಗ ಒಂದು ಕೋಟಿ ಜನ ಸತ್ತರೆ ಅದು ನೂರು ಕೋಟಿ ಜನರು ಅನುಭವಿಸುವಂತೆ ಮಾಡುತ್ತದೆ. ಸಹಜವಲ್ಲದ, ಅಕಾಲಿಕ ಸಾವು ಅಪಮೃತ್ಯು, ದಿನವಿಡೀ ಸಾಯುವವರು, ಬೇರೆ ರೋಗದಿಂದ ಸಾಯುವವರ ಸಂಖ್ಯೆ ಹಾಕಿದರೆ ಅದು ಈ ಕೊರೊನಾ ಸಾವಿನ ಸಂಖ್ಯೆಗಿಂತ ದೊಡ್ಡದಿರಬಹುದು, ಆದರೆ ಒಂದೇ ತಿಂಗಳ ಅವಧಿಯಲ್ಲಿ, ಒಂದೇ ಕಾರಣಕ್ಕೆ, ಒಂದು ಲಕ್ಷ ಜನ ಸಾಯುವುದಿದೆಯಲ್ಲ ಅದು ಜಾಗತಿಕ ಅಪಮೃತ್ಯು. Prudence ಎಂಬ ಇಂಗ್ಲಿಷ್ ಪದವಿದೆ. ಆ ಮುಂದುಗಾಣುವಿಕೆ ನಮ್ಮಲ್ಲಿ ಹೆಚ್ಚಾಗಿ, ಎಲ್ಲವನ್ನೂ ನಾವು ಪ್ಲಾನ್ ಮಾಡಿಟ್ಟಿದ್ದೇವೆ, ಜಗತ್ತು ಮಾಡಿದೆ, ಸರ್ಕಾರವು ಮಾಡಿದೆ, ವ್ಯವಹಾರಗಳವರು ಮಾಡಿದ್ದಾರೆ, ಕುಟುಂಬದವರು ಮಾಡಿದ್ದಾರೆ. ಹಿಂದೆ ಈ ಮಟ್ಟಿಗೆ ಅದು ಇರಲಿಲ್ಲ. ಸುಧಾರಿತ ಸಮಾಜದ ಪ್ರತೀಕ ಇದು ಎಂದು ಪಂಡಿತರು ಹೇಳುತ್ತಾರೆ. ಆದರೆ ಆ ಸುಧಾರಣೆ ಅನಿಶ್ಚಿತತೆಯನ್ನು ಎದುರಿಸುವ ಧೈರ್ಯ ಕೊಡಲ್ಲ. ಬೇಗನೆ ಕುಸಿದುಹೋಗುತ್ತೇವೆ. ನಮ್ಮ ಪ್ಲಾನಿಗೆ ಚೂರೇ ಚುರು ಕೊಂಕಾದರು ಈಗಿನ ಸಮಾಜ ಬೆದರಿಹೋಗುತ್ತದೆ. ಬದುಕು ಸುಧಾರಿತವಾದಷ್ಟು fragile ಆಗುತ್ತದೆ. ನಾಳೆ ಬೆಳಗ್ಗೆಯಿಂದ ಒಂದು ಹತ್ತು ದಿನ ಹಾಲು, ಹಣ್ಣು, ದಿನಸಿ, ಪೇಪರ್, ಟಿವಿ ಇತ್ಯಾದಿಗಳ ಲಭ್ಯತೆಯು ಬಂದ್ ಆದರೆ ಅಥವಾ ಸಿಗದೇ ಹೋದರೆ ಈಗಿನ ಸಮಾಜದ ಹಾಹಾಕಾರ ಯಾವ ಮಟ್ಟದಲ್ಲಿರುತ್ತದೆ ಎಂದರೆ ಅದು ಕೋರಾನ ಸಾವಿಗಿಂತ ದೊಡ್ಡದಾಗಿರುತ್ತದೆ. ಅತಿಯಾದ ನಿಶ್ಚಿತತೆ ಆರ್ಥಿಕವಾಗಿಯೂ ಮತ್ತು ಸಾಮಾಜಿಕವಾಗಿಯೂ ಒಳ್ಳೆಯದಲ್ಲ. ನಮ್ಮ ಹಿರಿಯರು 'ಕಷ್ಟ ನೋಡಿಲ್ಲ ಮುಂಡೇವ ನೀವು, ಸುಖ ಹೀಗ್ ಆಡಿಸತ್ತೆ' ಎಂದೆನ್ನುತ್ತಿದ್ದರ ಸೂಕ್ಷ್ಮಾರ್ಥ ಇದರಲ್ಲಿದೆ. ಅವರ ಹಿಂದಿನವರು ಅವರಿಗೂ ಹೀಗೆ ಅಂದಿರುತ್ತಾರೆ ಅದು ಬೇರೆ ಪ್ರಶ್ನೆ!
ಈಜಿಪ್ಟಿನ ರೆಮಸಿಸ್ ಕಾಲದ ಪ್ಲೇಗುಗಳು, ಬ್ಲಾಕ್ ಡೆತ್, ಇಂಡಿಯನ್ ಕಾಲರಾ, ಸ್ಪ್ಯಾನಿಷ್ ಫ್ಲು ಹೀಗೆ ಇತಿಹಾಸದಲ್ಲಿ ಹಲವು ಅಪಮೃತ್ಯು ಜನಕಗಳು ಬಂದಿವೆ ಆದರೆ ಅದು ಈಗ ನಾವು ಮಾಡಿಕೊಂಡಿರುವ ವ್ಯವಸ್ಥಿತ ಬದುಕಿಗೆ ಬಂದಿದ್ದರೆ ನಾವು ತಾಳಿಕೊಳ್ಳುತ್ತಿರಲಿಲ್ಲ ಅಥವಾ ಆ ಬ್ಯಾಕ್ಟೀರಿಯಾ, ವೈರಾಣು ತಾಳಿಕೊಳ್ಳುತ್ತಿರಲಿಲ್ಲ. ಬೇರೆ ವಿಧದಲ್ಲಿ ನೋಡುವುದಾದರೆ ಇದೆ ಕೊರೊನಾ ಮಧ್ಯ ಯುಗದಲ್ಲಿ ಬಂದಿದ್ದರೆ ಅರ್ಧ ಮಾನವ ಜನಾಂಗವನ್ನೇ ಹೊಸಕಿ ಹಾಕುತ್ತಿತ್ತೇನೋ! ಈಗ ನಾವು ನಿಶ್ಚಿತ ಬದುಕು ಸವೆಸುತ್ತಿದ್ದೇವೆ. ಒಂದು ಸರ್ಕಾರವಿದೆ, ಆರೋಗ್ಯ ವ್ಯವಸ್ಥೆ ಇದೆ, ಅರಾಜಕತೆ ಇಲ್ಲ, ಇತರೆ ಇತರೆ... ಇದನ್ನು ಈ ಹಿಂದೆಯೇ ಡೆಮಾಕ್ರಟಿಕ್ ಸೆಟಲ್ಮೆಂಟ್ ಎರಾ ಎಂದು ನಾನು ಗುರುತಿಸಿದ್ದೇನೆ. ನಿಯಮಿತ ದೈನಂದಿನ chaos ಈಗಿಲ್ಲ. ನಾಳೆ ಬೆಳಗ್ಗೆ ಪೇಪರ್ ಮನೆಯ ಮುಂದೆ ಬೀಳುತ್ತದೆ, ಕರೆಂಟ್ ಸಿಗುತ್ತದೆ, ತಕ್ಕ ಸಮಯಕ್ಕೆ ನೀರು ಬರುತ್ತದೆ, ಸಂಬಳದಲ್ಲಿ ಹೈಕ್ ಬೇಕು, ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟಲ್ವ? ನೋಡುಕೊಳ್ಳಿ ನಮ್ಮನ್ನ ಅನ್ನುವ ಒಪ್ಪಂದಗಾರಿಕೆ ಇದೆ, ಈಗಲೂ ಎಸ್ ಎಸ್ ಎಲ್ ಸಿ ಎಕ್ಸಾಂ ಯಾವಾಗ ನಮ್ಮ ಮಕ್ಕಳಿಗೆ ಎನ್ನುವ ಚಿಂತೆ ಪೋಷಕರದ್ದು! ಏಕೆಂದರೆ ನಿಶ್ಚಿತತೆ ಸಿಕ್ಕಿದೆ. ಇದು ಕಳೆದುಹೋಗುತ್ತದೆ ಎಂಬ ನಿರಾಳ. ನಾಳೆ ಪಕ್ಕದ ರಾಜ್ಯ ದಂಗೆ ಎದ್ದು ಬೆಳಗ್ಗೆ ನಮ್ಮನ್ನು ಲೂಟಿ ಮಾಡುತ್ತದೆ ಎಂಬ ಭಯವಿಲ್ಲ, ಪ್ಲೇಗ್ ಬಂದು ಮನೆ ಬಿಡಬೇಕೆಂಬ ದುಗುಡವಿಲ್ಲ, ಸರ್ವಾಧಿಕಾರಿ ಬೀದಿಯಲ್ಲಿ ನೇಣುಗೇರಿಸುತ್ತಾನೆ ಎಂಬ ಆತಂಕವಿಲ್ಲ. ಈ ನಿಶ್ಚಿತತೆ ಹೆಚ್ಚಿರುವುದರಿಂದ ಅಕಸ್ಮಾತ್ ದೊಡ್ಡಮಟ್ಟದ ಅನಿಶ್ಚಿತತೆ ಎದುರಾದರೆ ಈಗಿನ ಸಮಾಜ ತಾಳಿಕೊಳ್ಳುವುದಿಲ್ಲ. ಅದಕ್ಕೆ ಉದಾಹರಣೆ, ನಮಗೆ ವಾಕಿಂಗ್ ಹೋಗಲಿಕ್ಕೆ ಆಗೋಲ್ಲ, ಪಾನಿಪುರಿ ತಿನ್ನಲು ಆಗುತ್ತಿಲ್ಲ, ಎಂಬುದೇ ಮುಖ್ಯವಾಹಿನಿ ಸಮಸ್ಯೆ ಎಂಬಂತೆ ನಮಗೆ ಕಾಣುತ್ತಿರುವುದು.
ಆದರೆ... ಆದರೆ... ಹಳೆಯುಗದಲ್ಲಿ ಒಂದು ಕೋಟಿ ಜನ ಸತ್ತರೆ ಅದರಿಂದ ನಾಲ್ಕು ಕೋಟಿ ಜನ ಸಫರ್ ಆಗುತ್ತಿದ್ದರು. ಈಗ ಒಂದು ಕೋಟಿ ಜನ ಸತ್ತರೆ ಅದು ನೂರು ಕೋಟಿ ಜನರು ಅನುಭವಿಸುವಂತೆ ಮಾಡುತ್ತದೆ. ಸಹಜವಲ್ಲದ, ಅಕಾಲಿಕ ಸಾವು ಅಪಮೃತ್ಯು, ದಿನವಿಡೀ ಸಾಯುವವರು, ಬೇರೆ ರೋಗದಿಂದ ಸಾಯುವವರ ಸಂಖ್ಯೆ ಹಾಕಿದರೆ ಅದು ಈ ಕೊರೊನಾ ಸಾವಿನ ಸಂಖ್ಯೆಗಿಂತ ದೊಡ್ಡದಿರಬಹುದು, ಆದರೆ ಒಂದೇ ತಿಂಗಳ ಅವಧಿಯಲ್ಲಿ, ಒಂದೇ ಕಾರಣಕ್ಕೆ, ಒಂದು ಲಕ್ಷ ಜನ ಸಾಯುವುದಿದೆಯಲ್ಲ ಅದು ಜಾಗತಿಕ ಅಪಮೃತ್ಯು. Prudence ಎಂಬ ಇಂಗ್ಲಿಷ್ ಪದವಿದೆ. ಆ ಮುಂದುಗಾಣುವಿಕೆ ನಮ್ಮಲ್ಲಿ ಹೆಚ್ಚಾಗಿ, ಎಲ್ಲವನ್ನೂ ನಾವು ಪ್ಲಾನ್ ಮಾಡಿಟ್ಟಿದ್ದೇವೆ, ಜಗತ್ತು ಮಾಡಿದೆ, ಸರ್ಕಾರವು ಮಾಡಿದೆ, ವ್ಯವಹಾರಗಳವರು ಮಾಡಿದ್ದಾರೆ, ಕುಟುಂಬದವರು ಮಾಡಿದ್ದಾರೆ. ಹಿಂದೆ ಈ ಮಟ್ಟಿಗೆ ಅದು ಇರಲಿಲ್ಲ. ಸುಧಾರಿತ ಸಮಾಜದ ಪ್ರತೀಕ ಇದು ಎಂದು ಪಂಡಿತರು ಹೇಳುತ್ತಾರೆ. ಆದರೆ ಆ ಸುಧಾರಣೆ ಅನಿಶ್ಚಿತತೆಯನ್ನು ಎದುರಿಸುವ ಧೈರ್ಯ ಕೊಡಲ್ಲ. ಬೇಗನೆ ಕುಸಿದುಹೋಗುತ್ತೇವೆ. ನಮ್ಮ ಪ್ಲಾನಿಗೆ ಚೂರೇ ಚುರು ಕೊಂಕಾದರು ಈಗಿನ ಸಮಾಜ ಬೆದರಿಹೋಗುತ್ತದೆ. ಬದುಕು ಸುಧಾರಿತವಾದಷ್ಟು fragile ಆಗುತ್ತದೆ. ನಾಳೆ ಬೆಳಗ್ಗೆಯಿಂದ ಒಂದು ಹತ್ತು ದಿನ ಹಾಲು, ಹಣ್ಣು, ದಿನಸಿ, ಪೇಪರ್, ಟಿವಿ ಇತ್ಯಾದಿಗಳ ಲಭ್ಯತೆಯು ಬಂದ್ ಆದರೆ ಅಥವಾ ಸಿಗದೇ ಹೋದರೆ ಈಗಿನ ಸಮಾಜದ ಹಾಹಾಕಾರ ಯಾವ ಮಟ್ಟದಲ್ಲಿರುತ್ತದೆ ಎಂದರೆ ಅದು ಕೋರಾನ ಸಾವಿಗಿಂತ ದೊಡ್ಡದಾಗಿರುತ್ತದೆ. ಅತಿಯಾದ ನಿಶ್ಚಿತತೆ ಆರ್ಥಿಕವಾಗಿಯೂ ಮತ್ತು ಸಾಮಾಜಿಕವಾಗಿಯೂ ಒಳ್ಳೆಯದಲ್ಲ. ನಮ್ಮ ಹಿರಿಯರು 'ಕಷ್ಟ ನೋಡಿಲ್ಲ ಮುಂಡೇವ ನೀವು, ಸುಖ ಹೀಗ್ ಆಡಿಸತ್ತೆ' ಎಂದೆನ್ನುತ್ತಿದ್ದರ ಸೂಕ್ಷ್ಮಾರ್ಥ ಇದರಲ್ಲಿದೆ. ಅವರ ಹಿಂದಿನವರು ಅವರಿಗೂ ಹೀಗೆ ಅಂದಿರುತ್ತಾರೆ ಅದು ಬೇರೆ ಪ್ರಶ್ನೆ!
Published on April 15, 2020 23:16
No comments have been added yet.